ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narada Sanchara : ಅವತ್ತೇ ಎಡವಿದ್ರಲ್ಲಾ ಟ್ರಂಪಣ್ಣ..!

ದೊಡ್ಡ ಮನುಷ್ಯರು ಎನಿಸಿಕೊಂಡವರು ಕೆನ್ನೆಗೆ ಪೌಡರ್ ಪೂಸಿದ್ದು, ಕೆಮ್ಮಿದ್ದು ಕೂಡ ಸುದ್ದಿಯಾಗಿ ಅದೆಷ್ಟು ವೈರಲ್ ಆಗಿ ಬಿಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಇದು, ‘ವಿಶ್ವದ ದೊಡ್ಡಣ್ಣ’ ಎಂದೇ ಕರೆಸಿಕೊಳ್ಳುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಂಬಂಧಿಸಿದ್ದು. ನಮ್ ಟ್ರಂಪಣ್ಣ ನ್ಯೂಜೆರ್ಸಿಯ ಮಾರಿಸ್‌ಟೌನ್‌ನಲ್ಲಿರುವ ‘ಮುನಿಸಿಪಲ್’ ವಿಮಾನ ನಿಲ್ದಾಣದಲ್ಲಿ, ಏರ್ ಫೋರ್ಸ್-1 ವಿಮಾನವನ್ನೇರುವಾಗ ಮೆಟ್ಟಿಲುಗಳ ಮೇಲೆ ಎಡವಿ ಬಿಟ್ಟರಂತೆ.

Narada Sanchara : ಅವತ್ತೇ ಎಡವಿದ್ರಲ್ಲಾ ಟ್ರಂಪಣ್ಣ..!

ಕಲಹ ಪ್ರಿಯ

ನಾರದ ಸಂಚಾರ

naadigru@gmail.om

ದೊಡ್ಡ ಮನುಷ್ಯರು ಎನಿಸಿಕೊಂಡವರು ಕೆನ್ನೆಗೆ ಪೌಡರ್ ಪೂಸಿದ್ದು, ಕೆಮ್ಮಿದ್ದು ಕೂಡ ಸುದ್ದಿ ಯಾಗಿ ಅದೆಷ್ಟು ವೈರಲ್ ಆಗಿ ಬಿಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಇದು, ‘ವಿಶ್ವದ ದೊಡ್ಡಣ್ಣ’ ಎಂದೇ ಕರೆಸಿಕೊಳ್ಳುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಂಬಂಧಿಸಿದ್ದು. ನಮ್ ಟ್ರಂಪಣ್ಣ ನ್ಯೂಜೆರ್ಸಿಯ ಮಾರಿಸ್‌ಟೌನ್‌ನಲ್ಲಿರುವ ‘ಮುನಿಸಿಪಲ್’ ವಿಮಾನ ನಿಲ್ದಾಣದಲ್ಲಿ, ಏರ್ ಫೋರ್ಸ್-1 ವಿಮಾನವನ್ನೇರುವಾಗ ಮೆಟ್ಟಿಲುಗಳ ಮೇಲೆ ಎಡವಿ ಬಿಟ್ಟರಂತೆ.

“ಅಂದ್ಹಾಗೆ, ಆ ‘ಮುನಿಸಿಪಲ್’ ನಿಲ್ದಾಣದಲ್ಲಿ ಹಾಗೆ ನಿಂತಿದ್ದ ವಿಮಾನದ ಮೆಟ್ಟಿಲುಗಳು ಅದ್ಯಾವ ಕಾರಣಕ್ಕೆ ಟ್ರಂಪಣ್ಣನ ಮೇಲೆ ‘ಮುನಿಸಿ’ಕೊಂಡಿದ್ದವಂತೆ?" ಅಂತ ಮಾತ್ರ ನೀವು ಪ್ರಶ್ನೆ ಕೇಳಬೇಡಿ ಮಾರ್ರೇ.... ಗಾಳಿಸುದ್ದಿ ನೀಡುವಾಗ ನಿಮ್ಮದು ಇದೆಂಥದು ಪಿರಿಪಿರಿ?! ಒಟ್ನಲ್ಲಿ ಟ್ರಂಪಣ್ಣ ಎಡವಿ ದರು, ಎಡವಿದ ಬಳಿಕ ಕೊಂಚ ಸಾವರಿಸಿಕೊಂಡು, ‘ಉಶ್ಶಪ್ಪಾ’ ಅಂತ ಮೇಲೆದ್ದು, ವಿಮಾನದೊಳಗೆ ತೂರಿಕೊಂಡರು, ಅಷ್ಟೇ.

ಇದನ್ನೂ ಓದಿ: Yagati Raghu Naadig : ನೋಡಿಲ್ಲಿ ಕೊಂಚ..ಇದೇ ನೋಡು ಪ್ರವಾಸಿ ಪ್ರಪಂಚ

ಆದರೆ, ಟ್ರಂಪಣ್ಣ ಹೀಗೆ ‘ಕಾಲೆಡವಿ’ ಬಿದ್ದ ಸುದ್ದಿ ಗೊತ್ತಾಗಿದ್ದೇ ಗೊತ್ತಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ‘ಟ್ರೋಲಿಗರು’ ಇನ್ನಿಲ್ಲದಂತೆ ಅವರ ‘ಕಾಲೆಳೆಯಲು’ ಶುರು ಹಚ್ಚಿಕೊಂಡಿದ್ದಾ ರಂತೆ. ಇದಕ್ಕೂ ಮೊದಲು ಟ್ರಂಪ್ ಅವರು ಜೋ ಬೈಡನ್‌ರನ್ನು ಲೇವಡಿ ಮಾಡಿದ್ದನ್ನು ಮುಂದಿಟ್ಟುಕೊಂಡು ಅವರು ಹೀಗೆ ‘ಕಾಲೆಳೆಯುವ’ ಕಾರ್ಯದಲ್ಲಿ ತಲ್ಲೀನರಾಗಿದ್ದಾರಂತೆ.

