ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತೊಗರಿಬೇಳೆ ಬೆಲೆ ಇಳಿಕೆ: ಗ್ರಾಹಕರಲ್ಲಿ ಖುಶಿ, ರೈತರಲ್ಲಿ ಬೇಸರ

ತೊಗರಿಯ ಕಣಜ ಎನಿಸಿರುವ ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಇಳುವರಿ ಬಂದಿರುವುದರ ಜೊತೆಗೆ, ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿಯೂ ಉತ್ಪಾದನೆ ಹೆಚ್ಚಿದ ಪರಿಣಾಮವಾಗಿ ತೊಗರಿ ಬೇಳೆಯ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ವರ್ಷ ಜೂನ್-ಜುಲೈನಲ್ಲಿ ತೊಗರಿಬೇಳೆಯ ದರ ಗಗನಮುಖಿಯಾಗಿತ್ತು.

ತೊಗರಿಬೇಳೆ ಬೆಲೆ ಇಳಿಕೆ: ಗ್ರಾಹಕರಲ್ಲಿ ಖುಶಿ, ರೈತರಲ್ಲಿ ಬೇಸರ

Profile Ashok Nayak Jun 27, 2025 2:07 PM

ಹೂವಪ್ಪ. ಐ.ಹೆಚ್ ಬೆಂಗಳೂರು

ಕಳೆದ ವರ್ಷಕ್ಕಿಂತ ಈ ವರ್ಷ ತೊಗರಿಬೇಳೆ ಕೆ.ಜಿ.ಗೆ 60 ರು. ಇಳಿಕೆ

ದಾಸ್ತಾನಿಗೆ ವರ್ತಕರ ಹಿಂದೇಟು

ವಿದೇಶಿ ತೊಗರಿಯೂ ಮಾರುಕಟ್ಟೆಯಲ್ಲಿ ಲಭ್ಯ

ತೊಗರಿಯ ಕಣಜ ಎನಿಸಿರುವ ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಇಳುವರಿ ಬಂದಿರುವುದರ ಜೊತೆಗೆ, ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿಯೂ ಉತ್ಪಾದನೆ ಹೆಚ್ಚಿದ ಪರಿಣಾಮವಾಗಿ ತೊಗರಿಬೇಳೆಯ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ವರ್ಷ ಜೂನ್-ಜುಲೈ ನಲ್ಲಿ ತೊಗರಿಬೇಳೆಯ ದರ ಗಗನಮುಖಿಯಾಗಿತ್ತು.

ಈ ವರ್ಷ ಬೆಂಗಳೂರು ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಗುಜರಾತ್ ದರ್ಜೆ ಸಗಟು ಬೆಲೆ ಕೆ.ಜಿ.ಗೆ 185ರಿಂದ 115 ರು, ಗುಲ್ಬರ್ಗ ತೊಗರಿಬೇಳೆಗೆ 170ರಿಂದ 105 ರೂ.ಗೆ ಇಳಿದಿದೆ. ಇನ್ನು ವಿದೇಶಿ ತೊಗರಿಬೇಳೆ ಹಿಂದೆ 160 ರು. ಇದ್ದ ಬೆಲೆ, ಈಗ 90 ರು.ಗೆ ಕುಸಿದಿದೆ. ಹಾಗಾಗಿ ಕಳೆದ ವರ್ಷಕ್ಕೆ ಹೋಲಿ ಸಿದರೆ ಈ ವರ್ಷ ತೊಗರಿಬೆಳೆ 60-65 ರು. ಇಳಿಕೆಯಾದಂತಾಗಿದೆ.

ತಮ್ಮ ಕೈಗೆಟಕುವ ದರದಲ್ಲಿ ತೊಗರಿ ಬೇಳೆ ಖರೀದಿಸಲು ಗ್ರಾಹಕರು ಖುಷಿ ಪಡುತ್ತಿದ್ದಾರೆ ನಿಜ, ಆದರೆ ಕಳೆದ ವರ್ಷ ಕ್ವಿಂಟಲ್‌ಗೆ 12 ಸಾವಿರಕ್ಕೆ ಏರಿಕೆ ಕಂಡಿದ್ದ ತೊಗರಿ ದರವು ಈ ವರ್ಷ 6500 ರಿಂದ 7 ಸಾವಿರ ಆಸುಪಾಸಿನಲ್ಲಿರುವುದರಿಂದ ರೈತರಿಗೆ ಈಗ ಬಾರೀ ಬೇಸರವಾಗಿದೆ.

