ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೈಟ್‌ ಆಗಿ ಹೈದರಾಬಾದ್ ಎಕ್ಸ್‌ಪ್ರೆಸ್‌ವೇಯಲ್ಲಿ ಒಂಟೆ ಮೇಲೆ ಮಲಗಿ ಸವಾರಿ ಮಾಡಿದ ವ್ಯಕ್ತಿ; ವಿಡಿಯೊ ವೈರಲ್

ಹೈದರಾಬಾದ್‌ನ ಜನನಿಬಿಡ ಪಿವಿ ನರಸಿಂಹ ರಾವ್ ಎಕ್ಸ್‌ಪ್ರೆಸ್‌ವೇಯಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಒಂಟೆಯ ಮೇಲೆ ಸವಾರಿ ಮಾಡುತ್ತಿರುವ ವಿಚಿತ್ರ ದೃಶ್ಯ ಕೆಲಹೊತ್ತು ಆತಂಕ ಸೃಷ್ಟಿಸಿತು. ಕೊನೆಗೆ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಇಕ್ರಂ ಎನ್ನುವವರು ಒಂಟೆಯನ್ನು ನಿಲ್ಲಿಸಿ ರಸ್ತೆಯ ಪಕ್ಕದಲ್ಲಿ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

ಹೈದರಾಬಾದ್ ಎಕ್ಸ್‌ಪ್ರೆಸ್‌ವೇಯಲ್ಲಿ ಒಂಟೆ ಮೇಲೆ ವ್ಯಕ್ತಿಯ ಸವಾರಿ

Profile Sushmitha Jain Jun 21, 2025 9:28 PM

ಹೈದರಾಬಾದ್: ಹೈದರಾಬಾದ್‌ನ (Hyderabad) ಜನನಿಬಿಡ ಪಿವಿ ನರಸಿಂಹ ರಾವ್ ಎಕ್ಸ್‌ಪ್ರೆಸ್‌ವೇಯಲ್ಲಿ (PV Narasimha Rao Expressway) ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಒಂಟೆಯ (Camel) ಮೇಲೆ ಸವಾರಿ ಮಾಡುತ್ತಿರುವ ವಿಚಿತ್ರ ದೃಶ್ಯ ಸಂಚಾರಿಗರನ್ನು ಆತಂಕಕ್ಕೀಡು ಮಾಡಿತು. ಈ ಅಪಾಯಕಾರಿ ಘಟನೆಯನ್ನು ಇಕ್ರಂ ಉಲ್ಲಾ ಶಾ ಎಂಬವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಕೇವಲ ದೃಶ್ಯವನ್ನು ಚಿತ್ರೀಕರಿಸದೆ, ಈ ಸಂಕಷ್ಟದ ಸನ್ನಿವೇಶವನ್ನು ನಿಯಂತ್ರಿಸಲು ಸಹಾಯ ಮಾಡಿ, ಯಾವುದೇ ಅನಾಹುತ ಆಗದಂತೆ ನೋಡಿಕೊಂಡಿದ್ದಾರೆ.

ವಿಡಿಯೊದಲ್ಲಿ ಒಂಟೆ ಎಕ್ಸ್‌ಪ್ರೆಸ್‌ವೇಯಲ್ಲಿ ವೇಗವಾಗಿ ಓಡುತ್ತಿರುವ ದೃಶ್ಯ ಕಂಡುಬಂದಿದೆ. ಗುಂಗಿನಲ್ಲಿದ್ದ ಸವಾರ ಲಗಾಮನ್ನು ಕಷ್ಟದಿಂದ ಹಿಡಿದು, ರಸ್ತೆಯ ಅಂಚಿನಲ್ಲಿ ಅಪಾಯಕಾರಿಯಾಗಿ ಓಲಾಡುತ್ತಿದ್ದ. ಸ್ಥಿತಿ ಗಂಭೀರವಾದಂತೆ, ಇಕ್ರಂ ಕಾರಿನಲ್ಲಿ ಒಂಟೆಯನ್ನು ಬೆನ್ನಟ್ಟಿ, ಸವಾರನಿಗೆ ನಿಲ್ಲುವಂತೆ ಕೂಗಿದರು ಮತ್ತು ಸಮೀಪದ ಚಾಲಕರಿಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಎಚ್ಚರಿಕೆ ನೀಡಿದರು.

