Bhagya Lakshmi Serial: ಪೂಜಾ-ಕಿಶನ್ ಎಂಗೇಜ್ಮೆಂಟ್ ಕ್ಯಾನ್ಸಲ್?: ಸಕ್ಸಸ್ ಆಯ್ತು ಆದೀ-ಕನ್ನಿಕಾ ಪ್ಲ್ಯಾನ್?
ಕನ್ನಿಕಾ ಆದೀ ಬಳಿ ಬಂದು, ಈ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡೋಣ, ಈ ಸಂಬಂಧ ಬೇಡ ಎಂದು ಅವರೇ ಬಂದು ಹೇಳ್ತಾರ ನೋಡು ಅಣ್ಣ, ಅ ಥರದ ಶಾಕ್ ಕೊಟ್ಟು ಬಂದಿದ್ದೇನೆ ಎಂದು ಹೇಳುತ್ತಾಳೆ. ಅತ್ತ ಭಾಗ್ಯ ಮನೆಯಲ್ಲಿ ಟೆನ್ಶನ್ ಶುರುವಾಗಿದೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಪೂಜಾ-ಕಿಶನ್ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದೆ. ಸದ್ಯ ಎಂಗೇಜ್ಮೆಂಟ್ ಕಾರ್ಯ ಶುರುವಾಗಿದ್ದು, ಭಾಗ್ಯ ಮನೆಯವರು ತಯಾರಿಯಲ್ಲಿದ್ದಾರೆ. ಆದರೆ, ಆದೀಶ್ವರ್ ಮತ್ತು ಕನ್ನಿಕಾ ಈ ಎಂಗೇಜ್ಮೆಂಟ್ ಯಾವುದೇ ಕಾರಣಕ್ಕೂ ಆಗಬಾರದು ಎಂದು ಪ್ಲ್ಯಾನ್ ಮಾಡುತ್ತಿದ್ದಾರೆ. ಮತ್ತೊಂದೆಡೆ ರಾಮ್ದಾಸ್ ಕಾಮತ್ ಈ ಮದುವೆ ನಡೆದೇ ನಡೆಯುತ್ತದೆ ಎಂದು ಭಾಗ್ಯ ಫ್ಯಾಮಿಲಿಗೆ ಹೇಳಿದ್ದಾರೆ. ಇದರ ಮಧ್ಯೆ ಪೂಜಾಗೆ ಉಡಲು ಎಂಗೇಜ್ಮೆಂಟ್ ಸಾರಿ ಕೊಟ್ಟು ಬನ್ನಿ ಎಂದು ರಾಮ್ದಾಸ್ ಅವರು ಆದೀಶ್ವರ್ ಹಾಗೂ ಕನ್ನಿಕಾಳನ್ನು ಕಳುಹಿಸಿದ್ದಾರೆ. ಇಲ್ಲಿ ಕನ್ನಿಕಾ ಆಡಿದ ಮಾತು ಎಂಗೇಜ್ಮೆಂಟ್ ಕ್ಯಾನ್ಸಲ್ ಆಗುವ ಮಟ್ಟಕ್ಕೆ ಬಂದು ನಿಂತಿದೆ.
ಪೂಜಾಗೆ ಎಂಗೇಜ್ಮೆಂಟ್ಗೆ ಉಡಲು ಸೀರೆ ಕೊಡಬೇಕಲ್ಲ ಎಂದು ರಾಮ್ದಾಸ್ ಆದೀ ಮತ್ತು ಕನ್ನಿಕಾಳನ್ನು ಕರೆದು.. ಇದರಲ್ಲಿ ಒಂದು ಒಳ್ಳೆಯ ಸೀರೆಯನ್ನು ಸೆಲೆಕ್ಟ್ ಮಾಡಿ ಭಾಗ್ಯ ಮನೆಗೆ ಕೊಟ್ಟು ಬನ್ನಿ ಎಂದು ಹೇಳುತ್ತಾರೆ. ರಾಮ್ದಾಸ್ ಮಾತನ್ನು ಮೀರಲು ಸಾಧ್ಯವಾಗದೆ ಒಲ್ಲದ ಮನಸ್ಸಿನಿಂದ ಆದೀ-ಕನ್ನಿಕಾ ಸೀರೆ ತೆಗೆದುಕೊಂಡು ಪೂಜಾಗೆ ಕೊಡಲು ಭಾಗ್ಯ ಮನೆಗೆ ತೆರಳಿದ್ದಾರೆ. ತೆಗೋ ಪೂಜಾ ಇದು ನಮ್ಮ ಸಂಪ್ರದಾಯ.. ಅಪ್ಪ ಕೊಡೋಕೆ ಹೇಳಿದ್ದಾರೆ ಎಂದು ಆದೀಶ್ವರ್ ಪೂಜಾನ ಕೈಯಲ್ಲಿ ಸಾರಿ ಕೊಡುತ್ತಾನೆ.
