Heart Attack: ಸಿಕ್ಸರ್ ಬಾರಿಸಿದ ಮರು ಕ್ಷಣವೇ ಸಾವನ್ನಪ್ಪಿದ ಕ್ರಿಕೆಟಿಗ
ಫಿರೋಜ್ಪುರದ ಡಿಎವಿ ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ಆಡುತ್ತಿದ್ದ ಹರ್ಜೀತ್ ಸಿಂಗ್, ಸಿಕ್ಸರ್ ಬಾರಿಸಿದ ಬಳಿಕ ನಾನ್ಸ್ಟ್ರೈಕರ್ ಬ್ಯಾಟರ್ನತ್ತ ಮಾತನಾಡಲು ತೆರಳುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ನರಳಿದ ಬಳಿಕ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.


ಮೊಹಾಲಿ: ಕ್ರಿಕೆಟ್ ಪಂದ್ಯವೊಂದರಲ್ಲಿ ಸಿಕ್ಸರ್ ಬಾರಿಸಿದ ಮರು ಕ್ಷಣವೇ ಬ್ಯಾಟರ್ ಒಬ್ಬ ತಕ್ಷಣವೇ ಯುವಕನೊಬ್ಬ ಹೃದಯಾಘಾತದಿಂದ(Heart Attack) ಮೃತಪಟ್ಟಿರುವ ಘಟನೆ ಪಂಜಾಬ್ನ ಫಿರೋಜ್ಪುರದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಹರ್ಜೀತ್ ಸಿಂಗ್(Harjeet Singh) ಎಂದು ಗುರುತಿಸಲಾಗಿದೆ. ಈ ಹೃದಯವಿದ್ರಾವಕ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫಿರೋಜ್ಪುರದ ಡಿಎವಿ ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ಆಡುತ್ತಿದ್ದ ಹರ್ಜೀತ್ ಸಿಂಗ್, ಸಿಕ್ಸರ್ ಬಾರಿಸಿದ ಬಳಿಕ ನಾನ್ಸ್ಟ್ರೈಕರ್ ಬ್ಯಾಟರ್ನತ್ತ ಮಾತನಾಡಲು ತೆರಳುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ನರಳಿದ ಬಳಿಕ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ಕೋವಿಡ್ ಹೊರತಾಗಿಯೂ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತದ ಸಾವುಗಳು ಹೆಚ್ಚಾಗಿರುವುದನ್ನು ಅಂಕಿ ಅಂಶಗಳು ದೃಢಪಡಿಸಿವೆ.ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು, ಬಹು ಕ್ಷಿಪ್ರವಾಗಿ ಬದಲಾಗಿರುವ ನಮ್ಮ ಜೀವನಶೈಲಿ. ಜೀವ ವಿಕಾಸದ ಪಥದುದ್ದಕ್ಕೂ ಮನುಷ್ಯ ಬೇಟೆಯಾಡುತ್ತ, ಕೃಷಿ ಮಾಡುತ್ತ, ಆದಷ್ಟೂ ಬೆವರು ಹರಿಸಿ ತನ್ನ ಅನ್ನವನ್ನು ತಾನೇ ಸಂಪಾದಿಸುತ್ತಿದ್ದ. ಕಠಿಣ ದುಡಿಮೆಯ ಪ್ರಕ್ರಿಯೆಯಲ್ಲಿ ಅವನ ದೇಹವೂ ಶ್ರಮಕ್ಕೆ ತಕ್ಕನಾಗಿ ಸ್ಪಂದಿಸುತ್ತಿತ್ತು. ಆಗಿನವರ ಹೃದಯ, ಯಾವ ಸೋಂಕು ಜಾಡ್ಯಗಳಿಲ್ಲದೆ ಆರೋಗ್ಯಕರವಾಗಿತ್ತು, ಬಲಿಷ್ಠವಾಗಿತ್ತು.
ಇದನ್ನೂ ಓದಿ Killer Heart Attack: ಹೃದಯಾಘಾತಕ್ಕೆ ಮತ್ತೆ ಇಬ್ಬರು ಯುವಕರ ಬಲಿ
ಹೃದಯಾಘಾತಕ್ಕೆ ಪ್ರಮುಖ ಕಾರಣಗಳು
ಅಧಿಕ ರಕ್ತದೊತ್ತಡ ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್.
ಬದಲಾದ ಜೀವನಶೈಲಿ ಧೂಮಪಾನ ತಂಬಾಕು ಉತ್ಪನ್ನ ಸೇವನೆ ಮಾದಕ ವಸ್ತುಗಳ ಸೇವನೆಯ ವ್ಯಸನ.
ವ್ಯಾಯಾಮ ಸೇರಿದಂತೆ ದೈಹಿಕ ಚಟುವಟಿಕೆ ಇಲ್ಲದಿರುವುದು.
ಜಂಕ್ ಫುಡ್ ಸೇರಿ ಪಾಶ್ಚಾತ್ಯ ಆಹಾರ ಸೇವನೆ.
ಜಿಮ್ಗಳಲ್ಲಿ ಅಶಿಸ್ತಿನ ಕಸರತ್ತು ಅವೈಜ್ಞಾನಿಕವಾಗಿ ಪ್ರೊಟೀನ್ ಸಪ್ಲಿಮೆಂಟ್ ಪಡೆಯುವಿಕೆ.
ಮಾನಸಿಕ ಒತ್ತಡ ಹೆಚ್ಚುತ್ತಿರುವ ವಾಯುಮಾಲಿನ್ಯ.