Chikkaballapur News: ಹೊರಗುತ್ತಿಗೆ ನೌಕರರ ಹಿತರಕ್ಷಣೆಗೆ ಸಂಘಟನೆ ಬದ್ಧ : ರಾಜ್ಯಾಧ್ಯಕ್ಷ ಸುಧಾಕರ್ ಅಭಯ
ಸರಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವವರೆಲ್ಲರೂ ಸರಕಾರಿ ನೌಕರರೇ ಆಗಿರುತ್ತಾರೆ.ಅವರವರ ಹುದ್ದೆ ಪದನಾಮಗಳು ಬದಲಾಗಿರಬಹುದು ಅಷ್ಟೇ.ಹೀಗಿರುವಾಗ ನಮಗೆ ಏನಾದರು ತೊಂದರೆ ಆದರೆ ಸಂಘದ ಅಡಿಯಲ್ಲಿ ಒಗ್ಗಟ್ಟಾಗಿದ್ದರೆ ಪರಿಹಾರ ಸಾಧ್ಯ. ನಾವು ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿದ್ದರೂ ದುರುದ್ದೇಶದಿಂದ ತೊಂದರೆ ನೀಡಿದಾಗ ಹೊರಗುತ್ತಿಗೆ ನೌಕರರ ಸಂಘವು ನೆರವಿಗೆ ನಿಲ್ಲುತ್ತದೆ

ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಹೊರಗುತ್ತಿಗೆ ನೌಕರರ ಜಿಲ್ಲಾ ಸಮಾವೇಶದಲ್ಲಿ ನೇಮಕಾದೇಶ ಪತ್ರ ವಿತರಿಸಿ ರಾಜ್ಯಾಧ್ಯಕ್ಷ ಸುಧಾಕರ್ ಮಾತನಾಡಿದರು.

ಚಿಕ್ಕಬಳ್ಳಾಪುರ : ಸರಕಾರಿ ಕೆಲಸ ಮಾಡುವವರೆಲ್ಲರೂ ಸರಕಾರಿ ನೌಕರರೇ ಎನ್ನುವ ಮನೋ ಭಾವ ಹೊರಗುತ್ತಿಗೆ ನೌಕರರಲ್ಲಿ ಬಂದಾಗ ಮಾತ್ರ ಸ್ವಾಭಿಮಾನದಿಂದ ನಮ್ಮ ಹಕ್ಕುಗಳಿಗಾಗಿ ಹೋರಾಡಲು ಸಾಧ್ಯ ಎಂದು ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಸುಧಾಕರ್ ಹೇಳಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಹೊರಗುತ್ತಿಗೆ ನೌಕರರ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಸರಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವವರೆಲ್ಲರೂ ಸರಕಾರಿ ನೌಕರರೇ ಆಗಿರುತ್ತಾರೆ.ಅವರವರ ಹುದ್ದೆ ಪದನಾಮಗಳು ಬದಲಾಗಿರಬಹುದು ಅಷ್ಟೇ.ಹೀಗಿರುವಾಗ ನಮಗೆ ಏನಾದರು ತೊಂದರೆ ಆದರೆ ಸಂಘದ ಅಡಿಯಲ್ಲಿ ಒಗ್ಗಟ್ಟಾಗಿದ್ದರೆ ಪರಿಹಾರ ಸಾಧ್ಯ. ನಾವು ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿದ್ದರೂ ದುರುದ್ದೇಶದಿಂದ ತೊಂದರೆ ನೀಡಿದಾಗ ಹೊರಗುತ್ತಿಗೆ ನೌಕರರ ಸಂಘವು ನೆರವಿಗೆ ನಿಲ್ಲುತ್ತದೆ ಎಂದು ಅಭಯ ನೀಡಿದರು.
ಇದನ್ನೂ ಓದಿ: IPL 2025: ವಿರಾಟ್ ಕೊಹ್ಲಿಯನ್ನು ಹೊರಗಿಟ್ಟು 2025ರ ಐಪಿಎಲ್ ತಂಡ ಕಟ್ಟಿದ ಆರ್ ಅಶ್ವಿನ್!
