ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Du Gu Laxmana Column: ತುರ್ತು ಪರಿಸ್ಥಿತಿಯಲ್ಲಿ ಹೇಗಿತ್ತು ಪತ್ರಿಕಾ ಪ್ರಪಂಚ ?

ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಹರಣ ಮಾಡಲಾಗಿದ್ದರೂ, ಇಂದಿರಾ ಗಾಂಧಿ ಜಾರಿಗೆ ತಂದ ಪತ್ರಿಕಾ ನಿರ್ಬಂಧ ಸದುದ್ದೇಶದ್ದು ಎಂದು ನಂಬಿದ ಭಟ್ಟಂಗಿ ಪತ್ರಕರ್ತರಿಗೇನೂ ಕೊರತೆ ಇರಲಿಲ್ಲ. ಸೆನ್ಸಾರ್‌ಶಿಪ್ ಜಾರಿಗೆ ಬಂದ ಆರಂಭದಲ್ಲಿ ಪ್ರಮುಖ ಹಿಂದಿ ಪತ್ರಿಕೆಗಳ 47 ಮಂದಿ ಸಂಪಾದಕರ ನಿಯೋಗವೊಂದು ಇಂದಿರಾ ಗಾಂಧಿಯವರನ್ನು ಭೇಟಿ ಮಾಡಿ ತಮ್ಮ ಬೆಂಬಲ ಸೂಚಿಸಿದ್ದು ಇದಕ್ಕೊಂದು ನಿದರ್ಶನ.

ತುರ್ತು ಪರಿಸ್ಥಿತಿಯಲ್ಲಿ ಹೇಗಿತ್ತು ಪತ್ರಿಕಾ ಪ್ರಪಂಚ ?

Profile Ashok Nayak Jun 25, 2025 9:05 AM

ಸಿಂಹಾವಲೋಕನ

ದು.ಗು.ಲಕ್ಷ್ಮಣ

1975ರಲ್ಲಿ, ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ತಮ್ಮ ಅಧಿಕಾರದ ಉಳಿವಿಗಾಗಿ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಗೆ ಈಗ ಬರೋಬ್ಬರಿ ಐವತ್ತು ವರ್ಷ. 1975 ಜೂನ್ 12 ಭಾರತದ ರಾಜಕೀಯ ಚರಿತ್ರೆಗೆ ನಿರ್ಣಾಯಕ ತಿರುವು ಕೊಟ್ಟ ದಿನ. ಆ ದಿನ ಅಲಹಾಬಾದ್ ಉಚ್ಚ ನ್ಯಾಯಾಲಯ ಒಂದು ತೀರ್ಪನ್ನು ಪ್ರಕಟಿಸಿತು.

ಅದೆಂದರೆ- “ಇಂದಿರಾ ಗಾಂಧಿ ಚುನಾವಣಾ ಭ್ರಷ್ಟಾಚಾರ ಎಸಗಿರುವುದು ಸಾಬೀತಾಗಿದೆ. ಆದ್ದರಿಂದ ಅವರ ಲೋಕಸಭಾ ಸದಸ್ಯತ್ವ ರದ್ದಾಗಿದೆ ಮತ್ತು ಮುಂದಿನ ಆರು ವರ್ಷಗಳವರೆಗೆ ಅವರು ಯಾವ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ". ಇಂಥದೊಂದು ತೀರ್ಪು ಇಂದಿರಾ ಗಾಂಧಿಯವರನ್ನು ಧೃತಿಗೆಡಿಸಿದ್ದು ಸಹಜವೇ ಆಗಿತ್ತು. ವಿರೋಧ ಪಕ್ಷಗಳ ಆಗ್ರಹವನ್ನು ಲೆಕ್ಕಿಸದೆ ಆಕೆ ತನ್ನ ಅಧಿಕಾರದ ಉಳಿವಿಗಾಗಿ ದೇಶಾದ್ಯಂತ 1975 ಜೂನ್ 25ರಂದು ತುರ್ತು ಪರಿಸ್ಥಿತಿಯನ್ನು ಹೇರಿದರು. ಪ್ರಧಾನಿ ಪದವಿಯ ಮೋಹ ಅವರನ್ನು ಯಾವ ಮಟ್ಟಕ್ಕೂ ಇಳಿಸುವ ಸನ್ನಿವೇಶ ಸೃಷ್ಟಿಸಿದ್ದು ಈ ತುರ್ತು ಪರಿಸ್ಥಿತಿಗೆ ಕಾರಣ. ಜನತೆಯ ಎಲ್ಲ ಬಗೆಯ ಮೂಲಭೂತ ಸ್ವಾತಂತ್ರ್ಯ-ಹಕ್ಕುಗಳ ರದ್ದು, ಪತ್ರಿಕೆಗಳ ಬಾಯಿಗೆ ಸೆನ್ಸಾರ್ ಬೀಗ, ನ್ಯಾಯಾಂಗದ ಕೈಕಾಲುಗಳಿಗೆ ಬೇಡಿ, ಸಂಘ-ಸಂಸ್ಥೆಗಳ ಸ್ವಾತಂತ್ರ್ಯಕ್ಕೆ ಕೊಡಲಿ ಏಟು- ಇದು ತುರ್ತು ಪರಿಸ್ಥಿತಿ ಆದೇಶದ ತಾತ್ಪರ್ಯ. ಭಾರತದ 60 ಕೋಟಿ ಜನರು ಗಾಢನಿದ್ರೆಯಲ್ಲಿದ್ದಾಗ ಅವರ ಮೇಲೆ ನಡೆದ ಆಕಸ್ಮಿಕ ಗುಪ್ತದಾಳಿ ಇದಾಗಿತ್ತು.

