Bhagya Lakshmi Serial: ಪೂಜಾ-ಕಿಶನ್ ಮದುವೆ ಆಗಬಾರದೆಂದು ಉಪವಾಸ ಕೂತ ಮೀನಾಕ್ಷಿ
ಭಾಗ್ಯ ಮನೆಯಲ್ಲೂ ಈ ಮದುವೆ ಬೇಡ ಎಂದು ಭಾಗ್ಯ ತಂದೆ ಪಟ್ಟುಹಿಡಿದು ನಿಂತಿದ್ದಾರೆ. ಈ ನಿಶ್ಚಿತಾರ್ಥ ಆರಂಭ ಆದಾಗಿನಿಂದ ನಮಗೆ ಅವಮಾನ, ಕೊಂಕು ಮಾತುಗಳು ಬರೀ ಇದೇ ನಡೆಯುತ್ತಿದೆ.. ಆ ಮನೆಯಲ್ಲಿ ತುಂಬಾ ಜನಕ್ಕೆ ಈ ಮದುವೆ ಆಗಬಾರದು ಅಂತಾನೆ ಇದೆ. ಈ ಮದುವೆ ಆಗೋದು ಯಾಕೊ ಸರಿ ಕಾಣುತ್ತಿಲ್ಲ.. ಇದನ್ನ ನಿಲ್ಲಿಸಿ ಬಿಡೋಣ ಎಂದು ಭಾಗ್ಯ ತಂದೆ ಹೇಳಿದ್ದಾರೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ನಾನಾ ಅಡೆತಡೆಗಳ ಮಧ್ಯೆ ಕೊನೆಗೆ ಹೇಗೋ ಪೂಜಾ-ಕಿಶನ್ ಎಂಗೇಜ್ಮೆಂಟ್ ನಡೆದು ಹೋಗಿದೆ. ಆದೀಶ್ವರ್, ಮೀನಾಕ್ಷಿ ಮತ್ತು ಕನ್ನಿಕಾ ಈ ಎಂಗೇಜ್ಮೆಂಟ್ ಯಾವುದೇ ಕಾರಣಕ್ಕೂ ಆಗಬಾರದು ಎಂದು ಪ್ಲ್ಯಾನ್ ಮಾಡಿದ್ದರು. ಆದರೆ, ರಾಮ್ದಾಸ್ ಕಾಮತ್ ಕೊಟ್ಟ ಮಾತಿನಂತೆ ಈ ನಿಶ್ಚಿತಾರ್ಥವನ್ನು ನೆರವೇರಿಸಿದ್ದಾರೆ. ಅಲ್ಲದೆ ಮೀನಾಕ್ಷಿಗೂ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಇದಾದ ಬಳಿಕ ಎಂಗೇಜ್ಮೆಂಟ್ ಹೇಗೋ ಆಯ್ತು ಆದ್ರೆ ಮದುವೆ ಮಾತ್ರ ಯಾವುದೇ ಕಾರಣಕ್ಕೆ ಆಗಲು ಬಿಡಲ್ಲ ಎಂದು ಮೀನಾಕ್ಷಿ ಉಪವಾಸ ಕೂತಿದ್ದಾಳೆ.
