ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻವಿರಾಟ್‌ ಕೊಹ್ಲಿ ಒಮ್ಮೆ ನನ್ನ ಜೊತೆ ಮುನಿಸಿಕೊಂಡಿದ್ದರುʼ: ಅಚ್ಚರಿ ಹೇಳಿಕೆ ನೀಡಿದ ಎಬಿಡಿ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ದಿಗ್ಗಜರಾದ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ಇಬ್ಬರೂ 2011ರಿಂದ ಇಲ್ಲಿಯವರೆಗೂ ಅದ್ಭುತ ಬಾಂಧವ್ಯವನ್ನು ಹೊಂದಿದ್ದಾರೆ. ಆದರೆ, ಒಮ್ಮೆ ವಿರಾಟ್‌ ಕೊಹ್ಲಿ ತಮ್ಮ ಜತೆ ಮಾತು ನಿಲ್ಲಿಸಿದ್ದ ಪ್ರಸಂಗವನ್ನು ಎಬಿ ಡಿ ವಿಲಿಯರ್ಸ್‌ ಬಹಿರಂಗಪಡಿಸಿದ್ದಾರೆ.

ತಮ್ಮ ಜೊತೆ ಕೊಹ್ಲಿ ಮುನಿಸಿಕೊಂಡಿದ್ದ ಘಟನೆ ನೆನೆದ ಎಬಿಡಿ!

ವಿರಾಟ್‌ ಕೊಹ್ಲಿ ತಮ್ಮ ಜೊತೆ ಮಾತು ಬಿಟ್ಟಿದ್ದ ಪ್ರಸಂಗವನ್ನು ಹಂಚಿಕೊಂಡ ಎಬಿಡಿ.

Profile Ramesh Kote Jun 15, 2025 7:55 PM

ನವದೆಹಲಿ: ಜೂನ್‌ 3 ರಂದು ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಫೈನಲ್‌ ಪಂದ್ಯದಲ್ಲಿ 6 ರನ್‌ ಗೆಲುವು ಪಡೆಯುವ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಸತತ 18 ವರ್ಷಗಳ ಬಳಿಕ ಚಾಂಪಿಯನ್‌ ಆಗಿತ್ತು. 11 ವರ್ಷಗಳ ಕಾಲ ಆರ್‌ಸಿಬಿ ಪರ ಆಡಿದ್ದ ಎಬಿ ಡಿ ವಿಲಿಯರ್ಸ್‌ ಹಾಗೂ ಕ್ರಿಸ್‌ ಗೇಲ್‌ ಕೂಡ ಫೈನಲ್‌ ಪಂದ್ಯವನ್ನು ಕಣ್ತುಂಬಿಸಿಕೊಂಡಿದ್ದರು. ಕ್ರಿಸ್‌ ಗೇಲ್‌ 7 ವರ್ಷಗಳ ಕಾಲ ಆರ್‌ಸಿಬಿ ಪರ ಆಡಿದ್ದರು. ಹಾಗಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡ ಚೊಚ್ಚಲ ಕಪ್‌ ಗೆಲುವನ್ನು ವಿರಾಟ್‌ ಕೊಹ್ಲಿ ಜೊತೆ ಈ ಇಬ್ಬರೂ ಸಂಭ್ರಮಿಸಿದ್ದರು.

ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್‌ ಅವರು ಇಬರು ಆರ್‌ಸಿಬಿ ತಂಡದ ಪರ ದೀರ್ಘಾವಧಿ ಆಡುವ ಮೂಲಕ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆದರೆ, 2024ರಲ್ಲಿ ವಿರಾಟ್‌ ಕೊಹ್ಲಿ ಅವರು, ಎಬಿ ಡಿವಿಲಿಯರ್ಸ್‌ ಅವರ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದರು. ಕ್ರಿಕೆಟ್‌. ಕಾಮ್‌ ಜೊತೆ ಮಾತನಾಡಿದ ಎಬಿಡಿ, ಈ ವಿಷಯವನ್ನು ರಿವೀಲ್‌ ಮಾಡಿದ್ದಾರೆ. ಅಲ್ಲದೆ ಅವರು ಮತ್ತೆ ಯಾವಾಗ ತಮ್ಮ ಜತೆ ಮಾತನಾಡುವುದನ್ನು ಮುಂದುವರಿಸಿದ್ದರು ಎಂಬುದನ್ನು ತಿಳಿಸಿದ್ದಾರೆ.

"ನಾವಿಬ್ಬರೂ ಒಂದೇ ಮನಸ್ಥಿತಿಯನ್ನು ಹೊಂದಿದ್ದೆವು, ಹಾಗಾಗಿ ನಾನು ಅದರ ಬಗ್ಗೆ ಮಾತನಾಡಿದ್ದೆ. ಆರು ತಿಂಗಳುಗಳ ಕಾಲ ಅವರು ನನ್ನ ಜತೆ ಸಂಪರ್ಕದಲ್ಲಿದ್ದರು. ದೇವರಿಗೆ ಧನ್ಯವಾದಗಳು, ಏಕೆಂದರೆ ಇತ್ತೀಚೆಗೆ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾಗ ನಾನು ಸ್ವಲ್ಪ ಎಡವಿದ್ದೆ. ಅವರು ನನ್ನ ಬಳಿ ಮತ್ತೇ ಮಾತನಾಡಲು ಆರಂಭಿಸಿದಾಗ ನಾನು ನಿರಾಳವಾಗಿದ್ದೆ," ಎಂದು ಎಬಿ ಡಿ ವಿಲಿಯರ್ಸ್‌ ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಹಾದಿ ಸರಿಯಿಲ್ಲ ಎಂದ ರವಿ ಶಾಸ್ತ್ರಿ!