1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೊದಲ ಆಘಾತ ತಟ್ಟಿದ್ದೇ ಪತ್ರಿಕೆಗಳಿಗೆ. ಪತ್ರಿಕೆಗಳ ಮೇಲೆ ಸೆನ್ಸಾರ್‌ಶಿಪ್ ವಿಧಿಸಿದ ಇಂದಿರಾ ಗಾಂಧಿ ಸರಕಾರದ ಕ್ರಮವು ಪತ್ರಿಕಾ ಸ್ವಾತಂತ್ರ್ಯದ ಸಂಪೂರ್ಣ ಹರಣವಲ್ಲದೆ ಮತ್ತೇನೂ ಆಗಿರಲಿಲ್ಲ. “ಪ್ರಜಾಪ್ರಭುತ್ವದ ದೃಷ್ಟಿಯಿಂದ ಸರಕಾರ ಉಳಿದು ಪತ್ರಿಕೆಗಳು ಸಾಯೋದಕ್ಕಿಂತ, ಪತ್ರಿಕೆಗಳು ಉಳಿದು ಸರಕಾರ ಸಾಯುವುದು ಕಡಿಮೆ ಅಪಾಯಕರ" ಎಂಬುದು ಪ್ರಸಿದ್ಧ ಪತ್ರಕರ್ತ ಥಾಮಸ್ ಜೆಫರ್ಸನ್ ಅವರ ಜನಪ್ರಿಯ ಮಾತು. ಹಾಗೆಂದೇ, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯ ಉದ್ದೇಶಗಳ ಪೂರ್ತಿಗಾಗಿ ಪತ್ರಿಕಾ ವಾಗ್ಬಂಧವನ್ನು ಜಾರಿಗೆ ತಂದಿದ್ದು. ಆಗ ವಾರ್ತಾ ಮಂತ್ರಿಯಾಗಿದ್ದ ವಿದ್ಯಾಚರಣ ಶುಕ್ಲ ಅವರು, ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳನ್ನು 1) ಸರಕಾರಕ್ಕೆ ಅನುಕೂಲಕರ 2) ತಟಸ್ಥ ಮತ್ತು 3) ಪ್ರತಿಕೂಲ- ಹೀಗೆ 3 ವಿಭಾಗ ಗಳಾಗಿ ವಿಂಗಡಿಸಿ ಪ್ರತಿಕೂಲ ಇರುವವರನ್ನೆಲ್ಲ ಬಂಧಿಸಿ ಜೈಲಿಗಟ್ಟಿದರು.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಹರಣ ಮಾಡಲಾಗಿದ್ದರೂ, ಇಂದಿರಾ ಗಾಂಧಿ ಜಾರಿಗೆ ತಂದ ಪತ್ರಿಕಾ ನಿರ್ಬಂಧ ಸದುದ್ದೇಶದ್ದು ಎಂದು ನಂಬಿದ ಭಟ್ಟಂಗಿ ಪತ್ರಕರ್ತರಿಗೇನೂ ಕೊರತೆ ಇರಲಿಲ್ಲ. ಸೆನ್ಸಾರ್‌ಶಿಪ್ ಜಾರಿಗೆ ಬಂದ ಆರಂಭದಲ್ಲಿ ಪ್ರಮುಖ ಹಿಂದಿ ಪತ್ರಿಕೆಗಳ 47 ಮಂದಿ ಸಂಪಾದಕರ ನಿಯೋಗವೊಂದು ಇಂದಿರಾ ಗಾಂಧಿಯವರನ್ನು ಭೇಟಿ ಮಾಡಿ ತಮ್ಮ ಬೆಂಬಲ ಸೂಚಿಸಿದ್ದು ಇದಕ್ಕೊಂದು ನಿದರ್ಶನ.

ಸುದ್ದಿ ನಿಯಂತ್ರಣಕ್ಕಾಗಿ ಇಂದಿರಾ ಗಾಂಧಿ ಸರಕಾರ ಆಗ ಬಳಸಿದ ಅಸ್ತ್ರಗಳು ಹಲವಾರು. ಸೆನ್ಸಾರ್ ಅಧಿಕಾರಿಗಳ ಮೂಲಕ ಪತ್ರಿಕೆಗಳ ಬಾಯಿಗೆ ಬೀಗ ಹಾಕಿದ್ದರ ಜತೆಗೆ ಸರಕಾರ ಕೈಗೊಂಡ ಇತರ ಕ್ರಮಗಳೆಂದರೆ: ಪತ್ರಿಕೋದ್ಯಮಿಗಳಿಗೂ ಅವರ ಪರಿವಾರದವರಿಗೂ ಪೊಲೀಸರ ಮೂಲಕ ಕಿರುಕುಳ.

ಕ್ಷುದ್ರ ಕಾರಣಗಳಿಗೂ ಮೀಸಾ, ಡಿಐಆರ್‌ಗಳ ಪ್ರಯೋಗ. ಪತ್ರಿಕಾ ವರದಿಗಾರರಿಗಿದ್ದ ಸೌಲಭ್ಯಗಳಿಗೆ ಅರ್ಧಚಂದ್ರ. ಪತ್ರಿಕಾ ಪ್ರಕಟಣೆಗೆ ನೀಡಿರುವ ಪರವಾನಗಿ ರದ್ದು. ಜಾಹೀರಾತುಗಳಿಗೆ ಕತ್ತರಿ. ಸರಕಾರಕ್ಕೆ ಪ್ರತಿಕೂಲರಾದ ಪತ್ರಕರ್ತರನ್ನು ಉದ್ಯೋಗದಿಂದ ಉಚ್ಚಾಟಿಸುವಂತೆ ಮಾಲೀಕರ ಮೇಲೆ ಒತ್ತಡ. ನ್ಯೂಸ್‌ಪ್ರಿಂಟ್ ಹಂಚಿಕೆಯಲ್ಲಿ ವಿಪರೀತ ಪಕ್ಷಪಾತ ಇತ್ಯಾದಿ.

ಇಂಥ ಯಾವ ಒತ್ತಡಕ್ಕೂ ಮಣಿಯದೆ ಕೊನೆಯವರೆಗೂ ದಿಟ್ಟತನದಿಂದ ಸರಕಾರದ ವಿರುದ್ಧ ತೊಡೆತಟ್ಟಿ ನಿಂತವರೆಂದರೆ ‘ಇಂಡಿಯನ್ ಎಕ್ಸ್‌ಪ್ರೆಸ್ ’ನ ರಾಮನಾಥ ಗೋಯಂಕ ಮತ್ತು ‘ಸ್ಟೇಟ್ಸ್‌ ಮನ್’ ಪತ್ರಿಕೆಯ ಸಿ.ಆರ್. ಇರಾನಿ. ಅದರಲ್ಲೂ ಇಂಡಿಯನ್ ಎಕ್ಸ್‌ ಪ್ರೆಸ್ ಪತ್ರಿಕೆಯ ಮೇಲೆ ಸರಕಾರದ ದಮನ-ದಬ್ಬಾಳಿಕೆ ಅಷ್ಟಿಷ್ಟಾಗಿರಲಿಲ್ಲ.

150ಕ್ಕೂ ಹೆಚ್ಚು ವಿವಿಧ ರೀತಿಯ ಮೊಕದ್ದಮೆಗಳನ್ನು ಆ ಪತ್ರಿಕೆ ಎದುರಿಸಬೇಕಾಗಿತ್ತು. ಅಂಥ ಭಯಾನಕ ದಿನಗಳಲ್ಲೂ ಸರಕಾರದ ವಿರುದ್ಧ ಉಗ್ರಲೇಖನ, ವ್ಯಂಗ್ಯಚಿತ್ರಗಳ ಪ್ರಕಟಣೆಯ ಮೂಲಕ ಆ ಪತ್ರಿಕೆ ಹೋರಾಡಿದ್ದು ಸ್ಮರಣಾರ್ಹ. ಖ್ಯಾತ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂ ಅವರ ವ್ಯಂಗ್ಯಚಿತ್ರ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಆಗ ಪ್ರಕಟವಾಗಿದ್ದು ಭಾರಿ ಚರ್ಚೆಗೆ ಗ್ರಾಸ ವಾಗಿತ್ತು.

