ವಿದ್ಯುತ್ ಲೈನಿಗೆ ಕೈಲಿದ್ದ ಸರಳು ತಗುಲಿ ವಿದ್ಯಾರ್ಥಿ ಸಾವು
ಮೃತ ಬಾಲಕ ಮಾದೇಶ್ ತಮ್ಮ ಮನೆಯ ಚರಂಡಿ ನೀರು ಪೈಪಿನಲ್ಲಿ ಸರಾಗವಾಗಿ ಹೊಗದ ಕಾರಣ ಅದನ್ನ ಕಬ್ಬಿಣದ ಸರಳಿಂದ ಸ್ವಚ್ಚಗೊಳಿಸುತಿದ್ದ. ಮನೆಯ ಮುಂದೆ ನೆಟ್ಟಿರುವ ವಿದ್ಯುತ್ ಕಂಬದ ಲೈನ್ ತೀರಾ ಕೆಳಗೆ ಬಾಗಿದ್ದು ಇದನ್ನು ಗಮನಿಸದ ಹುಡುಗ ಕಬ್ಬಿಣ ಸರಳನ್ನ ಮೇಲೆತ್ತುವಾಗ ವಿದ್ಯುತ್ ಪ್ರವಹಿಸುತ್ತಿದ್ದ ಲೈನಿಗೆ ತಾಗಿಸಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ


ಚಿಕ್ಕಬಳ್ಳಾಪುರ: ಮಳೆಯಿಂದಾಗಿ ಮನೆ ಮುಂದೆ ತುಂಬಿಹೋಗಿದ್ದ ಚರಂಡಿ ಪೈಪನ್ನು ಕಬ್ಬಿಣ ಸಲಾಕೆಯಿಂದ ಸ್ವಚ್ಚಗೋಳಿಸುತಿದ್ದ ವಿದ್ಯಾರ್ಥಿ ಆಕಸ್ಮಿಕವಾಗಿ ಕೈಲಿ ಹಿಡಿದಿದ್ದ ಕಬ್ಬಿಣದ ಸರಳು ತಲೆ ಮೇಲಿದ್ದ ವಿದ್ಯುತ್ ಕಂಬಕ್ಕೆ ತಗುಲಿದ ಪರಿಣಾಮ ಮೃತಪಟ್ಟ ದುರ್ಘಟನೆ ತಾಲ್ಲೂಕಿನ ದೊಡ್ಡ ಕಿರುಗಂಬಿಯಲ್ಲಿ ಸಂಭವಿಸಿದೆ.
ಮೃತ ವಿದ್ಯಾರ್ಥಿಯನ್ನು 17 ವರ್ಷದ ಮಾದೇಶ್ ಎಂದು ಗುರ್ತಿಸಲಾಗಿದೆ. ತಾಲ್ಲೂಕಿನ ದೊಡ್ಡ ಕಿರುಗಂಬಿಯ ವೆಂಕಟೇಶ್ ಮತ್ತು ಮಹದೇವಮ್ಮ ಎಂಬುವರ ಎರಡನೇ ಮಗನಾದ ಮಾದೇಶ್ನೇ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.
ಇದನ್ನೂ ಓದಿ: IPL 2025: ʻಜಸ್ಪ್ರೀತ್ ಬುಮ್ರಾ ಇರುವವರೆಗೂ ಪಂದ್ಯ ಮುಗಿಯಲ್ಲʼ-ಎಬಿ ಡಿ ವಿಲಿಯರ್ಸ್!
ಮೃತ ಬಾಲಕ ಮಾದೇಶ್ ತಮ್ಮ ಮನೆಯ ಚರಂಡಿ ನೀರು ಪೈಪಿನಲ್ಲಿ ಸರಾಗವಾಗಿ ಹೊಗದ ಕಾರಣ ಅದನ್ನ ಕಬ್ಬಿಣದ ಸರಳಿಂದ ಸ್ವಚ್ಚಗೊಳಿಸುತಿದ್ದ. ಮನೆಯ ಮುಂದೆ ನೆಟ್ಟಿರುವ ವಿದ್ಯುತ್ ಕಂಬದ ಲೈನ್ ತೀರಾ ಕೆಳಗೆ ಬಾಗಿದ್ದು ಇದನ್ನು ಗಮನಿಸದ ಹುಡುಗ ಕಬ್ಬಿಣ ಸರಳನ್ನ ಮೇಲೆತ್ತುವಾಗ ವಿದ್ಯುತ್ ಪ್ರವಹಿಸುತ್ತಿದ್ದ ಲೈನಿಗೆ ತಾಗಿಸಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸುಮಾರು ದಿನಗಳಿಂದ ಕೆಳಕ್ಕೆ ಬಾಗಿದ್ದ ವಿದ್ಯುತ್ ಲೈನ್ ಬದಲಾಯಿಸುವಂತೆ ಬೆಸ್ಕಾಂಗೆ ದೂರು ಕೊಟ್ಟಿದ್ದರೂ ಅವರು ಬದಲಾಯಿಸಿರಲಿಲ್ಲ.ಇವರ ನಿರ್ಲಕ್ಷ್ಯದಿಂದಲೇ ವಿದ್ಯಾರ್ಥಿ ಮಾದೇಶ್ ಜೀವ ಹೋಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನು ಬೆಳಿಗ್ಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಹೋಗಬೇಕಿದ್ದ ವಿದ್ಯಾರ್ಥಿ ಮಾದೇಶ್ ತನ್ನ ಕಣ್ಣಮುಂದೆಯೆ ಸತ್ತುಬಿದ್ದಿದ್ದನ್ನು ಕಂಡ ಪೋಷಕರು ದಿಕ್ಕುಕಾಣದೆ ರೋದಿಸುತಿದ್ದರು. ಈ ಸಂಬAಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಪೋಷಕರ ಪರ ಧಾವಿಸಿದ ಗ್ರಾಮಸ್ಥರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಈಗಲಾದ್ರೂ ವಿದ್ಯುತ್ ಕಂಬದ ಲೈನ್ ಸರಿಯಾಗಿ ಎಳೆದು ಬದ್ರಪಡಿಸಿ, ಸಾವಿಗೀಡಾದ ವಿದ್ಯಾರ್ಥಿ ಮನೆಗೆ ಪರಿಹಾರ ನೀಡಿ ಎಂದು ಒತ್ತಾಯಿಸಿದರು. ಅವರ ಹೋರಾಟಕ್ಕೆ ಸ್ಪಂಧಿಸಿದ ಎಇಇ ತಕ್ಷಣ ತನ್ನ ಸ್ವಂತ ಹಣ ಹತ್ತು ಸಾವಿರ ರೂ ಪೋಷಕರಿಗೆ ನೀಡಿ, ಮನೆಯ ಮುಂದಿನ ವಿದ್ಯುತ್ ಲೈನಿಗೆ ಪ್ಲಾಸ್ಟಿಕ್ ಪೈಪ್ ಹಾಕಿಸಿ ಕೊಡುವುದಾಗಿ ತಿಳಿಸಿದ ನಂತರ ಪ್ರತಿಭಟನೆ ವಾಪಸ್ಸು ಪಡೆದಿದ್ದಾರೆ.