ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತರ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ; 21 ಮಂದಿಗೆ ಸರ್ಕಾರಿ ಕೆಲಸ

ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ಕೆಲಸ ಘೋಷಣೆ

Chamarajanagar oxygen tragedy: ಗಡಿ ಜಿಲ್ಲೆ ಚಾಮರಾಜನಗರದಲ್ಲಿ 2021ರ ಮೇ 2ರಂದು ಸಂಭವಿಸಿದ ಆಕ್ಸಿಜನ್ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ವೇಳೆ 36 ಜನರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದರು. ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ಕೊಡುವಂತೆ ಅಂದಿನಿಂದಲೂ ಆಗ್ರಹ ಕೇಳಿಬಂದಿತ್ತು. ಇದೀಗ ಸಂತ್ರಸ್ತ್ರ ಕುಟುಂಬಗಳ ಮನವಿಗೆ ಸರ್ಕಾರ ಸ್ಪಂದಿಸಿದೆ.

ಮದ್ಯ ಪ್ರಿಯರಿಗೆ ಮತ್ತೆ ಶಾಕ್‌; ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ್ರೆ  ಶೇ.20 ರಷ್ಟು ಬೆಲೆ ಹೆಚ್ಚಳ

ಮದ್ಯ ಪ್ರಿಯರಿಗೆ ಮತ್ತೆ ಶಾಕ್‌; ಮತ್ತೆ ಹೆಚ್ಚಾಗುತ್ತಾ ಬೆಲೆ!

ಮದ್ಯ ಪ್ರಿಯರಿಗೆ ಶಾಕ್‌ ಕೊಡಲು ಸರ್ಕಾರ ಸಜ್ಜಾಗಿದೆ ಎಂದು ತಿಳಿದು ಬಂದಿದೆ. ಕರ್ನಾಟಕ ಸರ್ಕಾರ ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ ಆಧರಿಸಿ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರಲು ಕರಡು ಅಧಿಸೂಚನೆ ಹೊರಡಿಸಿದೆ. ಇದರಿಂದ ವಿಸ್ಕಿ, ರಮ್ ಸೇರಿದಂತೆ ಸಾಮಾನ್ಯ ಮದ್ಯಗಳ ಬೆಲೆ ಕನಿಷ್ಠ ಶೇ.20ರಷ್ಟು ಹೆಚ್ಚಾಗಲಿದೆ.

ಕಾರವಾರ ಶಾಸಕ ಸತೀಶ್ ಸೈಲ್‌  ಪುತ್ರಿ  ಸಾಧ್ವಿಗೆ ಒಲಿದ ಮಿಸ್ ಇಂಡಿಯಾ ಕಿರೀಟ

ಕಾರವಾರ ಶಾಸಕ ಸತೀಶ್ ಸೈಲ್‌ ಪುತ್ರಿಗೆ ಮಿಸ್ ಇಂಡಿಯಾ ಕಿರೀಟ

Satish Sail daughter wins Miss India: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಮಿಸ್ ಇಂಡಿಯಾ ವಿಜೇತೆಯಾಗಿದ್ದಾರೆ. ಏಪ್ರಿಲ್ 18, 2026 ರಂದು ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ನಲ್ಲಿ ನಡೆದ 61 ನೇ ಮಿಸ್ ಇಂಡಿಯಾ ಆವೃತ್ತಿಯಲ್ಲಿ ಸಾಧ್ವಿ ಸತೀಶ್ ಸೈಲ್ ಅವರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಹೊಸಪೇಟೆಯಲ್ಲಿ ಸರಣಿ ಅಪಘಾತ; ಬೈಕ್, ಕಾರು, ಬಸ್​ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ,  ನಾಲ್ವರ ಸಾವಿನ ಶಂಕೆ

ಸರಣಿ ಅಪಘಾತ; ಬೈಕ್, ಕಾರು, ಬಸ್​ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ

Hosapete Road Accident: ಹೊಸಪೇಟೆ ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಬೈಕ್, ಕಾರು, ಬಸ್​ಗೆ ಲಾರಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಎಪಿಎಸ್ ಶಿಕ್ಷಣ ಸಂಸ್ಘೆಗಳ ಸಂಸ್ಥಾಪಕ ಪ್ರೊ.ಎನ್.ಅನಂತಾಚಾರ್ ಅವರ 50ನೇ ಪುಣ್ಯಸ್ಮರಣೆ: ಅಂಚೆ ಚೀಟಿ ಬಿಡುಗಡೆ

ಪ್ರೊ. ಎನ್. ಅನಂತಾಚಾರ್ ಅವರ 50ನೇ ಪುಣ್ಯಸ್ಮರಣೆ: ಅಂಚೆ ಚೀಟಿ ಬಿಡುಗಡೆ

ಅನಂತಾಚಾರ್ ಅವರು ನರಸಿಂಹಮೂರ್ತಿ ಚಾರ್ ಮತ್ತು ತುಳಸಮ್ಮ ದಂಪತಿಯ ಆರು ಮಕ್ಕಳಲ್ಲಿ ಹಿರಿಯ ಮಗನಾಗಿ ಜನಿಸಿದರು. ಪದವಿ ಶಿಕ್ಷಣವೇ ಅಪರೂಪವಾಗಿದ್ದ ಆ ಕಾಲದಲ್ಲಿ, ಇವರ ಕುಟುಂಬದ ಎಲ್ಲ ಗಂಡು ಮಕ್ಕಳು ಪದವೀಧರರಾಗಿದ್ದು ಅವರ ಸಂಸ್ಕಾರಕ್ಕೆ ಸಾಕ್ಷಿಯಾಗಿದೆ. ಅನಂತಾಚಾರ್ ಅವರು ಮೈಸೂರಿನಲ್ಲಿ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಜೀವಾವಧಿ ಶಿಕ್ಷೆಗೊಳಗಾದ ಅಪ್ಪನ ಪರ ಭಾವನಾತ್ಮಕ ಬರಹ ಬರೆದುಕೊಂಡ ವಿನಯ್ ಕುಲಕರ್ಣಿ ಪುತ್ರಿ

ಅಪ್ಪನ ಪರ ಭಾವನಾತ್ಮಕ ಬರಹ ಬರೆದುಕೊಂಡ ವಿನಯ್ ಕುಲಕರ್ಣಿ ಪುತ್ರಿ

ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ವಿನಯ್ ಕುಲಕರ್ಣಿ ಅವರ ಪರ ಪುತ್ರಿ ದೀಪಾಲಿ ವಿ. ಕುಲಕರ್ಣಿ ಭಾವನಾತ್ಮಕ ಬರಹವೊಂದನ್ನು ಬರೆದುಕೊಂಡು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಜೀವಾವಧಿ ಶಿಕ್ಷೆಗೊಳಗಾದ ವಿನಯ್ ಕುಲಕರ್ಣಿ ಖೈದಿ ಸಂಖ್ಯೆ ಏನು?

ಜೀವಾವಧಿ ಶಿಕ್ಷೆಗೊಳಗಾದ ವಿನಯ್ ಕುಲಕರ್ಣಿ ಖೈದಿ ಸಂಖ್ಯೆ ಏನು?

Vinay Kulakarni: ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಸೇರಿದಂತೆ 16 ಅಪರಾಧಿಗಳಿಗೆ ಸಜಾ ಬಂಧಿ ಖೈದಿ ನಂಬರ್‌ ನೀಡಲಾಗಿದೆ.

ಚಿಕನ್‌ ಪ್ರಿಯರೇ ಎಚ್ಚರ! ಬೆಂಗಳೂರಿಗೂ ಬಂತು H5N1 ಹಕ್ಕಿ ಜ್ವರ

ಚಿಕನ್‌ ಪ್ರಿಯರೇ ಎಚ್ಚರ ; ಬೆಂಗಳೂರಿಗೂ ಬಂತು H5N1 ಹಕ್ಕಿ ಜ್ವರ

ಹಲವು ದಿನಗಳಿಂದ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದ ಹಕ್ಕಿಜ್ವರ ಬೆಂಗಳೂರಿಗೂ ಕಾಲಿಟ್ಟಿದೆ. ಬೆಂಗಳೂರಿನ ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಇದೇ ತಿಂಗಳ 14 ನೇ ತಾರೀಕಿನಂದು ಹಕ್ಕಿಜ್ವರ ಧೃಡಪಟ್ಟಿದೆ ಎಂದು ತಿಳಿದು ಬಂದಿದೆ.