ಜತೆಗೆ ಅದು ಇಂದಿರಾರ ಸರ್ವಾಧಿಕಾರವನ್ನು ಅಣಕಿಸುವಂತಿತ್ತು. ಆ ವ್ಯಂಗ್ಯಚಿತ್ರದ ಸಾರಾಂಶ ವಿಷ್ಟೇ: ರಾಷ್ಟ್ರಪತಿ -ಕ್ರುದ್ದೀನ್ ಅಲಿ ಅಹ್ಮದ್ ಬಾತ್‌ಟಬ್‌ನಲ್ಲಿ ಕುಳಿತಿದ್ದಾಗಲೂ ಪ್ರಧಾನಿ ಇಂದಿರಾ ಗಾಂಧಿ ಕಳಿಸಿದ ಪತ್ರ ಆದೇಶಗಳಿಗೆ ಸಹಿ ಹಾಕಿ, ನಂತರ If there are any more ordinances, just ask them to wait ಎಂದು ಹೇಳುತ್ತಿರುವುದು. ರಾಷ್ಟ್ರಪತಿಗಳು ಹೇಗೆ ಸಂಪೂರ್ಣ ರಬ್ಬರ್ ಸ್ಟ್ಯಾಂಪ್ ಆಗಿದ್ದರು ಎಂಬ ಸಂದೇಶ ಈ ವ್ಯಂಗ್ಯಚಿತ್ರದಲ್ಲಿ ಅಡಗಿತ್ತು.

ಖ್ಯಾತ ಗಾಯಕರಾಗಿದ್ದ ಕಿಶೋರ್ ಕುಮಾರ್ ಸಿನಿಮಾ ಹಾಡುಗಳಂತೆಯೇ ಹಲವು ದೇಶಭಕ್ತಿ ಗೀತೆಗಳನ್ನು ಹಾಡಿzರೆ. ಆದರೆ ಅಂಥ ಹಾಡುಗಳನ್ನು ಇಂದಿರಾ ಸರಕಾರಕ್ಕೆ ಸಹಿಸಲಾಗಲಿಲ್ಲ. ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಸಾರವಾಗುತ್ತಿದ್ದ ಅಂಥ ಹಾಡುಗಳಿಗೆ ನಿಷೇಧ ಹೇರಲಾ ಯಿತು. ತುರ್ತು ಪರಿಸ್ಥಿತಿಯನ್ನು ಲೇವಡಿ ಮಾಡುವ ‘ಕಿಸ್ಸಾ ಕುರ್ಸೀ ಕಾ’ ಎಂಬ ಚಲನಚಿತ್ರದ ಮೂಲಪ್ರತಿಯನ್ನು ನಾಶಗೊಳಿಸಲಾಯಿತು.

ಆಂಧಿ, ಆಂದೋಲನ್ ಚಿತ್ರಗಳು ವಿರೂಪಗೊಂಡವು. ವಾಟರ್‌ಗೇಟ್ ಹಗರಣವನ್ನು ಆಧರಿಸಿದ ‘ಆಲ್ ದಿ ಪ್ರೆಸಿಡೆಂಟ್ ಮ್ಯಾನ್’ ಎಂಬ ಚಿತ್ರದ ಪ್ರದರ್ಶನಕ್ಕೂ ಸರಕಾರದ ನಿರ್ಬಂಧ. ಸಂತಾನ ಶಕ್ತಿಹರಣ ಚಿಕಿತ್ಸೆಗೆ ಒಪ್ಪದ ದೆಹಲಿಯ ತುರ್ಕ್‌ಮನ್ ಗೇಟ್ ಬಳಿ ಇರುವ ಜೋಪಡಿ ವಾಸಿಗಳ ವಸತಿಗಳನ್ನು ಧ್ವಂಸಗೊಳಿಸಿದ ಸುದ್ದಿ, ರಾಜ್ಯಸಭೆಯಲ್ಲಿ ವಾರಂಟಿಗೆ ಗುರಿಯಾಗಿದ್ದ ಡಾ.ಸುಬ್ರಮಣಿಯನ್ ಸ್ವಾಮಿ ದಿಢೀರನೆ ಪ್ರತ್ಯಕ್ಷರಾಗಿ ನಂತರ ಅಷ್ಟೇ ಶರವೇಗದಲ್ಲಿ ಮಾಯವಾದ ಸುದ್ದಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ನಡೆಯುತ್ತಿದ್ದ ಕಿತ್ತಾಟಗಳು, ಪತ್ರಿಕಾ ಸೆನ್ಸಾರ್‌ಗೆ ಸಂಬಂಧಿಸಿದ ನ್ಯಾಯಾಲಯದ ನಿರ್ಭೀತ ತೀರ್ಪುಗಳು- ಈ ಯಾವುದೂ ಪ್ರಕಟವಾಗದಂತೆ ಕಠಿಣ ಸೆನ್ಸಾರ್ ಹೇರಲಾಗಿತ್ತು.

ಸರಕಾರದ ಕೃಪಾಪೋಷಿತ ಸುದ್ದಿಸಂಸ್ಥೆಯು ಸುಳ್ಳು-ಸುದ್ದಿಗಳನ್ನು ಸೃಷ್ಟಿಸಿ ಮೊದಲೇ ತೇಲಿ ಬಿಡುತ್ತಿತ್ತು. ಅಂಥ ಸುದ್ದಿಗಳನ್ನಷ್ಟೇ ಪತ್ರಿಕೆಗಳು ಪ್ರಕಟ ಮಾಡಬೇಕಿತ್ತು. ಆದರೆ ಸರಕಾರದ ಸೆನ್ಸಾರ್ ನೀತಿಗೆ ತೀಕ್ಷ್ಣ ಪ್ರತಿರೋಧ ತೋರಿದ್ದು ಹಲವಾರು ಸಣ್ಣ ಪತ್ರಿಕೆಗಳು. ಯಾವುದೇ ಆರ್ಥಿಕ ಏರುಪೇರನ್ನು ಸಹಿಸುವ ಕಿಂಚಿತ್ ತಾಕತ್ ಇಲ್ಲದಿದ್ದರೂ ಸರಕಾರದ ವಿರುದ್ಧ ಅವು ಸೆಟೆದು ನಿಂತಿದ್ದು ಮಾತ್ರ ಸೋಜಿಗವೇ ಸರಿ.

ಚೋ.ರಾಮಸ್ವಾಮಿ ಅವರ ‘ತುಘಲಕ್’ ಪತ್ರಿಕೆಯು ಸೆನ್ಸಾರ್ ನೀತಿಯನ್ನು ವಿರೋಧಿಸಿ ತನ್ನ ಪ್ರಕಟಣೆಯನ್ನೇ ಸ್ಥಗಿತಗೊಳಿಸಿತು. ‘ಫ್ರೀಡಂ ಫಸ್ಟ್’ ಪತ್ರಿಕೆಯ ಸಂಪಾದಕ ಮಿನೂ ಮಸಾನಿ ಮತ್ತು ‘ಭೂಮಿಪುತ್ರ’ದ ಸಂಪಾದಕ ಚುನಿಭಾಯಿ ವೈದ್ಯ ನ್ಯಾಯಾಲಯದ ಮೆಟ್ಟಿಲು ಏರಿ ಜಯ ಪಡೆದರು. ರಾಜಮೋಹನ್ ಗಾಂಧಿ ಸಾರಥ್ಯದ ‘ಹಿಮ್ಮತ್’ ಪತ್ರಿಕೆಯು ಹೆಸರಿಗೆ ತಕ್ಕಂತೆ ಸರ್ವಾಧಿ ಕಾರದ ದಬ್ಬಾಳಿಕೆ ನೀತಿಯನ್ನು ಖಂಡಿಸಿ ಬರೆದು ಸಾಕಷ್ಟು ತೊಂದರೆಗಳನ್ನು ಮೈಮೇಲೆ ಎಳೆದುಕೊಂಡಿತು.

