ATM Robbery: ರಾಜ್ಯದಲ್ಲಿ ಮತ್ತೊಂದು ಎಟಿಎಂ ದರೋಡೆ; ಕೋಲಾರದಲ್ಲಿ 27 ಲಕ್ಷ ರೂ. ದೋಚಿದ ಕಳ್ಳರು
Kolar News: ಕೋಲಾರದ ಗಲ್ ಪೇಟೆ ಪೋಲೀಸ್ ಠಾಣೆ ಸಮೀಪದ ಸಹಕಾರ ನಗರದಲ್ಲಿರುವ ಎಸ್ಬಿಐ ಎಟಿಎಂನಿಂದ ಕಳ್ಳಲು ಸೋಮವಾರ ಮುಂಜಾನೆ ಸುಮಾರು 27 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮಂದುವರಿದಿದೆ.


ಕೋಲಾರ: ರಾಜ್ಯದಲ್ಲಿ ಮತ್ತೊಂದು ಎಟಿಎಂ ದರೋಡೆ (ATM Robbery) ಪ್ರಕರಣ ನಡೆದಿದ್ದು, ಕರ್ನಾಟಕ ಬೆಚ್ಚಿ ಬಿದ್ದಿದೆ. ಈ ಬಾರಿ ಕೋಲಾರದಲ್ಲಿನ ಎಸ್ಬಿಐ ಎಟಿಎಂ ಅನ್ನು ಕಳ್ಳರು ಕೊಳ್ಳೆ ಹೊಡೆದಿದ್ದಾರೆ (Kolar News). ಕೋಲಾರ ನಗರದ ಗಲ್ ಪೇಟೆ ಪೋಲೀಸ್ ಠಾಣೆ ಸಮೀಪದ ಸಹಕಾರ ನಗರದಲ್ಲಿರುವ ಎಸ್ಬಿಐ ಎಟಿಎಂನಿಂದ ಸುಮಾರು 27 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್ ಸೇರಿದಂತೆ ಬೆರಳಚ್ವು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮಂದುವರಿದಿದೆ.
ಇತ್ತೀಚೆಗೆ ಕರ್ನಾಟಕದಲ್ಲಿ ಎಟಿಎಂ ದರೋಡೆ ಪ್ರಕರಣ ಹೆಚ್ಚಾಗುತ್ತಿರುವುದು ಪೊಲೀಸರ ನಿದ್ದೆಗೆಡಿಸಿದೆ. ಎಟಿಎಂಗಳಿಗೆ ಭದ್ರತೆ ಹೆಚ್ಚಿಸಬೇಕೆಂಬ ಕೂಗು ಆಗ್ರಹ ಕೇಳೆ ಬಂದಿದೆ.
ಈ ಸುದ್ದಿಯನ್ನೂ ಓದಿ: Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ
ಗ್ಯಾಸ್ ಕಟರ್ನಿಂದ ಎಟಿಎಂ ಒಡೆದು 18 ಲಕ್ಷ ದೋಚಿದ ಖದೀಮರು
ಕೆಲವು ತಿಂಗಳ ಹಿಂದೆ ಗ್ಯಾಸ್ ಕಟರ್ನಿಂದ ಎಟಿಎಂ ಒಡೆದು, ಎಸ್ಬಿಐ ಎಟಿಎಂನಲ್ಲಿದ್ದ 18 ಲಕ್ಷ ರೂ. ದೋಚಿದ್ದ ಘಟನೆ ಕಲಬುರಗಿ ನಗರದ ರಾಮನಗರದ ಬಳಿ ವರದಿಯಾಗಿತ್ತು. ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಬ್ಲಾಕ್ ಮಾಡಿದ ಕಳ್ಳರು ಗ್ಯಾಸ್ ಕಟ್ಟರ್ನಿಂದ ಎಟಿಎಂ ಮೆಷಿನ್ ಒಡೆದಿದ್ದರು. ಹಿಂದಿನ ದಿನ ಸಂಜೆಯಷ್ಟೇ ಎಟಿಎಂಗೆ ಬ್ಯಾಂಕ್ ಸಿಬ್ಬಂದಿ ಹಣ ಹಾಕಿದ್ದರು. ಇದನ್ನು ತಿಳಿದಿದ್ದ, ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ಇಲ್ಲದನ್ನ ಗಮನಿಸಿ ಕಳ್ಳರು ಕೈ ಚಳಕ ತೋರಿಸಿದ್ದರು.
ಖದೀಮರು ಐ20 ಕಾರಿನಲ್ಲಿ ಬಂದು ಎಟಿಎಂ ದರೋಡೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಅದಕ್ಕೂ ಮೊದಲು ಮಂಗಳೂರು, ಬೀದರ್ನಲ್ಲಿಯೂ ಎಟಿಎಂನಿಂದ ಕಳ್ಳರು ಹಣ ಎಗರಿಸಿದ್ದರು. ಖದೀಮರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.