ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಳೆಗೆ ಹಾಳಾಗಿ ರೈತರಿಗೆ ಕಣ್ಣೀರು ತರಿಸುತ್ತಿರುವ ದ್ರಾಕ್ಷಿ ಬೆಳೆಗಾರ :ಬೆಂಬಲ ಬೆಲೆ ಘೋಷಿಸಲು ಒತ್ತಾಯ

ಕಳೆದೊಂದು ತಿಂಗಳ  ಹಿಂದೆಯಷ್ಟೇ ಮಳೆ ಇಲ್ಲದ ಕಾರಣ ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿದ್ದ ದ್ರಾಕ್ಷಿ ಮಳೆಗಾಲ ಪ್ರಾರಂಭವಾಗುತ್ತಿದ್ದAತೆ ದಿಢೀರ್ ಬೆಲೆ ಕುಸಿತ ಭೀತಿಯಿಂದ ದ್ರಾಕ್ಷಿ ಬೆಳೆಗಾರರು ಕಂಗಾಲಾ ಗಿದ್ದಾರೆ. ಹೋದಷ್ಟು ಬೆಲೆ ಹೋಗಲಿ ತೋಟದಲ್ಲಿ ಸರಕು ಖಾಲಿಯಾದರೆ ಸಾಕು ಎಂದು ದ್ರಾಕ್ಷಿ ಬೆಳೆ ಮಾರಾಟಕ್ಕೆ ಇಟ್ಟರೂ, ಮಳೆಯಿಂದ ದ್ರಾಕ್ಷಿ ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ

ಮಳೆಗೆ ಹಾಳಾಗಿ ರೈತರಿಗೆ ಕಣ್ಣೀರು ತರಿಸುತ್ತಿರುವ ದ್ರಾಕ್ಷಿ ಬೆಳೆಗಾರ

ಕೊಯ್ಲಿಗೆ ಸಿದ್ದವಾಗಿರುವ ದ್ರಾಕ್ಷಿ ತೋಟದ ಚಿತ್ರ

Profile Ashok Nayak Jun 2, 2025 1:21 AM

ಚಿಕ್ಕಬಳ್ಳಾಪುರ: ಬರಗಾಲದಲ್ಲೂ ಕಷ್ಟ ಪಟ್ಟು ಬೆಳೆದ ದ್ರಾಕ್ಷಿಗೆ ಉತ್ತಮ ಬೆಲೆ ದಕ್ಕುವ ವೇಳೆಗೆ ಸುರಿದ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದ್ದು ರೈತರು ಕಣ್ಣೀರಲ್ಲಿ ಕೈತೊಳೆಯುವಂತೆ ಆಗಿದೆ.ಇತರೆ ವಾಣಿಜ್ಯ ಬೆಳೆಗಳಿಗೆ ನೀಡಿದಂತೆ ದ್ರಾಕ್ಷಿöಗೂ ಕೂಡ ಬೆಂಬಲಬೆಲೆ ನೀಡಬೇಕೆಂದು ರೈತರು ಸರಕಾರಕ್ಕೆ ಮೊರೆಯಿಟ್ಟಿದ್ದಾರೆ.  

ಕಟಾವಿಗೆ ಬರುವ ವೇಳೆಗೆ ಮಳೆ ಬಿದ್ದು ಬೆಳೆ ಹಾಳಾಗತೊಡಗಿದೆ. ಧಾರಾಕಾರ ಮಳೆಯಿಂದಾಗಿ ದ್ರಾಕ್ಷಿ ಬೆಳೆಗಾರ ಕಣ್ಣೀರು ಇಡುವಂತಾಗಿದೆ.ಇದರಿAದಾಗಿ ದ್ರಾಕ್ಷಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಅಡಿಕೆ, ಕೊಬ್ಬರಿ, ಸೇರಿದಂತೆ ಬೇರೆ ಬೆಳೆಗಳಿಗೆ ನೀಡಿದಂತೆ ಕನಿಷ್ಠ ಬೆಂಬಲ ಘೋಷಿಸಿ ದ್ರಾಕ್ಷಿ ಬೆಳೆಗಾರರನ್ನು ಬದುಕಿಸಬೇಕೆಂಬ ಬೇಡಿಕೆಯೂ ಪ್ರಬಲವಾಗಿದೆ.

