ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Infiltration in LOC: ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಗಡಿಯಲ್ಲಿ ಒಳನುಸುಳಲು ಉಗ್ರರ ಯತ್ನ; ಸೇನೆಯಿಂದ ಓರ್ವ ಸಹಾಯಕನ ಬಂಧನ

ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಜನರನ್ನು ಹಾಗೂ ಉಗ್ರರನ್ನು ನುಗ್ಗಿಸುತ್ತಿದ್ದ ವ್ಯಕ್ತಿಯನ್ನು ಭಾನುವಾರ ಸೇನೆ ಬಂಧಿಸಿದೆ. ಅದರ ಬೆನ್ನಲ್ಲೇ ಸೋಮವಾರ ರಾಜೌರಿ ಜಿಲ್ಲೆಯ ಗಂಭೀರ್ ಪ್ರದೇಶದ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಗೆ ಸೇರಿದ ಉಗ್ರರ ಒಳನುಸುಳುವಿಕೆಯನ್ನು ಸೇನೆ ವಿಫಲಗೊಳಿಸಿದೆ.

ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಗಡಿಯಲ್ಲಿ ಒಳನುಸುಳಲು ಉಗ್ರರ ಯತ್ನ

Profile Vishakha Bhat Jun 30, 2025 1:25 PM

ಶ್ರೀನಗರ: ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಜನರನ್ನು ಹಾಗೂ ಉಗ್ರರನ್ನು ನುಗ್ಗಿಸುತ್ತಿದ್ದ ವ್ಯಕ್ತಿಯನ್ನು ಭಾನುವಾರ ಸೇನೆ ಬಂಧಿಸಿದೆ. ಅದರ ಬೆನ್ನಲ್ಲೇ ಸೋಮವಾರ ರಾಜೌರಿ ಜಿಲ್ಲೆಯ ಗಂಭೀರ್ ಪ್ರದೇಶದ ನಿಯಂತ್ರಣ ರೇಖೆಯ (Infiltration in LOC) (ಎಲ್‌ಒಸಿ) ಉದ್ದಕ್ಕೂ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಗೆ ಸೇರಿದ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ಸೇನೆಯು ಪರಿಣಾಮಕಾರಿಯಾಗಿ ವಿಫಲಗೊಳಿಸಿದೆ ಎಂದು ತಿಳಿದು ಬಂದಿದೆ. ಸೇನೆಯು ಒಳನುಸುಳುವ ಉಗ್ರರ ಮೇಲೆ ಕೂಡಲೇ ಕಾರ್ಯಾಚರಣೆಯನ್ನು ಕೈಗೊಂಡಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಕೋಟ್ಲಿ ಜಿಲ್ಲೆಯ ನಿಕಿಯಾಲ್ ಪ್ರದೇಶದ ಡೆಟೋಟ್‌ನ ಮೊಹಮ್ಮದ್ ಯೂಸುಫ್ ಪುತ್ರ ಮೊಹಮ್ಮದ್ ಅರಿಬ್ ಅಹ್ಮದ್ ಎಂಬಾತನನ್ನು ಇದೀಗ ಬಂಧಿಸಲಾಗಿದೆ. ಎಲ್‌ಒಸಿಯಾದ್ಯಂತ ಭಯೋತ್ಪಾದಕರನ್ನು ನುಗ್ಗಿಸುವ ಹೊಸ ಪ್ರಯತ್ನದ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ, ಸೇನೆಯು ಬಿಎಸ್‌ಎಫ್‌ನೊಂದಿಗೆ ಭಾನುವಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಕಾರ್ಯಾಚರಣೆಯ ಸಮಯದಲ್ಲಿ, ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತ ನುಸುಳುಕೋರರಿಗೆ ಸಹಾಯ ಮಾಡುತ್ತಿದ್ದ ಎಂದು ತಿಳದು ಬಂದಿದೆ.

ಉಳಿದ ನಾಲ್ವರು ಭಯೋತ್ಪಾದಕರು ಜೆಇಎಂ ಸದಸ್ಯರು ಎಂದು ತಿಳಿದು ಬಂದಿದೆ. ಕಾರ್ಯಾಚರಣೆಯ ನಂತರ ಆ ಪ್ರದೇಶದಲ್ಲಿ ಸಂಪೂರ್ಣ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು, ಇದರಲ್ಲಿ ಮೊಬೈಲ್ ಫೋನ್ ಮತ್ತು ಪಾಕಿಸ್ತಾನಿ ಕರೆನ್ಸಿ ಸೇರಿದಂತೆ ಸೂಕ್ಷ್ಮ ವಸ್ತುಗಳು ಪತ್ತೆಯಾಗಿವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಆರಂಭಿಕ ವಿಚಾರಣೆಯ ಸಮಯದಲ್ಲಿ, ಬಂಧಿತ ವ್ಯಕ್ತಿಯು ತಾನು ಎಲ್‌ಒಸಿಗೆ ಸಮೀಪವಿರುವ ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಯಾಗಿದ್ದು, ಮುಂಚೂಣಿಯಲ್ಲಿರುವ ಪೋಸ್ಟ್‌ಗಳಲ್ಲಿ ಬೀಡುಬಿಟ್ಟಿರುವ ಪಾಕಿಸ್ತಾನ ಸೇನಾ ಅಧಿಕಾರಿಗಳ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ದೃಢಪಡಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Operation Bihali: ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ; ಓರ್ವ ಉಗ್ರನ ಎನ್‌ಕೌಂಟರ್‌

ಜೆಇಎಂ ಭಯೋತ್ಪಾದಕರು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಅಪರಾಧ ಸಾಮಗ್ರಿಗಳನ್ನು ಭಾರತ ಒಳಗೆ ಸಾಗಿಸುವ ಯೋಜನೆಯನ್ನು ಹಾಕಿದ್ದರು. ಸೆರೆಹಿಡಿಯಲಾದ ಮಾರ್ಗದರ್ಶಿಯನ್ನು ಪ್ರಸ್ತುತ ಜಂಟಿ ವಿಚಾರಣಾ ತಂಡವು ವಿವರವಾದ ವಿಚಾರಣೆಗೆ ಒಳಪಡಿಸುತ್ತಿದೆ. ಭಾರತ ಹಾಗೂ ಪಾಕ್‌ ಸಂಘರ್ಷದ ಸಮಯದಲ್ಲಿ ಸಾಂಬಾ ಗಡಿ ಮೂಲಕ ಉಗ್ರರು ಒಳನುಸುಳಲು ಯತ್ನಿಸಿದ್ದರು. ಗಡಿ ಭದ್ರತಾ ಪಡೆ ಇದನ್ನು ವಿಫಲಗೊಳಿಸಿದೆ.