ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
N Rathnakar Shetty died: ಆರ್‌.ರತ್ನಾಕರ ಶೆಟ್ಟಿ ನಿಧನ

ಆರ್‌.ರತ್ನಾಕರ ಶೆಟ್ಟಿ ನಿಧನ

‘ಗುರುರಾಜ ಮೆಟಲ್ಸ್‌ ಗ್ರೂಪ್ಸ್‌’ ಮಾಲೀಕರ ತಂದೆ ಎನ್‌.ರತ್ನಾಕರ ಶೆಟ್ಟಿ ಅವರು ಮಂಗಳವಾರ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಕೊನೆಯುಸಿ ರೆಳೆದರು. ಅವರಿಗೆ 102 ವರ್ಷ ವಯಸ್ಸಾಗಿತ್ತು. ಅವರು ಆರು ಜನ ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Chikkaballapur News: ಕೋಡಿಗಲ್ ರಮೇಶ್ ವಿರುದ್ಧ ಭುಗಿಲೆದ್ದ ಆಕ್ರೋಶ ಗಡಿಪಾರಿಗೆ ಒಕ್ಕಲಿಗ ಸಮುದಾಯ ಒತ್ತಾಯ

ಕೋಡಿಗಲ್ ರಮೇಶ್ ವಿರುದ್ಧ ಭುಗಿಲೆದ್ದ ಆಕ್ರೋಶ

ಶಾಂತಿ ಸುವವ್ಯಸ್ಥೆಗೆ ಧಕ್ಕೆ ತರುವ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿ ಪೊಲೀಸ್ ಬುದ್ದಿ ಏನು ಎಂದು ತೋರಿಸಿಕೊಡಬೇಕು. ಇಲ್ಲವಾದಲ್ಲಿ ಇಂತಹ ವ್ಯಕ್ತಿ ಗಳಿಂದ ಶಾಂತಿ ಸುವ್ಯಸ್ಥೆ ಕಾಪಾಡುವುದು ಬಹಳ ಕಷ್ಟವಾಗುತ್ತದೆ.ಈಗಾಗಲೇ ಕೋಡಿಗಲ್ ರಮೇಶ್ ಹಲವು ಅಮಾಯಕರ ಮೇಲೆ ಸುಳ್ಳು ಅಟ್ರಾಸಿಟಿ ಪ್ರಕರಣಗಳು ಸೇರಿದಂತೆ ವಿವಿಧ ರೀತಿಯ ಪ್ರಕರಣಗಳು ದಾಖಲಿಸಿ ಅವರಿಗೆ ಚಿತ್ರ ಹಿಂಸೆ ಕೊಟ್ಟಿ ರುವ ಸಾಕಷ್ಟು ಉದಾಹರಣೆಗಳು ಇವೆ

Chikkaballapur News: ಮಳೆಯಿಂದ ಮನೆ ಕಳೆದುಕೊಂಡ: ಸಂತ್ರಸ್ತರ ವೃದ್ದಗೆ ಪರಿಹಾರ ಚೆಕ್ ವಿತರಣೆ

ಮಳೆಯಿಂದ ಮನೆ ಕಳೆದುಕೊಂಡ : ಸಂತ್ರಸ್ತರ ವೃದ್ದಗೆ ಪರಿಹಾರ ಚೆಕ್ ವಿತರಣೆ

ಕಸಬಾ ಹೋಬಯ ರಾಮಸ್ವಾಮಿಪಲ್ಲಿ ಗ್ರಾಮದ ಜಯಮ್ಮ ರೆಡ್ಡಿ ಮಳೆಗೆ ಮೇಲ್ಚಾವಣಿ ಕುಸಿದು ಗಾಯ ಗೊಂಡಿದ್ದ ವೃದ್ದ ಜಯಮ್ಮ ರೆಡ್ಡಿ ಮನೆಗೆ ಸೋಮವಾರ ಪರಗೋಡು ಪಿ.ಡಿ.ಓ ಬಿ.ಎಲ್.ನಾಗಮಣಿ ಹಾಗೂ ಅಧಿಕಾರಿಗಳ ತಂಡ ವೃದ್ದೆ ಜಯಮ್ಮ ರೆಡ್ಡಿ ಮನೆಗೆ ಬೇಟೆ ನೀಡಿ 15000 ಚೆಕ್ ಅನ್ನು ವಿತರಣೆ ಮಾಡಿದ್ದಾರೆ.