ಕರ್ನಾಟಕ ಹವಾಮಾನ ವರದಿ: ರಾಜ್ಯಾದ್ಯಂತ ಹೆಚ್ಚಿದ ಬಿಸಿಲಿನ ತಾಪ; ಕೆಲವು ಜಿಲ್ಲೆಗಳಲ್ಲಿ ಮಳೆ ಸೂಚನೆ

ರಾಜ್ಯಾದ್ಯಂತ ಹೆಚ್ಚಿದ ಬಿಸಿಲಿನ ತಾಪ; ಕೆಲವು ಜಿಲ್ಲೆಗಳಲ್ಲಿ ಮಳೆ ಸೂಚನೆ

Karnataka Weather: ರಾಜ್ಯಾದ್ಯಂತ ಬಿಸಿಲಿನ ತಾಪಮಾನ ಏರುತ್ತಲೇ. ಮುಂದಿನ 2 ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕವು ಬಿಸಿಲಿನ ಬೇಗೆ ತತ್ತರಿಸಿದ್ದು, ಮುಂಬರುವ ದಿನಗಳಲ್ಲಿ ಈ ಭಾಗಗಳ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Dr S L Bhyrappa: ಎಸ್.ಎಲ್. ಭೈರಪ್ಪ ಅವರು ಮನೆ ಬಿಟ್ಟು ಬಂದಿದ್ದೇಕೆ?, ಆಸ್ತಿ ದಾನ ಮಾಡಿದ್ದೇಕೆ?: ವಾಸ್ತವ ಬಿಚ್ಚಿಟ್ಟ ವಿಶ್ವೇಶ್ವರ ಭಟ್

ಎಸ್.ಎಲ್. ಭೈರಪ್ಪ ಆಸ್ತಿ ದಾನ ಮಾಡಿದ್ದೇಕೆ?, ಆಸ್ತಿ ದಾನ ಮಾಡಿದ್ದೇಕೆ?

ಡಾ. ಎಸ್‌.ಎಲ್‌. ಭೈರಪ್ಪ ಅವರ ʼಧರ್ಮಶ್ರೀʼ ಕಾದಂಬರಿಗೆ 65 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಎಸ್‌.ಎಲ್‌.ಭೈರಪ್ಪ ಸಾಹಿತ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರು ಮಾತನಾಡಿದ್ದಾರೆ. ಭೈರಪ್ಪ ಅವರ ನಿಧನದ ನಂತರ ಅವರ ಆಸ್ತಿ, ಟ್ರಸ್ಟ್‌ ಕುರಿತು ಸಾರ್ವಜನಿಕ ವಲಯದಲ್ಲಿ ಮೂಡಿದ ಅನೇಕ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ.

Gubbi News: ಏ.22 ಹಾಗೂ 23 ರಂದು ಗುಬ್ಬಿ ಶ್ರೀ ಮಹೇಶ್ವರಮ್ಮ ದೇವಿ ದೇವಾಲಯ ನೂತನ ಶಿಲಾ ದೇವಾಲಯ ಲೋಕಾರ್ಪಣೆ

ಏ.22, 23 ರಂದು ನೂತನ ಶಿಲಾ ದೇವಾಲಯ ಲೋಕಾರ್ಪಣೆ

ಸೀನಪ್ಪನಹಳ್ಳಿ ಶ್ರೀ ದೊಡ್ಡಮ್ಮದೇವಿ, ಶ್ರೀ ದಾಳಿಯಮ್ಮದೇವಿ, ತಿಪ್ಪೂರು ಶ್ರೀ ಕೋಡಿಕೆಂಪಮ್ಮ ದೇವಿ, ಪೆಮ್ಮನಹಳ್ಳಿ ಶ್ರೀ ಆಂಜನೇಯಸ್ವಾಮಿ ಈ ಪರಿಹಾರ ದೇವರುಗಳನ್ನು ಪಟ್ಟಣದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಿಂದ ಬುಧವಾರ ಸಂಜೆ ಮೆರವಣಿಗೆ ಮೂಲಕ ಕರೆ ತಂದು ಆಲಯ ಪ್ರವೇಶ, ಹೋಮ ಹವನಗಳು ನಡೆಸಿ ಪೂರ್ಣಾಹುತಿ ನಡೆಸಲಾಗುವುದು

