ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Karnataka Rains: ಕರಾವಳಿ ಜಿಲ್ಲೆಗಳಿಗೆ ಜೂ.16ರವರೆಗೆ ರೆಡ್‌ ಅಲರ್ಟ್‌; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ!

ಕರಾವಳಿ ಜಿಲ್ಲೆಗಳಿಗೆ ಜೂ.16ರವರೆಗೆ ರೆಡ್‌ ಅಲರ್ಟ್‌; ಅಬ್ಬರಿಸಲಿದೆ ಮಳೆ

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಮಧ್ಯಮ ಮಳೆ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರುವ ಸಂಭವ ಇದೆ.

Karnataka Rains: ಮಲಪ್ರಭಾ ನದಿ ರಭಸಕ್ಕೆ ಕೊಚ್ಚಿ ಹೋದ ಸೇತುವೆ; ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್

ಮಲಪ್ರಭಾ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋದ ಸೇತುವೆ

Karnataka Rains: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕುಸಮಳಿ ಗ್ರಾಮದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿ ನಡೆಯುತ್ತಿದೆ. ತಾತ್ಕಾಲಿಕವಾಗಿ ಬೃಹತ್ ಪೈಪ್‌ನಿಂದ ಸೇತುವೆ ನಿರ್ಮಿಸಲಾಗಿತ್ತು. ಆದರೆ, ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದ್ದು, ಬೆಳಗಾವಿ - ಗೋವಾ ಸಂಪರ್ಕ ರಸ್ತೆ ಸಂಪೂರ್ಣ ಬಂದ್ ಆಗಿದೆ.

Hubli News: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದಲೇ ಹೊತ್ತೊಯ್ದ ಪೋಷಕರು!

ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಹೊತ್ತೊಯ್ದ ಪೋಷಕರು!

Hubli News: ಹುಬ್ಬಳ್ಳಿಯಲ್ಲಿ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾದ ಪತಿಯನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ಪತಿ ಮನೆಗೆ ಯುವತಿ ಬಂದಿದ್ದಳು. ಈ ವೇಳೆ ಯುವತಿ ತಂದೆ, ಮಾವಂದಿರು ಧಮ್ಕಿ ಹಾಕಿ ಗಂಡನ ಮನೆಯಲ್ಲಿ ಕುಳಿತಿದ್ದ ಯುವತಿಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ.

Kantara: Chapter 1: ಅನುಮತಿ ಇಲ್ಲದೇ ಶೂಟಿಂಗ್; ಕಾಂತಾರ ಚಿತ್ರತಂಡಕ್ಕೆ ಶಿವಮೊಗ್ಗ ಜಿಲ್ಲಾಡಳಿತದಿಂದ ನೋಟಿಸ್

ಅನುಮತಿ ಇಲ್ಲದೇ ಶೂಟಿಂಗ್; ಕಾಂತಾರ ಚಿತ್ರತಂಡಕ್ಕೆ ನೋಟಿಸ್

Kantara: Chapter 1: ಚಿತ್ರದ ಕೊನೆಯ ಹಂತದ ಶೂಟಿಂಗ್‌ಗಾಗಿ ರಿಷಬ್‌ ಶೆಟ್ಟಿ ಮತ್ತು ತಂಡ ಕೆಲವು ದಿನಗಳಿಂದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಬೀಡುಬಿಟ್ಟಿದೆ. ಆದರೆ, ಸ್ಥಳೀಯ ಆಡಳಿತದಿಂದ ಅನುಮತಿ ಇಲ್ಲದೆ ಕಾಂತಾರಾ ಸಿನಿಮಾ ಶೂಟಿಂಗ್ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಜಿಲ್ಲಾಡಳಿತ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ

Gubbi (Tumkur) News: ಗೂಗಲ್ ಲೊಕೇಶನ್ ಬಳಸಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಬಂಧನ..!

ಗೂಗಲ್ ಲೊಕೇಶನ್ ಬಳಸಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಬಂಧನ..!

