ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಆರೋಗ್ಯಕರ ಜೀವನಕ್ಕೆ ಯೋಗಾಭ್ಯಾಸ ಪ್ರಮುಖ ಸಾಧನ : ಸೀಕಲ್ ರಾಮಚಂದ್ರ ಗೌಡ

ವಿಶ್ವಸಂಸ್ಥೆಯು ಈ ಬಾರಿ ಒಂದು ಭೂಮಿ ಎಲ್ಲರ ಆರೋಗ್ಯಕ್ಕಾಗಿ ಯೋಗ ಎನ್ನುವ ಘೋಷ ವಾಕ್ಯ ದೊಂದಿಗೆ 11ನೇ ಯೋಗ ದಿನಾಚರಣೆ ಆಚರಿಸಲು ಸೂಚನೆ ನೀಡಿದೆ. ಇದನ್ನು ಮನಗಂಡು ಶಾಲಾ ಕಾಲೇಜು ಹಂತದಿಂದಲೇ ಯೋಗಭ್ಯಾಸದಂತೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳ ಬೇಕು

ಆರೋಗ್ಯಕರ ಜೀವನಕ್ಕೆ ಯೋಗಭ್ಯಾಸ ಪ್ರಮುಖ ಸಾಧನ

ಭಾರತೀಯತೆ ಮತ್ತು  ಆರೋಗ್ಯಕರ ಜೀವನಕ್ಕೆ ಯೋಗವೇ ದಿವ್ಯೌಷಧಿಯಾಗಿದೆ ಎಂಬುದನ್ನು ನಮ್ಮ ಪೂರ್ವಿಕರು ಕಂಡುಕೊAಡಿದ್ದರು.ನರೇAದ್ರ ಮೋದೀಜಿ ಪ್ರಧಾನಿ ಆದ ನಂತರ ಇದಕ್ಕೆ ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರಚುರಪಡಿಸಲಾಯಿತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

Profile Ashok Nayak Jun 23, 2025 12:47 PM

ಚಿಕ್ಕಬಳ್ಳಾಪುರ : ಭಾರತೀಯತೆ ಮತ್ತು ಆರೋಗ್ಯಕರ ಜೀವನಕ್ಕೆ ಯೋಗವೇ ದಿವ್ಯೌಷಧಿಯಾಗಿದೆ ಎಂಬುದನ್ನು ನಮ್ಮ ಪೂರ್ವಿಕರು ಕಂಡುಕೊಂಡಿದ್ದರು. ನರೇಂದ್ರ ಮೋದೀಜಿ ಪ್ರಧಾನಿ ಆದ ನಂತರ ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಲಾಯಿತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ಚಿಕ್ಕಬಳ್ಳಾಪುರ ನಗರದ ಪಂಚಗಿರಿ ಬೋಧನ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿಶ್ವಸಂಸ್ಥೆಯು ಈ ಬಾರಿ ಒಂದು ಭೂಮಿ ಎಲ್ಲರ ಆರೋಗ್ಯಕ್ಕಾಗಿ ಯೋಗ ಎನ್ನುವ ಘೋಷ ವಾಕ್ಯದೊಂದಿಗೆ 11ನೇ ಯೋಗ ದಿನಾಚರಣೆ ಆಚರಿಸಲು ಸೂಚನೆ ನೀಡಿದೆ. ಇದನ್ನು ಮನಗಂಡು ಶಾಲಾ ಕಾಲೇಜು ಹಂತದಿಂದಲೇ ಯೋಗಭ್ಯಾಸದಂತೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳ ಬೇಕು ಎಂದರು.

ಇದನ್ನೂ ಓದಿ: Chikkaballapur News: ಜ್ಞಾನಾಂಕುರ ಕಾರ್ಯಕ್ರಮ ಚುಂಚಶ್ರೀ ಚಾಲನೆ

ಆರೋಗ್ಯವೇ ಮಹಾಭಾಗ್ಯ, ಸದೃಢ ದೇಹ ಆರೋಗ್ಯಕರ ಜೀವನಕ್ಕೆ ಮತ್ತು ಮನಸ್ಸಿಗಾಗಿ ಯೋಗ ಮುಖ್ಯ. ಪ್ರತಿಯೊಬ್ಬರು ದಿನಕ್ಕೆ ಒಂದಿಷ್ಟು ಸಮಯವನ್ನು ಯೋಗ ಮಾಡಕ್ಕೆ ಮೀಸಲಿಡಬೇಕು ಎಂದರು.

ಯೋಗ ಭಾರತದ ಸಂಸ್ಕೃತಿ ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ. ನಮ್ಮ ದೇಶ ಯೋಗಾಭ್ಯಾಸವನ್ನು ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದೆ. ಪ್ರತಿದಿನ ಮುಂಜಾನೆ ಯೋಗ ಮಾಡುವುದನ್ನು ಜೀವನದಲ್ಲಿ ರೂಡಿಸಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ದಿನನಿತ್ಯದ ಕೆಲಸ ಕಾರ್ಯಗಳನ್ನು ಯಾವುದೇ ಒತ್ತಡಗಳಿಗೆ ಒಳಗಾಗದೆ ಮಾಡಲು ಸಹಕಾರಿಯಾಗಲಿದೆ. ಜೀವನ ಶಾಂತಿಗಾಗಿ ಯೋಗವು ಪ್ರಬಲ ಸಾಧನವಾಗಿ ಮುಂದುವರೆದಿದೆ. ಯೋಗವು ದೇಹವನ್ನು ಬಲಪಡಿಸುತ್ತದೆ,ಮನಸ್ಸನ್ನು ಶಾಂತಗೊಳಿಸುತ್ತದೆ. ದೈನಂದಿನ ಜೀವನದಲ್ಲಿ ಅರಿವು ಮತ್ತು ಜವಾಬ್ದಾರಿಯ ಉನ್ನತ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಿ.ಪಿ.ಹೆಚ್.ಎಸ್ ಶಾಲೆಯ ಸಿಬ್ಬಂದಿ ವರ್ಗ ಹಾಗು ಬಿಜೆಪಿ ಮುಖಂಡರಾದ ಹೆಚ್.ಎಸ್.ಮುರಳಿಧರ್, ಮಧುಸೂಧನ, ಮಧುಚಂದ್ರ, ಸಂತೋಷ್, ಟೈಲರ್ ಶ್ರೀನಿವಾಸ್, ಪ್ರೇಮ ಲೀಲಾ, ಕಲಾವತಿ, ನಾಗರಾಜ್, ನರೇಂದ್ರ, ಅನು ಆನಂದ್, ಅಜಯ್ ಪಾಲ್ ಸಿಂಗ್, ವಕೀಲರಾದ ಶ್ರೀನಿವಾಸ್ ಇತರರು ಹಾಜರಿದ್ದರು.