ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಜೂ.9ರ ಪ್ರೀಡಂ ಪಾರ್ಕಿನಲ್ಲಿ ನಡೆಯುವ ಅನಿರ್ಧಿಷ್ಟ ಮುಷ್ಕರಕ್ಕೆ ಬೆಂಬಲಿಸಿ : ಜಿಲ್ಲಾಧ್ಯಕ್ಷ ಪ್ರಕಾಶ್ ಮನವಿ

ಬೆಂಗಳೂರಿನಲ್ಲಿ ನಡೆಯುವ ಅನಿರ್ಧಿಷ್ಠಾವಧಿ ಮುಷ್ಕರ ಮಾಡು ಇಲ್ಲವೆ ಮಡಿ ಹೋರಾಟ ವಾಗಿರು ತ್ತದೆ. ರಾಜ್ಯದಲ್ಲಿ ಒಟ್ಟು 10450 ಗ್ರಾಮಸಹಾಯಕರಿದ್ದು, ಜಿಲ್ಲೆಯಲ್ಲಿ 261 ಮಂದಿ ಇದ್ದೇವೆ. ತಾವೆಲ್ಲರೂ ಕುಟುಂಬ ಸಮೇತ ಈ ಮುಷ್ಕರದಲ್ಲಿ ಭಾಗಿಯಾಗಿ ಒಗ್ಗಟ್ಟನ್ನು ಪ್ರದರ್ಶನ ಮಾಡುವ ಮೂಲಕ ನಮ್ಮ ನ್ಯಾಯಯುತ ಹಕ್ಕೊತ್ತಾಯಗಳನ್ನು ಈಡೇರಿಸಿಕೊಳ್ಳಲು ಮುಂದಾಗ ಬೇಕು

ಜೂ.9ರ ಪ್ರೀಡಂ ಪಾರ್ಕಿನಲ್ಲಿ ನಡೆಯುವ ಅನಿರ್ಧಿಷ್ಟ ಮುಷ್ಕರಕ್ಕೆ ಬೆಂಬಲಿಸಿ

ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ  ಕರ್ನಾಟಕ ರಾಜ್ಯ ಸರಕಾರಿ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಜಿಲ್ಲಾ ಪದಾಧಿಕಾರಿಗಳು ನಡೆಸಿದ ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಪ್ರಕಾಶ್ ಮಾತನಾಡಿದರು.

Profile Ashok Nayak Jun 3, 2025 11:56 AM

ಗ್ರಾಮ ಸಹಾಯಕರ ಹುದ್ದೆ ಖಾಯಂಗೊಳಿಸಿ ಅಲ್ಲಿಯವರೆಗೆ ಸೇವಾ ಭದ್ರತೆಯೊಂದಿಗೆ 27 ಸಾವಿರ ವೇತನ ನೀಡಲು ಆಗ್ರಹ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿರುವ 10450 ಗ್ರಾಮ ಸಹಾಯಕರ ಹುದ್ದೆಗಳನ್ನು ಸರಕಾರ ಈ ಕೂಡಲೇ ಖಾಯಂ ಮಾಡಬೇಕು.ಅಲ್ಲಿಯವರೆಗೆ ನಮಗೆ ಸೇವಾ ಭದ್ರತೆಯೊಂದಿಗೆ ಮಾಸಿಕ 27 ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿ ಜೂನ್ ೯ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಅನಿಧಿಷ್ಠಾವಧಿ ಮುಷ್ಕರಕ್ಕೆ ಬೆಂಬಲ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ಮನವಿ ಮಾಡಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮತನಾಡಿದರು.

ಬೆಂಗಳೂರಿನಲ್ಲಿ ನಡೆಯುವ ಅನಿರ್ಧಿಷ್ಠಾವಧಿ ಮುಷ್ಕರ ಮಾಡು ಇಲ್ಲವೆ ಮಡಿ ಹೋರಾಟ ವಾಗಿರುತ್ತದೆ. ರಾಜ್ಯದಲ್ಲಿ ಒಟ್ಟು 10450 ಗ್ರಾಮಸಹಾಯಕರಿದ್ದು, ಜಿಲ್ಲೆಯಲ್ಲಿ 261 ಮಂದಿ ಇದ್ದೇವೆ.ತಾವೆಲ್ಲರೂ ಕುಟುಂಬ ಸಮೇತ ಈ ಮುಷ್ಕರದಲ್ಲಿ ಭಾಗಿಯಾಗಿ ಒಗ್ಗಟ್ಟನ್ನು ಪ್ರದರ್ಶನ ಮಾಡುವ ಮೂಲಕ ನಮ್ಮ ನ್ಯಾಯಯುತ ಹಕ್ಕೊತ್ತಾಯಗಳನ್ನು ಈಡೇರಿಸಿಕೊಳ್ಳಲು ಮುಂದಾಗ ಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: IPL 2025 Final: ಆರ್‌ಸಿಬಿ-ಪಂಜಾಬ್‌ ಫೈನಲ್‌ ಪಂದ್ಯಕ್ಕೂ ಮುನ್ನ ನಿರ್ದೇಶಕ ರಾಜಮೌಳಿ ಭಾವನಾತ್ಮಕ ಪೋಸ್ಟ್‌

