Pak Terrorism: ಮತ್ತೆ ಪಾಕ್ ನಾಟಕ ಬಟಾಬಯಲು! ದೇಶದಲ್ಲಿ ಭಯೋತ್ಪಾದನೆ ಇದೆ ಎಂದು ಒಪ್ಪಿಕೊಂಡ ಸಂಸದೆ
ಪತ್ರಕರ್ತೆ ಯಾಲ್ಡಾ ಹಕೀಮ್ ಅವರೊಂದಿಗಿನ ಸಂದರ್ಶನದಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸೆನೆಟರ್ ಶೆರ್ರಿ ರೆಹಮಾನ್ ಅವರು ಭಯೋತ್ಪಾದಕತೆಯಿಂದ ಪಾಕಿಸ್ತಾನ ಕೂಡ ತೊಂದರೆಗೆ ಒಳಗಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಅವರು ಹಿಂದಿನ ಭಯೋತ್ಪಾದಕ ಚಟುವಟಿಕೆಗಳನ್ನು ಒಪ್ಪಿಕೊಂಡಿದ್ದಾರೆ. ಆ ಮೂಲಕ ಪಾಕ್ನ ಕುತಂತ್ರ ಬಯಲಾಗಿದೆ.


ಇಸ್ಲಾಮಾಬಾದ್: ನಾವು ಭಯೋತ್ಪಾದನೆಯ (terrorism) ವಿರುದ್ಧ ಹೋರಾಡುತ್ತಿದ್ದೇವೆ. ಹಿಂದೆ ಭಯೋತ್ಪಾದನೆ ಇತ್ತು. ಈಗ ದೇಶ ಬದಲಾಗಿದೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ( Pakistan People’s Party ) ಸೆನೆಟರ್ ಶೆರ್ರಿ ರೆಹಮಾನ್ (Senator Sherry Rehman) ಹೇಳಿದ್ದಾರೆ. ಪತ್ರಕರ್ತೆ ಯಾಲ್ಡಾ ಹಕೀಮ್ ( journalist Yalda Hakim) ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು ದೇಶ ಹಿಂದೆ ಏನೆಲ್ಲಾ ಮಾಡಿತ್ತು ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಭಯೋತ್ಪಾದನೆಯೊಂದಿಗಿನ ದೇಶದ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸಂದರ್ಶನದ ಸಮಯದಲ್ಲಿ ಪತ್ರಕರ್ತರು ಭಾರತೀಯ ವೈಮಾನಿಕ ದಾಳಿಯ ಅನಂತರ ಜೈಶ್-ಎ-ಮೊಹಮ್ಮದ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ಪತ್ರಕರ್ತೆ ಯಾಲ್ಡಾ ಹಕೀಮ್ ಅವರೊಂದಿಗಿನ ಸಂದರ್ಶನದಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸೆನೆಟರ್ ಶೆರ್ರಿ ರೆಹಮಾನ್ ಅವರು ಭಯೋತ್ಪಾದಕತೆಯಿಂದ ಪಾಕಿಸ್ತಾನ ಕೂಡ ತೊಂದರೆಗೆ ಒಳಗಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಅವರು ಹಿಂದಿನ ಭಯೋತ್ಪಾದಕ ಚಟುವಟಿಕೆಗಳನ್ನು ಒಪ್ಪಿಕೊಂಡಿದ್ದಾರೆ. ಆ ಮೂಲಕ ಪಾಕ್ನ ಕುತಂತ್ರ ಬಯಲಾಗಿದೆ
ಭಯೋತ್ಪಾದನೆ ಚಟುವಟಿಕೆಗಳಿಗೆ ದೇಶ ಪ್ರೋತ್ಸಾಹ ನೀಡುತ್ತಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಹಣಕಾಸು ಕ್ರಿಯಾ ಕಾರ್ಯಪಡೆ (Financial Action Task Force)ಯು ಇತ್ತೀಚೆಗೆ ಬೂದು ಪಟ್ಟಿಯಿಂದ ತೆಗೆದು ಹಾಕಿದ್ದು, ಈ ಕುರಿತ ಸಂದರ್ಶನದಲ್ಲಿ ಶೆರ್ರಿ ರೆಹಮಾನ್ ಈ ಹೇಳಿಕೆಯನ್ನು ನೀಡಿದರು. ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೆಹಮಾನ್, ನೀವು ಹಿಂದಿನ ಬಗ್ಗೆ ಮಾತನಾಡುತ್ತಲೇ ಇರುತ್ತೀರಿ. ಯಾಕೆಂದರೆ ಅದು ಹಾಗೆ ಇತ್ತು. ನಾವು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದ್ದೇವೆ. ಪಾಕಿಸ್ತಾನ ಈಗ ಬದಲಾದ ದೇಶ ಎಂದು ಅವರು ಹೇಳಿದರು.