ಎ.ಡಿ.ಗೊರವಾಲ ಅವರ ಪುಟ್ಟ ಪತ್ರಿಕೆ ‘ಒಪೀನಿಯನ್’ ತೋರಿದ ದಿಟ್ಟತನ ಪ್ರಶಂಸಾರ್ಹ. ಒಪೀನಿ ಯನ್ ಪತ್ರಿಕೆಯನ್ನು ಮುದ್ರಿಸದಂತೆ ಸರಕಾರ ಬೆದರಿಕೆ ಹಾಕಿದಾಗ ಅದಕ್ಕೆ ಬಗ್ಗದ ಗೊರವಾಲಾ cyclostyle ಮಾಡಿಸಿ ಹಲವು ಸಂಚಿಕೆಗಳನ್ನು ಹೊರತಂದರು. ಈ ಪತ್ರಿಕೆಯನ್ನು ಅಂಚೆ ಕಚೇರಿಗಳು ರವಾನಿಸಬಾರದೆಂದು ಸರಕಾರ ಫರ್ಮಾನು ಹೊರಡಿಸಿದಾಗ ಕೊನೆಯ ಸಂಚಿಕೆಯಲ್ಲಿ ಗೊರವಾ ಲಾ ಬರೆದಿದ್ದು ಹೀಗಿತ್ತು: “ಇಂದಿರಾ ಆಳ್ವಿಕೆ ಹುಟ್ಟಿದ್ದು ಸುಳ್ಳಿನಲ್ಲಿ, ಬೆಳೆದದ್ದು ಸುಳ್ಳುಗಳಿಂದ.

ಒಪೀನಿಯನ್ ಪತ್ರಿಕೆಯ ಓದುಗರು ಬೀದಿಗೆ ಇಳಿಯುವವರಲ್ಲ. ಅವರು ಓದುತ್ತಾರೆ, ಯೋಚಿಸು ತ್ತಾರೆ. ತೂಗಿ ನೋಡಿ ನಿರ್ಧಾರಕ್ಕೆ ಬರುತ್ತಾರೆ. ಈ ನಿರ್ಧಾರಗಳೇ ಸರಕಾರಕ್ಕೆ ಗಾಬರಿ ಉಂಟು ಮಾಡುತ್ತವೆ. ಇಂಥ ಸುಶಿಕ್ಷಿತ ಓದುಗರನ್ನು ಕಂಡೇ ಸರಕಾರ ಭಯಗೊಂಡಿದೆ". ಹಿಂದಿ ಸಾಪ್ತಾಹಿಕ ‘ಪಾಂಚಜನ್ಯ’, ಇಂಗ್ಲಿಷಿನ ‘ಜನತಾ’, ಮರಾಠಿಯ ‘ಸಾಧನಾ’, ಇಂದೋರಿನ ದಿನಪತ್ರಿಕೆ ‘ಸ್ವದೇಶ’, ಕನ್ನಡ ವಾರಪತ್ರಿಕೆ ‘ವಿಕ್ರಮ’, ಮಲಯಾಳಂನ ‘ಕೇಸರಿ’ ಮೊದಲಾದ ಪತ್ರಿಕೆಗಳ ಮುದ್ರಣಾಲಯ ಗಳನ್ನು ಸರಕಾರ ಮುಟ್ಟುಗೋಲು ಹಾಕಿ ಪತ್ರಿಕೆಗಳ ಸಂಪಾದಕರನ್ನೂ ಬಂಧಿಸಿತು.

‘ವಿಕ್ರಮ’ ವಾರಪತ್ರಿಕೆಯ ಸಂಪಾದಕರಾಗಿದ್ದ ಬೆ.ಸು.ನಾ.ಮಲ್ಯ 20 ತಿಂಗಳ ಕಾಲ ಮೀಸಾ ಕಾಯ್ದೆಯಡಿ ಬಂಧನಕ್ಕೊಳಗಾಗಿ ಜೈಲಿನಲ್ಲಿ ಕೊಳೆಯಬೇಕಾಯಿತು. ಆಗ ಭಾರತದಲ್ಲಿದ್ದ ಅತ್ಯಂತ ಲೋಕಪ್ರಿಯ ವ್ಯಂಗ್ಯಚಿತ್ರ ಪತ್ರಿಕೆ ‘ಶಂಕರ್ ವೀಕ್ಲಿ’. ಅದು 1975 ಅಕ್ಟೋಬರ್‌ನಲ್ಲಿ ಕಣ್ಮುಚ್ಚಿತು. ಅದು ಕಣ್ಮುಚ್ಚಿದ್ದು ಹಣದ ತೊಂದರೆಯಿಂದಲ್ಲ, ಹಾಸ್ಯವೇ ಸತ್ತುಹೋಗಿದ್ದರಿಂದ.

ಕೊನೆಯ ಬೀಳ್ಕೊಡುಗೆ ಸಂಪಾದಕೀಯದಲ್ಲಿ ಪತ್ರಿಕೆಯ ಸ್ಥಾಪಕ ಎಸ್.ಕೆ .ಪಿಳ್ಳೆ ಬರೆದಿದ್ದು ಹೀಗೆ: “ಜಗತ್ತು ಜಬರ್ದಸ್ತಿನ ನಾಯಕರು, ಕಪಟ-ಮೋಸಗಳು, ಕುಂದುಕೊರತೆಗಳನ್ನು ನೋಡಿ ಓದುಗರು ನಗುವಂತೆ ಮಾಡುವುದೇ ನಮ್ಮ ಉದ್ದೇಶವಾಗಿತ್ತು. ಆದರೆ ಸರ್ವಾಧಿಕಾರದಲ್ಲಿ ಹಾಸ್ಯಕ್ಕೆ ಜಾಗವಿಲ್ಲ.

ಏಕೆಂದರೆ ಜನರು ಸರ್ವಾಧಿಕಾರಿಯನ್ನೇ ನೋಡಿ ನಗಬಹುದು. ಹಿಟ್ಲರ್ ನ ಕಾಲದಲ್ಲಿ ಹಾಸ್ಯವಾ ಗಲಿ ವ್ಯಂಗ್ಯಚಿತ್ರಗಳಾಗಲಿ ಅಥವಾ ಕುತೂಹಲಜನಕ ಸುದ್ದಿಗಳಾಗಲಿ ಇರಲಿಲ್ಲ". ಮಂಗಳೂರಿನ ‘ದಿವ್ಯವಾಣಿ’ ಪತ್ರಿಕೆಯ ಬಿಸಿರಕ್ತದ ತರುಣ ಸಂಪಾದಕ ರಾಘವೇಂದ್ರ ಎಂ.ನಾಗೋರಿ ಯವರದು ತುರ್ತು ಪರಿಸ್ಥಿತಿಯಲ್ಲೂ ಕೆಚ್ಚೆದೆಯ ಸಾಹಸ. ನಿರ್ಭಯವಾಗಿ ಸರಕಾರದ ಖಂಡನೆ. ಡಿಐಆರ್ ಆನ್ವಯ ನಾಗೋರಿಗೆ 100 ದಿನಗಳ ಸಜಾ.