Gig Workers Bill: ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಸೇರಿ 3 ಸುಗ್ರೀವಾಜ್ಞೆಗಳಿಗೆ ರಾಜ್ಯಪಾಲರ ಅಂಕಿತ

ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಸೇರಿ 3 ಮಸೂದೆಗಳಿಗೆ ರಾಜ್ಯಪಾಲರ ಅಂಕಿತ

Gig Workers Bill: ರಾಜ್ಯದಲ್ಲಿ ಸದ್ಯ ವಿಧಾನಮಂಡಲ ಅಧಿವೇಶನ ಇಲ್ಲದೇ ಇರುವುದರಿಂದ ಮಹತ್ವದ ಮೂರು ವಿಧೇಯಕಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಇದಕ್ಕೆ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರ ಒಪ್ಪಿಗೆ ದೊರೆತಿದೆ.

Sub Registrar Office: ಗುಡ್‌ ನ್ಯೂಸ್‌; ಇನ್ಮುಂದೆ ರಜಾ ದಿನಗಳಲ್ಲೂ ತೆರೆದಿರಲಿವೆ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು!

ಇನ್ಮುಂದೆ ರಜಾದಿನಗಳಲ್ಲೂ ತೆರೆದಿರಲಿವೆ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು!

Sub Registrar Office: ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿಗಳು ಜೂನ್‌ 1ರಿಂದ ಡಿ. 28 ವರೆಗೆ ಬರುವ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳ ರಜಾದಿನಗಳಂದು ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ರಜಾದಿನಗಳಂದು ಕರ್ತವ್ಯ ನಿರ್ವಹಿಸುವ ಒಂದು ಉಪನೋಂದಣಿ ಕಚೇರಿಗೆ ಮಂಗಳವಾರದ ದಿನವನ್ನು ರಜಾ ದಿನವೆಂದು ಘೋಷಿಸಲಾಗಿದೆ.

Kalaburagi DC: ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಎಂಎಲ್‌ಸಿ ರವಿಕುಮಾರ್ ವಿರುದ್ಧ ಎಫ್‌ಐಆರ್

ಕಲಬುರಗಿ ಜಿಲ್ಲಾಧಿಕಾರಿ ವಿರುಧ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ

ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್ ಅವರು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರ ವಿರುದ್ಧ ಪಾಕಿಸ್ತಾನಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸದ್ಯ ರವಿಕುಮಾರ್ ಹೇಳಿಕೆ ಸಂಚಲನ ಸೃಷ್ಟಿಸಿದೆ.

Viral Video: ಬೆಂಗಳೂರಲ್ಲಿ ಚಲಿಸುತ್ತಿದ್ದ ಕಾರಿನಲ್ಲೇ ರೊಮ್ಯಾನ್ಸ್; ಸನ್‌ ರೂಫ್‌ ತೆಗೆದು ಯುವತಿಗೆ ಚುಂಬಿಸಿದ ಯುವಕ!

ಬೆಂಗಳೂರಲ್ಲಿ ಕಾರಿನ ಸನ್‌ ರೂಫ್‌ ತೆಗೆದು ಯುವತಿಗೆ ಚುಂಬಿಸಿದ ಯುವಕ!

