ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾಲ್ತುಳಿತ: ಹೈ (ಐ) ಅಧಿಕಾರಿಗಳಲ್ಲೂ ಕೋಲ್ಡ್‌ ವಾರ್

ಆರ್‌ಸಿಬಿ ವಿಜಯೋತ್ಸವದ ದುರ್ಘಟನೆ ನಂತರ ರಾಜ್ಯದ ಕಾರ್ಯಾಂಗದಲ್ಲಿ ಕುದಿ ಮೌನ ಏರ್ಪ‌ಟ್ಟಿದೆ. ಕಾನೂನು ಆದೇಶ ಮಾಡುವವರು ಹಾಗೂ ಪಾಲಕರಾದ ಎರಡು ಇಲಾಖೆಗಳ ಉನ್ನತ ಅಧಿಕಾರಿಗಳ (ಐಎಎಸ್ ಹಾಗೂ ಐಪಿಎಸ್) ನಡುವೆ ಶೀತಲ ಸಮರ ಏರ್ಪಟ್ಟು ಒಳಗೊಳಗೇ ಕ್ರಮಕ್ಕೆ ಆಗ್ರಹಿಸಲಾಗು ತ್ತಿದೆ.

ಕಾಲ್ತುಳಿತ: ಹೈ (ಐ) ಅಧಿಕಾರಿಗಳಲ್ಲೂ ಕೋಲ್ಡ್‌ ವಾರ್

Profile Ashok Nayak Jun 11, 2025 1:37 PM

ಧ್ಯಾನ್ ಪೂಣಚ್ಚ ಬೆಂಗಳೂರು

ಆರ್‌ಸಿಬಿ ದುರ್ಘಟನೆ ಬಳಿಕ ಕಾರ್ಯಾಂಗದಲ್ಲಿ ಕುದಿ ಮೌನ

ಅನುಮತಿ ಕೊಡಿಸಿದವರ ವಿರುದ್ಧ ಕ್ರಮಕ್ಕೆ ಐಪಿಎಸ್ ಅಧಿಕಾರಿಗಳ ಆಗ್ರ

ಆರ್‌ಸಿಬಿ ವಿಜಯೋತ್ಸವದ ದುರ್ಘಟನೆ ನಂತರ ರಾಜ್ಯದ ಕಾರ್ಯಾಂಗದಲ್ಲಿ ಕುದಿ ಮೌನ ಏರ್ಪ‌ ಟ್ಟಿದೆ. ಕಾನೂನು ಆದೇಶ ಮಾಡುವವರು ಹಾಗೂ ಪಾಲಕರಾದ ಎರಡು ಇಲಾಖೆಗಳ ಉನ್ನತ ಅಧಿಕಾರಿಗಳ (ಐಎಎಸ್ ಹಾಗೂ ಐಪಿಎಸ್) ನಡುವೆ ಶೀತಲ ಸಮರ ಏರ್ಪಟ್ಟು ಒಳಗೊಳಗೇ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ.

ಕಾಲ್ತುಳಿತ ವಿಚಾರ ರಾಜಕೀಯ ವಲಯದಲ್ಲಿ ಆರೋಪ ಪ್ರತ್ಯಾರೋಪ ನಡೆಯುತ್ತಿರುವ ನಡುವೆಯೇ ಉನ್ನತ ಅಧಿಕಾರಿಗಳ ಮಟ್ಟದಲ್ಲೂ ಕೋಲ್ಡ್ ವಾರ್ ಆರಂಭವಾಗಿದೆ ಎನ್ನಲಾಗಿದೆ. ವಿಜಯೋತ್ಸವಕ್ಕೆ ಅನುಮತಿ ನೀಡದಿದ್ದರೂ, ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳಷ್ಟೇ ಹೊಣೆ ಏಕೆ(ಐಪಿಎಸ್ ಸೇರಿದಂತೆ) ಐಎಎಸ್ ಅಧಿಕಾರಿಗಳಿಬ್ಬರ ತಪ್ಪೇ ಇಲ್ಲ ಯಾಕೆ? ಎಂದು ಐಪಿಎಸ್ ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಅನುಮತಿ ಕೊಡಿಸಿದವರ ವಿರುದ್ಧವೂ ಕ್ರಮ ಆಗಲೇಬೇಕು ಎಂದು ಐಪಿಎಸ್ ಅಧಿಕಾರಿಗಳು ಆಗ್ರಹಿಸುತ್ತಿರುವುದು ಅಲ್ಲಲ್ಲಿ ಕೇಳಿ ಬಂದಿದೆ.