ಒಂದೆಡೆ ದ್ರಾಕ್ಷಿ ಹಣ್ಣಿಗೆ ಬೇಡಿಕೆ ಇದ್ದರೆ, ಮತ್ತೊಂದೆಡೆ ಕೊಯ್ಲಿಗೆ ಬಂದಿರುವ ದ್ರಾಕ್ಷಿ ಮಳೆ ಯಿಂದಾಗಿ ತೋಟಗಳಲ್ಲಿಯೇ ಕೊಳೆಯುತ್ತಿದೆ. ಹೀಗಾಗಿ ದ್ರಾಕ್ಷಿ ಬೆಳೆಗಾರರ ಬದುಕು ಕತ್ತಲೆಯಂತಾ ಗಿದೆ.

ಇದನ್ನೂ ಓದಿ: Chikkaballapur News: ಶ್ರದ್ಧಾಭಕ್ತಿಯಿಂದ ನಡೆದ ಕಾಳಿಕಾಂಭದೇವಿ ಕರಗ ಮಹೋತ್ಸವ

ಕಳೆದೊಂದು ತಿಂಗಳ  ಹಿಂದೆಯಷ್ಟೇ ಮಳೆ ಇಲ್ಲದ ಕಾರಣ ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿದ್ದ ದ್ರಾಕ್ಷಿ ಮಳೆಗಾಲ ಪ್ರಾರಂಭವಾಗುತ್ತಿದ್ದAತೆ ದಿಢೀರ್ ಬೆಲೆ ಕುಸಿತ ಭೀತಿಯಿಂದ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಹೋದಷ್ಟು ಬೆಲೆ ಹೋಗಲಿ ತೋಟದಲ್ಲಿ ಸರಕು ಖಾಲಿಯಾದರೆ ಸಾಕು ಎಂದು ದ್ರಾಕ್ಷಿ ಬೆಳೆ ಮಾರಾಟಕ್ಕೆ ಇಟ್ಟರೂ, ಮಳೆಯಿಂದ ದ್ರಾಕ್ಷಿ ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ಕಾಡಿ ಬೇಡಿ ವ್ಯಾಪಾರಸ್ಥರ ಬೆನ್ನು ಬಿದ್ದರೆ ಸಾಲ ನೀಡುವುದಾದರೆ ಸರಕು ಖಾಲಿ ಮಾಡುವ ಭರವಸೆ ನೀಡುವ ಸ್ಥಿತಿ ಒದಗಿ ಬಂದಿದೆ.

