ʻನನ್ನ ನಕಲಿ ಹೇಳಿಕೆಗಳು ವೈರಲ್ ಆಗುತ್ತಿವೆʼ: ಫ್ಯಾನ್ಸ್ಗೆ ಎಚ್ಚರಿಕೆ ನೀಡಿದ ಸುನೀಲ್ ಗವಾಸ್ಕರ್!
ಭಾರತ ತಂಡದ ಮಾಜಿ ನಾಯಕ ಹಾಗೂ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ತಮ್ಮ ನಕಲಿ ಹೇಳಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಂಥಾ ನಕಲಿ ಹೇಳಿಕೆಗಳ ಬಗ್ಗೆ ಅಭಿಮಾನಿಗಳು ಎಚ್ಚರಿಕೆಯಿಂದ ಇರಬೇಕೆಂದು ಅವರು ಆಗ್ರಹಿಸಿದ್ದಾರೆ.

ಸುನೀಲ್ ಗವಾಸ್ಕರ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ: ಹಲವು ಸ್ಪೋರ್ಟ್ಸ್ ವೆಬ್ಸೈಟ್ಗಳು ಹಾಗೂ ಕೆಲ ವೈಯಕ್ತಿಕ ಖಾತೆಗಳಿಂದ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನ ನಕಲಿ ಹೇಳಿಕೆಗಳು ಹರಿದಾಡುತ್ತಿವೆ. ಹಾಗಾಗಿ ಈ ಬಗ್ಗೆ ಪ್ರಕ್ರಿಯೆಗಳ ಬಗ್ಗೆ ಅಭಿಮಾನಿಗಳು ಎಚ್ಚರಿಕೆಯಿಂದ ಇರಿ ಎಂದು ಭಾರತ ತಂಡದ ಮಾಜಿ ನಾಯಕ ಹಾಗೂ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ಆಗ್ರಹಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಸಮಸ್ಯೆಯನ್ನು ಬ್ಯಾಟಿಂಗ್ ದಿಗ್ಗಜ ವಿವರಿಸಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (IND vs ENG) ಸುನೀಲ್ ಗವಾಸ್ಕರ್ ಅರ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
"ಕಳೆದ ಕೆಲವು ತಿಂಗಳುಗಳಿಂದ ಬಹಳಷ್ಟು ಕ್ರೀಡಾ ವೆಬ್ಸೈಟ್ಗಳು ಮತ್ತು ವೈಯಕ್ತಿಕ ಖಾತೆಗಳು ತಾನು ಎಂದಿಗೂ ನೀಡದ ಕಾಮೆಂಟ್ಗಳು ಮತ್ತು ಹೇಳಕೆಗಳನ್ನು ಪ್ರಸಾರ/ಪ್ರಕಟಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಎಲ್ಲವನ್ನೂ ಪರಿಶೀಲಿಸಿ, ಸತ್ಯವನ್ನು ತಿಳಿಯಿರಿ ಮತ್ತು ಅವರು ಬರೆಯುವ ಎಲ್ಲವನ್ನೂ ನಂಬಬೇಡಿ ಎಂದು ನಾನು ಪ್ರತಿಯೊಬ್ಬರನ್ನೂ ವಿನಂತಿಸುತ್ತೇನೆ. ವಿಶೇಷವಾಗಿ ಈ ಕೆಲವು ವೈಯಕ್ತಿಕ ಖಾತೆಗಳು ಮತ್ತು ಕ್ರೀಡಾ ವೆಬ್ಸೈಟ್ಗಳಿಂದ ಇವುಗಳು ಬರುತ್ತವೆ," ಎಂದು ಗವಾಸ್ಕರ್ ಹೇಳಿದ್ದಾರೆ.
IND vs ENG: ಭಾರತ ತಂಡದ ಬೌಲಿಂಗ್ ವಿಭಾಗವನ್ನು ಟೀಕಿಸಿದ ಮೊಹಮ್ಮದ್ ಶಮಿ!
ಇಂಗ್ಲೆಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ರಿಷಭ್ ಪಂತ್ ಶತಕ ಸಿಡಿಸಿದ ಬಳಿಕ ಸುನೀಲ್ ಗವಾಸ್ಕರ್ ಅವರ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ವೇಳೆ ರಿಷಭ್ ಪಂತ್ ಅವರು ಬೇಜವಾಬ್ದಾರಿಯುತ ಶಾಟ್ಗೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ದರು. ಆ ವೇಳೆ ಗವಾಸ್ಕರ್ ಮೂರ್ಖ, ಮೂರ್ಖ, ಮೂರ್ಖ ಎಂದು ಟೀಕಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಪಂತ್ ಶತಕ ಬಾರಿಸಿದ ಬಳಿಕ ಸೂಪರ್, ಸೂಪರ್, ಸೂಪರ್ ಎಂದು ಕಾಮೆಂಟ್ ಹಾಕಿದ್ದರು.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಪಟೌಡಿ ಟ್ರೋಫಿ ಹೆಸರನ್ನು ತೆಗೆದು ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಎಂದು ಹೆಸರು ಬದಲಾಯಿಸಿದ್ದ ಕ್ರಮವನ್ನು ಇದೇ ವೇಳೆ ಸುನೀಲ್ ಗವಾಸ್ಕರ್ ಟೀಕಿಸಿದ್ದಾರೆ. ಸಚಿನ್ ಎಲ್ಲಾ ರೀತಿಯಲ್ಲೂ ಅತ್ಯುತ್ತಮ ಕ್ರಿಕೆಟಿಗ ಮತ್ತು ವೇಗದ ಬೌಲಿಂಗ್ ದಂತಕಥೆಯ ಬದಲಿಗೆ ಅವರ ಹೆಸರನ್ನು ಮೊದಲು ಪ್ರಸ್ತಾಪಿಸಲು ಅರ್ಹರು. ಆದರೆ, ಈಗ ಬದಲಾಯಿಸಬಾರದಿತ್ತು ಎಂದು ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
IND vs ENG 2nd Test: 2ನೇ ಟೆಸ್ಟ್ಗೂ ಮುನ್ನ ಭಾರತ ತಂಡಕ್ಕೆ ಗಾಯದ ಭೀತಿ
ಭಾರತ ತಂಡ ಕಮ್ಬ್ಯಾಕ್ ಮಾಡಲಿದೆ: ಗವಾಸ್ಕರ್
ಮೊದಲನೇ ಟೆಸ್ಟ್ ಸೋತಿರುವ ಭಾರತ ತಂಡ, ಬಲಿಷ್ಠವಾಗಿ ಕಮ್ಬ್ಯಾಕ್ ಮಾಡಲಿದೆ ಎಂದು ಬ್ಯಾಟಿಂಗ್ ದಿಗ್ಗಜ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಅವರ ಒಟ್ಟು ಐದು ಶತಕಗಳ ಹೊರತಾಗಿಯೂ ಭಾರತ ತಂಡ ಲೀಡ್ಸ್ ಟೆಸ್ಟ್ನಲ್ಲಿ 5 ವಿಕೆಟ್ಗಳಿಂದ ಸೋಲು ಅನುಭವಿಸಿತ್ತು. ಭಾರತ ತಂಡದ ಕಳಪೆ ಬೌಲಿಂಗ್ ಪ್ರದರ್ಶನವನ್ನು ಕೂಡ ಗವಾಸ್ಕರ್ ಟೀಕಿಸಿದ್ದಾರೆ.