ತಾಲ್ಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿ.ಕೊಡಗೇಹಳ್ಳಿ ಗ್ರಾಮದ ಕೋಡಿಕೆಂಪಮ್ಮ ದೇವಸ್ಥಾನದ ಬಾಗಿಲು ಬೀಗ ಮುರಿದು ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಲು ದೇವ ಸ್ಥಾನದ ಒಳಗೆ ಹೋಗಿ ಹುಂಡಿಯನ್ನು ಹೊರಗಡೆ ತಂದಾಗ ಗ್ರಾಮಸ್ಥರ ಕೂಗಾಟ ಕೇಳಿಸಿಕೊಂಡ ಕಳ್ಳರು ಹುಂಡಿಯನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ದೇವಸ್ಥಾನದ ಬಳಿ ಬಿಟ್ಟು ಓಡಿ ಹೋಗಿದ್ದ ಪ್ರಕರಣ ಭೇದಿಸಿದ್ದ ಸಿ.ಎಸ್.ಪುರ ಪೊಲೀಸರು ಖತರ್ನಾಕ್ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ.

Gubbi (Tumkur) News: ಮರು ಜಾತಿಗಣತಿ ಸ್ವಾಗತಾರ್ಹ: ಶಾಸಕ ಎಸ್.ಆರ್.ಶ್ರೀನಿವಾಸ್

ಮರು ಜಾತಿಗಣತಿ ಸ್ವಾಗತಾರ್ಹ: ಶಾಸಕ ಎಸ್.ಆರ್.ಶ್ರೀನಿವಾಸ್

ತುಮಕೂರು ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂಬ ಹೆಸರು ಬೇಕಿಲ್ಲ. ಬೆಂಗಳೂರು ನಗರಕ್ಕೆ ಸಮೀಪದ ತುಮಕೂರು ಎಲ್ಲಾ ರಂಗದಲ್ಲೂ ಬೆಳೆದಿದೆ. ಕೈಗಾರಿಕಾ ವಲಯ ಇಲ್ಲಿ ವಿಸ್ತರಣೆಯಾದ ಕಾರಣ ಬೆಂಗಳೂರು ಹೆಸರು ಇಲ್ಲಿಗೂ ನಾಮಕರಣ ಮಾಡುವ ಉದ್ದೇಶ ಅವರ ಇಚ್ಛೆ. ಆದರೆ ನಮ್ಮ ತುಮಕೂರು ಹೆಸರು ಹಾಗೆಯೇ ಉಳಿಯಲಿ ಎಂಬುದು ನಮ್ಮ ಆಶಯ

Monsoon Fashion 2025: ಮಾನ್ಸೂನ್‌ನಲ್ಲಿ ಟ್ರೆಂಡಿಯಾದ ಬಣ್ಣಬಣ್ಣದ ಲಾಂಗ್ ಸ್ಲಿಮ್ ಫಿಟ್ ಬ್ಲೇಜರ್ ಫ್ಯಾಷನ್

ಟ್ರೆಂಡಿಯಾದ ಬಣ್ಣಬಣ್ಣದ ಲಾಂಗ್ ಸ್ಲಿಮ್ ಫಿಟ್ ಬ್ಲೇಜರ್ ಫ್ಯಾಷನ್

Monsoon Fashion 2025: ಮಾನ್ಸೂನ್‌ನಲ್ಲಿ ಕಲರ್‌ಫುಲ್ ಲಾಂಗ್ ಸ್ಲಿಮ್ ಫಿಟ್ ಬ್ಲೇಜರ್ ಫ್ಯಾಷನ್ ಟ್ರೆಂಡಿಯಾಗಿದೆ. ಮಾನಿನಿಯರು ಧರಿಸಿದಾಗ ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಈ ಬ್ಲೇಜರ್‌ನಲ್ಲಿ ಯಾವುದು ಟ್ರೆಂಡಿಯಾಗಿದೆ? ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ; ಆರ್.ಸಿ.ರಾಮಚಂದ್ರಪ್ಪ ವಿದ್ಯಾರ್ಥಿಗಳು ಜೂನ್ ೩೦ರೊಳಗೆ ಅರ್ಜಿ ಸಲ್ಲಿಸುವಂತೆ ಮನವಿ