ಸೆರೆವಾಸ ಮುಗಿಸಿ ಬಂದ ಬಳಿಕ ‘ಪುನಶ್ಚ ಹರಿಃ ಓಂ’ ಶೀರ್ಷಿಕೆ ಅಡಿ ಅವರು ಮತ್ತೆ ಉಗ್ರ ಬರವಣಿಗೆ ಪ್ರಾರಂಭಿಸಿದರು. ಪರಿಣಾಮವಾಗಿ ಮತ್ತೆ ಮೀಸಾದಡಿ ಬಂಧನ, ಬೆಳಗಾವಿಯ ಹಿಂಡಲಗಾ ಜೈಲಿಗೆ ರವಾನೆ. ಅಲ್ಲೂ ಆತ ಸುಮ್ಮನಿರಲಿಲ್ಲ. ‘ಕ್ರಾಂತಿ’ ಎಂಬ ಕೈಬರಹದ ಪತ್ರಿಕೆ ಹೊರಡಿಸಿ ತಮ್ಮ ಮೊನಚು ಲೇಖನಿಗೆ ಕೆಲಸ ಕೊಟ್ಟಿದ್ದರು.

ಬಿಡುಗಡೆಯಾದ ಬಳಿಕ ‘ದಿವ್ಯವಾಣಿ’ಯನ್ನು ದಿನಪತ್ರಿಕೆಯಾಗಿ ರೂಪಿಸಿದರು. 15 ಸಾವಿರದವರೆಗೆ ಪ್ರಸಾರ ಸಂಖ್ಯೆ ಏರಿತ್ತು. ಆದರೆ ನಾಗೋರಿಯವರ ಖಾರವಾದ ಬರಹಗಳು ಜಿಲ್ಲೆಯ ಆಳರಸ ಪಕ್ಷದ ಪುಢಾರಿಗಳಿಗೆ, ಕಳ್ಳಸಾಗಣೆದಾರರಿಗೆ, ಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಅಪಥ್ಯ ಎನಿಸಿತು. ಹಿರಿಯ ಪತ್ರಕರ್ತರೊಬ್ಬರು ನಾಗೋರಿಗೆ, “ನಿನಗೆ ಬದುಕುವ ಆಸೆ ಇಲ್ಲವೇ? ದುಷ್ಟ ಶಕ್ತಿಗಳನ್ನು ಮೈಮೇಲೆ ಏಕೆ ಎಳೆದುಕೊಳ್ತಿಯಾ? ಸಾವಿರ ಬಾರಿ ಯೋಚಿಸಿ ಬರೆ" ಎಂದು ಬುದ್ಧಿವಾದ ಹೇಳಿದಾಗ ನಾಗೋರಿ ಯವರ ತಣ್ಣನೆಯ ಪ್ರತಿಕ್ರಿಯೆ: “ಅವರು ನನ್ನನ್ನು ಏನು ಮಾಡಿಯಾರು? ಕೊಲ್ಲಬಹುದು, ಅಇಂದು ಜೂನ್ 25. ಬರೋಬ್ಬರಿ 50 ವರ್ಷಗಳ ಹಿಂದೆ ಪ್ರಜಾಪ್ರಭುತ್ವದ ಮೇಲೆ ಆದ ‘ಕೊಲೆಗಡುಕ ದಾಳಿ’ಗೆ 50 ವರ್ಷಗಳು ತುಂಬಿರುವುದನ್ನು ಭಾರತವು ಇಂದು ನೆನಪಿಸಿಕೊಳ್ಳಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ವರ್ಷದ ಜುಲೈನಲ್ಲಿ ಈ ಕುರಿತಾದ ಸಚಿವ ಸಂಪುಟದ ನಿರ್ಣಯವನ್ನು ಪ್ರಕಟಿಸುತ್ತಾ, “ತುರ್ತು ಪರಿಸ್ಥಿತಿಯ ವೇಳೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು, ಏನೂ ತಪ್ಪನ್ನೇ ಮಾಡಿರದ ಲಕ್ಷಾಂತರ ಜನರನ್ನು ಹೇಗೆ ಜೈಲಿಗೆ ಅಟ್ಟಿದರು ಹಾಗೂ ಆ ಕಾಲಘಟ್ಟದಲ್ಲಿ ಮಾಧ್ಯಮಗಳ ದನಿಯನ್ನು ಹೇಗೆ ಹತ್ತಿಕ್ಕಲಾಗಿತ್ತು ಎಂಬುದರ ಸ್ಮರಣಾರ್ಥವಾಗಿ ಪ್ರತಿ ವರ್ಷದ ಜೂನ್ 25ರ ದಿನವನ್ನು ‘ಸಂವಿಧಾನ ಹತ್ಯಾ ದಿವಸ’ ಎಂಬುದಾಗಿ ಆಚರಿಸಲು ಸರಕಾರವು ನಿರ್ಧರಿಸಿದೆ" ಎಂದು ಹೇಳಿದ್ದು ನಿಮಗೆ ನೆನಪಿರಬಹುದು.

ಅಷ್ಟೇ ಅಲ್ಲ, “1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಮಾನವೀಯ ಎನ್ನಬಹುದಾದ ನೋವು ಗಳನ್ನು ಅನುಭವಿಸಿದ ಜನರ ಅಗಾಧ ಕೊಡುಗೆಗಳನ್ನೂ ಈ ದಿನದಂದು ಸ್ಮರಿಸಲಾಗು ತ್ತದೆ" ಎಂದು ಕೂಡ ಅಮಿತ್ ಶಾ ಅಂದು ಹೇಳಿದ್ದರು.

ಅದು 1977ರ ಮಾರ್ಚ್ ೨೧ರ ದಿನ. ಆ ವರ್ಷದ ಲೋಕಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಸದರಿ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲು ಇಂದಿರಾ ಗಾಂಧಿಯವರು ನಿರ್ಧರಿಸಿದರು. ಆ ಚುನಾವಣೆಯಲ್ಲಿ ಹೊಮ್ಮಿದ ಜನತಾ ಜನಾರ್ದನನ ತೀರ್ಪು ಕಾಂಗ್ರೆಸ್‌ನ ಭವಿಷ್ಯದ ಶವಪೆಟ್ಟಿಗೆಗೆ ಬಿದ್ದ ಕೊನೆಯ ಮೊಳೆಯಾದರೂ, ಇಂದಿರಾ ಅವರು ತಮ್ಮ ನಿರ್ಧಾರ ದಿಂದ ಹಿಂದೆ ಸರಿಯಲು ಇನ್ನೂ ಅನೇಕ ಅಂಶಗಳು ಪ್ರಮುಖ ಕಾರಣಗಳಾಗಿವೆ, ಈ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿವೆ ಎಂಬುದನ್ನು ಮರೆಯಲಾಗದು.