ನಾವಿನ್ನು ಹೊರಡ್ತೀವಿ ಎಂದು ಇಬ್ಬರೂ ಎದ್ದು ಹೊರಹೋಗುತ್ತಾರೆ. ಆಗ ಭಾಗ್ಯ ಕೂಡ ಹೊರಬಂದಾಗ, ನೋಡಿ ನಾನೇ ಬಂದು ಸೀರೆ ಕೊಟ್ಟಿದ್ದೀನಿ ಅಂದ ಮಾತ್ರಕ್ಕೆ ಕಿಶನ್-ಪೂಜಾ ಮದುವೆಗೆ ನಾನು ಒಪ್ಪಿಗೆ ಸೂಚಿಸಿದ್ದೇನೆ ಅಂತ ಅರ್ಥ ಅಲ್ಲ. ಅಪ್ಪ ಫೋರ್ಸ್ ಮಾಡಿದ್ರು ಅದಕ್ಕೆ ಬಂದು ಕೊಟ್ಟಿದ್ದೀನಿ ಅಷ್ಟೆ.. ನನ್ಗೆ ನನ್ನ ಫ್ಯಾಮಿಲಿ ತುಂಬಾ ಇಂಪಾರ್ಟೆಂಟ್.. ಅದಕ್ಕೋಸ್ಕರ ಅಪ್ಪನಿಗೆ ಬೇಜಾರು ಆಗಬಾರದು ಅಂತ ಇಲ್ಲಿ ತನಕ ಬಂದು ಸಾರಿ ಕೊಟ್ಟಿದ್ದೀನಿ.. ಅದು ಬಿಟ್ರೆ ಡೋಂಟ್ ಥಿಂಕ್ ಯು ಆ್ಯವ್ ಒನ್ ಎಂದು ಕೈ ಸನ್ನೆ ಮಾಡಿ ಆದೀಶ್ವರ್ ಭಾಗ್ಯಾಗೆ ಹೇಳಿದ್ದಾನೆ.
ಇದಾದ ಬಳಿಕ ಆದೀ-ಕನ್ನಿಕಾ ಕಾರು ಬಳಿ ಬರುತ್ತಾರೆ.. ಆಗ ಕನ್ನಿಕಾ ಒಂದು ನಿಮಿಷ ಬಂದೆ ಎಂದು ಪುನಃ ಭಾಗ್ಯ ಮನೆಗೆ ಹೋಗಿ, ಭಾಗ್ಯ ಈ ಎಂಗೇಜ್ಮೆಂಟ್ ಅದ್ಧೂರಿಯಾಗಿ- ಗ್ರ್ಯಾಂಡ್ ಆಗಿ ನಡಿಬೇಕು.. 3-4 ಲಕ್ಷದ ಹೂವಿನ ಅಲಂಕರಾ ಮಾಡಬೇಕು.. 5 ಸ್ಟಾರ್ ಹೋಟೆಲ್ನ ಫುಡ್ ಬೇಕು.. ಚೈನೀಸ್, ನಾರ್ಥ್ ಹೀಗೆ ಎಲ್ಲ ವೆರೈಟಿ ಫುಡ್ ಇರಬೇಕು, ದೊಡ್ಡ ಹಾಲ್-ಎಸಿ ಎಲ್ಲ ಇರಬೇಕು.. ನಮ್ಮದು ರಿಚ್ ಫ್ಯಾಮಿಲಿ.. ನಮ್ಮ ಮರಿಯಾದೆ ಕಳೆಯೋ ರೀತಿ ಮಾಡಬೇಡಿ ಎಂದು ಹೇಳುತ್ತಾಳೆ. ಇದನ್ನೆಲ್ಲ ಕೇಳಿ ಭಾಗ್ಯ ಮನೆಯವರಿಗೆ ಆಘಾತ ಆಗುತ್ತದೆ. ಅಷ್ಟೊಂದು ದುಡ್ಡು ಎಲ್ಲಿಂದ ತರೋದು ಎಂಬ ಭಯ ಶುರುವಾಗುತ್ತದೆ.
