ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kamal Haasan: ಸಾರ್ವಜನಿಕ ಸಭೆಯಲ್ಲಿ ಅಭಿಮಾನಿ ಕೊಟ್ಟ ಗಿಫ್ಟ್‌ ನೋಡಿ ಸಿಟ್ಟಾದ ಕಮಲ್‌ ಹಾಸನ್‌; ಏನಿದು ಘಟನೆ?

ಸದಾ ಒಂದಲ್ಲೊಂದು ವಿವಾದವನ್ನು ಮೈಮೇಲೆ (Kamal Haasan) ಎಳೆದುಕೊಳ್ಳುವ ನಟ ಹಾಗೂ ರಾಜಕಾರಣಿ ಕಮಲ್‌ ಹಾಸನ್‌ ಇದೀಗ ಅಭಿಮಾನಿಯೊಂದಿಗೆ ಅವರು ನಡೆದುಕೊಂಡ ರೀತಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಚೆನ್ನೈನಲ್ಲಿ ಮಕ್ಕಳ್ ನೀದಿ ಮಯ್ಯಂ ಪಕ್ಷದ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಖ್ಯಾತ ನಟ ಕಮಲ್ ಹಾಸನ್ ಭಾಗವಹಿಸಿದ್ದರು.

ಅಭಿಮಾನಿ ಕೊಟ್ಟ ಗಿಫ್ಟ್‌ ನೋಡಿ ಸಿಟ್ಟಾದ ಕಮಲ್‌ ಹಾಸನ್‌!

Profile Vishakha Bhat Jun 15, 2025 9:12 PM

ಚೆನ್ನೈ: ಸದಾ ಒಂದಲ್ಲೊಂದು ವಿವಾದವನ್ನು ಮೈಮೇಲೆ (Kamal Haasan) ಎಳೆದುಕೊಳ್ಳುವ ನಟ ಹಾಗೂ ರಾಜಕಾರಣಿ ಕಮಲ್‌ ಹಾಸನ್‌ ಇದೀಗ ಅಭಿಮಾನಿಯೊಂದಿಗೆ ಅವರು ನಡೆದುಕೊಂಡ ರೀತಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಚೆನ್ನೈನಲ್ಲಿ ಮಕ್ಕಳ್ ನೀದಿ ಮಯ್ಯಂ ಪಕ್ಷದ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಖ್ಯಾತ ನಟ ಕಮಲ್ ಹಾಸನ್ ಭಾಗವಹಿಸಿದ್ದರು. ಆ ವೇಳೆ ಅಭಿಮಾನಿ ನೀಡಿದ ಉಡುಗೊರೆಗೆ ಅವರು ಮೂಗು ಮುರಿದಿದ್ದಾರೆ. ತಮಿಳುನಾಡಿನಿಂದ ರಾಜ್ಯಸಭೆಗೆ ಹಾಸನ್ ಅವಿರೋಧವಾಗಿ ಆಯ್ಕೆಯಾದ ಕೆಲವೇ ದಿನಗಳ ನಂತರ ಚೆನ್ನೈನಲ್ಲಿ ಪಕ್ಷದ ಸಭೆ ನಡೆಯಿತು. ಕಮಲ್ ಹಾಸನ್ ಕತ್ತಿಯನ್ನು ಹಿಡಿದು ಪೋಸ್ ನೀಡುವಂತೆ ಒತ್ತಾಯಿಸಿದ ವ್ಯಕ್ತಿಯಿಂದ ಕೋಪಗೊಂಡರು, ಮತ್ತು ಒಬ್ಬ ಪೊಲೀಸ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಕಾರ್ಯಕ್ರಮಕ್ಕೆ ಸಾಗರೋಪಾದಿಯಲ್ಲಿ ಜನ ಸೇರಿದ್ದರು. ಹಲವರು ಕಮಲ್‌ ಜೊತೆ ಫೋಟೋ ತೆಗೆದುಕೊಳ್ಳಲು ಮುಗಿ ಬಿದ್ದಿದ್ದರು. ಶೇಕ್ ಹ್ಯಾಂಡ್ ಮಾಡಲು ಉತ್ಸುಕರಾದರು. ಭದ್ರತಾ ಸಿಬ್ಬಂದಿಗಳು ಅವರನ್ನು ವೇದಿಕೆಯಿಂದ ಕಳುಹಿಸಿದರು. ಓರ್ವ ಕಾರ್ಯಕರ್ತ ವೇದಿಕೆಗೆ ಬಂದು ದೊಡ್ಡ ಕತ್ತಿಯನ್ನು ಉಡುಗೊರೆಯಾಗಿ ನೀಡಿದರು. ಆರಂಭದಲ್ಲಿ ಕಮಲ್ ನಗುತ್ತಾ ಕತ್ತಿಯನ್ನು ಸ್ವೀಕರಿಸಿದರು. ಆದರೆ, ಮತ್ತೊಬ್ಬ ಕಾರ್ಯಕರ್ತ ಬಲವಂತವಾಗಿ ಆ ಕತ್ತಿಯನ್ನು ಕಮಲ್ ಅವರ ಕೈಗೆ ಇನ್ನಷ್ಟು ಸ್ಪಷ್ಟವಾಗಿ ನೀಡಲು ಪ್ರಯತ್ನಿಸಿದಾಗ, ಅವರು ಅಸಮಾಧಾನ ವ್ಯಕ್ತಪಡಿಸಿದರು. ಕಮಲ್ ಹಾಸನ್ ಓರ್ವ ಕಾರ್ಯಕರ್ತನಿಗೆ ಎಚ್ಚರಿಕೆ ನೀಡಿ, “ಕತ್ತಿ ಕೆಳಗಿಡು” ಎಂದು ಆದೇಶಿಸಿದರು. ಈ ಸಮಯದಲ್ಲಿ ಅಲ್ಲಿದ್ದ ಪೊಲೀಸ್ ಅಧಿಕಾರಿ ತಕ್ಷಣ ಕಾರ್ಯಕರ್ತನನ್ನು ತಡೆದಿದ್ದಾರೆ.

