ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʼʼಕೊಡಗಿನ ಹುಡುಗಿ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿರುವ ಹಿಂದಿದೆ ಕಠಿಣ ಪರಿಶ್ರಮʼʼ: ರಶ್ಮಿಕಾ ಮಂದಣ್ಣಗೆ ಧನುಷ್‌ ಮೆಚ್ಚುಗೆ

Kuberaa Movie: ಈ ವರ್ಷದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ ʼಕುಬೇರʼ ಜೂ. 20ರಂದು ತೆರೆಗೆ ಬರಲಿದೆ. ನಾಗಾರ್ಜುನ-ಧನುಷ್‌-ರಶ್ಮಿಕಾ ಮಂದಣ್ನ ಮೊದಲ ಬಾರಿಗೆ ಜತೆಯಾಗುತ್ತಿರುವ ಈ ಚಿತ್ರಕ್ಕೆ ಶೇಖರ್‌ ಕಮ್ಮುಲ ನಿರ್ದೇಶನದವಿದೆ. ಕುತೂಹಲ ಕೆರಳಿಸಿದ ಈ ಚಿತ್ರದ ಟ್ರೈಲರ್‌ ಇದೀಗ ಸದ್ದು ಮಾಡುತ್ತಿದೆ.

ರಶ್ಮಿಕಾ ಮಂದಣ್ಣಗೆ ಧನುಷ್‌ ಮೆಚ್ಚುಗೆ

ಧನುಷ್‌ ಮತ್ತು ರಶ್ಮಿಕಾ ಮಂದಣ್ಣ.

Profile Ramesh B Jun 16, 2025 9:13 PM

ಚೆನ್ನೈ: ʼʼರಶ್ಮಿಕಾ ಮಂದಣ್ಣ (Rashmika Mandanna) ಅಭಿನಯಿಸಿದರೆ ಆ ಚಿತ್ರದ ಅದೃಷ್ಟವೇ ಬದಲಾಗುತ್ತದೆ ಎನ್ನುವ ಮಾತಿದೆ. ನನ್ನ ಪ್ರಕಾರ ಅವರು ಕಠಿಣ ಪರಿಶ್ರಮದಿಂದಲೇ ಈ ಮಟ್ಟಕ್ಕೆ ಬೆಳೆದಿದ್ದಾರೆ. ಪ್ಯಾನ್‌ ಇಂಡಿಯಾ ಸ್ಟಾರ್‌ವರೆಗಿನ ಅವರ ಸಿನಿಜರ್ನಿ ನಿಜಕ್ಕೂ ಅದ್ಭುತʼʼ- ರಶ್ಮಿಕಾ ಮಂದಣ್ಣ ಅವರನ್ನು ಕಾಲಿವುಡ್‌ ಸೂಪರ್‌ ಸ್ಟಾರ್‌ ಧನುಷ್‌ (Dhanush) ಹೊಗಳಿದ ಪರಿ ಇದು. ಧನುಷ್‌-ನಾಗಾರ್ಜುನ-ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಒಂದಾಗುತ್ತಿರುವ, ಶೇಖರ್‌ ಕಮ್ಮುಲ (Sekhar Kammula) ನಿರ್ದೇಶನದ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ ʼಕುಬೇರʼ (Kuberaa Movie) ಜೂ. 20ರಂದು ತೆರೆಗೆ ಬರಲಿದ್ದು, ಪ್ರಚಾರ ಕಾರ್ಯ ಆರಂಭವಾಗಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಸಿನಿಮಾದ ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಮ್ಮ ಕಠಿಣ ಪರಿಶ್ರಮದಿಂದಲೇ ರಶ್ಮಿಕಾ 2,000 ಕೋಟಿ ರೂ. ಗಳಿಸಿದ ಚಿತ್ರದ ನಾಯಕಿ ಎನಿಸಿಕೊಂಡಿದ್ದಾರೆ. ಕೊಡಗಿನಂತಹ ಚಿಕ್ಕ ನಗರದಲ್ಲಿ ಜನಿಸಿ ಪ್ಯಾನ್‌ ಇಂಡಿಯಾ ಸ್ಟಾರ್‌ ಪಟ್ಟಕ್ಕೇರಿದ ಅವರ ಪಯಣ ನಿಜಕ್ಕೂ ಸ್ಫೂರ್ತಿದಾಯಕ ಎಂದು ಅವರು ಕನ್ನಡದ ಕುವರಿಯನ್ನು ಮನಸಾರೆ ಹೊಗಳಿದರು.

ʼಕುಬೇರʼ ಚಿತ್ರದ ಟ್ರೈಲರ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Kubera Movie: 2025 ಕೂಡ ರಶ್ಮಿಕಾ ವರ್ಷ; ಧನುಷ್‌ ಜತೆಗಿನ ʼಕುಬೇರʼ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

ಧನುಷ್‌ ಹೇಳಿದ್ದೇನು?

