ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ನಿವೃತ್ತಿ ಜೀವನ ನೆಮ್ಮದಿಯಿಂದ ಸಾಗಲಿ : ಡಿಪೋ ಮ್ಯಾನೇಜರ್ ಶ್ರೀನಿವಾಸಮೂರ್ತಿ

ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು ಕುಟುಂಬಸ್ಥರಂತೆ ವಿಶ್ವಾಸದಿಂದ ಪ್ರೀತಿಪೂರ್ವಕ ಮಾತುಗಳ ನ್ನಾಡುತ್ತಾ ತಮ್ಮ ಕರ್ತವ್ಯದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಎಚ್ಚರವಹಿಸಿ ತಮ್ಮ ಕರ್ತವ್ಯ ನಿಷ್ಠೆಯನ್ನು ಮೆರೆದಂತಹ ಟಿ.ಸಿ ಚಲಪತಿಯವರ ನಿವೃತ್ತಿ ಜೀವನ ಸುಖ ಶಾಂತಿ ನೆಮ್ಮದಿಯಿಂದ ಮತ್ತು ಉತ್ತಮ ಆರೋಗ್ಯದಿಂದ ಇರಬೇಕು. ಎಂದು ಕೆಎಸ್‌ಆರ್ಟಿಸಿ ಡಿಪೋ ಮ್ಯಾನೇಜರ್ ಶ್ರೀನಿವಾಸ್ ಮೂರ್ತಿಯವರು ಶುಭ ಹಾರೈಸಿದರು.

ನಿವೃತ್ತಿ ಜೀವನ ನೆಮ್ಮದಿಯಿಂದ ಸಾಗಲಿ

ಸೇವೆಯಿಂದ ನಿವೃತ್ತರಾದ ಚಲಪತಿ ಅವರಿಗೆ ಏರ್ಪಡಿಸಿದ್ಧ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಡಿಪೋ ಮೇನೇಜರ್ ಶ್ರೀನಿವಾಸಮೂರ್ತಿ ಅವರು ಮಾತನಾಡಿದರು.

Profile Ashok Nayak Jun 4, 2025 11:09 AM

ಬಾಗೇಪಲ್ಲಿ : ಕಪ್ಪು ಚುಕ್ಕೆ ರಹಿತ ನಿವೃತ್ತಿ ಪ್ರತಿಯೊಬ್ಬ ಸರಕಾರ ನೌಕರರ ಕನಸಾಗಿರುತ್ತದೆ.ಈ ರೀತಿಯ ಕನಸನ್ನು ನನಸು ಮಾಡಿಕೊಂಡವರಲ್ಲಿ ಟ್ರಾಫಿಕ್ ಕಳಟ್ರೋಲರ್ ಚಲಪತಿ ಕೂಡ ಒಬ್ಬರಾಗಿದ್ದಾರೆ ಎಂದು ಡಿಪೋ ಮೇನೇಜರ್ ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಹೊರವಲಯದಲ್ಲಿನ ಹೊಸ ಗುಡ್ಡ ಸಮೀಪದ ಕೆಎಸ್‌ಆರ್ಟಿಸಿ ಬಸ್ ಡಿಪೋದಲ್ಲಿ ಇತ್ತೀಚಿಗೆ ತಮ್ಮ ಸುದೀರ್ಘ 39 ವರ್ಷದ ಸೇವೆಯಿಂದ ನಿವೃತ್ತರಾದ ಚಲಪತಿ ಅವರಿಗೆ ಏರ್ಪಡಿ ಸಿದ್ಧ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು ಕುಟುಂಬಸ್ಥರಂತೆ ವಿಶ್ವಾಸದಿಂದ ಪ್ರೀತಿಪೂರ್ವಕ ಮಾತುಗಳ ನ್ನಾಡುತ್ತಾ ತಮ್ಮ ಕರ್ತವ್ಯದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಎಚ್ಚರವಹಿಸಿ ತಮ್ಮ ಕರ್ತವ್ಯ ನಿಷ್ಠೆಯನ್ನು ಮೆರೆದಂತಹ ಟಿ.ಸಿ ಚಲಪತಿಯವರ ನಿವೃತ್ತಿ ಜೀವನ ಸುಖ ಶಾಂತಿ ನೆಮ್ಮದಿಯಿಂದ ಮತ್ತು ಉತ್ತಮ ಆರೋಗ್ಯದಿಂದ ಇರಬೇಕು. ಎಂದು ಕೆಎಸ್‌ಆರ್ಟಿಸಿ ಡಿಪೋ ಮ್ಯಾನೇಜರ್ ಶ್ರೀನಿವಾಸ್ ಮೂರ್ತಿಯವರು ಶುಭ ಹಾರೈಸಿದರು.

