Axiom Space Mission: ಆಕ್ಸಿಯಂ ಮಿಷನ್ ಯಶಸ್ವಿ ಉಡಾವಣೆ; ಶುಭಾಂಶು ಶುಕ್ಲ ಸೇರಿ ನಾಲ್ವರ ಬಾಹ್ಯಾಕಾಶ ಜರ್ನಿ ಸ್ಟಾರ್ಟ್!
ಹಲವಾರು ವಿಘ್ನಗಳ ಬಳಿಕ ಇದೀಗ ಶುಭಾಂಶು ಶುಕ್ಲ ಮತ್ತು ಇತರ ಮೂವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ ಎಕ್ಸ್ನ ಫಾಲ್ಕನ್-9 ರಾಕೆಟ್ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಸ್ಪೇಸ್ ಸೆಂಟರ್ನಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39ಎಯಿಂದ ಇಂದು ಉಡಾವಣೆಗೊಂಡಿದೆ. ನಾಳೆ ಸಂಜೆ 4:30ಕ್ಕೆ ಬಾಹ್ಯಾಕಾಶ ಕೇಂದ್ರಕ್ಕೆ ಈ ನಾಕೆ ತಲುಪಲಿದ್ದು, ಸುಮಾರು 14ದಿನಗಳ ಕಾಲ ಗಗನಯಾತ್ರಿಗಳು ಅಲ್ಲಿ ತಂಗಲಿದ್ದಾರೆ. ಅಲ್ಲದೇ ಸುಮಾರು 60ಕ್ಕೂ ಹೆಚ್ಚು ಸಂಶೋಧನೆ ನಡೆಸಲಿದ್ದಾರೆ.


ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತು ನಾಸಾದ ಜಂಟೀ ಯೋಜನೆಯಾಗಿರುವ ಆಕ್ಸಿಯಂ ಮಿಷನ್ 4 ಯಶಸ್ವಿಯಾಗಿ ಉಡಾವಣೆಗೊಂಡಿದೆ. ಭಾರತೀಯ ಗಗನಯಾತ್ರಿ (Indian astronaut) ಶುಭಾಂಶು ಶುಕ್ಲ ( Subhanshu Shukla) ಅವರನ್ನೊಳಗೊಂಡ ನಾಲ್ವರ ತಂಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹಲವಾರು ವಿಘ್ನಗಳ ಬಳಿಕ ಇದೀಗ ಶುಭಾಂಶು ಶುಕ್ಲ ಮತ್ತು ಇತರ ಮೂವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ ಎಕ್ಸ್ನ ಫಾಲ್ಕನ್-9 ರಾಕೆಟ್ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಸ್ಪೇಸ್ ಸೆಂಟರ್ನಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39ಎಯಿಂದ ಇಂದು ಉಡಾವಣೆಗೊಂಡಿದೆ.

ಶುಭಾಂಶು ಶುಕ್ಲ, ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್ನ ಸ್ಲಾವೋಸ್ಜ್ ಉಜ್ನಾನ್ಸ್ಕಿ, ಹಂಗೇರಿಯ ಟಿಬರ್ ಕಾಪು, ಇಂದು ಅಂತರಿಕ್ಷ ಕೈಗೊಂಡಿರುವ ಗಗನಯಾತ್ರಿಗಳಾಗಿದ್ದಾರೆ. ಇನ್ನು ನಾಳೆ ಸಂಜೆ 4:30ಕ್ಕೆ ಬಾಹ್ಯಾಕಾಶ ಕೇಂದ್ರಕ್ಕೆ ಈ ನಾಕೆ ತಲುಪಲಿದ್ದು, ಸುಮಾರು 14ದಿನಗಳ ಕಾಲ ಗಗನಯಾತ್ರಿಗಳು ಅಲ್ಲಿ ತಂಗಲಿದ್ದಾರೆ. ಅಲ್ಲದೇ ಸುಮಾರು 60ಕ್ಕೂ ಹೆಚ್ಚು ಸಂಶೋಧನೆ ನಡೆಸಲಿದ್ದಾರೆ.
We have LIFTOFF of Axiom Mission 4!
— NASA's Kennedy Space Center (@NASAKennedy) June 25, 2025
The #Ax4 mission lifted off from Launch Complex 39A at 2:31am ET June 25, taking four private astronauts to the @Space_Station for a mission of up to 14 days. pic.twitter.com/lhRkWUwAGk
ಈ ಸುದ್ದಿಯನ್ನೂ ಓದಿ: Axiom-4 mission: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರಯಾಣ ಮುಂದೂಡಿಕೆ; ಕಾರಣವೇನು?
ಭಾರತೀಯರಿಗೆ ಶುಕ್ಲಾ ಮೆಸೇಜ್
ಇನ್ನು ಬಾಹ್ಯಾಕಾಶ ಪ್ರಯಾಣ ಪ್ರಾರಂಭಗೊಂಡ 10ನಿಮಿಷಗಳ ನಂತರ ಶುಭಾಂಸು ಶುಕ್ಲ ಭಾರತೀಯರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. "ನಮಸ್ಕಾರ, ನನ್ನ ಪ್ರೀತಿಯ ದೇಶವಾಸಿಗಳೇ, ನಾವು 41 ವರ್ಷಗಳ ನಂತರ ಬಾಹ್ಯಾಕಾಶ ತಲುಪಿದ್ದೇವೆ. ಇದು ಒಂದು ಉತ್ತಮ ಸವಾರಿಯಾಗಿತ್ತು" ಎಂದು ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನದ 10 ನಿಮಿಷಗಳ ನಂತರ ಹೇಳಿದರು. ನಾವು ಸೆಕೆಂಡಿಗೆ 7.5 ಕಿ.ಮೀ ವೇಗದಲ್ಲಿ ಭೂಮಿಯ ಸುತ್ತ ಸುತ್ತುತ್ತಿದ್ದೇವೆ. ನನ್ನ ಹೆಗಲ ಮೇಲೆ ಭಾರತೀಯ ತ್ರಿವರ್ಣ ಧ್ವಜವಿದೆ. ತ್ರಿವರ್ಣವು ನಾನು ನಿಮ್ಮೆಲ್ಲರೊಂದಿಗೂ ಇದ್ದೇನೆ ಎಂದು ಹೇಳುತ್ತದೆ, ಇದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನನ್ನ ಪ್ರಯಾಣದ ಆರಂಭ ಮಾತ್ರವಲ್ಲ, ಭಾರತದ ಮಾನವ ಸಹಿತ ಗಗನಯಾನಕ್ಕೆ ಸಿಕ್ಕ ಚಾಲನೆ ಎಂದು ಅವರು ಹೇಳಿದರು.
ನಿಮ್ಮಲ್ಲಿ ಪ್ರತಿಯೊಬ್ಬರೂ ಈ ಪ್ರಯಾಣದ ಭಾಗವಾಗಬೇಕೆಂದು ನಾನು ಬಯಸುತ್ತೇನೆ. ಭಾರತದ ಮಾನವ ಸಹಿತ ಬಾಹ್ಯಾಕಾಶ ಕಾರ್ಯಕ್ರಮವನ್ನು ಒಟ್ಟಿಗೆ ಪ್ರಾರಂಭಿಸೋಣ" ಎಂದು ಶುಭಾಂಶು ಶುಕ್ಲಾ ಹೇಳಿದರು.