Chikkaballapur News: ಕರ್ನಾಟಕ ರೈತ ಜನಸೇನಾ ಸಂಘಟನೆ ವತಿಯಿಂದ ಕಾರ್ಯಕ್ರಮ ಆಯೋಜನೆ
ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ಭಾರತೀಯ ಪ್ರವಾಸಿಗಳ ಮೇಲೆ ಪಾಕ್ ಪ್ರಚೋದೀತ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಕೈಗೊಂಡಿದ್ದ ಆಪರೇಶನ್ ಸಿಂಧೂರ್ ವೇಳೆ ಹುತಾತ್ಮರಾದ ವೀರಯೋಧರಿಗೆ ರಕ್ತದಾನ ಶಿಬಿರ ಆಯೋಜನೆ ಮೂಲಕ ಕರ್ನಾಟಕ ರೈತ ಜನ ಸೇನಾ ಸಂಘಟನೆ ಗೌರವ ಸಮರ್ಪಣೆ ಮಾಡಿತು.

ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ಭಾರತೀಯ ಪ್ರವಾಸಿಗಳ ಮೇಲೆ ಪಾಕ್ ಪ್ರಚೋದೀತ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಕೈಗೊಂಡಿದ್ದ ಆಪರೇಶನ್ ಸಿಂಧೂರ್ ವೇಳೆ ಹುತಾತ್ಮರಾದ ವೀರಯೋಧರಿಗೆ ರಕ್ತದಾನ ಶಿಬಿರ ಆಯೋಜನೆ ಮೂಲಕ ಕರ್ನಾಟಕ ರೈತ ಜನ ಸೇನಾ ಸಂಘಟನೆ ಗೌರವ ಸಮರ್ಪಣೆ ಮಾಡಿತು.

ಚಿಕ್ಕಬಳ್ಳಾಪುರ : ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ಭಾರತೀಯ ಪ್ರವಾಸಿಗಳ ಮೇಲೆ ಪಾಕ್ ಪ್ರಚೋದೀತ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಕೈಗೊಂಡಿದ್ದ ಆಪರೇಶನ್ ಸಿಂಧೂರ್ ವೇಳೆ ಹುತಾತ್ಮರಾದ ವೀರಯೋಧರಿಗೆ ರಕ್ತದಾನ ಶಿಬಿರ ಆಯೋಜನೆ ಮೂಲಕ ಕರ್ನಾಟಕ ರೈತ ಜನ ಸೇನಾ ಸಂಘಟನೆ ಗೌರವ ಸಮರ್ಪಣೆ ಮಾಡಿತು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಕರ್ನಾಟಕ ರೈತ ಜನಸೇನಾ ಸಂಘಟನೆ ವತಿಯಿಂದ ಏರ್ಪಡಿಸಿದ್ದ ಗೌರವ ಸಮರ್ಪಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ,ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್.ಬಿ.ರೆಡ್ಡಿ,ದಿ ಗೋಲ್ಡನ್ ಗ್ಲೀಮ್ಸ್ ಕಾಲೇಜಿನ ಪ್ರಾಂಶುಪಾಲ ಮುನಿಕೃಷ್ಣ,ಹಾಗೂ ಇತರರು ಹುತಾತ್ಮ ವೀರ ಯೋಧರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಶನಿವಾರ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 100ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಿ ಭಾರತೀಯ ರೆಡ್ಕ್ರಾಸ್ಗೆ ನೀಡಲಾಯಿತು.
ಇದನ್ನೂ ಓದಿ: IPL Celebration: ನಾಳೆ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆ; ಐಪಿಎಲ್ ಸಂಭ್ರಮಾಚರಣೆಗೆ ಹೊಸ ನಿಯಮ ಜಾರಿ ಸಾಧ್ಯತೆ!