ವಿದ್ಯಾರ್ಥಿಗಳು ಜೂ.30ರೊಳಗೆ ಅರ್ಜಿ ಸಲ್ಲಿಸುವಂತೆ ಮನವಿ

ಶಿರಾ ತಾಲ್ಲೂಕು ಮಾತಂಗ ನೌಕರರ ಬಳಗದ ವತಿಯಿಂದ 2024-25ನೇ ಸಾಲಿನ ಎಸ್.ಎಸ್. ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 75ಕ್ಕಿಂತಲೂ ಹೆಚ್ಚು ಅಂಕ ಗಳನ್ನು ಪಡೆದ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ

Gold Price Today: ಚಿನ್ನದ ದರದಲ್ಲಿ ಯಥಾಸ್ಥಿತಿ; ಇಂದಿನ ರೇಟ್‌ ಚೆಕ್‌ ಮಾಡಿ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

ನಿನ್ನೆ ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 25 ರೂ. ಹೆಚ್ಚಾಗಿ 9,320 ರೂ.ಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 28 ರೂ. ಏರಿಕೆಯಾಗಿದ್ದು, 10,168 ರೂ.ಗೆ ಬಂದು ನಿಂತಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 74,560 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 93,200 ರೂ. ಮತ್ತು 100 ಗ್ರಾಂಗೆ 9,32,000 ರೂ. ನೀಡಬೇಕಾಗುತ್ತದೆ.

Murder Case: ಸಂಧಾನಕ್ಕೆ ಕರೆದು ಕಥೆನೇ ಮುಗ್ಸಿದ್ರು; ನಿನ್ನೆ ಜೈಲಿನಿಂದ ರಿಲೀಸ್‌.. ಇಂದು ಕೊಲೆ

ಯುವಕನ ಬರ್ಬರ ಕೊಲೆ- ಸಂಧಾನಕ್ಕೆ ಕರೆದು ಕಥೆನೇ ಮುಗ್ಸಿದ್ರು!

Bengaluru Murder Case: ಬೆಂಗಳೂರಿನ ಜೆ.ಜೆ ನಗರದ ಜನತಾ ಕಾಲೋನಿಯಲ್ಲಿ ಭೀಕರ ಕೊಲೆ ನಡೆದಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎನ್ನಲಾಗಿದೆ. ಕೊಲೆಯಾದ ಯುವಕನನ್ನು ವಿಜಯ್ (26) ಎಂದು ಗುರುತಿಸಲಾಗಿದೆ. ಇನ್ನು ಸಂಧಾನ ಮಾತುಕತೆಗೆಂದು ಕರೆಸಿ ಆತನನ್ನು ಕೊಲೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Physical Assault: ವೃದ್ಧೆ ಮೇಲೆ ಅತ್ಯಾಚಾರ ಎಸಗಿ ಎಸ್ಕೇಪ್‌ ಆಗಿದ್ದ ಆರೋಪಿಗೆ ಕಾಲಿಗೆ ಗುಂಡೇಟು

ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಕಾಲಿಗೆ ಗುಂಡೇಟು

ಉತ್ತರ ಕನ್ನಡದ ಬೈಲಪಾರು ಐ.ಪಿ.ಎಂ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಫೈರೋಜ್‌ ಗುರುವಾರ ಮಧ್ಯಾಹ್ನ ಬೈಲಪಾರು ಐ.ಪಿ.ಎಂ ಪ್ರದೇಶದ ಅರಣ್ಯ ಪ್ರದೇಶದಲ್ಲಿ 60 ವರ್ಷದ ಅಂಗವಿಕಲ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದ. ಅತ್ಯಾಚಾರ ಮಾಡಿ ಮೊಬೈಲ್ ಹಾಗೂ ₹5,000 ಕಳವು ಮಾಡಿ ಪರಾರಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದರು.