ಸಲಹೆ ನಿರ್ಲಕ್ಷಿಸಿದ ಐಎಎಸ್‌ಗಳು ?

ಪೊಲೀಸ್ ಇಲಾಖೆ ವಿಜಯೋತ್ಸವಕ್ಕೆ ಭದ್ರತೆ ನೀಡುವುದು ಕಷ್ಟ ಎಂದ ಮೇಲೂ ಇಬ್ಬರು ಐಎಎಸ್ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದಲೇ ಈ ರೀತಿ ದುರಂತ ಸಂಭವಿಸಿದ್ದು ಎಂಬುದು ಐಪಿಎಸ್ ಅಧಿಕಾರಿಗಳು ಆರೋಪಿಸಿದ್ದಾರೆ. ಅನುಮತಿ ಆದೇಶ ಬರುವ ಮೊದಲೇ ಆ ಐಎಎಸ್ ಅಧಿಕಾರಿ ಅನುಮತಿ ನೀಡುವಂತೆ ಹಲವು ಸರ್ಕಸ್ ಮಾಡಿದ್ದಾರೆ ಎನ್ನಲಾಗಿದ್ದು, ಪೊಲೀಸ್ ಅನುಮತಿ ನಿರಾಕರಿಸಿದರೂ ಡೋಂಟ್ ಕೇರ್ ಎನ್ನುವಂತೆ ಒತ್ತಡ ಹೇರಿದ್ದರು ಎನ್ನಲಾ ಗಿದೆ. ಆರ್‌ಸಿಬಿ ಟ್ವೀಟ್ ಮಾಡಿದ ಮೇಲೆ ಅದನ್ನೇ ಮುಂದಿಟ್ಟುಕೊಂಡು ವಿಧಾನಸೌಧದಲ್ಲಿ ಕಾರ್ಯ ಕ್ರಮ ಪ್ಲ್ಯಾನ್ ಮಾಡಿದ್ದಾರೆ. ಈಗಾಗಲೇ ಟ್ವೀಟ್ ಮಾಡಿದ್ದಾರೆ, ನಾವು ಅನುಮತಿ ಕೊಡದಿದ್ದರೇ ಅಭಿಮಾನಿಗಳ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಅದೇ ಐಎಎಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: IPL 2025 Revenue: ಐಪಿಎಲ್ 2025ರಿಂದ ಬಿಸಿಸಿಐಗೆ ಬಂದ ಆದಾಯ ಎಷ್ಟು?

ಅದನ್ನು ಸರಕಾರದ ಮಟ್ಟದಲ್ಲಿ ನಡೆದು ರೂಲ್ಸ್ ಬ್ರೇಕ್ ಆಟ ಮಾಡಲಾಗಿದೆ ಎಂಬುದು ಈಗ ಐಪಿಎಸ್ ವಲಯದಲ್ಲಿ ಬಹು ಚರ್ಚಿತ ವಿಷಯವಾಗಿದ್ದು ಸಿದ್ದರಾಮಯ್ಯ ಅವರ ಸರಕಾರ ಸಿಲುಕಿ ಒದ್ದಾಡುವಂತಾಗಿದೆ. ‌ಕಾಲ್ತುಳಿತ ಘಟನೆಗೆ ಹಲವು ಕಾರಣದಲ್ಲಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟವೂ ದುರಂತಕ್ಕೆ ಕಾರಣವಾಗಿದೆ. ಭದ್ರತೆ ಕಷ್ಟ ಇದೆ ಅಂದಿದ್ದರೂ ಹಠ ಮಾಡಿ ಕಾರ್ಯಕ್ರಮ ಆಯೋಜನೆಗೆ ಆದೇಶಿಸಿದ್ದು ಐಎಎಸ್ ಅಧಿಕಾರಿ ಅನ್ನುವ ಪ್ರಶ್ನೆ ಎದ್ದಿದೆ.