Viral Video: ಬೆಂಗಳೂರಿನ ಜನನಿಬಿಡ ಟ್ರಿನಿಟಿ ರಸ್ತೆಯಲ್ಲಿ ಘಟನೆ ನಡೆದಿದೆ. ಚಲಿಸುವ ಕಾರಿನ ಸನ್‌ರೂಫ್ ಮೂಲಕ ಯುವ ಜೋಡಿಯು ಅನುಚಿತ ವರ್ತನೆ ತೋರಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲಸೂರು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Sirsi News: ಜೂನ್ 5,6 ರಂದು ಹಲಸಿನ ಮೇಳ, ಹಲಸಿನ ಬೀಜದ ಆನಂದ ಪೌಡರ್ ಬಿಡುಗಡೆ

ಜೂನ್ 5,6 ರಂದು ಹಲಸಿನ ಮೇಳ

ಕೃಷಿ ನವೋದ್ಯಮದ ಆವಿಷ್ಕಾರ, ಕೃಷಿ ಸಂಪನ್ಮೂಲಗಳ ಅಭಿವೃದ್ಧಿ, ಮಾರುಕಟ್ಟೆಗಳ ಯಸಸ್ವಿ ಉದ್ಯಮದ ಕಾರ್ಯದ ನಿಟ್ಟಿನಲ್ಲಿ ಜೂನ್ 5,6 ರಂದು ಹಲಸಿನ ಮೇಳ ನಡೆಯಲಿದ್ದು ಈ ವರ್ಷದ ಅಂಗವಾಗಿ ಹಲಸಿನ ಬೀಜದ ಆನಂದ ಪೌಡರ್ ಕೂಡಾ ಬಿಡುಗಡೆಯಾಗಲಿದ್ದು 75 ತಳಿಯ ಹಲಸಿನ ಸಸಿ, ಖಾದ್ಯ, ಎಲ್ಲವನ್ನೂ ಅನಾವರಣಗೊಳಿಸಲಿದ್ದೇವೆ ಎಂದು ಕದಂಬ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ವಿಶ್ವೇಶ್ವರ ಭಟ್ ಮಾಹಿತಿ ನೀಡಿದರು

Karnataka Rains: ಆರೆಂಜ್‌ ಅಲರ್ಟ್; ಮುಂದಿನ 3 ದಿನ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಅಬ್ಬರಿಸಲಿದೆ ಮಳೆ! ‌

ಮುಂದಿನ 3 ದಿನ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಅಬ್ಬರಿಸಲಿದೆ ಮಳೆ! ‌

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಬಿರುಗಾಳಿ ಸಹಿತ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 20°C ಇರುವ ಸಾಧ್ಯತೆ ಹೆಚ್ಚಿದೆ.

ಅನಿಯಂತ್ರಿತ ಮೂರ್ಛೆ ರೋಗ ಹೊಂದಿದ್ದ 21 ವರ್ಷದ ಯುವಕನಿಗೆ ಯಶಸ್ವಿ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಚಿಕಿತ್ಸೆ: ಇದು ರಾಜ್ಯದಲ್ಲೇ ಮೊದಲ ಪ್ರಯತ್ನ

21 ವರ್ಷದ ಯುವಕನಿಗೆ ಯಶಸ್ವಿ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಚಿಕಿತ್ಸೆ

ಸಾಮಾನ್ಯವಾಗಿ ಮೂರ್ಛೆರೋಗಕ್ಕೆ ಚಿಕಿತ್ಸೆ ಇದ್ದರೂ ಕೆಲವರಿಗೆ ನರಮಂಡಲದ ಸಮಸ್ಯೆ ಇರುವವರಿಗೆ ಈ ನೂತನ ಶಸ್ತ್ರಚಿಕಿತ್ಸೆ ಹೆಚ್ಚು ಉಪಯುಕ್ತ. ರಾಜ್ಯದಲ್ಲಿ ಮೊದಲಬಾರಿಗೆ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು, ಯುವಕನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಒಮ್ಮೆಯೂ ಮೂರ್ಛೆರೋಗ ಬಂದಿಲ್ಲ