Indi (Vijayapura) News: ಎಸ್‌ಬಿಐ ಬ್ಯಾಂಕ್ ರೈತಪರ ಯೋಜನೆ ಹಮ್ಮಿಕೊಂಡು ಜನರ ವಿಶ್ವಾಸ ಗಳಿಸಿದೆ

ಎಸ್‌ಬಿಐ ಬ್ಯಾಂಕ್ ರೈತಪರ ಯೋಜನೆ ಹಮ್ಮಿಕೊಂಡು ಜನರ ವಿಶ್ವಾಸ ಗಳಿಸಿದೆ

ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಹಾಗೂ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಹೆಚ್ಚಿನ ವಿದ್ಯಾಬ್ಯಾಸಕ್ಕಾಗಿ ನಾಲ್ಕು ಲಕ್ಷದಿಂದ ಇಪ್ಪತ್ತು ಲಕ್ಷದ ವರೆಗೆ ನಮ್ಮಲ್ಲಿ ಸಾಲ ಸೌಲಭ್ಯ ಇದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ರೈತರು ಬ್ಯಾಂಕ್ ನಿಂದ ಸಾಲ ಪಡೆದು ಸÀಕಾಲದಲ್ಲಿ ತುಂಬಿ ಮತ್ತೆ ಸಾಲ ಪಡೆಯಬಹುದು ಇದರಿಂದ ರೈತರು ತಮ್ಮ ಆದಾಯವನ್ನು ದ್ವೀಗುಣ ಮಾಡಿಕೊಂಡು ಸ್ವಾವಲಂಬಿ ಜೀವನ ಮಾಡಬಹುದು

Indi (Vijayapura) News: ವಿಶ್ವ “ಬಾಲಕಾರ್ಮಿಕ ವಿರೋಧಿ”ದಿನ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ

ಕಾನೂನು ಅರಿವು ನೆರವು ಕಾರ್ಯಕ್ರಮ

ಪ್ರತೀ ವರ್ಷ ಜೂ.೧೨ರಂದು ಬಾಲ ಕಾರ್ಮಿಕ ವಿರೋಧಿನ ದಿನ ಆಚರಣೆ ಮಾಡಲಾಗುತ್ತದೆ. ಬಾಲ ಕಾರ್ಮಿಕ ಪದ್ಧತಿಯ ವಿರುಧ್ಧ ಜಾಗೃತಿ ಮೂಡಿಸುವುದು ಮತ್ತು ಈ ಪಿಡುಗನ್ನು ಸಂಪೂರ್ಣವಾಗಿ ತೊಡೆದು ಹಾಕುವ ಉದ್ದೇಶದಿಂದ ಈ ಯೋಜನೆಯನ್ನು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ 2002 ರಲ್ಲಿ ಈ ದಿನವನ್ನು ಪ್ರಥಮವಾಗಿ ಆಚರಿಸಿತು

Chikkanayakanahalli (Tumkur) News: ಬಸ್ ಸೌಲಭ್ಯಕ್ಕೆ ಒತ್ತಾಯ

ಬಸ್ ಸೌಲಭ್ಯಕ್ಕೆ ಒತ್ತಾಯ

ಹಲವು ವರ್ಷಗಳಿಂದ ಚಿಕ್ಕನಾಯಕನಹಳ್ಳಿಯಿಂದ ಪ್ರಾರಂಭವಾಗಿ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚರಿಸುತ್ತಿತ್ತು. ಈ ನಡುವೆ ಸಂಚಾರ ಸ್ಥಗಿತಗೊಳಿಸ ಲಾಗಿದೆ. ಈ ಸಮಯದಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ, ಚಿಕಿತ್ಸೆಗಾಗಿ ತೆರಳುವವರಿಗೆ ಹಾಗು ವ್ಯಾಪಾರಿ ಗಳಿಗೆ ಬೆಂಗಳೂರು ಬಸ್ ಬಹು ಅನುಕೂಲವಾಗಿತ್ತು.