ಆದೀ- ಕನ್ನಿಕಾ ಹಾಗೂ ಮೀನಾಕ್ಷಿ ಈ ಎಂಗೇಜ್ಮೆಂಟ್ ನಿಲ್ಲಿಸಲು ಅನೇಕ ಪ್ಲ್ಯಾನ್ ಮಾಡಿದರು. ಆದರೆ, ಅದು ಯಾವುದೂ ವರ್ಕ್ ಆಗಿಲ್ಲ. ಕಿಶನ್ನ ಆದಷ್ಟು ಕನ್ವೆನ್ಸ್ ಮಾಡಲೂ ಮೀನಾಕ್ಷಿ ಮುಂದಾದಳು ಅದುಕೂಡ ಕೆಲಸ ಮಾಡಲಿಲ್ಲ.. ನಾನು ಮದುವೆ ಅಂತ ಆದ್ರೆ ಅದು ಪೂಜಾನ ಮಾತ್ರ ಎಂದು ಕಿಶನ್ ಹೇಳಿದ್ದಾರೆ. ಅಣ್ಣ ಆದೀಶ್ವರ್ನ ಉದಾಹರಣೆ ತೆಗೊಂಡು ಮೀನಾಕ್ಷಿ ಹೇಳಿದ್ದಾಳೆ.. ನಿನ್ನ ಅಣ್ಣ ಕೂಡ ಹೀಗೆ ಮಿಡಲ್ ಕ್ಲಾಸ್ ಹುಡುಗಿಯ ಮದುವೆ ಆದ, ಆದ್ರೆ ಆಕೆ ಸ್ವಲ್ಪ ದಿನದಲ್ಲೇ ಕೈಕೊಟ್ಟು ಹೋದಳು ಎಂದಿದ್ದಾಳೆ. ಆದರೆ, ಇದಕ್ಕೆ ಕಿಶನ್, ಎಲ್ಲರೂ ಒಂದೇರೀತಿ ಇರಲ್ಲ.. ಈ ಮನೆಯವರು ಹಾಗಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕನ್ನಿಕಾ ಕೂಡ ಕೈ ಜೋಡಿಸಿ, ಪೂಜಾ ಎಲ್ಲಾದ್ರು ಈ ಮನೆ ಸೊಸೆ ಆದ್ರೆ ಖಂಡಿತಾ ಅತ್ತೆ ಹೇಳಿದ ಹಾಗೆಯೆ ಆಗುತ್ತದೆ ಎನ್ನುತ್ತಾಳೆ.
ಮತ್ತೊಂದೆಡೆ ರಾಮ್ದಾಸ್, ನಮ್ಮ ಮನೆಗೆ ಪೂಜಾನೆ ಸರಿಯಾದ ಸೊಸೆ. ಈ ಸಂಬಂಧ ಸರಿ ಇಲ್ಲ ಅನ್ನೋದನ್ನು ಪ್ರೂವ್ ಮಾಡಿ.. ಅದು ಪ್ರೂವ್ ಆದ್ರೆ ಆ ಕ್ಷಣವೇ ಮದುವೆ ನಿಲ್ಲಿಸುತ್ತೇನೆ ಎಂದು ಮೀನಾಕ್ಷಿ ಬಳಿ ಹೇಳಿದ್ದಾರೆ. ಆದ್ರೆ, ಭಾಗ್ಯ ಮನೆಯವರು ಕೆಟ್ಟವರೆಂದು ಪ್ರೂವ್ ಮಾಡಲು ಇವರ ಬಳಿ ಒಂದೇ ಒಂದು ಸಾಕ್ಷಿ ಇಲ್ಲ. ಇದಕ್ಕಾಗಿ ಬೇರೆ ದಾರಿಯಲ್ಲದೆ ಮೀನಾಕ್ಷಿ ಮನೆಯಲ್ಲಿ ಉಪವಾಸ ಸತ್ಯಾಗ್ರಹ ಶುರುಮಾಡಿದ್ದಾಳೆ. ಈ ಮದುವೆ ಯಾವುದೇ ಕಾರಣಕ್ಕೆ ಆಗಬಾರದು.. ಅಣ್ಣನನ್ನು ಹೇಗಾದರು ಮಾಡಿ ಒಪ್ಪಿಸಲೇ ಬೇಕಂದು ಉಪವಾಸ ಮಾಡುತ್ತಿದ್ದಾಳೆ.