ಇದನ್ನೆಲ್ಲ ಹೇಳಿ ಕನ್ನಿಕಾ ಆದೀ ಬಳಿ ಬಂದು, ಈ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡೋಣ, ಈ ಸಂಬಂಧ ಬೇಡ ಎಂದು ಅವರೇ ಬಂದು ಹೇಳ್ತಾರ ನೋಡು ಅಣ್ಣ, ಅ ಥರದ ಶಾಕ್ ಕೊಟ್ಟು ಬಂದಿದ್ದೇನೆ ಎಂದು ಹೇಳುತ್ತಾಳೆ. ಅತ್ತ ಭಾಗ್ಯ ಮನೆಯಲ್ಲಿ ಟೆನ್ಶನ್ ಶುರುವಾಗಿದೆ. ಇದರ ಬೆನ್ನಲ್ಲೇ ಭಾಗ್ಯ ಅಪ್ಪ ಪೂಜಾ ಬಳಿ ಬಂದು.. ಈ ಮದುವೆ ಆಗೋದು ಕಷ್ಟ.. ನಮ್ಮಲ್ಲಿ ಅಷ್ಟೊಂದು ಹಣವಿಲ್ಲ ಎಂದು ಅವರ ಬಳಿ ಹೋಗಿ ಹೇಳೋಣ ಎಂದು ಹೇಳುತ್ತಾರೆ.
ಅದರಂತೆ ಪೂಜಾ ಹಾಗೂ ತಂದೆ ರಾಮ್ದಾಸ್ ಮನೆಗೆ ಹೋಗಿದ್ದಾರೆ. ಅಲ್ಲಿ ಆದೀ ಮತ್ತು ಕನ್ನಿಕಾ ಕೂಡ ಇರುತ್ತಾರೆ. ರಾಮ್ದಾಸ್ ಬಂದು ಏನು ಬೀಗ್ರೇ ಇಲ್ಲಿ ತನಕ ಬಂದಿದ್ದೀರ ಎಂದು ಕೇಳುತ್ತಾರೆ. ನಿಮ್ಮ ಬಳಿ ಒಂದು ಇಂಪಾರ್ಟೆಂಟ್ ವಿಷಯ ಹೇಳಬೇಕು.. ಈ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡೋಣ ಎಂದು ಹೇಳುತ್ತಾರೆ. ಇದನ್ನ ಕೇಳಿ ಕಿಶನ್ ಹಾಗೂ ರಾಮ್ದಾಸ್ಗೆ ಶಾಕ್ ಆಗುತ್ತದೆ. ಅತ್ತ ಕನ್ನಿಕಾ ಹಾಗೂ ಆದೀಗೆ ಖುಷಿಯಾಗುತ್ತದೆ. ನಾವು ಮಾಡಿದ ಪ್ಲ್ಯಾನ್ ವರ್ಕ್ ಆಯಿತು ಅಂದುಕೊಳ್ಳುತ್ತಾರೆ. ಆದರೆ, ಸದ್ಯ ಇದಕ್ಕೆ ರಾಮ್ದಾಸ್ ಪ್ರತಿಕ್ರಿಯೆ ಏನು?, ಕಿಶನ್ ಏನು ಹೇಳುತ್ತಾನೆ? ಎಂಬುದು ನೋಡಬೇಕಿದೆ. ಮತ್ತೊಂದೆಡೆ ಈ ಎಲ್ಲ ವಿಚಾರ ಭಾಗ್ಯಾಗೆ ಗೊತ್ತಿಲ್ಲ.. ಗೊತ್ತಾದರೆ ಆಕೆ ಏನು ಮಾಡುತ್ತಾಳೆ ಎಂಬುದು ಕುತೂಹಲ ಕೆರಳಿಸಿದೆ.
Karna Serial: ಇಂದಿನಿಂದ ತ್ರಿಕೋನ ಪ್ರೇಮಕಥೆಯ ಬಹುನಿರೀಕ್ಷಿತ ಕರ್ಣ ಧಾರಾವಾಹಿ ಆರಂಭ