ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆಧ್ಯಾತ್ಮ, ಯೋಗ ಎರಡೂ ಸಹ ಜೀವನದಲ್ಲಿ ಪ್ರಮುಖ ಪಾತ್ರ ಹೊಂದಿದೆ

ಆಧ್ಯಾತ್ಮ ವಿಚಾರವೇ ಇರಲಿ ಅಥವಾ ಇನ್ಯಾವುದೇ ಕಾರ್ಯವೇ ಆಗಲಿ ಸತಿ ಪತಿಯರು ಒಗ್ಗಟ್ಟಾಗಿ ಮಾಡಿದರೆ ಮಾತ್ರ ಅದಕ್ಕೆ ತಕ್ಕ ಫಲ ಸಿಗಲಿದೆ. ಆಧ್ಯಾತ್ಮ, ಯೋಗ ಎರಡೂ ಸಹ ಜೀವನದಲ್ಲಿ ಪ್ರಮುಖ ಪಾತ್ರ ಹೊಂದಿದ್ದು ಅದು ನಮಗೆಲ್ಲ ಅವಶ್ಯ ಮತ್ತು ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ನಮ್ಮಲ್ಲಿ ಸಂಜೆ ಹಾಗೂ ಬೆಳಗ್ಗೆ ಯೊಇಗ ತರಗತಿಯೂ ಸಹ ನಡೆಯಲಿದೆ

ಆಧ್ಯಾತ್ಮ, ಯೋಗ ಎರಡೂ ಸಹ ಜೀವನದಲ್ಲಿ ಪ್ರಮುಖ ಪಾತ್ರ ಹೊಂದಿದೆ

Profile Ashok Nayak Jun 24, 2025 11:14 PM

ಶಿರಸಿ: ನಗರದ ಈಶ್ವರೀಯ ವಿವಿಯಲ್ಲಿಂದು ವಿವಿಯ ಹಿರಿಯ ಅಡ್ಮಿನಿಸ್ಟ್ರೇಟ್ ಅವರ ದಿನದ ಅಂಗವಾಗಿ ವಿಶೇಷ ಸನ್ಮಾನ, ಗೌರವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈಶ್ವರೀಯ ವಿವಿ ಯ ಪ್ರಾಂಶುಪಾಲೆ ವೀಣಾಜಿ ಮಾತನಾಡಿ, ಆಧ್ಯಾತ್ಮ ವಿಚಾರವೇ ಇರಲಿ ಅಥವಾ ಇನ್ಯಾವುದೇ ಕಾರ್ಯವೇ ಆಗಲಿ ಸತಿ ಪತಿಯರು ಒಗ್ಗಟ್ಟಾಗಿ ಮಾಡಿದರೆ ಮಾತ್ರ ಅದಕ್ಕೆ ತಕ್ಕ ಫಲ ಸಿಗಲಿದೆ. ಆಧ್ಯಾತ್ಮ, ಯೋಗ ಎರಡೂ ಸಹ ಜೀವನದಲ್ಲಿ ಪ್ರಮುಖ ಪಾತ್ರ ಹೊಂದಿದ್ದು ಅದು ನಮಗೆಲ್ಲ ಅವಶ್ಯ ಮತ್ತು ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ನಮ್ಮಲ್ಲಿ ಸಂಜೆ ಹಾಗೂ ಬೆಳಗ್ಗೆ ಯೊಇಗ ತರಗತಿಯೂ ಸಹ ನಡೆಯಲಿದೆ ಎಂದರು.

ಇದನ್ನೂ ಓದಿ: Sirsi News: ಸಂಚಾರ ದಟ್ಟಣೆ ತಡೆಯಲು ರಸ್ತೆಯ ಮಧ್ಯದಲ್ಲಿಯ ಹೊಂಡ ಮುಚ್ಚಿದ ಪೊಲೀಸ್ ಸಿಬ್ಬಂದಿ

ಕಾರ್ಯಕ್ರಮಕ್ಕೆ ಚಾಲನೆ ನೀಟಿದ ಕೆ ಎಸ್ ಆರ್ ಟಿಸಿ ಶಿರಸಿ ವಿಭಾಗೀಯ ಡಿಸಿ ಬಸವರಾಜ ಮಾತನಾಡಿ, ಆದ್ಯಾತ್ಮದ ಒಲವನ್ನು ಹೆಚ್ಚಿಸುವಲ್ಲಿ ಈಶ್ವರೀಯ ವಿವಿ ಸಾಕಷ್ಟು ಛಾಪನ್ನು ಮೂಡಿಸುತ್ತಿದ್ದು, ಇದು ಸದಾಕಾಲ ಅವಶ್ಯವಿರುವಂತದ್ದು ಆದ್ಯಾತ್ಮ ಶಕ್ತಿ. ಮಾನಸಿಕ ಆರೋಗ್ಯಕ್ಕೆ ಶಾಂತಿ ಅವಶ್ಯವಿದ್ದು ಇಂಥ ಸಂಸ್ಥೆಯಿಂದ ಜೀವನದಲ್ಲಿ ಶಾಂತಿ ನೆಮ್ಮದಿ ಮಾನಸಿಕ ಬೌತಿಕ ಶಕ್ತಿ ದೊರೆಯಲಿದೆ ಎಂದರು.

ಈ ಸಂದರ್ಭದಲ್ಲಿ ಹಲವು ಯೋಗ ಶಿಕ್ಷರನ್ನು ಗೌರವಿಸಲಾಯಿತು.