ಝೀ ಕನ್ನಡದ ಸರಿಗಮಪ ಅಂತಿಮ ಸುತ್ತಿನ ಸ್ಪರ್ಧೆ ಜೂನ್‌ 5ರಂದು ಝೀ5 ನಲ್ಲಿ ನೇರ ಪ್ರಸಾರ

ಝೀ ಕನ್ನಡದ ಸರಿಗಮಪ: ಜೂನ್‌ 5ರಂದು ಝೀ5 ನಲ್ಲಿ ನೇರ ಪ್ರಸಾರ

ಝೀ ಕನ್ನಡದ (ZEE Kannada) ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಸ ರಿ ಗ ಮ ಪ – ಕಾರ್ಯಕ್ರಮವು ರಾಜ್ಯದ ಸಾಂಸ್ಕೃತಿಕ ಲೋಕದಲ್ಲಿ ತನ್ನ ವಿಶಿಷ್ಟ ಛಾಪು ಮೂಡಿಸಿ ಲಕ್ಷಾಂತರ ಸಂಗೀತ ಪ್ರಿಯರ ಹೃದಯಗಳನ್ನು ಗೆದ್ದಿರುವ ಹೆಗ್ಗಳಿಕೆಯ ಈ ಕಾರ್ಯಕ್ರಮವು ಈಗ ಡಿಜಿಟಲ್‌ ಲೋಕದಲ್ಲೊಂದು ದಾಪುಗಾಲು ಹಾಕುತ್ತಿದೆ

ಮರ್ಫೋರ್️ ಕಾಂಪ್ಯಾಕ್ಟ್ ತುಫಾನುಗಳು ಮತ್ತು ಭೂಕಂಪದ ಒತ್ತಡ vo ತಡೆಗಟ್ಟುವ ಭದ್ರವಾದ ಪರಿಹಾರ

ಬಿಲ್ಟೆಕ್ ಭಾರತದ AAC ಉತ್ಪನ್ನಗಳ ಪೈಲ್ವಾನ್ ಹಾಗೂ ಪ್ರಮುಖ ತಯಾರಕ ಸಂಸ್ಥೆ

ಹೆಚ್ಚುತ್ತಿರುವ ಗಾಳಿಯೊಂದಿಗೆ ಗೋಡೆ ಕುಸಿತಗಳು ಸಂಭವಿಸುತ್ತಿರುವುದು ಬಡ್ತಿ, ತ್ವರಿತ ವಾಗಿ ನಿರ್ಮಿಸಲಾದ ಅಥವಾ ಸರಿಯಾದ ತಾಂತ್ರಿಕತೆ ಇಲ್ಲದ ಕಟ್ಟಡಗಳ ಶಕ್ತಿಶಾಲಿತ್ವದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಹವಾಮಾನ ಬದಲಾವಣೆಯಿಂದ ಹವಾಮಾನ ಸಂಬಂಧಿತ ಘಟನೆಗಳು ಹೆಚ್ಚಾಗುತ್ತಿದ್ದು, ಭಾರತವು ಭೂಕಂಪಿಯ ಪ್ರದೇಶದಲ್ಲಿರುವುದರಿಂದ ಮುನ್ನೆಚ್ಚ ರಿಕೆಯಾಗಿ ಬಲವರ್ಧನೆ ಪರಿಹಾರಗಳು ಅತ್ಯಾವಶ್ಯಕವಾಗಿವೆ

