Rajat Patidar: ಫೈನಲ್ ಪಂದ್ಯಕ್ಕೂ ಮುನ್ನ ಶಪಥ ಮಾಡಿದ ಆರ್ಸಿಬಿ ನಾಯಕ; ಏನದು?
ಪ್ರಶಸ್ತಿ ಕಾದಾಟದಲ್ಲಿ ಶ್ರೇಯಸ್ ಅಯ್ಯರ್ ಮತ್ತು ರಜತ್ ಪಾಟೀದಾರ್ ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಹೌದು 2024 ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಫೈನಲ್ನಲ್ಲಿ ಅಯ್ಯರ್ ಮುಂಬೈ ಮತ್ತು ಪಾಟೀದಾರ್ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿದ್ದರು. ಫೈನಲ್ನಲ್ಲಿ ಅಯ್ಯರ್ ಪಡೆ ಗೆದ್ದು ಚಾಂಪಿಯನ್ ಆಗಿತ್ತು.


ಅಹಮದಾಬಾದ್: ಜೂನ್ 3, ಮಂಗಳವಾರ ನಡೆಯುವ ಪಂಜಾಬ್ ಕಿಂಗ್ಸ್(PBKS vs RCB) ವಿರುದ್ಧದ ಐಪಿಎಲ್ ಫೈನಲ್(IPL 2025 Final) ಪಂದ್ಯಕ್ಕೂ ಮುನ್ನ ಆರ್ಸಿಬಿಯ ನಾಯಕ ರಜತ್ ಪಾಟೀದಾರ್(Rajat Patidar) ಶಪಥವೊಂದನ್ನು ಮಾಡಿದ್ಧಾರೆ. ಈ ಬಾರಿ ವಿರಾಟ್ ಕೊಹ್ಲಿ(Virat Kohli) ಮತ್ತು ಅಭಿಮಾನಿಗಳಿಗಾಗಿ ಚೊಚ್ಚಲ ಐಪಿಎಲ್ ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.
ಟ್ರೋಫಿಯೊಂದಿಗೆ ಫೋಟೊ ತೆಗೆಸಿಕೊಂಡ ಬಳಿಕ ಮಾತನಾಡಿದ ಪಾಟೀದಾರ್, "ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ಗೆಲುವಿಗಾಗಿ ಬಳಹ ವರ್ಷಗಳಿಂದ ಕೊಡುಗೆ ಸಲ್ಲಿಸುತ್ತಲೇ ಬಂದಿದ್ದಾರೆ. ಈ ಬಾರಿಯ ಫೈನಲ್ ಗೆಲುವು ಕೊಹ್ಲಿ ಮತ್ತು ಅಭಿಮಾನಿಗಳಿಗೆ ಬಹಳಷ್ಟು ಅರ್ಥಪೂರ್ಣವಾಗಿರುತ್ತದೆ. ಇದನ್ನೂ ಸಾಕಾರಗೊಳಿಸಲು ನಮ್ಮ ತಂಡ ಸಿದ್ಧವಾಗಿದೆ" ಎಂದು ಪಾಟಿದಾರ್ ಹೇಳಿದರು. ಇದೇ ವೇಳೆ ಫೈನಲ್ ಪಂದ್ಯದಲ್ಲಿ ಟಿಮ್ ಡೇವಿಡ್ ಆಡುವ ಬಗ್ಗೆಯೂ ಪಾಟೀದಾರ್ ಮಾಹಿತಿ ನೀಡಿದರು.
"ಸ್ನಾಯು ಸೆಳೆತದಿಂದ ಬಳಲುತ್ತಿದ್ದ ಟಿಮ್ ಡೇವಿಡ್ ಫಿಟ್ನೆಸ್ ಬಗ್ಗೆ ವೈದ್ಯರು ಮಂಗಳವಾರ ಬೆಳಗ್ಗೆ ಮಾಹಿತಿ ನೀಡಲಿದ್ದಾರೆ. ಅವರು ಫಿಟ್ ಆಗಿದ್ದರೆ ಖಂಡಿತವಾಗಿಯೂ ಫೈನಲ್ ಆಡಲಿದ್ದಾರೆ" ಎಂದು ಪಾಟೀದಾರ್ ಹೇಳಿದರು.
Handshake tonight. Fight tomorrow! 🏆#PlayBold #ನಮ್ಮRCB #IPL2025 pic.twitter.com/uWkImBiHfV
— Royal Challengers Bengaluru (@RCBTweets) June 2, 2025
ಅಯ್ಯರ್-ಪಾಟೀದಾರ್ ಮತ್ತೆ ಫೈನಲ್ ಮುಖಾಮುಖಿ
ಪ್ರಶಸ್ತಿ ಕಾದಾಟದಲ್ಲಿ ಶ್ರೇಯಸ್ ಅಯ್ಯರ್ ಮತ್ತು ರಜತ್ ಪಾಟೀದಾರ್ ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಹೌದು 2024 ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಫೈನಲ್ನಲ್ಲಿ ಅಯ್ಯರ್ ಮುಂಬೈ ಮತ್ತು ಪಾಟೀದಾರ್ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿದ್ದರು. ಫೈನಲ್ನಲ್ಲಿ ಅಯ್ಯರ್ ಪಡೆ ಗೆದ್ದು ಚಾಂಪಿಯನ್ ಆಗಿತ್ತು. ಇದೀಗ ಅಂದಿನ ಸೋಲಿಗೆ ಸೇಡು ತೀರಿಸಲು ಪಾಟೀದಾರ್ಗೆ ಮತ್ತೊಂದು ಅವಕಾಶ ಲಭಿಸಿದೆ. ಇದರಲ್ಲಿ ಅವರು ಯಶಸ್ಸು ಸಾಧಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.