ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೈ ಹೊಸ ಸಾರಥಿಯ ಚಿಂತನೆ ಶುರು

ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭ ದಲ್ಲಿ ಪಕ್ಷದ ವರಿಷ್ಠರೊಂದಿಗೆ ಈ ವಿಚಾರ ಚರ್ಚೆ ನಡೆಸಲಾಗಿದ್ದು, ‘ಇನ್ನೆರಡು 3 ತಿಂಗಳಲ್ಲಿ ಕೆಪಿಸಿಸಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕಾಗುತ್ತದೆ’ ಎಂದು ಪಕ್ಷದ ವರಿಷ್ಠರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕೈ ಹೊಸ ಸಾರಥಿಯ ಚಿಂತನೆ ಶುರು

Profile Ashok Nayak Jun 16, 2025 7:54 AM

ಜಾರಕಿಹೊಳಿಗೆ ಹೈಕಮಾಂಡ್ ಸಂದೇಶ, ಗರಿಗೆದರಿದ ಚಟುವಟಿಕೆ, ಪದಾಧಿಕಾರಿಗಳ ಪಟ್ಟಿಗೆ ಆಪರೇಷನ್

ವಿಧಾನ ಪರಿಷತ್‌ಗೆ ನಾಲ್ವರು ಪರಿಣತರನ್ನು ನಾಮಕರಣ ಮಾಡುವುದಕ್ಕೆ ಸಂಬಂಧಿಸಿದ ಪಟ್ಟಿ ಪರಿಷ್ಕರಣೆ ಆಗುತ್ತಿರುವಾಗಲೇ ಕಾಂಗ್ರೆಸ್‌ನಲ್ಲಿ ಬದಲಾವಣೆ ಚರ್ಚೆಗಳು ಆರಂಭವಾಗಿವೆ. ಅಂದ ಹಾಗೆ ಇದು ಪದಾಧಿಕಾರಿಗಳ ನೇಮಕ ವಿಚಾರ. ಅಷ್ಟೇ ಅಲ್ಲ, ಹೊಸ ಅಧ್ಯಕ್ಷರ ವಿಚಾರವೂ ಇದರಲ್ಲಿ ಸೇರಿಕೊಂಡಿದೆ ಎನ್ನಲಾಗಿದೆ.

ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಕ್ಷದ ವರಿಷ್ಠರೊಂದಿಗೆ ಈ ವಿಚಾರ ಚರ್ಚೆ ನಡೆಸಲಾಗಿದ್ದು, ‘ಇನ್ನೆರಡು 3 ತಿಂಗಳಲ್ಲಿ ಕೆಪಿಸಿಸಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕಾಗುತ್ತದೆ’ ಎಂದು ಪಕ್ಷದ ವರಿಷ್ಠರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಇದೇ ವೇಳೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೂ ದೆಹಲಿಗೆ ಭೇಟಿ ಮಾಡಿ ಬಂದಿದ್ದು, ಹೈಕಮಾಂಡ್‌ನ ಅನೇಕ ನಾಯಕರ ಜತೆ ಮಾತನಾಡಿ ಬಂದಿದ್ದಾರೆ. ಈ ವೇಳೆ ‘ಮೂರು ಅಥವಾ ನಾಲ್ಕು ತಿಂಗಳು ಕಾಯಿರಿ. ನಂತರ ಬದಲಾವಣೆ ಮಾಡೋಣ’ ಎಂದು ವರಿಷ್ಠರು ಭರವಸೆ ನೀಡಿzರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಬಹಿರಂಗವಾಗಿ ಮಾತನಾಡುವುದನ್ನು ನಿಲ್ಲಿಸಿದ್ದು, ಮುಂದೆ ಪಕ್ಷದ ಸಾರಥ್ಯ ವಹಿಸಲು ಬೇಕಾದ ನಾಯಕರು, ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳ ಜತೆ ಸಂವಾದ ನಡೆಸುತ್ತಾ ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ.

ಇದನ್ನೂ ಓದಿ: Hari Paraak Column: ಧಾರಾವಾಹಿ ನಿರ್ಮಿಸುವ ಪ್ರೊಡಕ್ಷನ್‌ ಹೌಸ್:‌ ಸೋಪ್‌ ಫ್ಯಾಕ್ಟರಿ

ಅಂದ ಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಗ್ಯಾರಂಟಿಗಳ ಮೂಲಕ ಮನೆ ಮಾತಾಗಿದ್ದು, ಅದನ್ನು ಮತಗಳನ್ನಾಗಿ ಪರಿವರ್ತಿಸಿ ಬ್ಯಾಂಕ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಇನ್ನೂ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳು ನಡೆಯಬೇಕು. ಈ ನಿಟ್ಟಿನಲ್ಲಿ ಸಂಘಟನೆ ಬಲಪಡಿಸಬೇಕಿದ್ದು, ಇದಕ್ಕಾಗಿ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಿ ಅವರಲ್ಲಿ ಹುರುಪು ಮೂಡುವಂತೆ ಮಾಡಬೇಕೆಂದು ಹೈಕಮಾಂಡ್ ತಿರ್ಮಾನಿಸಿದೆ.

ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು, ಕೆಪಿಸಿಸಿಗೆ ಹೊಸ ಸಾರಥಿಯಾಗಿ ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವರ ಹೆಸರನ್ನು ಪಟ್ಟಿ ಮಾಡಿ ಕೈಯಲ್ಲಿಟ್ಟುಕೊಂಡಿದ್ದಾರೆ ಎಂದು ಪಕ್ಷದ ದೆಹಲಿ ಮೂಲಗಳು ತಿಳಿಸಿವೆ.

ಏನಿದು ಹೊಸ ಅಧ್ಯಕ್ಷರ ವಿಚಾರ?: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಪಕ್ಷದ ರಾಜ್ಯ, ಜಿಲ್ಲೆ ಮತ್ತು ತಾಲೂಕು ಪದಾಧಿಕಾರಿಗಳನ್ನು ಬದಲಾವಣೆ ಮಾಡುವ ಪ್ರಸ್ತಾಪ ವಾಗಿತ್ತು. ಆದರೆ ಆ ಸಂದರ್ಭದಲ್ಲಿ ಸಿದ್ಧಪಡಿಸಿದ್ದ ಪಟ್ಟಿಯಲ್ಲಿ ಅಪಾರ ಸಂಖ್ಯೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಹಂತದ ಪದಾಧಿಕಾರಿಗಳ ಪಟ್ಟಿ ತಯಾರಿಸಿಲಾಗಿತ್ತು. ಒಂದೇ ಹುದ್ದೆಗೆ 80 ರಿಂದ 100 ಮಂದಿಯನ್ನು ನೇಮಕ ಮಾಡಿ ಪಟ್ಟಿ ಸಿದ್ಧಪಡಿಸಲಾಗಿತ್ತು. ಅದನ್ನು ಪಕ್ಷದ ವರಿಷ್ಠರಿಗೂ ಸಲ್ಲಿಸಲಾಗಿತ್ತು. ಆದರೆ ಸರಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳೇ ಆದರೂ ಆ ಪಟ್ಟಿಗೆ ಮುಕ್ತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿ ಈ ವಿಚಾರವನ್ನು ಚರ್ಚಿಸಿದ್ದಾರೆ ಎನ್ನುವುದು ತಡವಾಗಿ ಗೊತ್ತಾಗಿದೆ. ಈ ಸಂದರ್ಭದಲ್ಲಿ ಈಗಾಗಲೇ ಸಲ್ಲಿಸಲಾಗಿರುವ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸಿ ಒಂದೇ ಹುದ್ದೆಗೆ ಅಪಾರ ಸಂಖ್ಯೆಯ ಮುಖಂಡರನ್ನು ನೇಮಕ ಮಾಡಿ ಅದರ ಮೌಲ್ಯ ಕುಸಿಯುವಂತೆ ಮಾಡುವ ಬದಲು ಅದರ ಘನತೆ ಹೆಚ್ಚಾಗುವಂತೆ ಪದಾಧಿಕಾರಿಗಳ ಸಂಖ್ಯೆಯನ್ನು ಕಡಿತಗೊಳಿಸಿ ಎಂದು ವರಿಷ್ಠರು ಸೂಚಿಸಿದ್ದರು ಎನ್ನಲಾಗಿದೆ.

