ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ವಿವಾಹಿತೆಯ ಕೊಂದು ಚಿನ್ನಾಭರಣ ದೋಚಿ ತನ್ನ ಜಮೀನಿನಲ್ಲೇ ಶವ ಹೂತ ಪ್ರಿಯಕರ

Murder Case: ಕರೋಟಿ ಗ್ರಾಮದ ಪುನೀತ್​ ಎಂಬಾತ ಈ ಕೃತ್ಯ ನಡೆಸಿದ ಕಾಮುಕ. ಹಾಸನ (Hassan) ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಎಂಬಾಕೆ ಈ ದುಷ್ಟನ ಕೈಯಿಂದ ಮೃತಳಾದವಳು. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೀತಿಯ ಕಾಲ್ ರೆಕಾರ್ಡ್‌ ತೆಗೆಸಿದ ಪೊಲೀಸರಿಗೆ ಈ ಆಸಾಮಿ ಸಿಕ್ಕಿಬಿದಿದ್ದಾನೆ.

ವಿವಾಹಿತೆಯ ಕೊಂದು ಚಿನ್ನಾಭರಣ ದೋಚಿ ತನ್ನ ಜಮೀನಿನಲ್ಲೇ ಶವ ಹೂತ ಪ್ರಿಯಕರ

ಕೊಲೆಯಾದ ಪ್ರೀತಿ, ಆರೋಪಿ ಪುನೀತ್

ಹರೀಶ್‌ ಕೇರ ಹರೀಶ್‌ ಕೇರ Jun 25, 2025 10:18 AM

ಮಂಡ್ಯ: ವಿವಾಹಿತೆಯೊಬ್ಬಳನ್ನು ಇನ್‌ಸ್ಟಾಗ್ರಾಂನಲ್ಲಿ (instagram) ಪರಿಚಯ ಮಾಡಿಕೊಂಡು, ಹತ್ತೇ ದಿನದಲ್ಲಿ ಆಕೆಯ ಜೊತೆ ಚೆನ್ನಾಗಿ ಸುತ್ತಾಡಿ, ಬಳಿಕ ಆಕೆಯನ್ನು ಕೊಂದು (Murder Case) ಅವಳ ಬಳಿ ಇದ್ದ ಚಿನ್ನಾಭರಣ ದೋಚಿ ಶವವನ್ನು ತನ್ನ ಜಮೀನಿನಲ್ಲೇ ಹೂತಿಟ್ಟ ದುರುಳ ಪ್ರಿಯಕರನನ್ನು (lover) ಪೊಲೀಸರು ಬಂಧಿಸಿದ್ದಾರೆ. ಮಂಡ್ಯ (Mandya Crime news) ಜಿಲ್ಲೆಯ ಕೆ.ಆರ್‌ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿಈ ಕರಾಳ ಘಟನೆ ನಡೆದಿದೆ. ಈ ಕೊಲೆಯಿಂದ ಇಡೀ ಸಕ್ಕರೆ ನಗರಿ ಬೆಚ್ಚಿಬಿದ್ದಿದೆ.

ಕರೋಟಿ ಗ್ರಾಮದ ಪುನೀತ್​ ಎಂಬಾತ ಈ ಕೃತ್ಯ ನಡೆಸಿದ ಕಾಮುಕ. ಹಾಸನ (Hassan) ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಎಂಬಾಕೆ ಈ ದುಷ್ಟನ ಕೈಯಿಂದ ಮೃತಳಾದವಳು. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೀತಿಯ ಕಾಲ್ ರೆಕಾರ್ಡ್‌ ತೆಗೆಸಿದ ಪೊಲೀಸರಿಗೆ ಈ ಆಸಾಮಿ ಸಿಕ್ಕಿಬಿದಿದ್ದಾನೆ.

ಪುನೀತ್ ಹಾಗೂ ವಿವಾಹಿತ ಮಹಿಳೆ ಪ್ರೀತಿ ಇಬ್ಬರೂ ಇನ್‌ಸ್ಟಾಗ್ರಾಮ್​​ನಲ್ಲಿ ಇತ್ತೀಚೆಗೆ ಪರಿಚಯವಾಗಿದ್ದಾರೆ. ಗಂಡ, ಮಕ್ಕಳಿದ್ದರೂ ಪ್ರೀತಿ, ಪುನೀತ್​ನನ್ನು ಲವ್​ ಮಾಡಿದ್ದಾರೆ. ಪರಿಚಯವಾಗಿ ಹತ್ತು ದಿನದಲ್ಲೇ ಪ್ರೀತಿ, ಪ್ರೇಮ ಎಂದು ಈತನ ಬಲೆಗೆ ಬಿದ್ದು ಸುತ್ತಾಡಿದ್ದಾರೆ.

ಅದೇ ರೀತಿ ಕಳೆದ ಭಾನುವಾರ ಒಟ್ಟಿಗೆ ಕಾರಿನಲ್ಲಿ ಮೈಸೂರು, ಮಂಡ್ಯದ ಪ್ರವಾಸಿ ಸ್ಥಳಗಳನ್ನು ಸುತ್ತಾಡಿ ಎಂಜಾಯ್‌ ಮಾಡಿದ್ದಾರೆ. ಬಳಿಕ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ಆಗಿದೆ. ಅಲ್ಲೇ ಪ್ರೀತಿಯನ್ನು ಕೊಲೆ ಮಾಡಿದ ಪುನೀತ್​, ಮೈಮೆಲಿದ್ದ ಚಿನ್ನಾಭರಣ ದೋಚಿದ್ದಾನೆ. ಬಳಿಕ ಕರೋಟಿ ಗ್ರಾಮದ ತನ್ನ ಜಮೀನಿನಲ್ಲಿ ಶವ ಬಚ್ಚಿಟ್ಟಿದ್ದಾನೆ.

ಇದನ್ನೂ ಓದಿ: Murder Case: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಕೊಲೆ, ಕೊಲೆ ಹಿಂದೆ ಲವ್‌ ಸ್ಟೋರಿ