ಕೃಷಿ ಭೂಮಿಗೂ ಬಿಡದ ಮರಳುಗಾರಿಕೆ!
ಕೆಲ ಪ್ರಭಾವಿಗಳು ಸೇರಿ ಮಾಡುವ ಮರಳು ಗಣಿಗಾರಿಕೆಯಿಂದ ಅವರಂತೆ ಸರಕಾರದಿಂದ ಭೂಮಿ ಪಡೆದು ಕೃಷಿ ಮಾಡಿಕೊಂಡು ಜೀವನ ಮಾಡುವ ಅಮಾಯಕ ರೈತರು ಸಂಕಷ್ಟ ಎದುರಿಸು ವಂತಾಗಿದೆ. ಇದಕ್ಕೆ ಸದ್ಯ ಕಾರಟಗಿ ತಾಲೂಕು ಸಿದ್ಧಾಪೂರ ಗ್ರಾಮದಲ್ಲಿ ನಡೆದಿರುವ ಮರಳು ಗಣಿಗಾರಿಕೆ ತಾಜಾ ಉದಾಹರಣೆಯಂತಿದೆ.