ಪಾಪ ನಮ್ ಟ್ರಂಪಣ್ಣ, ಮೆಟ್ಟಿಲು ಎಡವಿ ಬಿದ್ಧ ಭರಕ್ಕೆ ‘ಕಾಲೆಳೆದುಕೊಂಡೇ’ ಮಿಕ್ಕ ಮೆಟ್ಟಿಲು ಹತ್ತಿ ವಿಮಾನದೊಳಗೆ ಸೇರಿಕೊಂಡ ಮೇಲೂ ಟ್ರೋಲಿಗರು ಹೀಗೆ ‘ಕಾಲೆಳೆಯುವುದು’ ತರವೇ?! ಇಂಥ ಘಟನೆಗಳನ್ನು ಕಂಡಾಗಲೆಲ್ಲಾ ಕಂಡಕಂಡಲ್ಲಿ ಅದನ್ನು ‘ಪುಂಗುವ’ ಅಣಕಗೀತೆಯ ‘ಪುಂಗವ’ ರೊಬ್ಬರು ಸರ್ವಜ್ಞನ ವಚನವೊಂದನ್ನು ತಿರುಚಿ, “ಪರರ ಬಗೆಗಿನ ಟ್ರೋಲಿಗರ ಟ್ರೋಲನು ಕಂಡಾಗ ಹಾಲೋಗರವ ಉಂಡಂತೆ, ಟ್ರೋಲಿಗರು ಬಂದು ಕಾಲೆಳೆಯುವಾಗ ಕಾಲಿನ ಮೂಳೆ ಮುರಿದಂತೆ" ಎಂದು ತಮ್ಮ ‘ಪೆನ್’ನಲ್ಲಿ ‘ಪನ್’ಭರಿತ ‘ಫನ್’ ಮಾಡಿ, “ಪೆನ್ನಲ್ಲಿ ನಾನ್ ಬರೆದ ಸಾಲು ‘ಪೆನ್-ಟಾಸ್ಟಿಕ್’ ಆಗಿದೆಯಾ? ‘ಪನ್ -ಟಾಸ್ಟಿಕ್’ ಆಗಿದೆಯಾ? ಅಥವಾ ‘ಫನ್-ಟಾಸ್ಟಿಕ್’ ಆಗಿದೆಯಾ?" ಅಂತ ಪಲ್ಲಂಗದೊಳಗೆ ಪಕ್ಕದಲ್ಲಿ ಮಲಗಿದ್ದ (ತಮ್ಮದೇ) ಪತ್ನಿಯನ್ನು ತಿವಿದು ಕೇಳಿದರಂತೆ...

ಪತಿ‘ಪುಂಗವ’ ರಾತ್ರಿ ಮನೆಗೆ ಬರೋವಾಗ್ಲೇ ಕಂಠಮಟ್ಟ ‘ಪೋಟ್ಕಂಡು’ ಬಂದು ತಮ್ಮ ಮೂಗು ಮುಚ್ಚಿಸಿದ್ದು ಸಾಲದೆಂಬಂತೆ ಈಗ ಇಂಥ ಕಿತ್ತೋದ ‘ಪನ್’ಗಳನ್ನು ಉದುರಿಸಿ ಕಿವಿಯನ್ನೂ ಮುಚ್ಚಿಸಲು ಮುಂದಾಗಿದ್ದಕ್ಕೆ ಕೆರಳಿ ಕೆಂಡವಾದ ಆ ‘ಕರಿಮಣಿ-ಮಾಲಕಿ’ಯು, “ರೀ... ಸುಮ್ನೇ ಬಿದ್ಗೊಳ್ರೀ.

‘ಆಪರೇಷನ್ ಸಿಂದೂರ ಅಂತ್ಯವಾಗಿದೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ, ಅದಕ್ಕೆ ಕಾರಣವೇ ತಾವು’ ಅಂತ ಆತುರಗೆಟ್ಟ ಆಂಜನೇಯನ ಥರ ನಿಮ್ ಟ್ರಂಪಣ್ಣ ಘೋಷಿಸಿಕೊಂಡಾಗ್ಲೇ ಅವರು ‘ಕಾಲೆಡವಿದ್ದು’ ಆಯ್ತು, ಟ್ರೋಲಿಗರು ಅವರ ‘ಕಾಲೆ ಳೆದಿದ್ದೂ’ ಆಯ್ತು! ಈಗ ಮತ್ತೆ ಹೊಸಪುರಾಣ ಹೊಸೆಯೋಕೆ ಬರಬೇಡಿ" ಎಂದು ಪತಿಯ ಸ್ವಾಟೆ ತಿವಿದು ಪಾಚ್ಕೊಂಡ್ರಂತೆ!