ವೈರಲ್‌ ವಿಡಿಯೊ ಇಲ್ಲಿದೆ:

ಈ ಸುದ್ದಿಯನ್ನೂ ಓದಿ: Viral Video: ಮೆಟ್ರೋದೊಳಗೆ ಹಾವಿದೆ ಎಂಬ ವದಂತಿ- ಬೆದರಿದ ಮಹಿಳೆಯರ ರಂಪಾಟವನ್ನೊಮ್ಮೆ ನೋಡಿ

ಸನ್ನಿವೇಶವನ್ನು ನಿಯಂತ್ರಿಸಲು ಇಕ್ರಂ, ಬಾಟಲಿಯಿಂದ ನೀರನ್ನು ಸವಾರನ ಮೇಲೆ ಚಿಮ್ಮಿದರು. ಅಂತಿಮವಾಗಿ, ಸವಾರ ಪ್ರಜ್ಞೆ ಕಳೆದುಕೊಂಡು ಒಂಟೆಯ ಮೇಲೆ ಬಿದ್ದ. ಒಂಟೆ ಓಡುವುದನ್ನು ಮುಂದುವರೆಸಿತು. ರೋಚಕ ಚೇಸಿಂಗ್ ನಂತರ, ಇಕ್ರಂ ಮತ್ತು ಅವರ ಸ್ನೇಹಿತ ಒಂಟೆಯನ್ನು ರಸ್ತೆಬದಿಯ ಕಂಬಕ್ಕೆ ಕಟ್ಟಿ ನಿಲ್ಲಿಸಿದರು. ಆಗ ಸವಾರ ಅರೆಪ್ರಜ್ಞೆಯಲ್ಲಿ ಅಸ್ಪಷ್ಟವಾಗಿ ಮಾತನಾಡುತ್ತಿದ್ದ.

ಜೂನ್ 15ರಂದು ಪೋಸ್ಟ್ ಆದ ಈ ವೀಡಿಯೊ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವಿಡಿಯೊಕ್ಕೆ ಇಕ್ರಂ ಮತ್ತು ಅವರ ಸ್ನೇಹಿತರ ಧೈರ್ಯವನ್ನು ಜನರು “ಧೈರ್ಯದ ಕಾರ್ಯ” ಎಂದು ಕೊಂಡಾಡಿದ್ದಾರೆ. “ಎಲ್ಲರೂ ಕಣ್ಣುಮುಚ್ಚಿದಾಗ, ಈ ವ್ಯಕ್ತಿ ಧೈರ್ಯ ತೋರಿದ! ಜೀವ ಉಳಿಸಿದ, ಅಪಘಾತ ತಡೆದ. ಇಂತಹವರೇ ಇಂದಿಗೆ ಅಗತ್ಯ” ಎಂದು ಒಬ್ಬ ಬಳಕೆದಾರ ಬರೆದಿದ್ದಾರೆ ಮತ್ತೊಬ್ಬರು, “ನೀವು ಜೀವ ಉಳಿಸಿದಿರಿ, ಶಹಭಾಷ್!” ಎಂದಿದ್ದಾರೆ. “ಒಂಟೆ ಮತ್ತು ಸವಾರನನ್ನು ಉಳಿಸಿದ ಧೈರ್ಯಕ್ಕೆ ಧನ್ಯವಾದ” ಎಂದು ಇನ್ನೊಬ್ಬರು ತಿಳಿಸಿದ್ದಾರೆ.