Kamal Haasan: ತಮಿಳಿನಿಂದಲೇ ಕನ್ನಡ ಹುಟ್ಟಿತು ಎಂದ ಕಮಲ್‌ ಹಾಸನ್‌; ಭುಗಿಲೆದ್ದ ವಿವಾದ

ತಮಿಳಿನಿಂದಲೇ ಕನ್ನಡ ಹುಟ್ಟಿತು ಎಂದ ಕಮಲ್‌ ಹಾಸನ್‌

ತಮಿಳಿನಿಂದಲೇ ಕನ್ನಡ ಹುಟ್ಟಿಕೊಂಡಿತು ಎಂದು ಹೇಳುವ ಮೂಲಕ ಕಾಲಿವುಡ್‌ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌ ವಿವಾದ ಹುಟ್ಟು ಹಾಕಿದ್ದಾರೆ. ಇತ್ತೀಚೆಗೆ ಚೆನ್ನೈಯಲ್ಲಿ ನಡೆದ ತಮ್ಮ ಮುಂಬರುವ ʼಥಗ್‌ ಲೈಫ್‌ʼ ಚಿತ್ರದ ಆಡಿಯೋ ಲಾಂಚ್‌ ಸಮಾರಂಭದಲ್ಲಿ ಮಾತನಾಡಿದ ಅವರು, ಮುಖ್ಯ ಅತಿಥಿಯಾಗಿದ್ದ ಕರುನಾಡ ಚಕ್ರವರ್ತಿ ಡಾ. ಶಿವ ರಾಜ್‌ಕುಮಾರ್‌ ಸಮ್ಮುಖದಲ್ಲೇ ಈ ಹೇಳಿಕೆ ನೀಡಿದ್ದಾರೆ.

ಕನ್ನಡ ಭವನದಲ್ಲಿ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದ ಸಚಿವ ಡಾ.ಎಂ.ಸಿ.ಸುಧಾಕರ್

ಶಿವರಾಜ್ ತಂಗಡಗಿ ಗೈರುಹಾಜರಿಯಲ್ಲಿ ಕನ್ನಡ ಭವನ ಲೋಕಾರ್ಪಣೆ

12 ಕೋಟಿ ಅಂದಾಜು ವೆಚ್ಚದಲ್ಲಿ ಪ್ರಾರಂಭವಾದ ಕಾಮಗಾರಿ ಪೂರ್ಣಗೊಳ್ಳುವಾಗ 18.20 ಕೋಟಿ ತಲುಪಿದೆ. ಈ ಭವನ ಇಷ್ಟೊಂದು ಸುಂದರವಾಗಿ ಮೂಡಿ ಬರುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರಣವಾಗಿ ದ್ದಾರೆ. ೭ ಕೋಟಿ ಅನುದಾನ ಬಿಡುಗಡೆ ಮಾಡಲು ಬೇಕಾದ ಎಲ್ಲಾ ನೆರವನ್ನು ಕೊಟ್ಟಿದ್ದಾರೆ. ಹೀಗಾಗಿಯೇ ರಾಜ್ಯದ ಗಮನ ಸೆಳೆಯುವ ರೀತಿ ಅತ್ಯಾಧುನಿಕವಾಗಿ ಭವನ ಎದ್ದು ನಿಂತಿದೆ

CM Siddaramaiah: ನೆಲ-ಜಲ-ಭಾಷೆಯ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ- ಸಿದ್ದರಾಮಯ್ಯ

ನೆಲ-ಜಲ-ಭಾಷೆಯ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ: ಸಿಎಂ

CM Siddaramaiah: ಕನ್ನಡ ಭಾಷೆಗಾಗಿ ಕೇವಲ 32 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ರಾಜ್ಯ ಬಿಜೆಪಿ ಹಂಚಿಕೊಂಡು ಜನರನ್ನು ತಪ್ಪು ದಾರಿಗೆಳೆಯುತ್ತಿರುವುದು ಅಕ್ಷಮ್ಯ ಅಪರಾಧ ಮಾತ್ರವಲ್ಲ ಕನ್ನಡ ನಾಡು ಮತ್ತು ನುಡಿಗೆ ಬಗೆವ ದ್ರೋಹವಾಗಿದೆ. ರಾಜ್ಯ ಬಿಜೆಪಿ ತಕ್ಷಣ ಸ್ಪಷ್ಟೀಕರಣದ ಮೂಲಕ ಸತ್ಯ ಸಂಗತಿಯನ್ನು ತಿಳಿಸುವ ಜತೆಯಲ್ಲಿ ತಮ್ಮಿಂದ ಆಗಿರುವ ತಪ್ಪಿಗೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Leading With Compassion: ಮಣಿಪಾಲ ಆಸ್ಪತ್ರೆಯ ಅಧ್ಯಕ್ಷ ಸುದರ್ಶನ್‌ ಬಲ್ಲಾಳ ಅವರ ಜೀವನ ಚರಿತ್ರೆ ಅನಾವರಣ