ʼʼರಶ್ಮಿಕಾ ನೀವು 1,000 ಕೋಟಿ ರೂ., 2,000 ಕೋಟಿ ರೂ. ಕ್ಲಬ್‌, ನ್ಯಾಶನಲ್‌ ಕ್ರಶ್‌ ಮುಂತಾದ ಬಿರುದು ಮರೆತು ಬಿಡಿ. ನೀವು ಸಿನಿಮಾದಲ್ಲಿದ್ದರೆ ಅದೊಂದು ಅದೃಷ್ಟ ಎಂದು ಕೆಲವರು ಹೇಳುತ್ತಾರೆ. ಆದರೆ ನನ್ನ ಪ್ರಕಾರ ಈ ಅದೃಷ್ಟ ತಾನಾಗಿ ಒಲಿದದ್ದಲ್ಲ. ಇದರ ಹಿಂದೆ ನಿಮ್ಮ ಕಠಿಣ ಪರಿಶ್ರಮವಿದೆ. ಇಂದು ನೀವು ಈ ಎಲ್ಲ ಬಿರುದು ಪಡೆಯಲು ನೀವು ಪಟ್ಟ ಪರಿಶ್ರಮವೇ ಕಾರಣ. ಇದು ನಿಜಕ್ಕೂ ಅದ್ಭುತ. ನೀವು 2,000 ಕೋಟಿ ರೂ. ಕ್ಲಬ್‌ ಸೇರಿದ್ದೀರಿ ಮತ್ತು ಆ ಮೂಲಕ ನಿಮ್ಮದೇ ಆದ ಅದೃಷ್ಟದ ದಾರಿ ಕಂಡುಕೊಂಡಿದ್ದೀರಿ. ಚಿಕ್ಕ ಹುಡುಗಿ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಬೆಳೆದ ರೀತಿ ನಿಜಕ್ಕೂ ಸೋಜಿಗ ಹುಟ್ಟಿಸುವಂತಹದ್ದು. ದೇವರು ಒಳ್ಳೆಯದು ಮಾಡಲಿ. ನಿಮ್ಮ ಮುಂದಿನ ಎಲ್ಲ ಚಿತ್ರಗಳು ಹಿಟ್‌ ಆಗಲಿʼʼ ಎಂದು ಧನುಷ್‌ ಹಾರೈಸಿದರು.

ಇನ್ನು ʼಕುಬೇರʼ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಟಾಲಿವುಡ್‌ನ ಹಿರಿಯ ನಟ ನಾಗಾರ್ಜುನ ಅವರಿಗೂ ಧನ್ಯವಾದ ಅರ್ಪಿಸಿದರು. ʼʼಇಂತಹ ಒಂದು ಒಳ್ಳೆಯ ಅನುಭವ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮಿಂದ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡೆ. ನಿಮ್ಮ ಚಿತ್ರಗಳನ್ನು ನೋಡಿಕೊಂಡೇ ಬೆಳೆದವರು ನಾವು. ನಿಮ್ಮೊಂದಿಗೆ ತೆರೆ ಹಂಚಿಕೊಳ್ಳಲು ಸಾಧ್ಯವಾಗಿದ್ದು ನನ್ನ ಅದೃಷ್ಟ. ನನ್ನ ಸಹೋದರಿ ನಿಮ್ಮ ದೊಡ್ಡ ಫ್ಯಾನ್‌ʼʼ ಎಂದು ತಿಳಿಸಿದರು.

ಟ್ರೈಲರ್‌ ರಿಲೀಸ್‌

ಈಗಾಗಲೇ ನಿರೀಕ್ಷೆ ಹುಟ್ಟು ಹಾಕಿರುವ ʼಕುಬೇರʼ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದೆ. ಈ ಹಿಂದೆ ಹಾಡು ಮತ್ತು ಟೀಸರ್‌ನಿಂದಲೇ ಗಮನ ಸೆಳೆದಿದ್ದ ಈ ಸಿನಿಮಾ ಇದೀಗ ಟ್ರೈಲರ್ ಮೂಲಕ ಕುತೂಹಲ ಹೆಚ್ಚಿಸಿದೆ. ಧನುಷ್‌, ನಾಗಾರ್ಜುನ ಜತೆಗೆ ರಶ್ಮಿಕಾ ಮಂದಣ್ಣ ಪಾತ್ರವೂ ಹೈಲೈಟ್‌ ಆಗಿದೆ. ಈ ಚಿತ್ರ ಉಳ್ಳವರು ಮತ್ತು ಇಲ್ಲದವರ ನಡುವಿನ ಯುದ್ಧ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ರಶ್ಮಿಕಾ ಮಧ್ಯಮ ವರ್ಗದ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಇದು ತೆರೆಗೆ ಬರಲಿದೆ.