Gubbi News: ಏ.21ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಾಕಥಾನ್-2026

ಏ.21ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಾಕಥಾನ್-2026

ಗುಬ್ಬಿಯಿಂದ ಆರಂಭವಾಗುವ ವಾಕಥಾನ್ ಮಾರ್ಗ ಮಧ್ಯೆ ಹಲವು ಮಂದಿ ಅಂಬೇಡ್ಕರ್ ಅನುಯಾ ಯಿಗಳು, ಅಭಿಮಾನಿಗಳು ಸೇರ್ಪಡೆಗೊಳ್ಳಲಿದ್ದಾರೆ. ಜೊತೆಗೆ ಅಂಬೇಡ್ಕರ್ ಅವರ ಮಾರ್ಗದರ್ಶನ, ಆದರ್ಶಗಳ ಜಾಗೃತಿ ಮೂಡಿಸುವ ಕರಪತ್ರ ಹಂಚುವ ಜೊತೆಗೆ ಯುವಕರಿಗೆ ಸಂವಿಧಾನ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ

Chikkaballapur News: ಆಲೂಗಡ್ಡೆಗೆ ಬೆಂಬಲ ಬೆಲೆ, ಸರಕಾರಿ ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ

ಆಲೂಗಡ್ಡೆಗೆ ಸರಕಾರಿ ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ

ನಮ್ಮದು ನದಿ ಮೂಲಗಳಿಲ್ಲದ ಬಯಲು ಸೀಮೆ ಪ್ರದೇಶವಾಗಿದ್ದು, ರೈತರು ಸಾವಿರಾರು ಅಡಿ ಆಳದ ಬೋರ್‌ ವೆಲ್‌ಗಳನ್ನು ಕೊರೆದು ಕೃಷಿ ಮಾಡುತ್ತಿದ್ದಾರೆ. ಬಿತ್ತನೆ ಬೀಜದ ಒಂದು ಮೂಟೆಗೆ 1500ರಿಂದ 2000ರವರೆಗೆ ವೆಚ್ಚ ಮಾಡಿ ಬೆಳೆ ಬೆಳೆದರೂ, ಸೂಕ್ತ ಬೆಲೆ ಸಿಗದೇ ಭಾರೀ ನಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸರಕಾರ ರೈತರ ನೆರವಿಗೆ ಬರಬೇಕು

Gudibande News: ಗುಡಿಬಂಡೆಯಲ್ಲಿ ಅದ್ದೂರಿ ಅಂಬೇಡ್ಕರ್, ಬಾಬು ಜಗಜೀವನ್ ರಾಂ ಜಯಂತಿ

ಗುಡಿಬಂಡೆಯಲ್ಲಿ ಅದ್ದೂರಿ ಅಂಬೇಡ್ಕರ್, ಬಾಬು ಜಗಜೀವನ್ ರಾಂ ಜಯಂತಿ

ಬಾಲ್ಯದಲ್ಲಿ ಅಸ್ಪೃಶ್ಯತೆಯಂತಹ ಅಮಾನವೀಯ ನೋವುಗಳನ್ನು ಅನುಭವಿಸಿದರೂ ಅದನ್ನು ಧೈರ್ಯದಿಂದ ಎದುರಿಸಿ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ಸಾಧನೆ ದೊಡ್ಡದು ಎಂದು ಬಣ್ಣಿಸಿದರು. ಇಂದು ನಾವು ಅನುಭವಿಸುತ್ತಿರುವ ಸಮಾನತೆ ಮತ್ತು ನೆಮ್ಮದಿಯ ಬದುಕಿಗೆ ಅವರು ಹಾಕಿಕೊಟ್ಟ ಸಂವಿಧಾನದ ಬುನಾದಿಯೇ ಮುಖ್ಯ ಕಾರಣ ಎಂದು ನೆನಪಿಸಿದ ಅವರು, ಈ ಮೌಲ್ಯಗಳನ್ನು ಯುವ ಪೀಳಿಗೆಗೆ ನಿರಂತರವಾಗಿ ತಿಳಿಸಿಕೊಡುವ ಕೆಲಸ ಆಗಬೇಕು