ತಮಗೆ ಬೇಕಾದವರೊಬ್ಬರಿಗೆ ಕಾರ್ಯಕ್ರಮದ ಗುತ್ತಿಗೆ ನೀಡುವ ಹಠಕ್ಕೆ ಬಿದ್ದು ವಿಜಯೋತ್ಸವಕ್ಕೆ ತರಾತುರಿಯಲ್ಲಿ ಅದೇಶಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ತಮ್ಮ ಲಾಭಕ್ಕಾಗಿ ಸಹೋದರ ನಿಗೆ ಐಎಎಸ್ ಅಧಿಕಾರಿ ಕಾರ್ಯಕ್ರಮ ಜವಾಬ್ದಾರಿ ವಹಿಸಿದ್ದರು ಎಂಬ ಗುಸುಗುಸು ಈಗ ಐಪಿಎಸ್ ವಲಯದಲ್ಲಿ ಎದ್ದಿದ್ದು ಗಂಭೀರ ವಿಚಾರವಾಗಿದೆ.

ಹೀಗಿದ್ದರೂ ಐಪಿಎಸ್ ಅಧಿಕಾರಿಗಳನ್ನು ಮಾತ್ರ ಸರಕಾರ ಅಮಾನತು ಮಾಡಿದೆ. ಡಿಪಿಎಆರ್ ಕಾರ್ಯದರ್ಶಿ ಸತ್ಯವತಿ ಅವರ ಲೋಪ ಇಲ್ಲಿ ಕಾಣುತ್ತಿದೆ. ಅವರ ಮೇಲೆ ಕ್ರಮವೇಕಿಲ್ಲ ಎಂದು ಚರ್ಚೆಯಾಗುತ್ತಿದೆ. ಇನ್ನು ಭಾರತೀಯ ಪೊಲೀಸ್ ಒಕ್ಕೂಟದಿಂದ ಅಮಾನತು ವಾಪಸ್ ಪಡೆಯು ವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯಲಾಗಿದೆ. ಕಾಲ್ತುಳಿತ ಘಟನೆ ಬೆನ್ನ ಸರಕಾರವನ್ನು ಮುಂದೆ ಸಾವಿರಾರು ಜನ ಸೇರುವ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆ ಅನುಮತಿ ಕಡ್ಡಾಯ ಗೊಳಿಸಿ ನಿಯಮಾವಳಿ ಪ್ರಕಟಿಸಿದೆ.

ವಿಧಾನಸೌಧ ಭದ್ರತಾ ವಿಬಾಗ ಡಿಸಿಪಿ ಜೂನ್ 4ರಂದೇ ಅಪಾಯದ ಎಚ್ಚರಿಕೆ ನೀಡಿದ್ದು, ಇದನ್ನು ಡಿಪಿಆರ್‌ಎ ನಿರ್ಲಕ್ಷ್ಯ ಮಾಡಿರುವುದು ಕಂಡುಬಂದಿದ್ದು, ಡಿಸಿಪಿಯ ಈ ಪತ್ರದಿಂದಾಗಿ ಈ ಸರಕಾರಕ್ಕೆ ಮುಂಜುಗರ ಉಂಟಾಗಿದ್ದು ಐಎಎಸ್ ಹಾಗೂ ಐಪಿಎಸ್ ಗುದ್ದಾಟ ತಾರಕಕ್ಕೇರುತ್ತಿದೆ.

