ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SSLC: ಎಸ್ ಎಸ್ ಎಲ್ ಸಿ ಪರೀಕ್ಷೆ-2 ರ ಫಲಿತಾಂಶದಲ್ಲಿ ಶೇ.100 ಪಡೆದ ತಾಲೂಕಿನ ಏಕೈಕ ಶಾಲೆ ಡಾ.ಶ್ರೀ ಜಚನಿ ವಸತಿ ಪ್ರೌಢಶಾಲೆ

ತಾಲೂಕಿನ ಗೂಳೂರು ಶ್ರೀ ಜಗದ್ಗುರು ನಿಡುಮಾಮಿಡಿ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷ ಡಾ.ಶ್ರೀ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಮಹಾಸ್ವಾಮಿಯವರ ಆಶೀರ್ವಾದದೊಂದಿಗೆ ಹಾಗೂ ಶಿಕ್ಷಕರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಪರಿಶ್ರಮದಿಂದ ಈ ಸಾಧನೆ ಸಾಧ್ಯ ವಾಗಿದೆ. ನಮ್ಮ ಶಾಲಾ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಬಡತನ ಹಿನ್ನೆಲೆಯುಳ್ಳವ ರಾಗಿದ್ದಾರೆ.

ಶೇ.100 ಪಡೆದ ತಾಲೂಕಿನ ಏಕೈಕ ಶಾಲೆ ಡಾ.ಶ್ರೀ ಜಚನಿ ವಸತಿ ಪ್ರೌಢಶಾಲೆ

Profile Ashok Nayak Jun 15, 2025 10:37 PM

ಬಾಗೇಪಲ್ಲಿ: ಎಸ್ ಎಸ್ ಎಲ್ ಸಿ 2025 ಪರೀಕ್ಷೆ -1 ರ ಫಲಿತಾಂಶದಲ್ಲಿ ಡಾ.ಶ್ರೀ ಜಚನಿ ವಸತಿ ಪ್ರೌಢಶಾಲೆಗೆ ಕನ್ನಡ ಮಾಧ್ಯಮ ವಿಭಾಗದಲ್ಲಿ ಬಾಗೇಪಲ್ಲಿ ತಾಲೂಕಿನಲ್ಲೇ ಶೇ.90.09 ರಷ್ಟು ಫಲಿತಾಂಶ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಲಭಿಸಿತ್ತು. ಹಾಗೆಯೇ ಪರೀಕ್ಷೆ-2 ಶೇ.100 ರಷ್ಟು ಫಲಿತಾಂಶ ಪಡೆದು ತಾಲೂಕಿಗೆ ಪ್ರಥಮ ಹಾಗೂ ಕನ್ನಡ ಮಾಧ್ಯಮದಲ್ಲಿ‌ ಶೇ.100 ಫಲಿತಾಂಶ ಪಡೆದ ಏಕೈಕ ಶಾಲೆಯಾಗಿದೆ ಎಂದು ಮುಖ್ಯ ಶಿಕ್ಷಕ ಕೆ.ನಾಗರಾಜ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಮಾಧ್ಯಮದ ಹೇಳಿಕೆ ನೀಡಿದ ಅವರು, ತಾಲೂಕಿನ ಗೂಳೂರು ಶ್ರೀ ಜಗದ್ಗುರು ನಿಡುಮಾಮಿಡಿ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷ ಡಾ.ಶ್ರೀ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಮಹಾಸ್ವಾಮಿಯವರ ಆಶೀರ್ವಾದದೊಂದಿಗೆ ಹಾಗೂ ಶಿಕ್ಷಕರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ.
ನಮ್ಮ ಶಾಲಾ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಬಡತನ ಹಿನ್ನೆಲೆಯುಳ್ಳವರಾಗಿದ್ದಾರೆ. ಹಾಗಾಗಿ ನಮ್ಮ ಶಾಲಾ ಚಟುವಟಿಕೆಗಳಿಗೆ ಹಲವಾರು ದಾನಿಗಳು ಸಹಕರಿಸಿದ್ದು, ಅವರೆಲ್ಲ ರಿಗೂ ಧನ್ಯವಾದಗಳು.

ಇದನ್ನೂ ಓದಿ: SSLC Exam: ಮಾ.21ರಿಂದ SSLC ಪರೀಕ್ಷೆ; ವಿದ್ಯಾರ್ಥಿಗಳೇ ಈ ನಿಯಮಗಳ ಬಗ್ಗೆ ತಿಳಿದಿರಿ

ಬಿಸಿಯೂಟ ಕಾರ್ಯಕ್ರಮದ ದಾನಿಗಳಾದ ಬೆಂಗಳೂರು ಮೂಲದ ಎಸ್.ಕಿಶೋರ್ ಕುಮಾರ್ ಮತ್ತು ಎಸ್ ಆನಂದ ಕುಮಾರ್, ಪುಸ್ತಕ ಮತ್ತು ಲೇಖನಿ ಸಾಮಾಗ್ರಿ ದಾನಿ ಬಿ.ಆರ್ ಕೃಷ್ಣ, ಶ್ರೀ ಮಠದ ಯೋಗಕ್ಷೇಮಕ್ಕಾಗಿ ಸದಾಸೇವೆ ಸಲ್ಲಿಸುತ್ತಿರುವ ಕೊಡುಗೈ ದಾನಿಗಳಾದ ಮಾರಗಾನಕುಂಟೆ ರಾಜೇಂದ್ರ ಪ್ರಸಾದ್, ಶ್ರೀ ಸತ್ಯ ಸಾಯಿ ಧರ್ಮಶಾಲಾ ಟ್ರಸ್ಟ್ ಅಧ್ಯಕ್ಷ ಕೆ.ಎಂ ನಾಗರಾಜ್, ನಿವೃತ್ತ ಸೈನಿಕ ಅಮರನಾಥ ಬಾಬು, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ನಾಗರಾಜ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬಿಇಓ ವೆಂಕಟೇಶಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ವೆಂಕಟರಾಮಪ್ಪ ಆರ್, ಎಸ್ಎಸ್ಎಲ್ ಸಿ ನೋಡಲ್ ಅಧಿಕಾರಿ ಪಿ. ಎನ್. ನಾರಾಯಣಸ್ವಾಮಿ, ಸಿಆರ್ ಪಿ ವೆಂಕಟೇಶಪ್ಪ ಆರ್ ,ಇಸಿಒಗಳು ಮತ್ತಿತರ ಸಹಕಾರ ಹೆಚ್ಚಿದೆ ಎಂದರು.