ಇದೇ ವೇಳೆ ಇನ್ನು ಮೂರ‍್ನಾಲ್ಕು ತಿಂಗಳಲ್ಲಿ ಕೆಪಿಸಿಸಿ ಸಾರಥ್ಯವನ್ನು ಹೊಸಬರಿಗೆ ನೀಡುವ ಬಗ್ಗೆಯೂ ಆಲೋಚನೆ ಮಾಡಿ ಎಂದು ಹೇಳಿದ್ದರು. ಹೀಗಾಗಿ ಕಾಂಗ್ರೆಸ್ ಈಗ ವಿಧಾನ ಪರಿಷತ್‌ಗೆ ನಾಮಕರಣ ಮಾಡಬೇಕಾದ ನಾಲ್ವರ ಹೆಸರು ಪರಿಷ್ಕರಣೆ ಮಾಡುವ ಜತೆಗೆ ಪಕ್ಷದ ಪದಾಧಿಕಾರಿಗಳ ಪಟ್ಟಿಯನ್ನೂ ಪರಿಷ್ಕರಿಸಲು ಮುಂದಾಗಿದೆ. ಹಾಗೆಯೇ ಕೆಪಿಸಿಸಿ ಸಾರಥ್ಯವನ್ನು ಯಾರಿಗೆ ನೀಡಿದರೂ ಸೂಕ್ತ ಎನ್ನುವ ವಿಚಾರವನ್ನೂ ರಾಜ್ಯ ನಾಯಕರು ಚರ್ಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸತೀಶ್ ಜಾರಕಿಹೊಳಿ ಮೇಲೆ ಒಲವು: ಈ ತಕ್ಷಣಕ್ಕೆ ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸುವುದು ಅಷ್ಟೇನೂ ಸುಲಭದ ವಿಚಾರವಲ್ಲ. ಏಕೆಂದರೆ, ಇಲ್ಲಿ ಆಕಾಂಕ್ಷಿಗಳ ಗೊಂದವಿದೆ. ಅಧ್ಯಕ್ಷ ಗಾದಿ ಮೇಲೆ ಸದ್ಯ ಸಚಿವರಾದ ಸತೀಶ್ ಜಾರಕಿಹೊಳಿ, ಎಚ್.ಸಿ. ಮಹಾದೇವಪ್ಪ, ಎಂ.ಬಿ.ಪಾಟೀಲ, ಈಶ್ವರ್ ಖಂಡ್ರೆ, ಕೆ.ಎಚ್. ಮುನಿಯಪ್ಪ ಹಾಗೂ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕರು ಕಣ್ಣಿಟ್ಟಿ ದ್ದಾರೆ. ಆದರೆ ಈ ಆಕಾಂಕ್ಷಿ ಸಚಿವರೆ ಕೆಪಿಸಿಸಿ ಹುದ್ದೆ ಜತೆಗೆ ಮಂತ್ರಿ ಸ್ಥಾನವನ್ನೂ ಉಳಿಸಿಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಆದರೆ ಸತೀಶ್ ಜಾರಿಕಿಹೊಳಿ ಮಾತ್ರ ನನಗೆ ಕೆಪಿಸಿಸಿ ಹುದ್ದೆ ನೀಡಿದರೆ, ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧ ಎಂದು ಪಕ್ಷದ ವರಿಷ್ಠರಿಗೆ ಸ್ಪಷ್ಟವಾಗಿ ಹೇಳಿ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಪಕ್ಷದ ವರಿಷ್ಟರು ಸಚಿವ ಸ್ಥಾನ ತ್ಯಾಗ ಮಾಡುವವರ ಕಡೆ ಒಲವು ತೋರಿಸಿದ್ದು, ಉಳಿದವರ ಬಗ್ಗೆ ಅಷ್ಟಾಗಿ ಆಸಕ್ತಿ ಮೂಡುತ್ತಿಲ್ಲ ಎನ್ನಲಾಗಿದೆ.

ಅಷ್ಟಕ್ಕೂ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪರಿಶಿಷ್ಟ ಪಂಗಡದಿಂದ ಈತನಕ ಯಾರೊಬ್ಬರೂ ನೇಮಕ ವಾಗಿಲ್ಲ. ಆದ್ದರಿಂದ ಮೊದಲ ಬಾರಿಗೆ ಪರಿಶಿಷ್ಟ ಪಂಗಡದವರಿಗೆ ನೀಡುವ ಮೂಲಕ ಆ ಸಮಾಜಕ್ಕೆ ಸಂದೇಶ ರವಾನಿಸಬೇಕೆನ್ನುವ ಆಲೋಚನೆ ವರಿಷ್ಠರದು ಎನ್ನಲಾಗಿದೆ. ಹಾಗೆಯೇ ಹಿಂದುಳಿದ ವರ್ಗದವರಿಗೆ ಮತ್ತು ಲಿಂಗಾಯತ ಸಮಾಜದವರಿಗೂ ನೀಡಬೇಕೆನ್ನುವ ಕೂಗಿದೆ. ಈ ನಿಟ್ಟಿನಲ್ಲಿ ನಿರ್ಧಾರ ಮಾಡಿದರೆ ಅದು ನಾಯಕತ್ವ ಬದಲಾವಣೆ ಚರ್ಚೆಗೆ ದಾರಿ ಮಾಡುತ್ತದೆ ಎಂದು ಪಕ್ಷದ ವರಿಷ್ಠರು ಸೂಕ್ಷ್ಮವಾಗಿ ಅಲೋಚನೆ ಮಾಡುತ್ತಿದೆ ಎಂದು ಪಕ್ಷದ ಉನ್ನತ ಮೂಲ ಗಳು ತಿಳಿಸಿವೆ.

ಸತೀಶ್ ಮೇಲೆ ಒಲವು

ಕೆಪಿಸಿಸಿ ಹುದ್ದೆ ಜತೆಗೆ ಮಂತ್ರಿ ಸ್ಥಾನವನ್ನೂ ಉಳಿಸಿಕೊಡಿ ಎಂದು ಉಳಿದ ಆಕಾಂಕ್ಷಿಗಳು ಬೇಡಿಕೆ ಇಟ್ಟಿದ್ದು, ಸತೀಶ್ ಜಾರಿಕಿ ಹೊಳಿ ಮಾತ್ರ ನನಗೆ ಕೆಪಿಸಿಸಿ ಹುದ್ದೆ ನೀಡಿದರೆ, ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧ ಎಂದು ಪಕ್ಷದ ವರಿಷ್ಠರಿಗೆ ಸ್ಪಷ್ಟವಾಗಿ ಹೇಳಿ ಬಂದಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠರು ಸಚಿವ ಸ್ಥಾನ ತ್ಯಾಗ ಮಾಡುವವರ ಕಡೆ ಒಲವು ತೋರಿದ್ದಾರೆ ಎನ್ನಲಾಗಿದೆ.