ಇದನ್ನೂ ಓದಿ: Shishir Hegde Column: ಪಂಜರದೊಳಗಿನ ಮಂಗಕ್ಕೆ ಐವತ್ತು ಲಕ್ಷ ರೂಪಾಯಿ !

ರಾಜ್ಯದಲ್ಲಿ ಅಂದಾಜು 1.02 ಲಕ್ಷ ಹೆಕ್ಟೇರ್‌ನಲ್ಲಿ 11.96 ಲಕ್ಷ ಟನ್ ತೊಗರಿ ಉತ್ಪಾದನೆಯಾಗಿದೆ. ಕಳೆದ ವರ್ಷ ನೆಟೆ ರೋಗ ಬಂದಿದ್ದರಿಂದ ತೊಗರಿ ಉತ್ಪಾದನೆ ಕುಸಿದಿತ್ತು. ಈ ಬಾರಿ ಉತ್ತಮ ಇಳುವರಿ ಬಂದಿದ್ದರಿಂದ ತೊಗರಿಬೇಳೆ ಮಿಲ್‌ನವರು ಪ್ರತಿ ಕ್ವಿಂಟಲ್‌ಗೆ 6300-6800ರಂತೆ ತೊಗರಿ ಖರೀದಿ ಮಾಡಿದ್ದಾರೆ. ದಾಸ್ತನು ಇರುವುದು ತೊಗರಿಬೇಳೆಯ ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಬೆಂಗಳೂರು ಎಪಿಎಂಸಿ ಬೇಳೆಕಾಳು ವ್ಯಾಪಾರಿಗಳು.

ಮಾರಾಟಗಾರರ ಪ್ರಕಾರ, 2023ರಿಂದ ಇದೇ ಮೊದಲ ಬಾರಿಗೆ ಇಷ್ಟೊಂದು ಬೆಲೆ ಕಡಿಮೆ ಎಂಬ ಅಭಿಪ್ರಾಯವಾಗಿದ್ದು, ಮೊಜಾಂಬಿಕ್, ಜಿಂಬಾಬ್ವೆ ಮತ್ತು ಮ್ಯಾನ್ಮಾರ್‌ನಿಂದ ಆಮದು ಮಾಡಿ ಕೊಂಡ ತೊಗರಿಬೇಳೆಯ ದರವು ಭಾರತದ ತೊಗರಿ ಪ್ರಬೇಧ ದರದಲ್ಲೇ ಲಭ್ಯವಿದೆ. ಆಮದು ತೊಗರಿಬೇಳೆ ದರ ಇಷ್ಟು ಕಡಿಮೆ ಆಗಿದ್ದು, ಇದು ಕಳೆದ 6 ವರ್ಷಗಳಲ್ಲಿ ಇಷ್ಟು ಕಡಿಮೆ ಯಾಗಿರು ವುದು ಎಂಬುವುದು ವರ್ತಕರ ಅಭಿಪ್ರಾಯ.

ಕೇಂದ್ರ ಸರಕಾರವು ಬರ್ಮಾ, ಘಾನಾ, ದಕ್ಷಿಣ ಆಫ್ರಿಕಾ ದೇಶಗಳಿಂದ ಈ ಬಾರಿ ತೊಗರಿಯನ್ನು ಆಮದು ಮಾಡಿಕೊಂಡಿದ್ದರಿಂದ ತೊಗರಿ ಸಂಗ್ರಹವು ಯಥೇಚ್ಛವಾಗಿದೆ. ತೊಗರಿಬೇಳೆ ಮಿಲ್‌ಗಳು ಹೆಚ್ಚಿನ ಪ್ರಮಾಣದಲ್ಲಿ ತೊಗರಿಬೇಳೆಯನ್ನು ಉತ್ಪಾದನೆ ಮಾಡಿಕೊಂಡಿವೆ.

ಈ ಬಾರಿ ರಾಜ್ಯದ ಕಲಬುರಗಿ, ವಿಜಯಪುರ ಜಿಲ್ಲೆ ಹಾಗೂ ಪಕ್ಕದ ಆಂಧ್ರಪ್ರದೇಶ, ತೆಲಂಗಾಣ ದಲ್ಲೂ ವ್ಯಾಪಕವಾಗಿ ತೊಗರಿ ಬೆಳೆಯಲಾಗಿತ್ತು. ಇಳುವರಿ ಉತ್ತಮವಾಗಿ ಬಂದಿದೆಯಾದರೂ ತೊಗರಿಯ ಗುಣ ಮಟ್ಟ ಸ್ವಲ್ಪ ಕಡಿಮೆ ಇದ್ದ ಕಾರಣ ಕ್ವಿಂಟಲ್‌ಗೆ ಸರಾಸರಿ 6300 ರಿಂದ 6600 ರು.ಗೆ ತೊಗರಿ ಖರೀದಿಸಿದ್ದಾರೆ. 9200 ರಿಂದ 10 ಸಾವಿರದವರೆಗೆ ಪ್ರತಿ ಕ್ವಿಂಟಲ್ ತೊಗರಿಬೇಳೆ ಯನ್ನು ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಗುಲಬರ್ಗಾ ದಾಲ್ ಮಿಲ್ ಮಾಲೀಕರು.