ಲೀಡಿಂಗ್‌ ವಿತ್‌ ಕಂಪ್ಯಾಷನ್‌ ಪುಸ್ತಕ ಅನಾವರಣ

ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ. ಎಚ್. ಸುದರ್ಶನ್ ಬಲ್ಲಾಳ್ ಅವರ ಜೀವನ ಚರಿತ್ರೆಯ "ಲೀಡಿಂಗ್ ವಿತ್ ಕಂಪ್ಯಾಷನ್" ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಗಿದೆ..ಆರೋಗ್ಯ ರಕ್ಷಣೆಯಲ್ಲಿ ಡಾ. ಬಲ್ಲಾಳ್ ಅವರ ವೃತ್ತಿ ಜೀವನವನ್ನು ರೂಪಿಸಿದ ತತ್ವಗಳು ಮತ್ತು ಮೌಲ್ಯ ಗಳನ್ನು ತಿಳಿಸಲಿದೆ. ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಈ ಪುಸ್ತಕ ವನ್ನು ಅನಾವರಣಗೊಳಿಸಿದರು.

Madenuru Manu: ಮಡೆನೂರು ಮನುಗೆ ಶಾಕ್‌ ಕೊಟ್ಟ ಫಿಲ್ಮ್‌ ಚೇಂಬರ್; ಸ್ಯಾಂಡಲ್‌ವುಡ್‌ನಿಂದ ಬ್ಯಾನ್‌!

ಸ್ಯಾಂಡಲ್‌ವುಡ್‌ನಿಂದ ಮಡೆನೂರು ಮನು ಬ್ಯಾನ್‌; ಫಿಲ್ಮ್‌ ಚೇಂಬರ್ ನಿರ್ಧಾರ

Madenuru Manu: ಮಡೆನೂರು ಮನು (Madenuru Manu) ವಿರುದ್ಧ ದಾಖಲಾಗಿರುವ ಆರೋಪಗಳು, ಕೇಸ್‌ಗಳಿಂದ ಮುಕ್ತರಾಗುವವರೆಗೆ ನಾವು ಅಸಹಕಾರ ತೋರಬೇಕು ಎಂದು ನಿರ್ಧರಿಸಿದ್ದೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು ತಿಳಿಸಿದ್ದಾರೆ.

Shivaram Hebbar: ಪಕ್ಷ ವಿರೋಧಿ ಚಟುವಟಿಕೆಗೆ ಬಿಜೆಪಿ ಮುಖಂಡರೇ ಕಾರಣ: ಶಿವರಾಮ್ ಹೆಬ್ಬಾರ್ ಕಿಡಿ

ಪಕ್ಷ ವಿರೋಧಿ ಚಟುವಟಿಕೆಗೆ ಬಿಜೆಪಿ ಮುಖಂಡರೇ ಕಾರಣ: ಶಿವರಾಮ್ ಹೆಬ್ಬಾರ್

Shivaram Hebbar: ಪಕ್ಷ ನೋಟಿಸ್ ನೀಡಿದಾಗ ನಾನು 16 ಪುಟದ ಉತ್ತರ ನೀಡಿದ್ದೇನೆ. ಪಕ್ಷ ನಿರ್ಣಯದಿಂದ ಆಶ್ಚರ್ಯವೂ ಆಗಿದೆ, ಸಂತೋಷವೂ ಆಗಿದೆ. ಪಕ್ಷ ಏನೇ ನಿರ್ಣಯ ತೆಗೆದುಕೊಂಡರೂ ಸ್ವಾಗತಿಸುತ್ತೇನೆ ಎಂದಿದ್ದೇನೆ ಎಂದು ಶಿವರಾಮ್‌ ಹೆಬ್ಬಾರ್‌ ಹೇಳಿದ್ದಾರೆ.