ಪ್ರತಿಯೊಬ್ಬ ಹೊರಗುತ್ತಿಗೆ ನೇಮಕಾತಿ ಏಜೆನ್ಸಿಯವರು ಕೂಡ ಕೆಲಸ ಮಾಡುವ ನೌಕರರಿಗೆ ಕನಿಷ್ಠವೇತನ ನೀಡಲೇಬೇಕು. ಯಾವ ಏಜೆನ್ಸಿ ಹೀಗೆ ಮಾಡುತ್ತಿಲ್ಲವೋ ನಮ್ಮ ಸಂಘಕ್ಕೆ ದೂರು ನೀಡಿದರೆ ಖಂಡಿತವಾಗಿ ನಿಮಗೆ ನ್ಯಾಯಕೊಡಿಸಿ ಏಜೆನ್ಸಿ ಲೈಸೆನ್ಸ್ ಕ್ಯಾನ್ಸಲ್ ಮಾಡುವ ಕೆಲಸ ಮಾಡುತ್ತೇವೆ ಎಂದರು.
ಪ್ರತಿಯೊಬ್ಬ ಹೊರಗುತ್ತಿಗೆ ನೌಕರರ ಸಂಬಳದಲ್ಲಿ ಶೇ.೨೫ರಷ್ಟು ಪಿಎಫ್,ಶೇ ೪ರಷ್ಟು ಇಎಸ್ಐ ಕಟಾವು ಆಗಲಿದೆ.ಹೊರಗುತ್ತಿಗೆ ನೌಕರರ ವೇತನದಲ್ಲಿ ಶೇ ೧೩ರಷ್ಟು ಪಿಎಫ್ಗೆ ಕಟಾವು ಆದರೆ ಸರಕಾರ ಶೇ ೧೨ರಷ್ಟು ತನ್ನ ವಂತಿಗೆ ಸೇರಿಸಿದರೆ ಒಟ್ಟು ೨೫ರಷ್ಟು ಪಿಎಫ್ ನಿಮಗೆ ದೊರೆಯಲಿದೆ. ಪಿಎಫ್ ಕಟಾವು ಆಗುತ್ತಿದೆಯೆ ಇಲ್ಲವೇ ಎಂಬುದನ್ನು ಗಮನಿಸುವ ಜವಾಬ್ದಾರಿ ನಿಮ್ಮದೇ ಆಗಿದೆ. ಈಕೆಲಸ ಮಾಡಲಿಲ್ಲ ಎಂದರೆ ಮೋಸಹೋಗುವುದು ಗ್ಯಾರೆಂಟಿ.ಹೀಗಾಗಿ ಹೊರಗುತ್ತಿಗೆ ನೌಕರರಿಗೆ ಸಂಬAಧಪಟ್ಟAತೆ ಯಾವುದೇ ಸಮಸ್ಯೆಗಳಿದ್ದರೂ ಜಿಲ್ಲಾ ಸಂಘದ ಗಮನಕ್ಕಾಗಲಿ, ನಮ್ಮ ಗಮನ ಕ್ಕಾಗಲಿ ತರುವ ಪ್ರಯತ್ನ ಮಾಡಿದರೆ ನಿಮ್ಮ ನೆರವಿಗೆ ಸದಾ ನಿಲ್ಲಲಿದ್ದೇವೆ ಎಂದರು.