ಅಣ್ಣ ಬಂದು ಈ ಮದುವೆ ಮಾಡಲ್ಲ ಅಂತ ಹೇಳಬೇಕು.. ಅಲ್ಲಿ ವರೆಗೆ ಈ ಉಪವಾಸ ಮುಂದುವರೆಯುತ್ತದೆ.. ಅವನು ಬಂದು ಹೇಳುವವರೆಗೆ ನಾನು ಒಂದು ಹನಿ ನೀರೂ ಕೂಡಿಯಲ್ಲ.. ಒಂದು ಅಗಲ ಅನ್ನ ಕೂಡ ಮುಟ್ಟಲ್ಲ ಎಂದು ಹೇಳಿದ್ದಾಳೆ. ಆದೀ ಬಂದು ಎಷ್ಟೇ ಕನ್ವೆನ್ಸ್ ಮಾಡಿದ್ರೂ ಮೀನಾಕ್ಷಿ ಒಪ್ಪಿಲ್ಲ.. ನಿಮ್ಮ ಹೆಲ್ತ್ ನೋಡ್ಕೊಳಿ, ಟ್ಯಾಬ್ಲೆಟ್ ತೆಗೊಬೇಕು ನೀವು ಎಂದಾಗ ನನ್ಗೆ ನನ್ನ ಆರೋಗ್ಯಕ್ಕಿಂತ ಈ ಮನೆ ಮುಖ್ಯ.. ಈ ಮನೆಗೋಸ್ಕರ ನಾನು ಏನು ಬೇಕಾದ್ರು ಮಾಡೋಕೆ ರೆಡಿ ಇದ್ದೇನೆ ಎಂದು ಹೇಳಿದ್ದಾಳೆ.
ಮತ್ತೊಂದೆಡೆ ಅತ್ತ ಭಾಗ್ಯ ಮನೆಯಲ್ಲೂ ಈ ಮದುವೆ ಬೇಡ ಎಂದು ಭಾಗ್ಯ ತಂದೆ ಪಟ್ಟುಹಿಡಿದು ನಿಂತಿದ್ದಾರೆ. ಈ ನಿಶ್ಚಿತಾರ್ಥ ಆರಂಭ ಆದಾಗಿನಿಂದ ನಮಗೆ ಅವಮಾನ, ಕೊಂಕು ಮಾತುಗಳು ಬರೀ ಇದೇ ನಡೆಯುತ್ತಿದೆ.. ಆ ಮನೆಯಲ್ಲಿ ತುಂಬಾ ಜನಕ್ಕೆ ಈ ಮದುವೆ ಆಗಬಾರದು ಅಂತಾನೆ ಇದೆ. ಈ ಮದುವೆ ಆಗೋದು ಯಾಕೊ ಸರಿ ಕಾಣುತ್ತಿಲ್ಲ.. ಇದನ್ನ ನಿಲ್ಲಿಸಿ ಬಿಡೋಣ ಎಂದು ಭಾಗ್ಯ ತಂದೆ ಹೇಳಿದ್ದಾರೆ. ನನ್ನ ಒಬ್ಬಳ ಮಗಳ ಸಂಸಾರ ಹಾಳಾಗಿದೆ.. ಮತ್ತೊಬ್ಬಳ ಸಂಸಾರ ಕೂಡ ಹಾಗೆ ಆಗೋದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಆದರೆ, ಪೂಜಾ ಇದನ್ನ ಒಪ್ಪಲು ರೆಡಿಯಿಲ್ಲ. ನಾನು ಮದುವೆ ಅಂತ ಆದ್ರೆ ಅದು ಕಿಶನ್ನ ಮಾತ್ರ ಎಂದು ಹೇಳಿದ್ದಾಳೆ. ಅತ್ತ ಕಿಶನ್ ಕೂಡ ನಾನು ಪೂಜಾನ ಬಿಟ್ಟು ಬೇರೆಯವರಿಗೆ ತಾಳಿ ಕಟ್ಟಲ್ಲ ಎಂದಿದ್ದಾನೆ. ಈ ಮೂಲಕ ಭಾಗ್ಯ ಲಕ್ಷ್ಮೀ ಧಾರಾವಾಹಿ ರೋಚಕತೆ ಸೃಷ್ಟಿಸಿದೆ. ಈ ಮದುವೆಯ ಕುರಿತ ಮುಂದಿನ ಬೆಳವಣಿಗೆ ಏನಾಗುತ್ತೆ ಎಂಬುದು ಕುತೂಹಲ ಕೆರಳಿಸಿದ್ದು, ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರಬಂದ ಸ್ಟಾರ್ ನಟಿ: ಕಾರಣವೇನು?