S T Somashekar: ಪಕ್ಷಕ್ಕೆ ಮುಜುಗರ ಆಗುವ ಕೆಲಸ ಮಾಡಿಲ್ಲ, ಉಚ್ಚಾಟನೆಯಿಂದ ಒಳ್ಳೇದಾಯ್ತು ಎಂದ ಎಸ್‌.ಟಿ. ಸೋಮಶೇಖರ್

ಉಚ್ಚಾಟನೆಯಿಂದ ಒಳ್ಳೇದಾಯ್ತು ಎಂದ ಎಸ್‌.ಟಿ. ಸೋಮಶೇಖರ್

S T Somashekar: ನಾನು ಕಾಂಗ್ರೆಸ್‌ ಅಥವಾ ಬಿಜೆಪಿ ಯಾರು ತಪ್ಪು ಮಾಡಿದರೂ ತಪ್ಪು ಅಂತಲೇ ಹೇಳಿದ್ದೇನೆ. ಪಕ್ಷಕ್ಕೆ ಮುಜುಗರ ಆಗುವ ಕೆಲಸ ಮಾಡಿಲ್ಲ, ಬಿಜೆಪಿಯಲ್ಲಿ ಮಾಡಬಾರದ್ದನ್ನು ಮಾಡಿರೋರು ಯಾರ‍್ಯಾರೋ ಇದ್ದಾರೆ. ನಮ್ಮಂತಹವರನ್ನು ಉಚ್ಚಾಟನೆ ಮಾಡುತ್ತಾರೆ ಎಂದು ಶಾಸಕ ಎಸ್‌.ಟಿ.ಸೋಮಶೇಖರ್‌ ಕಿಡಿಕಾರಿದ್ದಾರೆ.

DK Shivakumar: ನೆಹರೂ ಅವರ ವಿದೇಶಾಂಗ ನೀತಿ, ಬೇರೆ ದೇಶಗಳ ಜತೆಗಿನ ಸಂಬಂಧ ಇಡೀ ವಿಶ್ವಕ್ಕೆ ಮಾದರಿಯಾಗಿತ್ತು: ಡಿ.ಕೆ. ಶಿವಕುಮಾರ್

ನೆಹರೂ ಅವರು ದೇಶ ಕಂಡ ಶ್ರೇಷ್ಠ ನಾಯಕ: ಡಿಕೆಶಿ

DK Shivakumar: ನೆಹರೂ ಅವರ ವಿದೇಶಾಂಗ ನೀತಿ, ಬೇರೆ ದೇಶಗಳ ಜತೆಗಿನ ಸಂಬಂಧ ಇಡೀ ವಿಶ್ವಕ್ಕೆ ಮಾದರಿಯಾಗಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ನೆರೆಯ ಸಣ್ಣಪುಟ್ಟ ರಾಷ್ಟ್ರಗಳು ನಮ್ಮ ಜತೆ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ. ಪರಿಣಾಮ ನಮ್ಮ ಸುತ್ತಮುತ್ತ ವಿರೋಧಿಗಳೇ ತುಂಬಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Janardhan Reddy: ಚಂಚಲಗೂಡದಿಂದ ಪರಪ್ಪನ ಅಗ್ರಹಾರ ಜೈಲಿಗೆ ಜನಾರ್ದನ ರೆಡ್ಡಿ ಶಿಫ್ಟ್‌

ಚಂಚಲಗೂಡದಿಂದ ಪರಪ್ಪನ ಅಗ್ರಹಾರ ಜೈಲಿಗೆ ಜನಾರ್ದನ ರೆಡ್ಡಿ ಶಿಫ್ಟ್‌

Janardhan Reddy: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನರೆಡ್ಡಿ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಹೀಗಾಗಿ ಪೊಲೀಸರು ರೆಡ್ಡಿಯನ್ನು ಬಂಧಿಸಿ ಹೈದರಾಬಾದ್‌ನ ಚಂಚಲಗೂಡ ಜೈಲಿಗೆ ಶಿಫ್ಟ್‌ ಮಾಡಿದ್ದರು. ಇದೀಗ ಅವರನ್ನು ಬೆಂಗಳೂರು ಸೆಂಟ್ರಲ್‌ ಜೈಲಿಗೆ ಸ್ಥಳಾಂತರ ಮಾಡಲು ಕೋರ್ಟ್ ಆದೇಶಿಸಿದೆ.