ಇದನ್ನೂ ಓದಿ: Chikkaballapur News: 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಸಕಲ ಸಿದ್ಧತೆ :ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಬಹುತೇಕ ಸರ್ಕಾರಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಆದರೆ ಚಲಪತಿ ಅಂತವರು ಎಷ್ಟೇ ಕಷ್ಟ ಬಂದರೂ ಎಂತದ್ದೇ ಸಮಸ್ಯೆ ಎದುರಾದರೂ ನಗುಮುಖದಿಂದ ಸಮಸ್ಯೆಗಳನ್ನ ಎದುರಿಸಿ ತಮ್ಮ ಸೇವಾನಿಷ್ಠೆಯನ್ನು ಮೆರೆದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಾತ್ರರಾಗುತ್ತಾರೆ. ಅದೇ ರೀತಿಯಲ್ಲಿ ಕೆ.ಎಸ್.ಆರ್.ಟಿ.ಸಿ ನಿಗಮದಲ್ಲಿ ನಿರಂತರವಾಗಿ ಜನರೊಂದಿಗೆ ಬೆರೆತು ಎಷ್ಟೇ ಮಾನಸಿಕವಾಗಿ ಒತ್ತಡಕ್ಕೆ ಗುರಿಯಾದರೂ ಅದನ್ನು ಮೇಲೆ ತೋರಿಸಿಕೊಳ್ಳದೆ ಸಹನೆಯಿಂದ ಕರ್ತವ್ಯ ನಿಭಾಯಿಸಿ, ವಿವಿಧ ಹುದ್ದೆಗಳನ್ನು ಅಲ್ಲಕರಿಸಿ ನಿವೃತ್ತಿ ಪಡೆಯುತ್ತಿದ್ದಾರೆ.ಹಾಗಾಗಿ ಭಗವಂತನು ಅವರಿಗೆ ಉತ್ತಮ ಆರೋಗ್ಯದ ಜತೆಗೆ ದೀರ್ಘಾಯುಷ್ಯವನ್ನು ನೀಡಲಿ, ನಿವೃತ್ತಿ ಜೀವನ ಸಂತಸದಿAದ ಸಾಗಲಿ ಎಂದರು.

ಈ ಸಂದರ್ಭದಲ್ಲಿ ರಾಜಕುಮಾರ್, ನಾಯ್ಡು, ಖಾಲಿದ್, ಭ?ರವುಡು, ಗಣೇಶ್, ವೇಣುಗೋಪಾಲ, ಶ್ರೀರಾಮ ಟಿ.ವಿ., ಎಂ.ಬಿ.ಲಕ್ಷ್ಮೀನರಸಿಂಹಪ್ಪ, ಕಾಮಿರೆಡ್ಡಿ,  ನರೇಶ್, ಲಘುಮಪ್ಪ, ಮಂಜುನಾಥ, ರವಿ, ಸೇರಿದಂತೆ ಹಲವಾರು ಕೆ.ಎಸ್.ಆರ್.ಟಿ.ಸಿ. ಚಾಲಕರು ಹಾಗು ನಿರ್ವಾಹಕರು ಹಾಜರಿದ್ದರು.