ಸರಕಾರದ ಮೇಲೆಯೇ ಆರೋಪ

ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ದುರಂತ ಪ್ರಕರಣ ಮಹತ್ವದ ತಿರುವು ಪಡೆದುಕೊಳ್ಳುತ್ತಲೇ ಇದೆ. ಒಂದೆಡೆ ರಾಜ್ಯ ಸರಕಾರ , ಕೆಎಸ್‌ಸಿಎ, ಡಿಎನ್‌ಎ ಹಾಗೂ ಆರ್‌ಸಿಬಿ ಮ್ಯಾನೇಜ್ ಮೆಂಟ್‌ನತ್ತ ಬೊಟ್ಟು ಮಾಡಿ ತೋರಿಸುತ್ತಿದೆ. ಮತ್ತೊಂದೆಡೆ ಸರಕಾರದ ವಿರುದ್ಧ ಕೋರ್ಟ್ ನಲ್ಲಿ ಸಾಲು ಸಾಲು ರಿಟ್ ಅರ್ಜಿಗಳು ಸಲ್ಲಿಕೆಯಾಗಿದೆ. ಮತ್ತೊಂದೆಡೆ ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿರುವು ದಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿವೆ. ಅಲ್ಲದೇ ಅಮಾನತು ಪ್ರಶ್ನಿಸಿ ಅಧಿಕಾರಿಯೊಬ್ಬರು ಸರಕಾರದ ವಿರುದ್ಧ ಸಿಎಟಿ ಮೊರೆ ಹೋಗಿದ್ದಾರೆ.

ಡಿಎನ್‌ಎ ಸರಕಾರದ ವಿರುದ್ಧವೇ ಹಲವು ಆರೋಪಗಳನ್ನು ಮಾಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಭಾರತ ಟಿ೨೦ ವಿಶ್ವಕಪ್ ಗೆzಗ ವಿಕ್ಟರಿ ಪೆರೇಡ್ ನಡೆಸಲಾಗಿತ್ತು. ಡಿಎನ್‌ಎ ಆಯೋಜಿಸಿದ್ದ ಪೆರೇಡ್ ನಲ್ಲಿ 3 ಲಕ್ಷ ಜನರಿದ್ದರೂ ಅವಘಡಗಳಾಗಿರಲಿಲ್ಲ. ವಾಂಖೇಡೆ ಸ್ಟೇಡಿಯಂನ ಪ್ರೇಕ್ಷಕರ ಸಾಮರ್ಥ್ಯ 32 ಸಾವಿರವಿದ್ದರೂ ಸಮಸ್ಯೆ ಆಗಿರಲಿಲ್ಲ. ಆರ್‌ಸಿಬಿ ವಿಕ್ಟರಿ ಪೆರೇಡ್ ನಡೆಸಲು ಅನುಮತಿಗಾಗಿ ಜೂ. 3ರಂದು ಪತ್ರ ಬರೆದಿದ್ದೆವು. ತೆರೆದ ಬಸ್ ಪೆರೇಡ್ ಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು.

ರಾಜ್ಯ ಸರಕಾರ ವಿಧಾನಸೌಧದ ಮುಂದೆ ಕಾರ್ಯಕ್ರಮಕ್ಕೆ ನಿರ್ಧರಿಸಿತ್ತು. ಪೊಲೀಸರು ವಿಧಾನ ಸೌಧದ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡಿದರು. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಗತ್ಯ ವಿದ್ದಷ್ಟು ಪೊಲೀಸರು ಇರಲಿಲ್ಲ. ಡಿಎನ್‌ಎ ನಿಂದಲೇ 584 ಖಾಸಗಿ ಸಿಬ್ಬಂದಿ ನೇಮಿಸಲಾಗಿತ್ತು. ಸರಕಾರ ತನ್ನ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಬಂಧನಕ್ಕೆ ಆದೇಶಿಸಿದೆ ಎಂದು ರಿಟ್ ಅರ್ಜಿಯಲ್ಲಿ ಕೋರ್ಟ್ ಗೆ ತಿಳಿಸಿದೆ.