ಬೇಸಿಗೆಯ ಬಿಸಿಲಿನ ತಾಪದಲ್ಲಿ ದ್ರಾಕ್ಷಿ ಬೆಳೆಯುವುದು ಅಷ್ಟು ಸುಲಭವಲ್ಲ. ಹಾಗಾಗಿ ಈ ಬಾರಿ ದ್ರಾಕ್ಷಿ ಬೆಳೆಗೆ ಬೆಳೆಗಾರರು ಲಕ್ಷಗಟ್ಟಲೇ ಬಂಡವಾಳ ಸುರಿದು, ಬಂಡವಾಳ ಹಿಂಪಡೆಯುವ ನಿರೀಕ್ಷೆಯಲ್ಲಿ ಇದ್ದರು.ಉಳುಮೆ, ನೀರು, ಗೊಬ್ಬರ, ಹೊಸ ಮಣ್ಣು, ಔಷಧಿ ರಸಗೊಬ್ಬರ, ಕೂಲಿ ಆಳು ಹೀಗೆ. ಹಲವು ಬಗೆಯಲ್ಲಿ ಬೆಳೆ ನಿರ್ವಹಣೆಗೆ ಸಾಕಷ್ಟು ಖರ್ಚು ಮಾಡಿದ್ದಾರೆ. ಈಗ ದ್ರಾಕ್ಷಿ ಬೆಲೆ ಕುಸಿತಕ್ಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಹಾಕಿದ ಬಂಡವಾಳವು ಸಹ ವಾಪಸ್ಸು ಬರುವ ಯಾವುದೇ ಖಾತ್ರಿ ಇಲ್ಲದೇ ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂಗಾರು ಮಳೆಯಿಂದ ಭಾರೀ ನಷ್ಟ: ಕಳೆದ ವರ್ಷ ಇದೇ ಸೀಸನ್‌ನಲ್ಲಿ ದ್ರಾಕ್ಷಿ ಕೆ.ಜಿಗೆ ೩೫ ರಿಂದ ೪೦ ರೂ.ವರೆಗೆ ಇತ್ತು. ಈ ವರ್ಷ ೧೫ ದಿನಗಳ ಹಿಂದೆ ಸರಾಸರಿ ೩೦ ರಿಂದ ೫೦ ರೂ. ಮೇಲೆ ದ್ರಾಕ್ಷಿ ಮಾರಾಟವಾಗಿದೆ. ಮಳೆ ಬಿದ್ದ ಬಳಿಕ ದಿನದಿಂದ ದಿನಕ್ಕೆ ಬೆಲೆ ಕುಸಿಯುತ್ತಿದ್ದು, ಈಗ ಖರೀದಿಸಲು ಮುಂದೆ ಬರುವವರು ಇಲ್ಲದಂತಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೧೦ರಿಂದ ೧೨ ಸಾವಿರ ಹೆಕ್ಟೇರ್‌ನಲ್ಲಿದ್ರಾಕ್ಷಿ ಬೆಳೆ ಇದ್ದು,ಕಳೆದ ಹಲವು ದಿನಗಳಿಂದ ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವ ಕಾರಣ ಸಂಪೂರ್ಣ ಹಣ್ಣಾದ ದ್ರಾಕ್ಷಿ ಬಿರುಕು ಬಿಟ್ಟು ಕೊಳೆತು ಹೋಗುತ್ತಿದೆ, ಸಾಲದೆಂಬAತೆ ಇಡೀ ದ್ರಾಕ್ಷಿ ಗೊಂಚಲನ್ನು ನಾಶಗೊಳಿಸುತ್ತಿದೆ. ಕೊಳೆತ ದ್ರಾಕ್ಷಿ ಹಣ್ಣನ್ನು ಗೊನೆಯಿಂದ ಬಿಡಿಸಿ ಬಿಸಾಡಬೇಕು ಇಲ್ಲದಿದ್ದರೆ ಗೊನೆ ಸಂಪೂರ್ಣ ನಾಶಗೊಳಿಸುತ್ತದೆ, ಇದನ್ನು ಕಿತ್ತೆಸೆಯಲು ಕೂಲಿಯಾಳುಗಳ ಬೇಕಿದ್ದು ದುಬಾರಿ ಕೂಲಿಯ ಹೊರೆ ರೈತರಿಗೆ ಎದುರಾಗಿದೆ.

ತಾಲೂಕಿನ ಮಂಚನಬಲೆ,ಸಬ್ಬೇನಹಳ್ಳಿ ದೇವಸ್ಥಾನದ ಹೊಸಹಳ್ಳಿ,ಸೊಪ್ಪಹಳ್ಳಿ, ದಿಬ್ಬೂರು, ಬೊಮ್ಮಗಾನಹಳ್ಳಿ, ಕಮ್ಮಗುಟ್ಟಹಳ್ಳಿ, ಅರೂರು, ಪೆರೇಸಂದ್ರ, ಆದೇಗಾರಹಳ್ಳಿ, ದೊಡ್ಡಮರಳಿ, ಡಿ.ಹೊಸುರು, ಹೊಸಹಳ್ಳಿ, ಯಲುವಹಳ್ಳಿ, ದೇವಿಶೆಟ್ಟಹಳ್ಳಿ, ಕುಪ್ಪಹಳ್ಳಿ, ಚದಲುಪುರ, ಕೊತ್ತನೂರು, ನಂದಿ, ಅರಸನಹಳ್ಳಿ, ಪಟ್ರೇನಹಳ್ಳಿ, ಮತ್ತಕದಹಳ್ಳಿ, ಕಣಿತಹಳ್ಳಿ, ಗವಿಗಾನಹಳ್ಳಿ, ಕೊಳವನಹಳ್ಳಿ, ಶ್ರೀರಾಮಪುರ, ಅಗಲಗುರ್ಕಿ ಸೇರಿದಂತೆ ಬಹುತೇಕ ಕಡೆ ನೂರಾರು ಎಕರೆ ದ್ರಾಕ್ಷಿ ತೋಟಗಳು ಕೊಯ್ಲಿಗೆ ಬಂದಿದ್ದು, ದ್ರಾಕ್ಷಿಗೆ ಬೇಡಿಕೆ ಬರುವ ನಿರೀಕ್ಷೆಯಲ್ಲಿ ದೇವರ ಮೊರೆ ಹೋಗಿದ್ದಾರೆ.

