ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಈ ʻಬಾಹುಬಲಿʼ ನೋಡಿದ್ರೆ ರಾಜಮೌಳಿನೂ ದಂಗಾಗಿ ಬಿಡ್ತಾರೆ! ವಿಡಿಯೊ ಫುಲ್‌ ವೈರಲ್‌

ಪುಟ್ಟ ಮಕ್ಕಳು ಏನೇ ಮಾಡಿದ್ರೂ ನೋಡುವುದಕ್ಕೆ ತಮಾಷೆಯಾಗಿರುತ್ತದೆ. ಇಲ್ಲಿಬ್ಬರು ಪುಟ್ಟ ಮಕ್ಕಳು "ಬಾಹುಬಲಿ" ಸಿನಿಮಾದ ಪೌರಾಣಿಕ ಕ್ಷಣವೊಂದನ್ನು ರೀ ಕ್ರಿಯೇಟ್‌ ಮಾಡಿದ್ದಾರೆ. ಇಲ್ಲಿ ಮಕ್ಕಳು ಕತ್ತಿಯ ಬದಲು ಅಡುಗೆಗೆ ಬಳಸುವ ಸೌಟನ್ನು ಹಿಡಿದುಕೊಂಡು ಈ ದೃಶ್ಯವನ್ನು ಮರುಸೃಷ್ಟಿಸಿದ್ದಾರೆ. ಅವರ ಈ ಮುದ್ದಾದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ.

ಈ ʻಬಾಹುಬಲಿʼ ನೋಡಿದ್ರೆ ರಾಜಮೌಳಿನೂ ನಕ್ಕು ನಕ್ಕು ಸುಸ್ತಾಗ್ತಾರೆ!

Profile pavithra Jun 7, 2025 12:12 PM

ನವದೆಹಲಿ: ಯಾವುದಾದರು ಸಿನಿಮಾದಲ್ಲಿ ತಮಗಿಷ್ಟವಾದ ಹಾಡು,ದೃಶ್ಯಗಳಿದ್ದರೆ ಮಕ್ಕಳು ಮನೆಯಲ್ಲಿ ಪದೇ ಪದೇ ಅದನ್ನೇ ಮಾಡುತ್ತಿರುತ್ತಾರೆ. ಇಲ್ಲಿಬ್ಬರು ಪುಟ್ಟ ಮಕ್ಕಳು ಕೂಡ "ಬಾಹುಬಲಿ"(Bahubali) ಸಿನಿಮಾದ ಪೌರಾಣಿಕ ಕ್ಷಣವೊಂದನ್ನು ರೀ ಕ್ರಿಯೇಟ್‌ ಮಾಡಿದ್ದಾರೆ. ಇಲ್ಲಿ ಮಕ್ಕಳು ಕತ್ತಿಯ ಬದಲು ಅಡುಗೆಗೆ ಬಳಸುವ ಸೌಟನ್ನು ಹಿಡಿದುಕೊಂಡು ಈ ದೃಶ್ಯವನ್ನು ಮರುಸೃಷ್ಟಿಸಿದ್ದಾರೆ. ಅವರ ಈ ಮುದ್ದಾದ ವಿಡಿಯೊ ಸೋಶಿಯಲ್ ಮೀಡಿಯಾ ನೆಟ್ಟಿಗರ ಮನಗೆದ್ದು ವೈರಲ್(Viral Video) ಆಗಿದೆ. ಈ ತಮಾಷೆಯ ವಿಡಿಯೊ ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವ ಹಾಗೇ ನಕ್ಕಿದ್ದಾರಂತೆ.

ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದ ಮೊದಲ ಭಾಗದಲ್ಲಿ ಕಟ್ಟಪ್ಪ ಮೋಸ ಮಾಡಿ ಹಿಂದಿನಿಂದ ಬಂದು ಬಾಹುಬಲಿಯನ್ನು ಮಾರಣಾಂತಿಕವಾಗಿ ಇರಿದಿದ್ದಾನೆ. ಈ ದೃಶ್ಯವನ್ನು ಪುಟ್ಟ ಮಕ್ಕಳಿಬ್ಬರು ಮರುಸೃಷ್ಟಿಸಿದ್ದಾರೆ. ಅದರಲ್ಲಿ ‘ಕಟಪ್ಪ’ ಪಾತ್ರ ನಿರ್ವಹಿಸುತ್ತಿರುವ ಮಗು ‘ಬಾಹುಬಲಿ’ ಪಾತ್ರ ಮಾಡುತ್ತಿದ್ದ ಮಗುವಿನ ಹಿಂದೆ ನಿಧಾನವಾಗಿ ಸದ್ದಿಲ್ಲದೆ ಬಂದಿದೆ. ಆದರೆ ಇಲ್ಲಿ ಕಟ್ಟಪ್ಪ ಪಾತ್ರಧಾರಿ ಮಗು ಚಾಕು ಬದಲು ಸೌಟನ್ನು ಹಿಡಿದುಕೊಂಡು ಬಾಹುಬಲಿ ಪಾತ್ರಧಾರಿ ಮಗುವಿನ ಪೃಷ್ಠದ ಭಾಗಕ್ಕೆ ಇರಿದಿದೆ.

ವಿಡಿಯೊ ಇಲ್ಲಿದೆ ನೋಡಿ...

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸಿದೆ. ವೀಕ್ಷಕರು ಇದಕ್ಕೆ ಸಿಕ್ಕಾಪಟ್ಟೆ ಕಾಮೆಂಟ್‌ ಮಾಡಿದ್ದಾರೆ. "ಇದುವರೆಗಿನ ಅತ್ಯಂತ ಮುದ್ದಾದ ಸಾವಿನ ದೃಶ್ಯ” ಎಂದು ಹೇಳಲಾಗಿದೆ. ಈ ರೀಲ್ ಲಕ್ಷಾಂತರ ವ್ಯೂವ್ಸ್‌, ಸಾವಿರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ಮಕ್ಕಳ ಮುಗ್ಧ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಹುಡುಗನ ಜತೆ ಫುಟ್ಬಾಲ್ ಆಡಿದ ಕಾಗೆ; ನಂಬಿಕೆ ಬಂದಿಲ್ಲಾಂದ್ರೆ ಈ ವಿಡಿಯೊ ನೋಡಿ

ನೆಟ್ಟಿಗರೊಬ್ಬರು "ಮನಸೆಳೆಯುವ ದೃಶ್ಯ" ಎಂದು ತಮಾಷೆ ಮಾಡಿದರೆ, ಇನ್ನೊಬ್ಬರು "ಚೋಟಪ್ಪ ಚೋಟುಬಲಿಯನ್ನು ಏಕೆ ಕೊಂದನು?" ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು " ಈ ದೃಶ್ಯವನ್ನು ನೋಡಿ ನನಗೆ ನಗದೆ ಇರಲು ಸಾಧ್ಯವಾಗಲಿಲ್ಲ" ಎಂದು ಹೇಳಿದ್ದಾರೆ. ನಾಲ್ಕನೇಯವರು ತಮಾಷೆಯಾಗಿ, " ಈ ಕಟ್ಟಪ್ಪ ದೃಶ್ಯವನ್ನು ಬದಲಾಯಿಸಿದ್ದಾನೆ" ಎಂದು ಹೇಳಿದ್ದಾರೆ. ಇನ್ನೊಬ್ಬರು, “ಮಗು, ನೀನು ಅವನ ಬೆನ್ನಿಗೆ ಇರಿಯಬೇಕಿತ್ತು” ಎಂದು ಬರೆದಿದ್ದಾರೆ.