Nikhil Kumaraswamy: 2028ರವರೆಗೆ ಯಾರೂ ಹಾರ-ತುರಾಯಿ ತರಬೇಡಿ; ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಮನವಿ
Nikhil Kumaraswamy: ನಾನು ಮಾಡುತ್ತಿರುವುದು ಒಂದು ದಿನದ ಪ್ರವಾಸ ಅಲ್ಲ, ನನ್ನ ಪ್ರವಾಸ 58 ದಿನಗಳ ಕಾಲ ಇಡೀ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ. ನಾನು ಹೋಗುತ್ತಿರುವುದು ಮುಖಂಡರು ಮತ್ತು ಕಾರ್ಯಕರ್ತರ ಜತೆ ನಾನಿದ್ದೇನೆ ಎಂದು ಹೇಳುವುದ್ದಕ್ಕೆ ಮತ್ತು ಯಾವ ಯಾವ ಜಿಲ್ಲೆಗಳಲ್ಲಿ ಏನೇನು ಸಮಸ್ಯೆಗಳಿದೆ, ಸ್ಥಳೀಯರ ಸಮಸ್ಯೆ ಏನು? ಅದಕ್ಕೆ ಉತ್ತರ ಏನು ಪಡೆದುಕೊಳ್ಳುವುದಕ್ಕೆ ಎಂದು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.


ತುಮಕೂರು: ಕರ್ನಾಟಕ ಮತ್ತು ಆಂಧ್ರ ಗಡಿಭಾಗದಲ್ಲಿರುವ ಪಾವಗಡ ಕ್ಷೇತ್ರಕ್ಕೆ ಕುಮಾರಣ್ಣನ ಕೊಡುಗೆ ಅಪಾರ. ಹತ್ತು ಪ್ರೌಢ ಶಾಲೆ, ಬಸ್ ಡಿಪೋ ಮತ್ತು ನೀರಾವರಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಶಾಶ್ವತವಾಗಿ ನೀರಾವರಿ ಹಾಗೂ ಸುವರ್ಣ ಗ್ರಾಮ ಹಲವಾರು ಯೋಜನೆಗಳು ಕುಮಾರಣ್ಣ ಅವಧಿಯಲ್ಲಿ ಆಗಿದೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದರು. ಆದರೆ ಇವತ್ತು ಪಾವಗಡದ ತಾಲೂಕಿನಲ್ಲಿ ಏನಾಗಿದೆ ಪರಿಸ್ಥಿತಿ. ಇಲ್ಲಿರುವ ಶಾಸಕರು ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ. ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ. ಕುಮಾರಣ್ಣ ಕಾಲದಲ್ಲಿ ಆಗಿರುವ ಕೆಲಸದಲ್ಲಿ ಶೇ.10% ಆಗಿಲ್ಲ ಕಳೆದ ಎರಡು ವರ್ಷದಲ್ಲಿ ಒಂದು ರೂಪಾಯಿ ಅನುದಾನ ತಂದಿಲ್ಲ ಎಂದು ಅವರು ಆರೋಪಿಸಿದರು.
ಇವತ್ತು ಬಾಯಿಬಿಟ್ರೆ ನಾನು ಹಿಂದುಳಿದ ವರ್ಗಕ್ಕೆ ನಾನು ಸಮಾಜವಾದಿ ನಾಯಕ, ಚಾಂಪಿಯನ್ ಲೀಡರ್ ಅಂತ ಕೊಚ್ಚಿಕೊಳ್ಳುತ್ತಾರೆ ರಾಜ್ಯದ ಮುಖ್ಯಮಂತ್ರಿಗಳು. ಆದರೆ ಎಸ್ಇಪಿ, ಟಿಎಸ್ಪಿ ಹಣವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಅಭಿವೃದ್ಧಿಗೆ ಮಿಸಲಿಟ್ಟಿದ್ದ ಸಾವಿರಾರು ಕೋಟಿಯನ್ನು ಹಣವನ್ನು ಲೂಟಿ ಮಾಡಿದ್ರು ಎಂದು ಅವರು ಆರೋಪಿಸಿದರು.
