ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

'ಒಂದು ಕಡೆ ಮೊಹಮ್ಮದ್, ಇನ್ನೊಂದು ಕಡೆ ಕೃಷ್ಣ': ಗಿಲ್ ಹೇಳಿಕೆ ವೈರಲ್

ಸೋಲಿನ ಬಳಿಕ ಮಾತನಾಡಿದ ನಾಯಕ ಶುಭ್​ಮನ್ ಗಿಲ್, ನಮಗೆ ಪಂದ್ಯವನ್ನು ಗೆಲ್ಲಲು ಉತ್ತಮ ಅವಕಾಶವಿತ್ತು. ಆದರೆ ಎಲ್ಲರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಕೆಳ ಕ್ರಮಾಂಕದ ಬ್ಯಾಟರ್​ಗಳು ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಫಲವಾಗಿದದ್ದು ಮತ್ತು ತಂಡದ ಫೀಲ್ಡಿಂಗ್ ಕೂಡ ಕಳಪೆಯಾಗಿತ್ತು. ಇದು ತಂಡದ ಸೋಲಿಗೆ ಕಾರಣವಾಯಿತು ಎಂದರು.

'ಒಂದು ಕಡೆ ಮೊಹಮ್ಮದ್, ಇನ್ನೊಂದು ಕಡೆ ಕೃಷ್ಣ': ಗಿಲ್ ಹೇಳಿಕೆ ವೈರಲ್

Profile Abhilash BC Jun 25, 2025 11:41 AM

ಲೀಡ್ಸ್‌: ಭಾರತ ಮತ್ತು ಇಂಗ್ಲೆಂಡ್‌ ನಡುವಣ ಮೊದಲ(IND vs ENG) ಟೆಸ್ಟ್‌ನ ಅಂತಿಮ ದಿನವಾದ ಮಂಗಳವಾರ ಭಾರತೀಯ ಬೌಲಿಂಗ್ ಪ್ರಗತಿ ಸಾಧಿಸಲು ವಿಫಲವಾದರೂ, ನಾಯಕ ಶುಭಮನ್ ಗಿಲ್(Shubman Gill) ತಮ್ಮ ಬೌಲರ್‌ಗಳನ್ನು ಒಟ್ಟುಗೂಡಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದರು. ಇದೇ ವೇಳೆ ಗಿಲ್‌ ನೀಡಿದ ಹಾಸ್ಯಾಸ್ಪದ ಹೇಳಿಕೆಯೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಜಾಕ್‌ ಕ್ರಾಲಿ ಮತ್ತು ಬೆನ್‌ ಡಕೆಡ್‌ ಉತ್ತಮ ರನ್‌ ಗಳಿಸುತ್ತಿದ್ದರು. ಉಭಯ ಆಟಗಾರರ ವಿಕೆಟ್‌ ಕೀಳುವ ವಿಶ್ವಾಸ ವ್ಯಕ್ತಪಡಿಸಲು ಗಿಲ್‌ ಅವರು ಪಂತ್‌ ಬಳಿ 'ಒಂದು ಕಡೆ ಮೊಹಮ್ಮದ್ ಇದ್ದಾನೆ. ಇನ್ನೊಂದು ಕಡೆ ಕೃಷ್ಣ. ಇಬ್ಬರೂ ಸೇರಿ ಸರ್ವನಾಶ ಮಾಡಲಿದ್ದಾರೆʼ('ಏಕ್ ತರಫ್ ಮೊಹಮ್ಮದ್ ಹೈ. ಏಕ್ ತರಫ್ ಕೃಷ್ಣ. ದೋನೋ ತಭಹಿ ಮಚಯೇಗಾ)ಎಂದು ಲಘು ಧಾಟಿಯ ಹಾಸ್ಯ ವ್ಯಕ್ತಪಡಿಸಿದರು.ಇದು ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದೆ. ಸದ್ಯ ಗಿಲ್‌ ಅವರ ಈ ಹೇಳಿಕೆ ವೈರಲ್‌ ಆಗಿದೆ.



ಸೋಲಿನ ಬಳಿಕ ಮಾತನಾಡಿದ ನಾಯಕ ಶುಭ್​ಮನ್ ಗಿಲ್, ನಮಗೆ ಪಂದ್ಯವನ್ನು ಗೆಲ್ಲಲು ಉತ್ತಮ ಅವಕಾಶವಿತ್ತು. ಆದರೆ ಎಲ್ಲರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಕೆಳ ಕ್ರಮಾಂಕದ ಬ್ಯಾಟರ್​ಗಳು ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಫಲವಾಗಿದದ್ದು ಮತ್ತು ತಂಡದ ಫೀಲ್ಡಿಂಗ್ ಕೂಡ ಕಳಪೆಯಾಗಿತ್ತು. ಈ ಕ್ಷೇತ್ರರಕ್ಷಣಾ ವಿಭಾಗದಲ್ಲಿ ನಾವು ಸುಧಾರಿಸಬೇಕಾಗಿದೆ. ಕ್ಯಾಚ್‌ಗಳನ್ನು ಕೈಬಿಟ್ಟಿದ್ದು ಕೂಡ ತಂಡದ ಸೋಲಿಗೆ ಕಾರಣವಾಯಿತು ಎಂದರು.

ಇದೇ ವೇಳೆ ಈ ಸೋಲಿನಿಂದ ನಾವು ಬಹಳಷ್ಟು ಪಾಠವನ್ನು ಕಲಿತ್ತಿದ್ದೇವೆ. ಮುಂದಿನ ಪಂದ್ಯದಲ್ಲಿ ಎಚ್ಚರದಿಂದ ಆಡುವ ಮೂಲಕ ಗೆಲುವಿನ ಹಳಿಗೆ ಮರಳುವ ವಿಶ್ವಾಸ ತಂಡದ ಆಟಗಾರರಲ್ಲಿ ಇದೆ ಎಂದರು.

ಗೆಲ್ಲಲು 371 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 82 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 373 ರನ್ ಗಳಿಸಿದೆ. ಜೋ ರೂಟ್(53 ರನ್, 84 ಎಸೆತ, 6 ಬೌಂಡರಿ)ಹಾಗೂ ಜೇಮೀ ಸ್ಮಿತ್(ಔಟಾಗದೆ 44, 55 ಎಸೆತ, 4 ಬೌಂಡರಿ, 2 ಸಿಕ್ಸರ್) 6ನೇ ವಿಕೆಟ್‌ಗೆ ಮುರಿಯದ ಜತೆಯಾಟದಲ್ಲಿ 88 ಎಸೆತಗಳಲ್ಲಿ 71 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.