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿ ದಾನಗಳಲ್ಲಿ ಅತಿ ಶ್ರೇಷ್ಠ ದಾನವೆಂದರೆ ಅದು ರಕ್ತದಾನ ಮಾತ್ರ.ಅಪಾಯದಲ್ಲಿರುವ ಮನುಷ್ಯನಿಗೆ ಮತ್ತೊಬ್ಬ ಆರೋಗ್ಯವಂತ ಮನುಷ್ಯ ಮಾತ್ರ ರಕ್ತದಾನ ಮಾಡಲು ಸಾಧ್ಯ. ಆದ್ದರಿಂದಲೇ ರಕ್ತದಾನ ಕೇವಲ ದಾನವಲ್ಲ ಬದಲಿಗೆ ಅದು ಜೀವದಾನವಾಗಿದೆ. ಇದನ್ನು ಮನಗಂಡು ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕೆಲಸಕ್ಕೆ ಮುಂದಾಗಬೇಕು. ರಕ್ತದಾನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹೂರಬಂದು ಪ್ರತಿಯೊಬ್ಬರು ರಕ್ತದಾನ ಮಾಡಬೇಕು. ಇತರರಿಗೂ ರಕ್ತದಾನ ಮಾಡಲು ಪ್ರೇರಣೆ ತುಂಬಬೇಕೆಂದು ಕರೆ ನೀಡಿದರು.
ಇದೇ ವೇಳೆ ಸಮಾಜ ಸೇವಕಿ ಸುಷ್ಮಶ್ರೀನಿವಾಸ್ ಅವರ ಕಾರ್ಯವನ್ನು ಮನಸಾ ಹೊಗಳಿದರು. ಸುಷ್ಮಾ ಶ್ರೀನಿವಾಸ್ ಅವರು ಹಲವು ದಶಕಗಳಿಂದ ಸಮಾಜಮುಖಿ ಚಿಂತನೆಯೊಂದಿಗೆ ಸೇವೆ ಮಾಡುತ್ತಾ ಬಂದಿದ್ದಾರೆ. ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಪರೇಶನ್ ಸಿಂಧೂರ್ ವೇಳೆ ಹುತಾತ್ಮರಾದ ವೀರಯೂಧರಿಗೆ ಗೌರವ ಸಮರ್ಪಣೆ ಮಾಡಲಿಕ್ಕೆ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ ಎಂದರು.
ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ಬಿ ರೆಡ್ಡಿ ಮಾತನಾಡಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ನಮ್ಮನ್ನ ಕಾಪಾಡುತ್ತಿರುವ ಸೈನಿಕರ ಸೇವೆ ಬಹಳ ಡೊಡ್ಡದು. ಆಪರೇಷನ್ ಸಿಂಧೂರ್ ಕಾರ್ಯಾಚಾರಣೆಯ ವೇಳೆ ಹುತಾತ್ಮರಾದ ವೀರಯೋಧರಿಗೆ ಕರ್ನಾಟಕ ರೈತ ಜನಸೇನಾ ವತಿಯಿಂದ ಸೇನೆಯ ಸಂಸ್ಥಾಪಕ ಅಧ್ಯಕ್ಷೆ ಸುಷ್ಮಶ್ರೀನಿವಾಸ್ ಅವರು ಗೌರವ ಸಮರ್ಪಣೆಗಾಗಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ. ದೇಶವನ್ನು ಕಾಪಾಡು ತ್ತಿರುವ ಸೈನಿಕರ ಸೇವೆ ಕೇವಲ ಮಾತಿಗಷ್ಟೆ ಸೀಮಿತಗೊಳಿಸದೆ ರಕ್ತದಾನ ಮಾಡಿ ಅರ್ಥಪೂರ್ಣ ಗೌರವ ಸಲ್ಲಿಸಬೇಕಾಗಿದೆ.ದೇಶಾಭಿಮಾನ,ತ್ಯಾಗ ಬಲಿದಾನದ ಭಾವನೆ ಇರುವವರು ಮಾತ್ರ ಸೈನಿಕರಾಗುತ್ತಾರೆ. ಗಡಿಗಳಲ್ಲಿ ಮಳೆ ಬಿಸಿಲು ಚಳಿಯನ್ನು ಲೆಕ್ಕಿಸದೆ ನಮ್ಮನ್ನು ಕಾಪಾಡುತ್ತಿರುವ ಸೈನಿಕರ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರೈತ ಜನಸೇನಾ ಸಂಸ್ಥಾಪಕ ಅಧ್ಯಕ್ಷೆ ಸುಷ್ಮ ಶ್ರೀನಿವಾಸ್ ಯೋಧರಿಗೋಸ್ಕರ ಏನೆ ಮಾಡಿದರೂ ಕಡಿಮೆ. ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಪರೇಶನ್ ಸಿಂಧೂರ್ ವೇಳೆ ಹುತಾತ್ಮರಾದ ವೀರಯೋಧರಿಗೆ ಕರ್ನಾಟಕ ರೈತ ಜನಸೇನಾ ವತಿಯಿಂದ ರಕ್ತದಾನ ಶಿಬಿರ ನಡೆಸಿ ಗೌರವ ಸಮರ್ಪಣೆ ಸಲ್ಲಿಸಲಾಗಿದೆ.ಯುವಕರನ್ನು ದುಶ್ಟಟಗಳ ದಾಸರಾಗಿ ಬೆಳೆಯಲು ಬಿಡದೆ,ಅವರಲ್ಲಿನ ಅಂತಃಶಕ್ತಿಯನ್ನು ಬಡಿದೆಬ್ಬಿಸುವ ಮೂಲಕ ಇಂತಹ ಕಾರ್ಯಗಳಲ್ಲಿ ತೊಡಗಿಸುವದೇ ನಮ್ಮ ಉದ್ದೇವಾಗಿದೆ. ಆಗ ಮಾತ್ರ ಆರೋಗ್ಯ ವಂತ ಸಮಾಜ ಕಟ್ಟಲು ಸಾಧ್ಯ ಎಂದರು.