Gauribidanur News: ನಾರೀ ಶಕ್ತಿ ವಂದನಾ ಮಸೂದೆಗೆ ಸೋಲು: ರೂಪಾ ಅನಂತರಾಜು ತೀವ್ರ ಆಕ್ರೋಶ

ನಾರೀ ಶಕ್ತಿ ವಂದನಾ ಮಸೂದೆಗೆ ಸೋಲು: ರೂಪಾ ಅನಂತರಾಜು ತೀವ್ರ ಆಕ್ರೋಶ

ಭಾರತದ ಒಟ್ಟು ಜನಸಂಖ್ಯೆಯ ಸುಮಾರು ಅರ್ಧ ಭಾಗದಷ್ಟು ಮಹಿಳೆಯರಾಗಿದ್ದರೂ ಕೂಡ ಅವರ ಪಾಲ್ಗೊಳ್ಳುವಿಕೆ ಶಾಸನ ಮಂಡಳಿಗಳಲ್ಲಿ ತೀರ ಕಡಿಮೆ, ಈ ಅಸಮತೋಲನ ಸರಿಪಡಿಸುವ ನಿಟ್ಟಿನಲ್ಲಿ ಮಹಿಳಾ ಮೀಸಲು ಮಸೂದೆ ಒಂದು ಐತಿಹಾಸಿಕ ಹೆಜ್ಜೆಯಾಗಬಹುದಿತ್ತು. ಈ ಮಸೂದೆಯನ್ನು ಎಲ್ಲರೂ ಬೆಂಬಲ ವ್ಯಕ್ತಪಡಿಸಿದಿದ್ದರೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಆದಿವಾಸಿ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು

Shidlaghatta News: ಗೋಮಾಳ ಜಮೀನು ಒತ್ತುವರಿ ವಿರುದ್ಧ ದಲಿತ ಕುಟುಂಬ ಪಾದಯಾತ್ರೆ: ಆಡಳಿತಕ್ಕೆ  ಮನವಿ

ಗೋಮಾಳ ಜಮೀನು ಒತ್ತುವರಿ ವಿರುದ್ಧ ದಲಿತ ಕುಟುಂಬ ಪಾದಯಾತ್ರೆ

ಗ್ರಾಮದಲ್ಲಿನ ಗೋಮಾಳ ಜಮೀನಿನ ಮೇಲೆ ಅಕ್ರಮ ಒತ್ತುವರಿಗಳು ನಡೆಯುತ್ತಿದ್ದು, ಇದರಿಂದ ಪಶುಸಂಗೋಪನೆಗೆ ತೀವ್ರ ತೊಂದರೆ ಉಂಟಾಗಿದೆ. ನಮ್ಮ ಜೀವನೋಪಾಯಕ್ಕೆ ಆಧಾರವಾಗಿರುವ ಗೋಮಾಳ ಜಮೀನು ಉಳಿಸಿಕೊಡಬೇಕು. ಅಕ್ರಮಗಳನ್ನು ತಕ್ಷಣವೇ ತಡೆಯಬೇಕು” ಎಂದು ಈ ಧರೆ ಪ್ರಕಾಶ್ ನಾಗರೀಕರ ಪರವಾಗಿ ಒತ್ತಾಯಿಸಿದರು.