ಕರ್ನಾಟಕ ಗ್ರಾಮ ಕಛೇರಿಗಳ ರದ್ಧತಿ ಕಾಯ್ದೆ 1961ರ ಅನ್ವಯ ದಿನಾಂಕ ೧ ಫೆಬ್ರವರಿ 1962ರಿಂದ ಅನ್ವಯವಾಗುವಂತೆ ವಂಶಪಾರಂಪರ್ಯದ ಎಲ್ಲಾ ಗ್ರಾಮೀಣ ಹಂತದ ವಿಲೇಜ್ ಆಫೀಸರ್ಸ್ ಹುದ್ದೆಗಳು ರದ್ದಾಗಿದ್ದರಿಂದ ಕೆಳ ಹಂತದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಮ್ಮನ್ನು ಆಡಳಿತಾತ್ಮಕ ದೃಷ್ಟಿಯಿಂದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಿಗೆ ಸಹಾಯ ಮಾಡುವ ಸಲುವಾಗಿ 10450 ಗ್ರಾಮ ಸಹಾಯಕರ ಹುದ್ದೆಗಳನ್ನು ಸೃಷ್ಟಿಸಿ ಆಗಿಂದಾಗ್ಗೆ ವೇತನ ಹೆಚ್ಚಳ ಮಾಡುತ್ತಾ ಬರಲಾಗಿದೆ.

೨೦೦೭ನೇ ಸಾಲಿನಲ್ಲಿ ಗ್ರಾಮ ಸಹಾಯಕರ ಹುದ್ದೆಗಳನ್ನು ಖಾಯಂಗೊಳಿಸಿ ಪ್ರಸ್ತುತ ೧೫೦೦೦ಮಿತ ವೇತನ ಪಾವತಿಸಲಾಗುತ್ತಿರುತ್ತದೆ. ಆದರೆ ಯಾವುದೇ ಸೇವಾ ಭದ್ರತೆ ಕಲ್ಪಿಸಲಾಗಿರುವುದಿಲ್ಲ.ಸದರಿ ವೇತನ ಪಡೆದು ಇಂದಿನ ಬೆಲೆಯೇರಿಕೆಯ ಕಾಲದಲ್ಲಿ ಮಕ್ಕಳ ವಿದ್ಯಾಭ್ಯಾಸ, ಹೆಂಡತಿ, ಮಕ್ಕಳು ತಂದೆತಾಯಿಗಳ ಪೋಷಣೆ ಮಾಡಲು ಕಷ್ಟಕರವಾಗಿರುತ್ತದೆ.ಆದ್ದರಿಂದ ಸರಕಾರ ನಮ್ಮ ಹುದ್ದೆ ಯನ್ನು ಖಾಯಂಗೊಳಿಸಬೇಕು ಅಲ್ಲಿಯವರೆಗೆ ನಮಗೆ ಮಾಹೆಯಾನ ೨೭ಸಾವಿರ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದರು.

ಹಕ್ಕೊತ್ತಾಯಗಳು
1.2007ನೇ ಸಾಲಿನಿಂದ ಅನ್ವಯವಾಗುವಂತೆಗ್ರಾಮ ಸಹಾಯಕರಿಗೆ ಸೇವಾಭದ್ರತೆ ನೀಡಿ ಡಿ ಗ್ರೂಫ್ ಸಮಾನವಾದ ೨೭ಸಾವಿರ ವೇತನ ನಿಗದಿಪಡಿಸಬೇಕು.

2.ಮರಣ ಹೊಂದಿದ, ನಿವೃತ್ತಿ ಹೊಂದಿದ ಗ್ರಾಮ ಸಹಾಯಕರಿಗೆ 10 ಲಕ್ಷ ಇಡಿಗಂಟನ್ನು ನೀಡಬೇಕು.
ಈಎರಡು ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಜೂನ್ ೯ ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಹೋರಾಟ ನಡೆಯಲಿದೆ.

ಜಿಲ್ಲೆಯ ಎಲ್ಲಾ ವೃತ್ತಗಳ ಗ್ರಾಮ ಸಹಾಯಕರು ಮೀನ ಮೇಷ ಎಣಿಸದೆ ಕುಟುಂಬ ಸಮೇತ ಬಂದು ಹೋರಾಟವನ್ನು ಗಟ್ಟಿಗೊಳಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ಆನಂದ, ಎಂ.ವೆಂಕಟಶಪ್ಪ, ಆಂಜಿನಪ್ಪ, ಮುನಿಯಪ್ಪ  ಮತ್ತಿತರರು ಇದ್ದರು.