ಗೋಲ್ಡನ್ ಗ್ಲೀಮ್ಸ್ ಕಾಲೇಜಿನ ಪ್ರಾಂಶುಪಾಲ ಸಿ ಎಂ ಮುನಿಕೃಷ್ಣ ಮಾತನಾಡಿ ನಮ್ಮ ಸುಖಕರ ಜೀವನಕ್ಕೆ ಹಾಗು ದೇಶದ ಭದ್ರತೆಗೆ ನಿಂತು ಸೇವೆ ಸಲ್ಲಿಸುತ್ತಿರುವ ಸೈನಿಕರ ಸ್ಮರಣೆ ಮಾಡಲೇಬೇಕು. ಗಡಿಗಳಲ್ಲಿ ಏನನ್ನೂ ಲೆಕ್ಕಿಸದೆ ದೇಶವನ್ನು ಕಾಯುತ್ತಿರುವ ಸೈನಿಕರ ಶ್ರಮದಿಂದ ದೇಶವಾಸಿಗಳು ಸುರಕ್ಷಿತವಾಗಿದ್ದೇವೆ. ಸೈನಿಕರಿಗೆ ಇನ್ನಷ್ಟು ಬಲ ತುಂಬುವ ಕೆಲಸ ಮಾಡಬೇಕಾಗಿದೆ.ಇಂದಿನ ಯುವಕರು ದೇಶ ಸೇವೆಯ ಮನೋಭಾವನೆ ಬೆಳೆಸಿಕೊಂಡು ಮುನ್ನೆಡೆಯಬೇಕು, ಸಕಾರಾತ್ಮಕ ಭಾವನೆಯೊಂದಿಗೆ ದೇಶವನ್ನು ಕಟ್ಟುವ ಕೆಲಸಕ್ಕೆ ಮುಂದಾಗಬೇಕೆಂದರು.
ಈ ಸಂದರ್ಭದಲ್ಲಿ ನಿವೃತ್ತರಾದ ಇಬ್ಬರು ಸೈನಿಕರಾದ ತ್ಯಾಗರಾಜ್ ಹಾಗು ಕುಮಾರ್ ಹಾಗೂ ಪ್ರಸ್ತುತ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಟರಾಜ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮೂವರು ಕೂಡ ತಮ್ಮ ತಮ್ಮ ಭಾಷಣದಲ್ಲಿ ಸೈನಿಕನ ಕೆಲಸದ ಬಗ್ಗೆ ವಿವರಿಸಿದಲ್ಲದೆ ದೇಶಾಭಿಮಾನ ಬೆಳಸಿಕೊಳ್ಳುವ ಸ್ಫೂರ್ತಿದಾಯಕ ಮಾತುಗಳಾನ್ನಾಡಿದರು.
ಈ ಸಂದರ್ಭದಲ್ಲಿ ರೈತ ಜನಸೇನಾ ರಾಜ್ಯ ಗೌರವಾಧ್ಯಕ್ಷ ಜಿ.ಕೆ ಧನಗೋಪಾಲ್, ಪದಾಧಿಕಾರಿಗಳಾದ ಸುಧಾಕರ್, ಅಭಿಲಾಷ್, ಅಭಿಷೇಕ್, ಅರುಣ್, ಅನಿಲ್, ಮಣಿ, ಚೇತನ್, ಜಲಂಧರ್, ರಮೇಶ್ ಇತರರು ಹಾಜರಿದ್ದರು.