Shidlaghatta News: ಬೇಸಿಗೆ ಶಿಬಿರಗಳಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ: ಡಾ.ನವೀನ್ ಭಟ್ ವೈ

ಬೇಸಿಗೆ ಶಿಬಿರಗಳಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ: ಡಾ.ನವೀನ್ ಭಟ್ ವೈ

ತಾಲೂಕಿನ ಸುಗುಟೂರು ಜಂಗಮಕೋಟೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಜೈ ವೆಂಕಟಾಪುರ ಪಂಚಾಯತಿ ಶಾಲೆ ಹಾಗೂ ಶಿಡ್ಲಘಟ್ಟ ನಗರದ ಸರ್ಕಾರಿ ಉರ್ದು ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಬೇಸಿಗೆ ಶಿಬಿರಗಳ ಮಹತ್ವ ವಿವರಿಸಿದರು. “ಶಿಬಿರಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣಗಳು ಹಾಗೂ ಸೃಜನಾತ್ಮಕತೆಯನ್ನು ಬೆಳೆಸುತ್ತವೆ. ಇಂತಹ ಅವಕಾಶಗಳನ್ನು ಪಾಲಕರು ಮತ್ತು ಶಿಕ್ಷಕರು ಸಮರ್ಪಕವಾಗಿ ಬಳಸಿಕೊಳ್ಳ ಬೇಕು,” ಎಂದು ತಿಳಿಸಿದರು.

Chinthamani News: ಗಣತಿದಾರರ ಸಮಸ್ಯೆಗಳ ಬಗೆಹರಿಸುವಂತೆ ನೌಕರರ ಸಂಘದಿಂದ ಮನವಿ

ಗಣತಿದಾರರ ಸಮಸ್ಯೆಗಳ ಬಗೆಹರಿಸುವಂತೆ ನೌಕರರ ಸಂಘದಿಂದ ಮನವಿ

ಭಾರತ ಜನಗಣತಿ 2027(Census 2027)ರ ಜನಗಣತಿ ಕಾರ್ಯಕ್ಕೆ ನೇಮಕವಾಗಿರುವ ಶಿಕ್ಷಕರ ಸಮಸ್ಯೆ ಗಳನ್ನು ಬಗೆಹರಿಸಿ ಕೊಡುವಂತೆ ತಹಶೀಲ್ದಾರ್ ಸುದರ್ಶನ್ ಯಾದವ್ ಮತ್ತು ಪೌರಾಯುಕ್ತರಾದ ಜಿ.ಎನ್.ಚಲಪತಿ ರವರಿಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಅಶೋಕ್ ಕುಮಾರ್ ನೇತೃತ್ವದಲ್ಲಿ ಮನವಿ ಪತ್ರ ನೀಡಲಾಯಿತು.

ಮಹಿಳಾ ಮೀಸಲು ವಿರೋಧಿಸಿ ಕಾಂಗ್ರೆಸ್ ಅಪರಾಧಿ ಸ್ಥಾನದಲ್ಲಿ ನಿಂತಿದೆ: ಜೋಶಿ

ಮಹಿಳಾ ಮೀಸಲು ವಿರೋಧಿಸಿ ಕಾಂಗ್ರೆಸ್ ಅಪರಾಧಿ ಸ್ಥಾನದಲ್ಲಿ ನಿಂತಿದೆ: ಜೋಶಿ

Pralhad Joshi: ಕಾಂಗ್ರೆಸ್ ಪಕ್ಷ ಶೇ.33ರಷ್ಟು ಮಹಿಳಾ ಮೀಸಲಾತಿ ಬೆಂಬಲಿಸದೇ ಇರುವುದು "ಮಹಿಳಾ ವಿರೋಧಿ" ಎಂಬುದನ್ನು ರುಜುವಾತುಪಡಿಸಿದೆ. ದೇಶದ ಒಳಿತಿಗೆ ಯಾವತ್ತೂ ಹೀಗೆ ವಿರೋಧವಾಗೇ ನಡೆದುಕೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.