ಅವುಗಳಲ್ಲಿ ಎದ್ದು ಕಾಣುವಂಥದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮತ್ತು ‘ಸಂಘ-ಪ್ರೇರಿತ’ ಸಂಘಟನೆಗಳು ಪ್ರಾರಂಭಿಸಿದ ‘ಸತ್ಯಾಗ್ರಹ’ ಚಳವಳಿ. ನಿಮಗೆ ಇಲ್ಲೊಂದು ಅಂಶ ವನ್ನು ನೆನಪಿಸಬೇಕು. ಸದರಿ ಸತ್ಯಾಗ್ರಹ ಚಳವಳಿಯನ್ನು ಸಜ್ಜುಗೊಳಿಸುವಲ್ಲಿ ಆರೆಸ್ಸೆಸ್ ವಹಿಸಿದ ಪಾತ್ರವನ್ನು ಅನೇಕರು ಮೆಚ್ಚಿಕೊಂಡರು ಮತ್ತು ಆರೆಸ್ಸೆಸ್‌ನ ಸಿದ್ಧಾಂತಗಳ ಕಟ್ಟಾ ವಿರೋಧಿಗಳೂ ಇವರಲ್ಲಿ ಸೇರಿದ್ದರು.

ಖ್ಯಾತ ಸಮಾಜವಾದಿ ನಾಯಕ ಅಚ್ಯುತರಾವ್ ಪಟವರ್ಧನ್ ಅವರು ಆ ಸಂದರ್ಭದಲ್ಲಿ ಹೇಳಿದ್ದ ಮಾತುಗಳು ಇಲ್ಲಿ ಉಲ್ಲೇಖನೀಯ: “ತುರ್ತು ಪರಿಸ್ಥಿತಿಯ ಹೇರಿಕೆಯನ್ನು ವಿರೋಧಿಸಿದವರಿಗೆ ಸಹಕರಿಸಲು ಮತ್ತು ಮುಕ್ತ ಸಹಯೋಗವನ್ನು ನೀಡಲು ಆರೆಸ್ಸೆಸ್‌ನ ಸ್ವಯಂಸೇವಕರು ಮತ್ತು ಬೇರಾವುದೇ ರಾಜಕೀಯ ಎದುರಾಳಿ ಗುಂಪಿನವರು ಸಿದ್ಧರಿದ್ದಾರೆ; ಸುಸ್ಪಷ್ಟವಾಗಿರುವ ದಮನಕಾರಿ ನೀತಿಯನ್ನು ಹಾಗೂ ಸುಳ್ಳುಗಳನ್ನೇ ನೆಚ್ಚಿರುವ ‘ಪೈಶಾಚಿಕ ಆಡಳಿತ’ದ ವಿರುದ್ಧ ಉತ್ಸಾಹಭರಿತರಾಗಿಯೂ ಒಗ್ಗಟ್ಟಿನಿಂದಲೂ ಕೆಲಸ ಮಾಡಲು ಇವರೆಲ್ಲಾ ಸಮರ್ಥರಾಗಿದ್ದಾರೆ ಎಂಬುದನ್ನು ತಿಳಿದು ನನಗೆ ಸಂತಸವಾಗಿದೆ".

ಪೊಲೀಸರ ದೌರ್ಜನ್ಯ, ನಿರ್ದಯತೆ ಹಾಗೂ ಕ್ರೌರ್ಯದ ನಡುವೆಯೂ ಸದರಿ ಚಳವಳಿಯನ್ನು ಮುನ್ನಡೆಸುವಲ್ಲಿ ಈ ಸತ್ಯಾಗ್ರಹಿಗಳು ತೋರಿದ ಶೌರ್ಯದಿಂದ ಗಾಢವಾಗಿ ಪ್ರಭಾವಿತರಾದ ಸಿಪಿಐ(ಎಂ) ಪಕ್ಷದ ನಾಯಕ ಎ.ಕೆ.ಗೋಪಾಲನ್ ಅವರು, “ಇಂಥದೊಂದು ಧಿರೋದಾತ್ತ ಕಾರ್ಯ ಮತ್ತು ತ್ಯಾಗವನ್ನು ಕೈಗೊಳ್ಳುವಂತಾಗುವುದಕ್ಕೆ ಈ ಸತ್ಯಾಗ್ರಹಿಗಳಿಗೆ ಅದಮ್ಯ ಧೈರ್ಯವನ್ನು ನೀಡುವ ಅದ್ಯಾವುದೋ ಒಂದು ‘ಉದಾತ್ತ ಆದರ್ಶ’ವು ಅಲ್ಲಿ ಕೆನೆಗಟ್ಟಿರಬೇಕು" ಎಂದು ಪ್ರಶಂಸಿಸಿದ್ದರು (1979 ಜೂನ್ 9ರ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ).

ನಿಮಗೆ ಗೊತ್ತಿದೆಯೇ, ಸ್ವತಂತ್ರ ಭಾರತವು ಹಿಂದೆಂದೂ ಕಂಡಿರದಷ್ಟು ಕ್ರೂರ ರೀತಿಯಲ್ಲಿ ನಿರ್ವಹಿಸಲ್ಪಟ್ಟಂಥದ್ದು ತುರ್ತು ಪರಿಸ್ಥಿತಿಯ ವಿದ್ಯಮಾನ. ಇದರ ಇತಿಹಾಸವು ನಮಗೆ ಒಂದಷ್ಟು ಪಾಠಗಳನ್ನೂ ಹೇಳುತ್ತದೆ. ಅವುಗಳ ಪೈಕಿಯ ಮೂರು ಮುಖ್ಯ ಪಾಠಗಳನ್ನು ಇಲ್ಲಿ ಅವಲೋಕಿ ಸೋಣ.

ಮೊದಲನೆಯದಾಗಿ, ವಂಶಾಡಳಿತದ ಒಲವಿರುವ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯನ್ನು ಒಡ್ಡುತ್ತವೆ. ನೆನಪಿಡಿ, ಇಂಥ ಹೆಚ್ಚಿನ ರಾಜಕೀಯ ಪಕ್ಷಗಳು ಭಾರತದ ರಾಜಕೀಯ ಅಖಾಡದಲ್ಲಿ 1970ರ ದಶಕದ ಆಸುಪಾಸಿನಲ್ಲಿ ಕಾಣಿಸಿಕೊಂಡವು. ತಮ್ಮದೇ ಆದ ತತ್ವ-ಸಿದ್ಧಾಂತ ಗಳನ್ನು ನೆಚ್ಚಿದ್ದ ಮಿಕ್ಕ ಪಕ್ಷಗಳ ಮೇಲಿನ ತಮ್ಮ ಹಿಡಿತವನ್ನು ಇಂಥ ವಂಶಾಡಳಿತಗಳು ಬಿಗಿಗೊಳಿಸಿ, ಅವನ್ನು ‘ಕೌಟುಂಬಿಕ ವ್ಯವಹಾರ’ವನ್ನಾಗಿ ಪರಿವರ್ತಿಸಿದ್ದೂ ಈ ದಶಕದಲ್ಲಿಯೇ! ಇಂದಿರಾ ಗಾಂಧಿಯವರ ‘ರಾಜಕೀಯ ಶೈಲಿ’ಯೇ ಇಂಥ ಪಕ್ಷಗಳಿಗೆ ಸ್ಪೂರ್ತಿ ನೀಡಿತು ಎಂದು ನಂಬಲು ಒಂದು ಕಾರಣವಿದೆ.