Viral News: ಚಾಕ್ಲೇಟ್‌ ಪ್ರಿಯರೇ, ಎಚ್ಚರ... ಎಚ್ಚರ! ಚಪ್ಪರಿಸಿಕೊಂಡು ತಿನ್ನೋ ಮುನ್ನ ಇದನ್ನೊಮ್ಮೆ ನೋಡಿ

ಚಾಕ್ಲೇಟ್‌ನಲ್ಲಿ ಮನುಷ್ಯನ ಹಲ್ಲು ಪತ್ತೆ!

Human Tooth found in Chocolate: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದ ಭಾರತೀ ಎಂಬುವವರು ಅಂಗಡಿಯೊಂದರಲ್ಲಿ ಟೂಟಿ ಫ್ರೂಟಿ ಎಂಬ ಚಾಕ್ಲೇಟ್ ಅನ್ನು ಖರೀದಿಸಿದ್ದರು. ಚಾಕ್ಲೆಟ್ ತಿನ್ನುವಾಗ ಅದರಲ್ಲಿ ಮನುಷ್ಯನ ಹಲ್ಲು ಪತ್ತೆಯಾಗಿದೆ.

Chikkaballapur News: ಕರ್ನಾಟಕ ರೈತ ಜನಸೇನಾ ಸಂಘಟನೆ ವತಿಯಿಂದ ಕಾರ್ಯಕ್ರಮ ಆಯೋಜನೆ

ಪಹಲ್ಗಾಮ್ ಹುತಾತ್ಮ ಯೋಧರಿಗೆ ರಕ್ತದಾನದ ಮೂಲಕ ಗೌರವ ಸಮರ್ಪಣೆ

ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ಭಾರತೀಯ ಪ್ರವಾಸಿಗಳ ಮೇಲೆ ಪಾಕ್ ಪ್ರಚೋದೀತ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಕೈಗೊಂಡಿದ್ದ ಆಪರೇಶನ್ ಸಿಂಧೂರ್ ವೇಳೆ ಹುತಾತ್ಮರಾದ ವೀರಯೋಧರಿಗೆ ರಕ್ತದಾನ ಶಿಬಿರ ಆಯೋಜನೆ ಮೂಲಕ ಕರ್ನಾಟಕ ರೈತ ಜನ ಸೇನಾ ಸಂಘಟನೆ ಗೌರವ ಸಮರ್ಪಣೆ ಮಾಡಿತು.

Wall Collapsed: ಕರಾವಳಿಯಲ್ಲಿ ವರುಣಾರ್ಭಟ- ಆಸ್ಪತ್ರೆಯ ಗೋಡೆ ಕುಸಿತ; ರೋಗಿಗಳು ಜಸ್ಟ್‌ ಮಿಸ್‌!

ಆಸ್ಪತ್ರೆಯ ಗೋಡೆ ಕುಸಿತ; ರೋಗಿಗಳು ಜಸ್ಟ್‌ ಮಿಸ್‌!

Heavy Rain: ಮಂಗಳೂರಿನಲ್ಲಿ ಭಾರಿ ಮಳೆಗೆ ಜಲ ಸ್ಫೋಟಗೊಂಡು ಖಾಸಗಿ ಆಸ್ಪತ್ರೆಯ ಗೋಡೆ ಒಂದು ಕುಸಿದು ಬಿದ್ದಿದ್ದು, ಭಾರೀ ಅವಘಡವೊಂದು ಸಂಭವಿಸಿದೆ. ಅದೃಷ್ಟವಶಾತ್‌ ಆಸ್ಪತ್ರೆಯಲ್ಲಿದ್ದ ಕುಟುಂಬವೊಂದು ಪಾರಾಗಿದೆ. ಕಂಕನಾಡಿ ಬಳಿಯ ಸುವರ್ಣ ಲೇನಲ್ಲಿ ಭಾರಿ ಅವಘಡ ಸಂಭವಿಸಿದೆ. ಖಾಸಗಿ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಅವಘಡ ಸಂಭವಿಸಿದೆ