ಈ ವಿಡಿಯೋ ಆನ್‌ಲೈನ್ ಚರ್ಚೆಗಳನ್ನು ಹುಟ್ಟುಹಾಕಿತು, ಹಲವರು ಹಾಸನ್ ಅವರ ತತ್ವಗಳನ್ನು ಎತ್ತಿಹಿಡಿದಿದ್ದಕ್ಕಾಗಿ ಶ್ಲಾಘಿಸಿದರು. ಒಬ್ಬ ನೆಟಿಜನ್, "#ಕಮಲ್ ಹಾಸನ್ ಕತ್ತಿ ಉಡುಗೊರೆಗಾಗಿ ಏಕೆ ಕೋಪಗೊಂಡರು ಎಂಬುದನ್ನು ನೀವು ಉಲ್ಲೇಖಿಸಬೇಕು. ಅಲ್ಲದೆ, ಅವರು ತಮ್ಮ ಪಕ್ಷದ ಸದಸ್ಯರಿಗೆ ಹೇಳಿದ್ದನ್ನು ನೀವು ಉಲ್ಲೇಖಿಸಬೇಕು. ಅವರು "ನಾವು ಕತ್ತಿಯಲ್ಲ ನಮ್ಮ ಕೈಯಲ್ಲಿ ಪುಸ್ತಕ ಮತ್ತು ಪೆನ್ನು ಇಟ್ಟುಕೊಳ್ಳಬಹುದು" ಎಂದು ಹೇಳಿದರು. ಅವರು ಇತರರಂತೆ ಕತ್ತಿಯನ್ನು ಎತ್ತಿ ಫೋಟೋ ತೆಗೆಯಬಹುದಿತ್ತು. ಅವರು ಹಾಗೆ ಮಾಡಲಿಲ್ಲ. ಒಳ್ಳೆಯ ರಾಜಕಾರಣಿ", ಮತ್ತೊಬ್ಬ ನೆಟಿಜನ್ ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: ಭಾಷಾ ವಿವಾದದ ಕಿಡಿ ಹೊತ್ತಿಸಿದ ಕಮಲ್‌ ಹಾಸನ್‌ ಕಥೆ ಹೇಳುತ್ತಾ ಕನ್ನಡದ ʼಕಮಲ್‌ ಶ್ರೀದೇವಿʼ ಚಿತ್ರ? ಸಿನಿತಂಡದ ಸ್ಪಷ್ಟನೆ ಏನು?

ಕನ್ನಡ ವಿವಾದ

ಕಮಲ್‌ ಹಾಸನ್‌ ಇತ್ತೀಚೆಗೆ ಕನ್ನಡದ ಕುರಿತು ವಿವಾದ ಸೃಷ್ಟಿಸಿದ್ದರು. ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಕಮಲ್‌ ಹಾಸನ್‌ ಅವರು ಹೇಳಿದ್ದರು. ಅದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.