Actor Sridhar: ನಟ ಶ್ರೀಧರ್‌ಗೆ ಏಡ್ಸ್‌, ಕ್ಯಾನ್ಸರ್ ಇತ್ತು! ಆಡಿಯೋ ಮೂಲಕ ಶಾಕ್‌ ಕೊಟ್ಟ ಪತ್ನಿ

ಶ್ರೀಧರ್‌ಗೆ ಏಡ್ಸ್‌, ಕ್ಯಾನ್ಸರ್ ಇತ್ತು! ಆಡಿಯೋ ಮೂಲಕ ಶಾಕ್‌ ಕೊಟ್ಟ ಪತ್ನಿ

Actor Sridhar: ಕಲಾವಿದನಾಗಿ, ನಟನಾ ತರಬೇತುದಾರನಾಗಿ ಶ್ರೀಧರ್ ಸಾಕಷ್ಟು ಹೆಸರು ಮಾಡಿದ್ದರು. ಆದರೆ, ಅವರ ಕುಟುಂಬದಲ್ಲಿ ಸಾಕಷ್ಟು ಒಡಕು ಇತ್ತು. ಈ ಬಗ್ಗೆ ಶ್ರೀಧರ್ ಪತ್ನಿಯದ್ದು ಎನ್ನಲಾದ ಹಳೆಯ ಆಡಿಯೋ ಇದೀಗ ವೈರಲ್ ಆಗಿದೆ. ಈ ಆಡಿಯೋದಲ್ಲಿ ಅವರು ಪತಿಗೆ ಏಡ್ಸ್ ಇತ್ತು ಎಂಬುದನ್ನು ರಿವೀಲ್ ಮಾಡಿದ್ದಾರೆ.

CM Siddaramaiah: ಬಿಜೆಪಿಗೆ ಗೊತ್ತಿರುವುದು ಬರಿ ಹಿಂಸೆ, ಸುಳ್ಳು- ಸಿದ್ದರಾಮಯ್ಯ

ಬಿಜೆಪಿಗೆ ಗೊತ್ತಿರುವುದು ಬರಿ ಹಿಂಸೆ, ಸುಳ್ಳು: ಸಿದ್ದರಾಮಯ್ಯ

CM Siddaramaiah: ಬಿಜೆಪಿಗೆ ಗೊತ್ತಿರುವುದು ಬರಿ ಹಿಂಸೆ ಮತ್ತು ಸುಳ್ಳು. ದಲಿತರು, ಶೂದ್ರರ ಮೇಲೆ ಕೇಸುಗಳು ಬೀಳುವಂತೆ ಮಾಡುವುದು ಇದೇ ಬಿಜೆಪಿ ಮತ್ತು ಆರ್‌ಎಸ್‌ಎಸ್‌. ಆಮೇಲೆ ಅವರನ್ನು ಜೈಲಿನಿಂದ ಕರೆದುಕೊಂಡು ಬರುವುದೂ ಇವರೇ. ಇದೇ ನಾಟಕ ಆಡಿಕೊಂಡೇ ಅವರು ಕಾಲ‌ಕಳೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

Anil Kumble: ಅರಣ್ಯ ಇಲಾಖೆ ರಾಯಭಾರಿಯಾಗಿ ಅನಿಲ್ ಕುಂಬ್ಳೆ ನೇಮಕ; ಸಂಭಾವನೆ ಬೇಡ ಎಂದ ಸ್ಪಿನ್‌ ದಿಗ್ಗಜ!

ಅರಣ್ಯ ಇಲಾಖೆ ರಾಯಭಾರಿಯಾಗಿ ಅನಿಲ್ ಕುಂಬ್ಳೆ ನೇಮಕ

Anil Kumble: ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಅನಿಲ್ ಕುಂಬ್ಳೆ ಅವರು ವಿಶ್ವದಾದ್ಯಂತ ಖ್ಯಾತಿ ಹೊಂದಿದ್ದು, ಅರಣ್ಯ ಸಂರಕ್ಷಣೆ, ಅರಣ್ಯ ಸಂವರ್ಧನೆ, ವೃಕ್ಷ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.