Parappana Agrahara: ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಕೈಗೆ ಮೊಬೈಲ್‌; ಸೈಕೋಲಾಜಿಸ್ಟ್‌ಗಳಿಬ್ಬರು ಅರೆಸ್ಟ್‌

ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಕೈಗೆ ಮೊಬೈಲ್‌; ಇಬ್ಬರು ಅರೆಸ್ಟ್‌

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಮೊಬೈಲ್‌ ಪೂರೈಕೆಯಾಗಿರು ಸುದ್ದಿಯ ಹರಿದಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹೊರಗುತ್ತಿಗೆ ಮನಶಾಸ್ತ್ರಜ್ಞರನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಾರತ್ತಹಳ್ಳಿಯ ನವ್ಯ ಶ್ರೀ ಹಾಗೂ ಸೃಜನ್ ಎಂದು ಗುರುತಿಸಲಾಗಿದ್ದು, ಆರೋಪಿಗಳಿಂದ ಒಂದು ಹೊಸ ಮೊಬೈಲ್ ಜಪ್ತಿ ಮಾಡಲಾಗಿದೆ.

Karnataka Weather: ರೆಡ್‌ ಅಲರ್ಟ್‌; ಇಂದು ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ನಿರೀಕ್ಷೆ

ರೆಡ್‌ ಅಲರ್ಟ್‌; ಇಂದು ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ನಿರೀಕ್ಷೆ

Karnataka Weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Kantara: Chapter 1: 'ಕಾಂತಾರ: ಚಾಪ್ಟರ್‌ 1' ಚಿತ್ರತಂಡಕ್ಕೆ ತಪ್ಪುತ್ತಿಲ್ಲ ಸಂಕಷ್ಟ; ದೋಣಿ ಮಗುಚಿ ಕ್ಯಾಮೆರಾ ನೀರುಪಾಲು: ರಿಷಬ್‌ ಶೆಟ್ಟಿ, ಕಲಾವಿದರು ಪಾರು

'ಕಾಂತಾರ: ಚಾಪ್ಟರ್‌ 1' ಚಿತ್ರತಂಡಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

Rishab Shetty: ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ʼಕಾಂತಾರ: ಚಾಪ್ಟರ್‌ 1ʼ ಚಿತ್ರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಶೂಟಿಂಗ್‌ ನಡೆಸುತ್ತಿದ್ದಾಗ ಜಲಾಶಯದಲ್ಲಿ ದೋಣಿ ಮಗುಚಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. ಆದರೆ ಕ್ಯಾಮೆರಾಕ್ಕೆ ಹಾನಿಯಾಗಿದೆ ಎನ್ನಲಾಗಿದೆ.

Chikkaballapur News: ಜುವಾರಿ ಫಾರ್ಮಾ ಹಬ್ ಕಂಪನಿಯ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

ಜುವಾರಿ ಫಾರ್ಮಾ ಹಬ್ ಕಂಪನಿಯ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಲಾಭದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ಹೊರ ಬೇಕಾಗಿದೆ. ಈ ಮೂಲಕ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕಾಗಿದೆ. ನಮ್ಮ ಸಂಸ್ಥೆ ಇದನ್ನು ಮನ ಗಂಡು ಮಿಟ್ಟೇಮರಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಬ್ಯಾಗ್‌ಗಳನ್ನು ಕೊಡುಗೆಯಾಗಿ ನೀಡಲಾಗಿದೆ.

Ahmedabad Plane Crash: ಅಹಮದಾಬಾದ್ ವಿಮಾನ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

ವಿಮಾನ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

ಏರ್ ಇಂಡಿಯಾ ವಿಮಾನ ದುರಂತ ಹಿನ್ನೆಲೆಯಲ್ಲಿ ಅಹಮದಾಬಾದ್‌ನ ಜನರಲ್ ಆಸ್ಪತ್ರೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ, ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ನಾಸಿರ್ ಹುಸೇನ್, ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ಘಟಕದ ಅಧ್ಯಕ್ಷ ಪವನ್ ಖೇರಾ ಮತ್ತಿತರರು ಶನಿವಾರ ಸಂಜೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.

