ಪರಿಸರ ಉಳಿಸಿ ಬೆಳಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು: ನ್ಯಾ.ಗಣೇಶ್
ಪರಿಸರ ನಮ್ಮ ಜೀವನ ಅಂಗ ವಾಗಿದೆ ನಿತ್ಯ ನಾವು ಸೇವಿಸುವ ಗಾಳಿ ಶುದ್ದವಾಗಿರಬೇಕು. ಜಲ ನೆಲ ಗಿಡಗಳನ್ನು ನೆಟ್ಟು ಇವುಗಳ ಸಂರಕ್ಷಣ ಮಾಡಬೇಕಿದೆ. ಸಂವಿಧಾನದಲ್ಲಿ ಪರಿಸರ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ ಪರಿಸರಕ್ಕೆ ಧಕ್ಕೆ ಮಾಡಿದರೆ ಕಾನೂನುನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಉದಾ,ಮರಗಿಡಗಳ ಕಡಿವುದು ಪರಿಸರ ಮಾಲಿನ್ಯ ಮಾಡುವುದು ಅಪರಾಧವಾಗಿದೆ


ಗೌರಿಬಿದನೂರು: ಪರಿಸರವನ್ನು ಉಳಿಸಿ ಮನುಕುಲಕ್ಕೆ ಮುಂದಿನ ಪೀಳಿಗೆಗೆ ಇದನ್ನು ನಾವು ಬಳುವಳಿಯಾಗಿ ನೀಡುವುದು ನಮ್ಮಲ್ಲ ಆದ್ಯ ಕರ್ತವ್ಯವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಗಣೇಶ್ ತಿಳಿಸಿದರು.
ಅವರು ಇಂದು ನಗರದ ಹೊರವಲಯದಲ್ಲಿರುವ ಪ್ರಥಮ ದರ್ಜೆ ಕಾಲೇಜ್ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಪರಿಸರ ನಮ್ಮ ಜೀವನ ಅಂಗ ವಾಗಿದೆ ನಿತ್ಯ ನಾವು ಸೇವಿಸುವ ಗಾಳಿ ಶುದ್ದವಾಗಿರಬೇಕು. ಜಲ ನೆಲ ಗಿಡಗಳನ್ನು ನೆಟ್ಟು ಇವುಗಳ ಸಂರಕ್ಷಣ ಮಾಡಬೇಕಿದೆ. ಸಂವಿಧಾನದಲ್ಲಿ ಪರಿಸರ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ ಪರಿಸರಕ್ಕೆ ಧಕ್ಕೆ ಮಾಡಿದರೆ ಕಾನೂನುನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಉದಾ,ಮರಗಿಡಗಳ ಕಡಿವುದು ಪರಿಸರ ಮಾಲಿನ್ಯ ಮಾಡುವುದು ಅಪರಾಧವಾಗಿದೆ ಎಂದರು.
ಇದನ್ನೂ ಓದಿ: Chikkaballapur News: ಬಾಗೇಪಲ್ಲಿ: ಶಾಸಕರಿಂದ ಬಿತ್ತನೆ ಬೀಜ ವಿತರಣೆ
ಹೆಚ್ಚುವರಿ ಸಿವಿಲ್ ನ್ಯಾಯದೀಶೆ ಪುಷ್ಟ ಮಾತನಾಡಿ ಪರಿಸರ ಉಳಿಸುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಪ್ಲಾಸ್ಟಿಕ್ ಬಳಕೆ ನಿಷೇದ ಮಾಡಬೇಕು ತಯಾರಿಕೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು ನಾವು ನಿತ್ಯ ಪ್ಲಾಸ್ಟಿಕ್ ಉತ್ಪನ್ನ ತ್ಯಜೀಸಬೇಕು,ಇಂದಿನ ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.
ಇದೇ ವೇಳೆಯಲ್ಲಿ ಪರಿಸರ ವಾದಿ ಚೌಡಪ್ಪ ಪರಿಸರದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣ ನ್ಯಾಯದೀಶೆ ಗೀತಾ ಕುಂಬಾರ್. ತಹಸೀಲ್ದಾರ್ ಮಹೇಶ್ ಪತ್ರಿ ಇಓ ಹೊನ್ನಯ್ಯ, ಪೌರಾಯುಕ್ತೆ ಡಿಎಂ, ಗೀತಾ, ಪಿಸ್ಟೆೈ ಗೋಪಾಲ್ ವಕೀಲ ಸಂಘದ ಅಧ್ಯಕ್ಷ ದೀನೇಶ್, ಕಾರ್ಯದರ್ಶಿ ಬಿ,ಲಿಂಗಪ್ಪ ಎಂ,ಅರ್, ಲಕ್ಷ್ಮೀ ನಾರಾಯಣ್, ಕಾಲೇಜ್ ಪ್ರಾಂಶುಪಾಲ ಮಂಜುನಾರ್ ಅರಣ್ಯ ಅಧಿಕಾರಿಗಳು ನ್ಯಾಯಲಯ ಸಿಬ್ಬಂದಿಗಳು ಭಾಗವಹಿಸಿದ್ದರು.