ಮಳೆ ನಿಂತು ಇನ್ನು  ವಾರ-ಹದಿನೈದು ದಿನದೊಳಗೆ ದ್ರಾಕ್ಷಿ ತೋಟಗಳಲ್ಲಿ ಹಣ್ಣು ಕೊಯ್ಲು ನಡೆಯ ದಿದ್ದರೆ ಟನ್‌ಗಟ್ಟಲೇ ದ್ರಾಕ್ಷಿ ತಿಪ್ಪೆ ಪಾಲಾಗಲಿದೆ. ಹೀಗಾಗಿ ಮಳೆಯಿಂದ ಬೆಲೆ ಕುಸಿತದ ಕಾರ್ಮೋಡ ಬೆಳೆಗಾರರನ್ನು ಆವರಿಸಿದೆ.

ಕಳೆದ ವರ್ಷ  ಮೇ,ಜೂನ್ ತಿಂಗಳಲ್ಲಿ ದ್ರಾಕ್ಷಿಯ ಉತ್ತಮ ಫಸಲು ಬಂದಾಗ, ಕೊಳ್ಳುವವರಿಂದ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ನಾವು ಕೇಳಿದಷ್ಟು ದರಕ್ಕೆ ಕೊಳ್ಳಲು ಖರೀದಿದಾರರು ಸಿದ್ಧರಿದ್ದರು. ಕಳೆದ ವರ್ಷ ಮಾವಿನ ಹಣ್ಣಿನ ಹೊಡೆತ ಇದ್ದರೂ ದ್ರಾಕ್ಷಿ ಕೆ.ಜಿಗೆ ೪೦ ರಿಂದ ೫೦ ರೂ.ವರೆಗೆ ಮಾರಾಟ ಮಾಡಿದ್ದೇವು. ಆದರೆ, ಈಗ ಮಾವಿನ ಹೊಡೆತ ಇಲ್ಲದಿದ್ದರೂ ಮಳೆ ಹೊಡೆತದಿಂದ ವ್ಯಾಪಾರಸ್ಥರು ಖರೀದಿಗೆ ಮುಂದಾಗದಿರುವುದು ಬೇಸರವಾಗಿದೆ ಎಂದು ದ್ರಾಕ್ಷಿ ಬೆಳೆಗಾರರು ಆಳಲು ತೋಡಿಕೊಂಡಿದ್ದಾರೆ.

೨೦೧೯ರಿAದ ಸತತವಾಗಿ ಬೆಲೆ ಕುಸಿತ ಕಂಡಿದ್ದು, ಸದ್ಯ  ದ್ರಾಕ್ಷಿ ಬೆಲೆ ಕೆಜಿಗೆ ೨೦-೩೦ ರೂಪಾಯಿ ಇದ್ದರೆ, ಈಬಾರಿ  ದ್ರಾಕ್ಷಿಗೆ ಕನಿಷ್ಠ ೪೦ ರೂಪಾಯಿ ಸಿಕ್ಕಿದರೂ ರೈತರಿಗೆ ಎಷ್ಟೊ? ಅನುಕೂಲ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರ ಜಗದೀಶ್ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗೆಂದೇ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ದ್ರಾಕ್ಷಿ ಬೆಳೆಗಾರರನ್ನು ಸಂಕಷ್ಟಕ್ಕೆ ಎಡೆಮಾಡಿಕೊಟ್ಟಿದೆ. ಪ್ರಸ್ತುತ ದ್ರಾಕ್ಷಿ ಬೆಳೆಗಾರರ ಬದುಕು ಬಾಣಲೆ ಇಂದ ಬೆಂಕಿಗೆ ಬಿದ್ದಂತಾಗಿದ್ದು, ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ದ್ರಾಕ್ಷಿ ಬೆಳೆಗಾರರು ಆಗ್ರಹಿಸಿದ್ದಾರೆ.

ರೈತರು ಸಂಕಷ್ಟಕ್ಕೆ ಸಿಲುಕಲು ಮುಖ್ಯವಾಗಿ ದ್ರಾಕ್ಷಿ ಬೆಳೆಗಾರರಿಗೆ ಬೇಕಾದ ಶೀತಲೀಕರಣ ಘಟಕದ ಕೊರತೆ ಎದ್ದು ಕಾಣುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಬಿಜಾಪುರ ಜಿಲ್ಲೆ ಹೊರತುಪಡಿಸಿದರೆ ಚಿಕ್ಕಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತಿದೆ. ಬೆಲೆ, ಬೇಡಿಕೆ ಕುಸಿತದ ಸಂದರ್ಭದಲ್ಲಿ ದ್ರಾಕ್ಷಿಯನ್ನು ದೀರ್ಘ ಕಾಲದವರೆಗೂ ಉತ್ತಮ ಗುಣಮಟ್ಟದಿಂದ ಕಾಯ್ದುೊಳ್ಳಲು ಜಿಲ್ಲೆಯಲ್ಲಿ ಶೀತಲೀಕರಣ ಘಟಕ ಇಲ್ಲ. ರೈತರ ಪಾಲಿಗೆ ಇದು ದೊಡ್ಡ ಸಮಸ್ಯೆಯಾಗಿದೆ.
*

