Viral Video: ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಮುತ್ತಿಡಲು ಹೋದವನಿಗೆ ಕೊನೆಗೆ ಆಗಿದ್ದೇನು? ಶಾಕಿಂಗ್ ವಿಡಿಯೊ ವೈರಲ್
ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಕುಡಿದ ಮತ್ತಿನಲ್ಲಿದ್ದ ಜಿತೇಂದ್ರ ಕುಮಾರ್ ಎಂಬ ವ್ಯಕ್ತಿ ಹಾವನ್ನು ಹಿಡಿದು ಕುತ್ತಿಗೆಗೆ ಸುತ್ತಕೊಂಡು ಅದಕ್ಕೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡಿದ್ದಾನೆ. ಇದೀಗ ಆತ ಮೊರಾದಾಬಾದ್ನ ಖಾಸಗಿ ಆಸ್ಪತ್ರೆಯ ಐಸಿಯುವಿನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಆತ ಹಾವಿಗೆ ಮುತ್ತಿಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಲಖನೌ: ಕಾಳಿಂಗ ಸರ್ಪದ ತಲೆಗೆ ವ್ಯಕ್ತಿಯೊಬ್ಬ ಚುಂಬಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಾಗೇ ಇತ್ತೀಚೆಗೆ ಮಹಿಳೆಯೊಬ್ಬಳು ಹಾವಿಗೆ ಸ್ನಾನ ಮಾಡಿಸುತ್ತಿರುವ ವಿಡಿಯೊ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಉತ್ತರ ಪ್ರದೇಶ (Uttarpradesh)ದಲ್ಲಿ ನಡೆದ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ವಿಷಕಾರಿ ಹಾವಿಗೆ(Snake) ಮುತ್ತಿಟ್ಟು ಈಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಆತ ಹಾವಿಗೆ ಮುತ್ತಿಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ವಿಡಿಯೊದಲ್ಲಿ ವ್ಯಕ್ತಿಯೊಬ್ಬ ತನ್ನ ಕುತ್ತಿಗೆಗೆ ಹಾವನ್ನು ಸುತ್ತಿಕೊಂಡು ನಿಧಾನವಾಗಿ ತನ್ನ ಮುಖವನ್ನು ಹಾವಿನ ಕಡೆಗೆ ಬಾಗಿಸಿ ಹಾವನ್ನು ಚುಂಬಿಸಲು ಯತ್ನಿಸುತ್ತಿರುವುದು ಸೆರೆಯಾಗಿದೆ. ಹಾವನ್ನು ಚುಂಬಿಸಲು ಹೋಗಿ ಆತ ಹಾವಿನಿಂದ ಕಚ್ಚಿಸಿಕೊಂಡಿದ್ದಾನೆ. ಹಾವಿನ ಕಡಿತದಿಂದ ತನಗೆ ಏನೂ ಆಗೇ ಇಲ್ಲ ಎಂಬಂತೆ ವರ್ತಿಸಿದ್ದಾನೆ. ಆದರೆ ಈಗ ಆಸ್ಪತ್ರೆಯ ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ...
ये कला दिखा रहे थे तभी सांप ने डस लिया. अब ये जिंदगी और मौत के बीच ICU में जंग लड़ रहे हैं. ये अपने गांव में अक्सर इस तरह की कलाकारी किया करते थे. लेकिन इस बार इन्हें सांप को Kiss करना महंगा पड़ गया. घटना यूपी अमरोहा की है. pic.twitter.com/15ZMYyz3c9
— Priya singh (@priyarajputlive) June 14, 2025
ನಡೆದಿದ್ದೇನು?
ವರದಿ ಪ್ರಕಾರ, ಈ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಇಂತಹ ಎಡವಟ್ಟು ಮಾಡಿಕೊಂಡ ವ್ಯಕ್ತಿಯನ್ನು ಜಿತೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಗೋಡೆಯ ಮೇಲೆ ಹಾವೊಂದು ಕಾಣಿಸಿಕೊಂಡಾಗ ಜನರು ಭಯಬೀತರಾಗಿದ್ದರು. ಆ ವೇಳೆ ಜಿತೇಂದ್ರ ಸ್ಥಳಕ್ಕೆ ಆಗಮಿಸಿ ಹಾವನ್ನು ಹಿಡಿದು ತಕ್ಷಣ ಕುತ್ತಿಗೆಗೆ ಸುತ್ತಿಕೊಂಡಿದ್ದಾನೆ. ಕುಡಿದ ಮಂಪರಿನಲ್ಲಿದ್ದ ಆತ ಹಾವಿಗೆ ಚುಂಬಿಸಲು ಹೋಗಿ ಅದರಿಂದ ಕಚ್ಚಿಸಿಕೊಂಡಿದ್ದಾನೆ. ಕೊನೆಗೆ ಅವನ ಸ್ಥಿತಿ ಹದಗೆಟ್ಟು ಹತ್ತಿರದ ಆಸ್ಪತ್ರೆಗೆ ಸೇರಿಲಾಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಜಿಪ್ಲೈನ್ ಕ್ರೇಜ್ ನಿಮಗಿದ್ಯಾ? ಹಾಗಿದ್ರೆ ಹುಷಾರು! ಈ ಶಾಕಿಂಗ್ ವಿಡಿಯೊ ನೋಡಿ
ಹಾವಿನ ಜತೆ ಸ್ಟಂಟ್ ಮಾಡಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು, ತಮಿಳುನಾಡಿನ ಧರ್ಮಪುರಿಯಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಕುತ್ತಿಗೆಗೆ ಸುತ್ತಿಕೊಂಡ ಹಾವಿಗೆ ಮದ್ಯ ಕುಡಿಸಲು ಪ್ರಯತ್ನಿಸಿದ್ದಾನೆ. ಈ ಘಟನೆಯನ್ನು ಸ್ಥಳೀಯರು ಪೊಲೀಸರಿಗೆ ವರದಿ ಮಾಡಿದ್ದರು. ಹೀಗಾಗಿ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದರು.
ಅಲ್ಲದೇ ಈ ಹಿಂದೆ ಯುವಕನೊಬ್ಬ ಕಾಳಿಂಗ ಸರ್ಪದ ತಲೆಗೆ ಚುಂಬಿಸುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈತನ ಈ ವಿಡಿಯೊ ನೋಡಿ ನೆಟ್ಟಿಗರು ಕಿಡಿಕಾರಿದ್ದರು.