Pralhad Joshi: ʼಒನ್‌ ನೇಷನ್‌ ಒನ್‌ ಎಲೆಕ್ಷನ್‌ʼ; ಇಂಡಿ ಒಕ್ಕೂಟ ವಿನಾಕಾರಣ ಭಯ ಬಿಟ್ಟು ಈಗಿಂದಲೇ ತಯಾರಿ ನಡೆಸಿಕೊಳ್ಳಲಿ: ಪ್ರಲ್ಹಾದ್‌ ಜೋಶಿ

ಒನ್‌ ನೇಷನ್‌ ಒನ್‌ ಎಲೆಕ್ಷನ್‌; ಕಾಂಗ್ರೆಸ್‌ನದ್ದು ಅರ್ಥವಿಲ್ಲದ ಆತಂಕ: ಜೋಶಿ

ಯಾವುದೇ ಸರ್ಕಾರ ವರ್ಷದ 12 ತಿಂಗಳೂ, ದಿನದ 24 ತಾಸೂ ಚುನಾವಣೆ ಮಾಡುತ್ತ ಕೂರಲು ಸಾಧ್ಯವಿಲ್ಲ. ಒಂದು ಎಂಎಲ್‌ಸಿ ಚುನಾವಣೆ ನಡೆದರೂ ಎಲ್ಲಾ ಬಂದ್‌ ಮಾಡುತ್ತೇವೆ. ಇದರಿಂದ ದೇಶಕ್ಕೇ ಆರ್ಥಿಕ ನಷ್ಟ. ಹಾಗಾಗಿ ಈ ವ್ಯವಸ್ಥೆ ಬದಲಿಸಲು ಕೇಂದ್ರ ಸರ್ಕಾರ ಭಾರತೀಯ ಸಂವಿಧಾನಕ್ಕೆ 129ನೇ ತಿದ್ದುಪಡಿ ಮೂಲಕ ಬದಲಾವಣೆ ತಂದು ಏಕ ಕಾಲಕ್ಕೆ ಚುನಾವಣೆ ನಡೆಸಲು ಯೋಜಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Chikkaballapur News: ಗ್ರಾಮೀಣ ಮತ್ತು ಬಡಜನತೆಗೆ ಆರೋಗ್ಯ ಸೇವೆ ನೀಡುವುದೇ ನಮ್ಮ ಉದ್ದೇಶ: ಸಿರಿ ಆಸ್ಪತ್ರೆ ಡಾ.ತರುಣ್

ಗ್ರಾಮೀಣ ಮತ್ತು ಬಡಜನತೆಗೆ ಆರೋಗ್ಯ ಸೇವೆ ನೀಡುವುದೇ ನಮ್ಮ ಉದ್ದೇಶ

ತಾಲೂಕಿನ ಗಡಿ ಭಾಗದ ಬಡಜನತೆಗೆ ಕಡಿಮೆ ದರದಲ್ಲಿ ಸುಸಜ್ಜಿತ, ಸ್ವಚ್ಛತೆ ಹಾಗೂ ಆರೋಗ್ಯ ಸೇವೆ ಒದಗಿಸಲು ಮುಂದಾಗಿದ್ದೇವೆ. ನಮ್ಮ ಆಸ್ಪತ್ರೆಯಲ್ಲಿ ಔಷಧಾಲಯ, ಪ್ರಯೋಗಾಲಯ, ಇಸಿಜಿ, ತುರ್ತು ಪ್ರಥಮ ಚಿಕಿತ್ಸೆ, ಲಸಿಕೆ, ಡಿಜಿಟಲ್ ಎಕ್ಸರೆ, ಒಳರೋಗಿಗಳ ಆರೈಕೆ, ಮೈನರ್ ಆಪರೇಷನ್ ಥಿಯೇಟರ್, ಆಂಬ್ಯುಲೆನ್ಸ್ ಮತ್ತಿತರೇ ಸೇವೆಗಳು ನಮ್ಮಲ್ಲಿ ಲಭ್ಯವಿದೆ.