ವೈಚಾರಿಕತೆ ಮತ್ತು ವೈಜ್ಞಾನಿಕ ಜಾಗೃತಿಯ ಹರಿಕಾರ ಹೆಚ್.ಎನ್.ಯುವಕರಿಗೆ ಮಾದರಿ : ಪ್ರಾಧಿಕಾರದ ಅಧ್ಯಕ್ಷ ಶಿವಶಂಕರ್ರೆಡ್ಡಿ
ಡಾ.ಎಚ್.ನರಸಿಂಹಯ್ಯನವರು ಕಡುಬಡತನದಲ್ಲಿ ಶಿಕ್ಷಣ ಪಡೆದು ಉನ್ನತ ಮಟ್ಟ ವ್ಯಾಸಂಗ ಮಾಡಿ ಶಿಕ್ಷಣ ಪಡೆದವರು. ಬೆಂಗಳೂರು ನಗರಕ್ಕೆ ಬಸ್ ಸೌಕರ್ಯವಿಲ್ಲದ ಅ ಕಾಲದಲ್ಲಿ ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ಹೋಗಿ ವಿಧ್ಯಾಭ್ಯಾಸ ಕಲಿತರು. ಊಟಕ್ಕಾಗಿ ಉಚಿತ ಛತ್ರಗಳಲ್ಲಿ ಮಲಗಿ ವಾರನ್ನ ಉಂಡು ತಮ್ಮ ಶಿಕ್ಷಣ ಪಡೆದ ಯೋಗಿ.


ಗೌರಿಬಿದನೂರು; ಶಿಕ್ಷಣ ತಜ್ಞರು ಗಾಂಧಿವಾದಿಗಳು ಮೂಢನಂಬಿಕೆಗಳ ವಿರುದ್ದ ಅರಿವು ಮೂಡಿ ಸಿದ ಸಂತ ಗ್ರಾಮೀಣ ಭಾಗದ ಬಡವರ ಮಕ್ಕಳಿಗೆ ಶಿಕ್ಷಣ ಸೌಲಭ್ಯಕ್ಕಾಗಿ ಶ್ರಮಿಸಿದ ಡಾ ಎಚ್.ನರಸಿಂಹಯ್ಯನವರು ಇಂದಿನ ಯುವಕರಿಗೆ ಆದರ್ಶಪ್ರಾಯರು ಎಂದು ಮಾಜಿ ಸಚಿವ ಮತ್ತು ಡಾ ಎನ್ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.
ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಡಾ ಎಚ್ ನರಸಿಂಹಯ್ಯ ಅವರ ಅಮರ ಧಾಮದಲ್ಲಿ ಅವರ ಜನ್ಮದಿನದ ಅಂಗವಾಗಿ ನಮನ ಸಲ್ಲಿಸಿ ಮಾತನಾಡಿದರು.

ಡಾ.ಎಚ್.ನರಸಿಂಹಯ್ಯನವರು ಕಡುಬಡತನದಲ್ಲಿ ಶಿಕ್ಷಣ ಪಡೆದು ಉನ್ನತ ಮಟ್ಟ ವ್ಯಾಸಂಗ ಮಾಡಿ ಶಿಕ್ಷಣ ಪಡೆದವರು. ಬೆಂಗಳೂರು ನಗರಕ್ಕೆ ಬಸ್ ಸೌಕರ್ಯವಿಲ್ಲದ ಅ ಕಾಲದಲ್ಲಿ ಕಾಲ್ನಡಿಗೆ ಯಲ್ಲಿ ಬೆಂಗಳೂರಿಗೆ ಹೋಗಿ ವಿಧ್ಯಾಭ್ಯಾಸ ಕಲಿತರು. ಊಟಕ್ಕಾಗಿ ಉಚಿತ ಛತ್ರಗಳಲ್ಲಿ ಮಲಗಿ ವಾರನ್ನ ಉಂಡು ತಮ್ಮ ಶಿಕ್ಷಣ ಪಡೆದ ಯೋಗಿ. ತಾನು ಅನುಭವಿಸಿದ ಕಷ್ಟ ಕಾರ್ಪಣ್ಯಗಳು ಇಲ್ಲಿನ ಮಕ್ಕಳು ಅನುಭವಿಸಬಾರದು ಎಂಬ ಉದ್ದೇಶ ಇಟ್ಟುಕೊಂಡು ಹೊಸೂರು ಗ್ರಾಮದಲ್ಲಿ ಶಾಲೆ ಪ್ರಾರಂಭಿಸಿದರು ಎಂದು ತಿಳಿಸಿದರು.
ಇದನ್ನೂ ಓದಿ: IPL 2025: ಆರ್ಸಿಬಿ ಎದುರು ಪಂಜಾಬ್ ಕಿಂಗ್ಸ್ ಸೋಲಿಗೆ ಕಾರಣ ತಿಳಿಸಿದ ರಿಕಿ ಪಾಂಟಿಂಗ್!
ಇದೇ ಸಂದರ್ಭದಲ್ಲಿ ಸೈನ್ಸ್ ಪಾರ್ಕ್ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಹಯೋಗಲ್ಲಿ ಪರಿಸರ ದಿನಚರಣೆ ಅಂಗವಾಗಿ ಸಸಿಗಳನ್ನು ನೆಟ್ಟರು.
ಹೆಚ್.ಎನ್.ಸ್ಮರಣೆ ಕಾರ್ಯಕ್ರಮದಲ್ಲಿ ಎಚ್.ಎನ್.ಪ್ರಾಧಿಕಾರದ ಸದಸ್ಯ ಕೆ.ಪಿ.ಜೆ.ರೆಡ್ಡಿ, ಜಿ.ಜಗದೀಶ್, ಅರ್.ಕೆ ಸರೋಜ, ಶ್ರೀನಿವಾಸ್, ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಭಗವಂತರಾವ್ ಪಾಟೀಲ್, ಪ್ರಾಧಿಕಾರದ ಅಯುಕ್ತೆ ಪರಿಣ ರಾಮ್, ಹಾಗೂ ಸೌಮ್ಯ ಮಂಜುನಾಥ್. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಮುಖಂಡರಾದ ಎಚ್,ಎನ್,ಪ್ರಕಾಶ್ರೆಡ್ಡಿ ಮಾಜಿ ಡಿಸಿಸಿ ನಿರ್ದೇಶಕ ಮರಳೂರು ಹನುಮಂತರೆಡ್ಡಿ,ಕೆಪಿಜಿ ರೆಡ್ಡಿ,ಅರಣ್ಯ ಇಲಾಖೆ ಅಧಿಕಾರಿ ಹಂಸ .ಯುವ ಮುಖಂಡ ಶ್ರೀನಿವಾಸ್, ಅಲ್ಪಸಂಖ್ಯಾತ ಮುಖಂಡ ಮತೀನ್, ಹರ್ಷವರ್ದನ್ರೆಡ್ಡಿ, ವಿಶ್ವನಾಥ್, ತಾರಾನಾಥ್ ಬ್ಲಾಕ್ ಕಾಂಗ್ರೆಸ್ ವೇದಲವೇಣ ವೇಣು, ವಲೀ ಸೇರಿದಂತೆ ,ಕಾಲೇಜ್ ಪ್ರಾಂಶುಪಾಲರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.