ನನ್ನ ಪ್ರವಾಸ, ಕಾರ್ಯಕರ್ತರ ಜತೆ ನಾನಿದ್ದೇನೆ ಎಂದು ಹೇಳುವುದ್ದಕ್ಕೆ
ನಾನು ಮಾಡುತ್ತಿರುವುದು ಒಂದು ದಿನದ ಪ್ರವಾಸ ಅಲ್ಲ, ನನ್ನ ಪ್ರವಾಸ 58 ದಿನಗಳ ಕಾಲ ಇಡೀ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ. ನಾನು ಹೋಗುತ್ತಿರುವುದು ಮುಖಂಡರು ಮತ್ತು ಕಾರ್ಯಕರ್ತರ ಜತೆ ನಾನಿದ್ದೇನೆ ಎಂದು ಹೇಳುವುದ್ದಕ್ಕೆ ಮತ್ತು ಯಾವ ಯಾವ ಜಿಲ್ಲೆಗಳಲ್ಲಿ ಏನೇನು ಸಮಸ್ಯೆಗಳಿದೆ, ಸ್ಥಳೀಯರ ಸಮಸ್ಯೆ ಏನು? ಅದಕ್ಕೆ ಉತ್ತರ ಏನು ಪಡೆದುಕೊಳ್ಳುವುದಕ್ಕೆ ಎಂದು ತಿಳಿಸಿದರು.
2028ರವರೆಗೆ ಹಾರ- ತುರಾಯಿ ತರಬೇಡಿ
ಕಾರ್ಯಕರ್ತ ಬಂಧುಗಳಿಗೆ ನನ್ನ ಮನವಿ. ಹಾರ- ತುರಾಯಿ, ಹೂ ಗುಚ್ಛವನ್ನು ಹಣವನ್ನು ಖರ್ಚು ಮಾಡಿಕೊಂಡು ದಯವಿಟ್ಟು ತರಬೇಡಿ. ನಿಮ್ಮ ಮನಸಿನಲ್ಲಿ ಪ್ರೀತಿ ಇಟ್ಟುಕೊಳ್ಳಿ. ನಿಮ್ಮ ವಿಶ್ವಾಸಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತೇನೆ. ಇಷ್ಟು ಹಣ ಖರ್ಚು ಮಾಡಿ ತರಬೇಡಿ. ಇದು ಯಾವಾಗ ತಗೊಂಡು ಬರಬೇಕು ಅಂದರೆ ನಮ್ಮ ಹೋರಾಟ ದಡ ಮುಟ್ಟಿ ಕುಮಾರಣ್ಣನ ಸಿಎಂ ಮಾಡುವವರೆಗೂ ತರಬೇಡಿ ಎಂದ ಮನವಿ ಮಾಡಿದರು.
ಈ ಸುದ್ದಿಯನ್ನೂ ಓದಿ | HD Kumaraswamy: ಇಸ್ರೇಲ್-ಇರಾನ್ ಸಂಘರ್ಷ: ಇಸ್ರೇಲ್ನಲ್ಲಿರುವ ಕನ್ನಡಿಗರ ಜತೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಜೆಡಿಎಸ್ ಪಕ್ಷವನ್ನು ಪಾವಗಡ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಸಂಘಟಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಮಾಡಿಸಲು ಅವರು ಮನವಿ ಮಾಡಿದರು. ನಾವೆಲ್ಲರೂ ಹಗಲಿರುಳು ಶ್ರಮಿಸುವ ಮೂಲಕ 2028ಕ್ಕೆ ಕುಮಾರಣ್ಣನವರಿಗೆ ಅಧಿಕಾರ ಕೊಡಿಸುವ ಸಂಕಲ್ಪ ಮಾಡೋಣ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.