ಕಳೆದ ವರ್ಷ ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು ವಿರಾಟ್‌ ಕೊಹ್ಲಿ ಕಳೆದುಕೊಂಡಿದ್ದರು. 2024ರ ಫೆಬ್ರವರಿ 20 ರಂದು ಗಂಡು ಮಗು ಜನಿಸಿದೆ ಎಂದು ವಿರುಷ್ಕಾ ದಂಪತಿ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಪ್ರಕಟಿಸಿದ್ದರು. ಫೆಬ್ರವರಿ 15 ರಂದೇ ಅನುಷ್ಕಾ ಶರ್ಮಾಗೆ ಗಂಡು ಜನಿಸಿತ್ತು.

ಎಬಿ ಡಿ ವಿಲಿಯರ್ಸ್‌ ಏನು ಹೇಳಿದ್ದರು?

ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾಗೆ ಗಂಡು ಮಗು ಜನಿಸುವುದಕ್ಕೂ ಮುನ್ನ ಎಬಿ ಡಿ ವಿಲಿಯರ್ಸ್‌ ಅವರು, ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಗೆ ವಿರಾಟ್‌ ಕೊಹ್ಲಿ ಏಕೆ ಅಲಭ್ಯರಾಗುತ್ತಿದಾರೆಂದು ಬಹಿರಂಗಪಡಿಸಿದ್ದರು.

"ಹೌದು, ವಿರಾಟ್‌ ಕೊಹ್ಲಿಯ ಎರಡನೇ ಮಗು ಹಾದಿಯಲ್ಲಿದೆ. ಹೌದು, ಇದು ಕುಟುಂಬ ಸಮಯ ಹಾಗೂ ಅವರಿಗೆ ಈ ಸಮಯ ತುಂಬಾ ಮುಖ್ಯವಾಗಿದೆ. ನೀವು ನಿಮಗೆ ಸತ್ಯ ಮತ್ತು ಪ್ರಾಮಾಣಿಕರಲ್ಲದಿದ್ದರೆ, ನೀವು ಇಲ್ಲಿ ಏಕೆ ಇದ್ದೀರಿ ಎಂಬುದರ ಅರಿವು ತಪ್ಪುತ್ತದೆ. ಬಹುತೇಕ ಮಂಡಿ ಕುಟುಂಬಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾರೆ. ನೀವು ವಿರಾಟ್‌ ಕೊಹ್ಲಿ ಈವ ವಿಷಯದ ಮೇಲೆ ನಿರ್ಧರಿಸಲು ಸಾಧ್ಯವಿಲ್ಲ. ಹೌದು ಅವರನ್ನು ಕಳೆದುಕೊಳ್ಳುತ್ತಿದ್ದೇವೆ. ಆದರೆ, ಅವರು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ," ಎಂದು ಎಬಿ ಡಿ ವಿಲಿಯರ್ಸ್‌ ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ತಿಳಿಸಿದ್ದರು.

ಕುಚುಕು ಗೆಳೆಯ ವಿರಾಟ್‌ ಕೊಹ್ಲಿಗೆ ಎ ಬಿ ಡಿವಿಲಿಯರ್ಸ್‌ ವಿಶೇಷ ಸಂದೇಶ!

ನಂತರ ಕೆಲ ದಿನಗಳ ಬಳಿಕ ಮಾತನಾಡಿದ್ದ ಎಬಿಡಿ, "ಕುಟುಂಬ ಮೊದಲು ಆ ಮೇಲೆ ಕ್ರಿಕೆಟ್‌. ನನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ನಾನು ಭಯಾನಕ ತಪ್ಪು ಮಾಡಿದ್ದೇನೆ. ನಾನು ನೀಡಿದ್ದ ಮಾಹಿತಿ ತಪ್ಪು ಹಾಗೂ ಇದು ಸತ್ಯವಲ್ಲ. ಕೌಟುಂಬಿಕ ಕಾರಣಗಳಿಂದಾಗಿ ರಾಷ್ಟ್ರೀಯ ಕರ್ತವ್ಯಗಳಿಂದ ವಿರಾಮ ತೆಗೆದುಕೊಳ್ಳುವ ಹಕ್ಕು ವಿರಾಟ್‌ ಕೊಹ್ಲಿಗಿದೆ. ವಿರಾಟ್ ಕುಟುಂಬಕ್ಕೆ ಯಾವುದು ಒಳ್ಳೆಯದು ಎಂಬುದು ಮೊದಲು ಬರಬೇಕು ಎಂದು ನಾನು ಭಾವಿಸುತ್ತೇನೆ. ಅಲ್ಲಿ ಏನು ನಡೆಯುತ್ತಿದೆ ಎಂದು ಯಾರಿಗೂ ತಿಳಿದಿಲ್ಲ, ನಾನು ಅವರಿಗೆ ಶುಭ ಹಾರೈಸುತ್ತೇನೆ. ಅವರ ವಿರಾಮಕ್ಕೆ ಕಾರಣ ಏನೇ ಇರಲಿ, ಅವರು ಇದರಿಂದ ಬಲಶಾಲಿಯಾಗಿ, ಉತ್ತಮವಾಗಿ ಮತ್ತು ತಾಜಾವಾಗಿ ಹಿಂತಿರುಗಬಹುದೆಂದು ನಾನು ಭಾವಿಸುತ್ತೇನೆ, ”ಎಂದು ಅವರು ದೈನಿಕ್ ಭಾಸ್ಕರ್‌ಗೆ ತಿಳಿಸಿದ್ದರು.