ದಯಾ ಕಿರಣ ಪೋಷಕರ ಆಶಾಕಿರಣ
ಅನಾಥ ಮಕ್ಕಳನ್ನು ರಕ್ಷಿಸಿ ಆರೈಕೆ ಮಾಡುತ್ತಿರುವ ಜಿಲ್ಲೆಯ ಕುಣಿಗಲ್ ತಾಲೂಕಿನ ವಾಣಿಗೆರೆಯ ದಯಾ ಕಿರಣ ಸಂಸ್ಥೆ ರಾಜ್ಯದಲ್ಲಿಯೇ ಮಾದರಿಯಾಗಿದೆ. ಏಡ್ಸ್ ಪೀಡಿತ ಮಕ್ಕಳನ್ನು ಪೋಷಿಸುತ್ತಿರುವ ದಯಾ ಭವನ ಸಂಸ್ಥೆಯಡಿ 2019ರಿಂದ ಸೇವೆ ಮಾಡುತ್ತಿರುವ ‘ದಯಾ ಕಿರಣ’ ಸಂಸ್ಥೆ ಇಲ್ಲಿಯವರೆಗೂ 210 ಅನಾಥ ಮಕ್ಕಳನ್ನು ರಕ್ಷಿಸಿದೆ.