ಜಿಲ್ಲೆಯಲ್ಲಿ ದ್ರಾಕ್ಷಿಯನ್ನು ಹೆಚ್ಚಾಗಿ ಬೆಲೆಯುವ ಕಾರಣ ಹೆಚ್ಚು ಕೋಲ್ಡ್ ಸ್ಟೋರೇಜ್ ನಿರ್ಮಾಣ ಆಗಬೇಕು. ದ್ರಾಕ್ಷಿಯನ್ನು ಆನ್‌ಲೈನ್ ಟ್ರೇಡಿಂಗ್ ಮೂಲಕ ವ್ಯವಸ್ಥಿತ ಮಾರಟಕ್ಕೆ ಮುಂದಾಗಿ ರೈತರ ಕೈಹಿಡಿಯಬೇಕು.ದ್ರಾಕ್ಷಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರಿಂದ ನೇರವಾಗಿ ದ್ರಾಕ್ಷಿಯನ್ನು  ಖರೀದಿಸಿ ಶಾಲಾ ಮಕ್ಕಳಿಗೆ, ಹಾಲು-ಮೊಟ್ಟೆಯಂತೆ ಪೌಷ್ಟಿಕ ಆಹಾರವಾಗಿ ವಿತರಿಸಬೇಕು. ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸಲು ದೇವೇಗೌಡರ ಕುಟುಂಬ ದಿಟ್ಟ ಪ್ರಯತ್ನ ಮಾಡಿದಂತೆ, ಬಯಲುಸೀಮೆ ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರತಿನಿಧಿಗಳು ದ್ರಾಕ್ಷಿಗೆ ಬೆಂಬಲ ಬೆಲೆ ಒದಗಿಸಲು ಕ್ರಮ ವಹಿಸಬೇಕೆಂದು ದ್ರಾಕ್ಷಿ ರೈತರು ಒತ್ತಾಯಿಸಿದ್ದಾರೆ.ಹೆಸರಿಗಷ್ಟೆ ಸ್ಥಾಪನೆಯಾಗಿರುವ ದ್ರಾಕ್ಷಿ ಮಂಡಳಿಗೆ ಸರಕಾರ ಅನುದಾನ ಕೊಟ್ಟು ಆ ಮೂಲಕ ದ್ರಾಕ್ಷಿಯನ್ನು ಗ್ರಾಹಕರಿಗೆ ಪೂರೈಸುವ ದ್ರಾಕ್ಷಿ ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ದ್ರಾಕ್ಷಿ ಬೆಳೆಗಾರ ರಾಮಣ್ಣ ಒತ್ತಾಯಿಸಿದ್ದಾರೆ.
*

ಒಂದು ಎಕರೆಯಲ್ಲಿ ದಿಲ್‌ಖುಷ್ ತಳಿಯ ದ್ರಾಕ್ಷಿ ಬೆಳೆಯಲು ಈ ಬಾರಿ ಸುಮಾರು ೫ ಲಕ್ಷ ಖರ್ಚು ತಗುಲಿದೆ. ಇಳುವರಿ ಚೆನ್ನಾಗಿ ಬಂದು ಈಗ ಕಟಾವಿಗೆ ಸಿದ್ಧವಿದೆ. ಆದರೆ  ಮಳೆಯಿಂದ ಹಣ್ಣು ಡ್ಯಾಮೇಜ್ ಆಗುತ್ತಿದ್ದು, ಲಕ್ಷಾಂತರ ರೂ.ನಷ್ಟ ಸಂಭವಿಸಿದೆ. ಸಂಕಷ್ಟದಲ್ಲಿರುವ ದ್ರಾಕ್ಷಿ ಬೆಳೆಗಾರರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು.
ದ್ರಾಕ್ಷಿ ಬೆಳೆಗಾರ ಶ್ರೀನಿವಾಸ್, ಚಿಕ್ಕಬಳ್ಳಾಪುರ