ಒಂದೆಡೆ ರೈತರ ಮೊಗದಲ್ಲಿ ಬೇಸರ ಉಂಟು ಮಾಡಿದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ ಬಳಲಿ ಬೆಂಡಾಗಿದ್ದ ಜನಸಾಮಾನ್ಯರ ಮೊಗದಲ್ಲಿ ಹರ್ಷ ತರಿಸುವಂತೆ ಮಾಡಿದೆ. ಆಗಸ್ಟ್‌ನಿಂದ ಇನ್ನೇನು ಹಬ್ಬಗಳು ಆರಂಭವಾಗುತ್ತದೆ. ಬೇಳೆ ಪಾಯಸ, ಹೋಳಿಗೆಗೆ ತೊಗರಿಬೇಳೆ ಅವಶ್ಯಕ ವಾಗಿರುವುದರಿಂದ ಈ ಬೆಲೆ ಇಳಿಕೆಯಿಂದಾಗಿ, ಗ್ರಾಹಕರಿಗೆ ಹಬ್ಬದ ಊಟಕ್ಕೆ ಬೇಕಾಗುವ ಪದಾರ್ಥಗಳ ಮೇಲಿನ ವೆಚ್ಚ ಕಡಿಮೆಯಾಗಲಿದೆ.

*

ಈ ವರ್ಷ ತೊಗರಿಬೇಳೆ, ಹೆಸರು ಬೇಳೆಯ ಬೆಲೆ ಇಳಿಕೆಯಾಗಿದ್ದರಿಂದ ಹಬ್ಬಗಳಲ್ಲಿ ಬೇಳೆ ಪಾಯಸ, ಹೋಳಿಗೆಗೆ ಗ್ರಾಹಕರಿಗೆ ಹಬ್ಬದ ಊಟಕ್ಕೆ ಬೇಕಾಗುವ ಪದಾರ್ಥಗಳ ಮೇಲಿನ ವೆಚ್ಚ ಕಡಿಮೆಯಾಗಲಿದೆ, ಹೀಗಾಗಿ ಖುಷಿಯಿಂದಲೇ ಹಬ್ಬಗಳನ್ನು ಆಚರಿಸಬಹುದು.

ಸವಿತಾ ಜಾಲಹಳ್ಳಿ, ಗೃಹಿಣಿ, ಬೆಂಗಳೂರು

ಈ ಬಾರಿ ನಮ್ಮ ದೇಶದ ಎಲ್ಲಾ ರಾಜ್ಯದಲ್ಲಿಯೂ ಎಲ್ಲಾ ಧಾನ್ಯಗಳ ಇಳುವರಿ ಅತ್ಯುತ್ತಮವಾಗಿದೆ, ಜೊತೆಗೆ ವಿದೇಶಿ ತೊಗರಿ ಕೂಡಾ ಸಾಕಷ್ಟು ಇದೆ. ಹೀಗಾಗಿ ವ್ಯಾಪಾರಿಗಳಾಗಲಿ, ಮಿಲ್ ಮಾಲೀಕ ರಾಗಲಿ ತೊಗರಿ ದಾಸ್ತಾನು ಮಾಡುತ್ತಿಲ್ಲ, ಬೇಡಿಕೆ ತಕ್ಕಷ್ಟು ಸರಕು ಇದೆ. ಬೆಳೆಕಾಳುಗಳ ಬೆಲೆ ಸದ್ಯ ಏರಿಕೆ ಆಗದು, ಇನ್ನು ಏನೇ ಬೆಲೆ ಏರಿಕೆ ಇಳಿಕೆ ಇದ್ದರೆ ಹೊಸ ಬೆಳೆಯ ಮೇಲೆ ಅದು ಅವಲಂಬನೆಯಾಗಲಿದೆ.

-ರಮೇಶ್ಚಂದ್ರ ಲಾಹೋಟಿ, ಎಫ್‌ ಕೆಸಿಸಿಐ ಮಾಜಿ ಅಧ್ಯಕ್ಷರು, ಬೆಂಗಳೂರು