'Pakistan is fighting very hard to clean its terrorist record'
— Sky News (@SkyNews) June 9, 2025
Vice President of the Pakistan People's Party Senator Sherry Rehman tells @SkyYaldaHakim 'Pakistan is a changed country', even though they were taken off the grey list in 2022https://t.co/1GOylJEIzn pic.twitter.com/Y7ei3Wbo9h
ಪಾಕಿಸ್ತಾನವನ್ನು 2022 ರವರೆಗೆ ಹಣಕಾಸು ಕ್ರಿಯಾ ಕಾರ್ಯಪಡೆ (FATF) ಬೂದು ಪಟ್ಟಿಯಡಿಯಲ್ಲಿ ಏಕೆ ಇರಿಸಿತ್ತು. ಪಾಕಿಸ್ತಾನ ಅದರಿಂದ ಹೊರಬರಲು ವಿಳಂಬವಾಗಲು 26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರ ಸಾಜಿದ್ ಮಿರ್ ನಂತಹ ವ್ಯಕ್ತಿಗಳು ಯಾವ ಪಾತ್ರ ವಹಿಸಿದ್ದಾರೆ ಎನ್ನುವುದರ ಕುರಿತು ಪತ್ರಕರ್ತರ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.ರೆಹಮಾನ್ ಅವರು ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇದೆ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವುದು ಭಾರತೀಯ ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ವಲಯಗಳಲ್ಲಿ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಈ ಸಂದರ್ಶನ ಪಾಕಿಸ್ತಾನದ ನಾಯಕತ್ವವು ಭಯೋತ್ಪಾದಕ ಸಂಘಟನೆಗಳೊಂದಿಗೆ ತನ್ನ ಸಂಪರ್ಕವನ್ನು ಒಪ್ಪಿಕೊಂಡಿರುವುದಕ್ಕೆ ಮತ್ತೊಂದು ಸಾಕ್ಷಿ ಎನ್ನಲಾಗುತ್ತಿದೆ.
ಇದನ್ನೂ ಓದಿ: Axiom-4 mission: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರಯಾಣ ಮುಂದೂಡಿಕೆ; ಕಾರಣವೇನು?
ಸಂದರ್ಶನದಲ್ಲಿ ಪತ್ರಕರ್ತರು ಪಾಕಿಸ್ತಾನದಲ್ಲಿ ಅಲ್ ಖೈದಾದ ಕಾರ್ಯಾಚರಣೆ ಬಗ್ಗೆ ಪ್ರಶ್ನಿಸಿದ್ದು, ಇದಕ್ಕೆ ಸೆನೆಟರ್ ರೆಹಮಾನ್, ನೀವು ಭಾರತೀಯ ದೃಷ್ಟಿಕೋನಗಳಿಂದ ಮಾತನಾಡುತ್ತಿದ್ದಿರಿ ಎಂದು ಹೇಳಿದ್ದಾರೆ. ಆದರೂ ಪತ್ರಕರ್ತೆ ಪಾಕಿಸ್ತಾನದ ಮಿಲಿಟರಿ ಗುಪ್ತಚರ ಸಂಸ್ಥೆಗಳು ಮತ್ತು ಈ ಭಯೋತ್ಪಾದಕ ಸಂಘಟನೆಗಳ ನಡುವಿನ ಸಂಬಂಧದ ಬಗ್ಗೆ ತಮ್ಮ ಪ್ರಶ್ನೆಗಳನ್ನು ಮುಂದುವರಿಸಿರುವುದು ಸಂದರ್ಶನ ವಿಡಿಯೊದಲ್ಲಿ ಕಾಣಬಹುದು.