1960ರ ದಶಕದ ಅಂತ್ಯದ ವೇಳೆಗೆ, ತಮ್ಮದೇ ಪಕ್ಷದಲ್ಲಿ ತಾವು ಬಹುತೇಕ ಏಕಾಂಗಿಯಾಗಿರುವ ಕಹಿ ವಾಸ್ತವವನ್ನು ಇಂದಿರಾ ಗಾಂಧಿ ಅರಿತುಕೊಂಡರು. ಈ ಬೆಳವಣಿಗೆಯಿಂದ ತೀವ್ರವಾಗಿ ವಿಚಲಿತ ರಾದ ಅವರು, ಅದಕ್ಕೆ ಕಾರಣವಾದ ‘ಅಂತರ’ವನ್ನು ತುಂಬಲು ಸೇತುವೆಯನ್ನು ಮರುನಿರ್ಮಿಸುವ ಬದಲು, ತಮ್ಮದೇ ಆದ ಪಕ್ಷವನ್ನು ಹುಟ್ಟುಹಾಕಲು ನಿರ್ಧರಿಸಿದರು; ಆದರೆ ಈ ಘಟ್ಟದಲ್ಲಿ ಅವರು, ತಮ್ಮ ಕುಟುಂಬದ ನಿಕಟ ಸದಸ್ಯರನ್ನು, ಅದರಲ್ಲೂ ವಿಶೇಷವಾಗಿ ತಮ್ಮ ಕಿರಿಯ ಮಗ ಸಂಜಯ್ ಗಾಂಧಿಯವರನ್ನು ಮಾತ್ರವೇ ಸಂಪೂರ್ಣವಾಗಿ ನೆಚ್ಚಬಹುದು ಎಂಬುದನ್ನು ಅರಿತುಕೊಂಡರು.

1970ರ ದಶಕದ ಮಧ್ಯಭಾಗದಲ್ಲಿ, ವಿರೋಧ ಪಕ್ಷಗಳೆಲ್ಲ ಒಗ್ಗೂಡಿ ಇಂದಿರಾರ ಮೇಲಿನ ತಮ್ಮ ತೀಕ್ಷ್ಣ ವಾಗ್ದಾಳಿಯನ್ನು ತೀವ್ರಗೊಳಿಸಿದ್ದವು, ಮಾಧ್ಯಮಗಳಂತೂ ಅವರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದವು. ಇಷ್ಟು ಸಾಲದೆಂಬಂತೆ, ಗುಜರಾತ್ ಮತ್ತು ಬಿಹಾರ ರಾಜ್ಯಗಳಲ್ಲಿ ಯುವಜನರು ಶುರುವಿಟ್ಟುಕೊಂಡಿದ್ದ ‘ಭ್ರಷ್ಟಾಚಾರ- ವಿರೋಧಿ’ ಆಂದೋಲನಗಳು ತಾರಕಕ್ಕೆ ಏರಿದ್ದವು.

ಈ ಎಲ್ಲ ಬೆಳವಣಿಗೆಗಳನ್ನು ಕಂಡ ಇಂದಿರಾರನ್ನು ಸಹಜವಾಗಿಯೇ ಅಭದ್ರತೆಯ ಭಾವನೆ ಆವರಿಸಿತು. ಪಕ್ಷವು ಸಂಪೂರ್ಣವಾಗಿ ಇಂದಿರಾರ ನಿಯಂತ್ರಣದಲ್ಲಿದ್ದರೂ, ಉನ್ನತ ಸ್ಥಾನದಲ್ಲಿದ್ದ ಇಂದಿರಾ ಅಕ್ಷರಶಃ ಒಬ್ಬಂಟಿಯಾಗಿಬಿಟ್ಟಿದ್ದರು ಮತ್ತು ಸಾಲದೆಂಬಂತೆ ಪಕ್ಷದ ಸಹವರ್ತಿಗಳ ಬಗ್ಗೆ ಅವರಲ್ಲಿ ಸಣ್ಣಗೆ ಅನುಮಾನ ಹುಟ್ಟಿಕೊಂಡಿತ್ತು. ಈ ಎಲ್ಲ ಕಾರಣಗಳಿಂದ ಅವರು ತಮ್ಮ ಪುತ್ರ ಸಂಜಯರನ್ನು ಮಾತ್ರವೇ ‘ವಿಶ್ವಾಸಾರ್ಹ ಬೆಂಬಲಿಗ’ ಎಂದು ಪರಿಗಣಿಸುವಂತಾಯಿತು.

ಸಂಜಯರ ಮೇಲಿನ ಇಂದಿರಾರ ಅವಲಂಬನೆ ಅದೆಷ್ಟು ಗಟ್ಟಿಯಾಗಿತ್ತೆಂದರೆ, ‘ಮಾಧ್ಯಮ ಸಂಸ್ಥೆ ಗಳಿಗೆ ಇರುವ ವಿದ್ಯುತ್ ಸರಬ ರಾಜನ್ನು ಕಡಿತಗೊಳಿಸಬೇಕು ಮತ್ತು ಹೈಕೋರ್ಟ್ ಕೊಠಡಿಗಳಿಗೆ ಬೀಗಹಾಕಬೇಕು’ ಎಂಬುದಾಗಿ 1975 ಜೂನ್ 25ರಂದು ಸಂಜಯ್ ನೀಡಿದ ನಿರ್ದೇಶನಗಳನ್ನು ಇಂದಿರಾ ರದ್ದುಗೊಳಿಸಿದರು ಕೂಡ, ತಮ್ಮ ಮಗನನ್ನು ನೇರವಾಗಿ ಎದುರಿಸಲು ಅವರಿಗೆ ಸಾಧ್ಯವಾಗಲಿಲ್ಲ.

ದಿನಗಳು ಉರುಳುತ್ತಿದ್ದಂತೆ, ದೇಶದ ವಿಭಿನ್ನ ರಾಜಕೀಯ ಪಕ್ಷಗಳಲ್ಲಿ ‘ಮಕ್ಕಳು ಉತ್ತರಾಧಿಕಾರಿ ಗಳಾಗಿ ಮುನ್ನೆಲೆಗೆ ಬರುವಂಥ’ ರೂಢಿಯು ಚಾಲ್ತಿಗೆ ಬರುವುದಕ್ಕೆ ಇಂದಿರಾ- ಸಂಜಯ್ ಜೋಡಿಯು ಮಾದರಿಯಾಗಿಬಿಟ್ಟಿತು. ಇದು ತೇಲಿಸಿ ಆಡುತ್ತಿರುವ ಮಾತಲ್ಲ, ತುರ್ತು ಪರಿಸ್ಥಿತಿಯ ನಂತರದ ಕಾಲಘಟ್ಟವನ್ನೊಮ್ಮೆ ನೆನಪಿಸಿಕೊಂಡರೆ ನಿಮಗೇ ಅದರ ಅರಿವಾಗುತ್ತದೆ. ಅಂದರೆ, ತುರ್ತುಸ್ಥಿತಿಯ ಕಾಲಘಟ್ಟದ ತರುವಾಯದಲ್ಲಿ ‘ಠಾಕ್ರೆಗಳ’, ‘ಸ್ಟಾಲಿನ್‌ಗಳ’, ಅಬ್ದುಲ್ಲಾಗಳ’ ವಂಶದ ತರುಣ ಪೀಳಿಗೆಯು ರಾಜಕೀಯದಲ್ಲಿ ಮುನ್ನೆಲೆಗೆ ಬರುವಂತಾಯಿತು.

ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳನ್ನಂತೂ ಕೇಳುವುದೇ ಬೇಡ, ಅಲ್ಲಿ ‘ಯಾದವ’ ಹಣೆಪಟ್ಟಿ ಯ ಯುವನಾಯಕರು, ತಂತಮ್ಮ ಜನಕರು ಜನ್ಮನೀಡಿದ ರಾಜಕೀಯ ಪಕ್ಷಗಳ ಚುಕ್ಕಾಣಿಯನ್ನು ಹಿಡಿದು ಹಿಡಿತ ಸಾಧಿಸಲು ಮುಂದೆ ಬರುವಂತಾಯಿತು.

ಇನ್ನೂ ಸ್ಪಷ್ಟವಾಗಿ-ನೇರವಾಗಿ ಹೇಳುವುದಾದರೆ, ಅನೇಕ ಪುಢಾರಿಗಳು ತಂತಮ್ಮ ರಾಜಕೀಯ ಪಕ್ಷಗಳನ್ನು ‘ಕುಟುಂಬದ ಊಳಿಗ ಮಾನ್ಯದ ಉಂಬಳಿ’ಗಳಾಗಿ ರೂಪಾಂತರಿಸುವುದಕ್ಕೆ ಸದರಿ ತುರ್ತು ಪರಿಸ್ಥಿತಿಯ ಬೆಳವಣಿಗೆಯೇ ಅವರಿಗೆ ಧೈರ್ಯ ತುಂಬಿತು. ವಂಶಾಡಳಿತದ ರಾಜಕೀಯ ಪಕ್ಷಗಳಲ್ಲಿ ತತ್ವ- ಸಿದ್ಧಾಂತ ಆಧರಿತ ನೀತಿ-ನಿರೂಪಣೆಯ ಕೊರತೆಯಿರುವುದು ಮಾತ್ರವಲ್ಲದೆ, ‘ಜನ್ಮಾಧಾರಿತ ತಾರತಮ್ಯ’ವನ್ನು ಉತ್ತೇಜಿಸುವ ಪರಿಪಾಠವೂ ಅವುಗಳಲ್ಲಿ ಢಾಳಾಗಿರುತ್ತದೆ.

ಅಂದರೆ, ನಮ್ಮ ಸಂವಿಧಾನವು ಸಂಪೂರ್ಣವಾಗಿ ಅಥವಾ ಸಾರಾಸಗಟಾಗಿ ತಿರಸ್ಕರಿಸುವ ಪರಿಪಾಠವನ್ನು ವಂಶಾಡಳಿತದ ಪಕ್ಷಗಳು ಬಿಗಿಯಾಗಿ ಅಪ್ಪುತ್ತವೆ. ಇಂಥ ರಾಜಕೀಯ ಪಕ್ಷಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಯಾವತ್ತಿಗೂ ಹಾನಿಕಾರಕವೇ ಎಂಬುದು ಇಲ್ಲಿ ಹೊಮ್ಮುವ ಮೊದಲ ಪಾಠ. ಷ್ಟೇ ತಾನೇ? ಹೇಡಿಗಳು ಸಾವಿರ ಬಾರಿ ಸಾಯುತ್ತಾರೆ.

ವೀರನಂತೆ ನಾನು ಒಂದೇ ಬಾರಿ ಸಾಯುತ್ತೇನೆ". ಹಾಗೆಯೇ ಆಯಿತು. 1977ರ ಸೆಪ್ಟೆಂಬರ್ 2ರಂದು ತಮ್ಮ ಕಚೇರಿಯಲ್ಲಿ ಬೆಳಗ್ಗೆ ದೀಪ ಹಚ್ಚಿ ದೇವರಿಗೆ ಕೈ ಮುಗಿಯುತ್ತಿದ್ದಾಗ ಹಂತಕರ ಚೂರಿ ಇರಿತಕ್ಕೆ ನಾಗೋರಿ ಬಲಿಯಾದರು. ನಿರ್ಭೀತ ಪತ್ರಕರ್ತನೊಬ್ಬನ ಸಿಡಿಲಧ್ವನಿ ಉಡುಗಿತು.ಇಂಥ ಬೆರಳೆಣಿಕೆಯ ಪತ್ರಕರ್ತರನ್ನು ಹೊರತುಪಡಿಸಿದರೆ ಬಹುತೇಕ ಖ್ಯಾತನಾಮ ಪತ್ರಕರ್ತರು, ಪ್ರಗತಿಪರರೆಂದು ಬಿಂಬಿಸಿಕೊಳ್ಳುತ್ತಿದ್ದವರು ಸರಕಾರದ ‘ಪರಾಕು ಪಂಪು’ ಒತ್ತುವುದರಲ್ಲಿ ತಮ್ಮ ಬದುಕಿನ ಸಾರ್ಥಕತೆ ಕಂಡುಕೊಂಡಿದ್ದರು.

ಇಂದಿರಾ ಗಾಂಧಿಯವರ ಕೃಪೆಗೆ ಪಾತ್ರರಾಗಲು ‘ನಾ ಮುಂದು, ತಾ ಮುಂದು’ ಎಂದು ಕ್ಯೂ ಹಚ್ಚಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯಹರಣದ ವಿರುದ್ಧ ದನಿಯೆತ್ತಲಾಗದೆ ನರಸತ್ತವರಂತಾಗಿದ್ದರು. ಇಂಥವರನ್ನು ಗಮನಿಸಿಯೇ, ತುರ್ತು ಪರಿಸ್ಥಿತಿಯ ಬಳಿಕ ಕೇಂದ್ರ ಸರಕಾರದಲ್ಲಿ ವಾರ್ತಾ ಸಚಿವರಾಗಿದ್ದ ಎಲ್.ಕೆ.ಆಡ್ವಾಣಿಯವರು ಒಮ್ಮೆ ಪತ್ರಿಕಾಗೋಷ್ಠಿಯಲ್ಲಿ ಮಾರ್ಮಿಕ ವಾಗಿ ಪ್ರಶ್ನಿಸಿದ್ದರು: “ಇಂದಿರಾ ಗಾಂಧಿ ನಿಮಗೆ ಬಗ್ಗಿ ಎಂದಷ್ಟೇ‌ ಹೇಳಿದ್ದರು. ಆದರೆ ನೀವೇಕೆ ತೆವಳಲು ಶುರುಹಚ್ಚಿದಿರಿ? “ ( When Indira Gandhi asked only to bend, why did you crawled ?). ಈ ಪ್ರಶ್ನೆಗೆ ಮಾತ್ರ ಯಾರಿಂದಲೂ ಉತ್ತರವಿರಲಿಲ್ಲ...!

(ಲೇಖಕರು ಹಿರಿಯ ಪತ್ರಕರ್ತರು)