ಉಪಾಧ್ಯಕ್ಷ ಗಂಗಾಧರ್ ಯಾದವ್ ಮಾತನಾಡಿ ಹೊರಗುತ್ತಿಗೆ ನೌಕರರ ಸಂಘವು ನೌಕರರ ಹಿತರಕ್ಷ ನಾಗಿ ಕೆಲಸ ಮಾಡಲಿದೆ.ಜಿಲ್ಲೆಯ ಪ್ರತಿಯೊಂದು ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ನೌಕರರು ಸಂಘದ ಸದಸ್ಯ÷ತ್ವ ಪಡೆಯುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಬೇಕು.ಈ ನಿಟ್ಟನಲ್ಲಿ ಜಿಲ್ಲಾ ಸಮಘದೊಟ್ಟಿಗೆ ರಾಜ್ಯ ಸಂಘಟನೆ ಸೇತುವೆಯಾಗಿ ಕೆಲಸ ಮಾಡಲಿದೆ. ನಿಮಗೆ ಉದ್ಯೋಗದ ಸ್ಥಳದಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳಿಗೆ ನಮ್ಮ ಸಂಘಟನೆ ಬೆಂಬಲವಾಗಿ ನಿಲ್ಲಲಿದೆ ಎಂದರು.
ಎಲ್ಲಾ ಸರ್ಕಾರಿ ಹೊರಗುತ್ತಿಗೆ ನೌಕರರ ಕುಂದು ಕೊರತೆಗಳು ಹಾಗೂ ತಮಗೆ ಸರ್ಕಾರದ ಎಲ್ಲಾ ಸೇವಾ ಭದ್ರತೆಗಳಿಂದ ವಂಚಿತರಾಗಿರುವ ಬಗ್ಗೆ ಮಾಹಿತಿಯನ್ನು ನೀಡಿ ತಮ್ಮ ಪರವಾಗಿ ಸದಾ ಇರುತ್ತವೆ ಎಂದು ಈ ಮೂಲಕ ತಿಳಿಸಿರುತ್ತಾರೆ.

ಚಿಕ್ಕಬಳ್ಳಾಪುರ : ನಗರದ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಕಟ್ಟಡದಲ್ಲಿ ನಡೆದ ಹೊರಗುತ್ತಿಗೆ ನೌಕರರ ಸಮಾವೇಶದಲ್ಲಿ ನೂತನ ಜಿಲ್ಲಾ ಸಮಿತಿಗೆ ರಾಜ್ಯಾಧ್ಯಕ್ಷ ಸುಧಾಕರ್ ನೇತೃತ್ವದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶಪತ್ರಗಳನ್ನು ವಿತರಣೆ ಮಾಡಲಾಯಿತು.
ಜಿಲ್ಲಾ ಗೌರವಾಧ್ಯಕ್ಷರಾಗಿ ಎಂ. ಮುನಿರಾಜು, ಜಿಲ್ಲಾಧ್ಯಕ್ಷರಾಗಿ ರಾಜೇಶ್ ವೈ.ವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನರಸಿಂಹಮೂರ್ತಿ.ಡಿ.ಎನ್, ಜಿಲ್ಲಾ ಉಪಾಧ್ಯಕ್ಷರಾಗಿ ಸುಧಾಕರ್.ಎಸ್, ಜಿಲ್ಲಾ ಕಾರ್ಯದರ್ಶಿ ಕಿಶೋರ್.ಎನ್, ನಾಗರಾಜ್.ಎಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಕಾಂತ್,ಶಾAತ, ರಾಜೇಶ್,ಟಿ.ಎಸ್.ಶ್ರೀನಾಥ,ಸವಿತಾ, ಜಿಲ್ಲಾ ಸಹ ಕಾರ್ಯದರ್ಶಿ-ದೇವರಾಜು ಜಿ ಎನ್, ನರಸಿಂಹಗೌಡ.ಎನ್. ಈ ವೇಳೆ ರಾಜ್ಯಾಧ್ಯಕ್ಷ ಸುಧಾಕರ್, ರಾಜ್ಯ ಉಪಾಧ್ಯಕ್ಷ ಗಂಗಾಧರ್.ಎA, ರಾಜ್ಯ ವಕ್ತಾರರಾದ ಸುನಿಲ್ ಕೆ.ಸಿ,ಜಿಲ್ಲಾ ಕಾನೂನು ಸಲಹೆಗಾರ ಮುನಿರಾಜು.ಎನ್, ಇದ್ದರು.