ರಾಜಿಯಿಲ್ಲದ ಸಾಮಾಜಿಕ ನ್ಯಾಯದ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ ಮಾತ್ರ : ಚಿಂತಕ ಮುನಿರಾಜು ಎಂ ಅರಿಕೆರೆ ಅಭಿಮತ

ರಾಜಿಯಿಲ್ಲದ ಸಾಮಾಜಿಕ ನ್ಯಾಯದ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ ಮಾತ್ರ

ಅಪ್ರತಿಮ ಜ್ಞಾನಿಯಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮಿಡಿ ಬದುಕನ್ನು ದಮನಿತ ಸಮುದಾ ಯಗಳ ಸಬಲೀಕರಣಕ್ಕಾಗಿ ಬಳಸಿದರು. ಎಲ್ಲರನ್ನೂ ಒಳಗೊಂಡ ಸದೃಢ ಭಾರತ ನಿರ್ಮಾಣಕ್ಕಾಗಿ ಅಂತಃಕರಣದಿಂದ ಮಿಡಿದರು. ಅವರ ಜೀವನ ವ್ಯಕ್ತಿತ್ವ ಹೋರಾಟ ಮತ್ತು ಕೊಡುಗೆಗಳ ಅರಿವಿನ ಅಗತ್ಯತೆ ಮತ್ತು ಅನಿವಾರ್ಯತೆ ಇಂದು ಹೆಚ್ಚಿದೆ. ಸಂವಿಧಾನದ ಶಕ್ತಿ ಮತ್ತು ಸೌಂದರ್ಯ ಅದರ ಅರಿವಿನಲ್ಲಿಯೇ ಇದೆ

ಲೋಕಸಭೆಯಲ್ಲಿ ನಾರೀ ಶಕ್ತಿ ವಂದನಾ ಮಸೂದೆಗೆ ಸೋಲು ನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ

ನಾರೀ ಶಕ್ತಿ ವಂದನಾ ಮಸೂದೆಗೆ ಸೋಲು ನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಮಹಿಳೆಯರಿಗೆ ರಾಜಕೀಯ ದಲ್ಲಿ ಹೆಚ್ಚಿನ ಅವಕಾಶ ದೊರಕಬೇಕು.ಸಮಾಜದ ಅಭಿವೃದ್ಧಿಗೆ ಅವರ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಮಹಿಳಾ ಮೀಸಲಾತಿಯ ವಿರೋಧ ಕಾಂಗ್ರೆಸ್ ನೇತೃತ್ವದ ಇಂಡಿ ಕೂಟದ ನಡೆ ಮಹಿಳೆಯರಲ್ಲಿ ಆಕ್ರೋಶ ಮೂಡಿಸಿದೆ ಮುಂದಿನ ದಿನಗಳಲ್ಲಿ ಮಹಿಳೆಯರು ತಕ್ಕ ಪಾಠ ಕಲಿಸು ತ್ತಾರೆ. ದೇಶದಾದ್ಯಂತ ಬಿಜೆಪಿ ಇನ್ನಷ್ಟು ಬಲವಾಗಿ ಬೆಳೆಯಲಿದೆ

ಮಹಿಳಾ ಪ್ರಾತಿನಿಧ್ಯಕ್ಕೆ ಆದ ಸೋಲು ಇಡೀ ಮಹಿಳಾ ಸಂಕುಲಕ್ಕೆ ಮಾಡಿದ ಅಪಮಾನ : ರಾಜ್ಯ ಓಬಿಸಿ ಉಪಾಧ್ಯಕ್ಷೆ ಅಶ್ವಿನಿ ಶಂಕರ್

ಮಹಿಳಾ ಪ್ರಾತಿನಿಧ್ಯಕ್ಕೆ ಆದ ಸೋಲು ಮಹಿಳಾ ಸಂಕುಲಕ್ಕೆ ಮಾಡಿದ ಅಪಮಾನ

ಇದು ಕೇವಲ ಬಿಜೆಪಿ ಮತ್ತು ಮಿತ್ರಪಕ್ಷಗಳ ಪ್ರಯತ್ನವಲ್ಲ, ಎಲ್ಲ ಪಕ್ಷಗಳ ಪ್ರಯತ್ನ ಇದರ ಹಿಂದಿದೆ. ಆದರೆ, ನಿನ್ನೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಮಹಿಳಾ ವಿರೋಧಿ ಧೋರಣೆ ಅನಾವರಣ ಗೊಂಡಿದೆ. ಕಾಂಗ್ರೆಸ್‌ನ ರಾಹುಲ್‌ಗಾಂಧಿ ಮತ್ತು ಅವರ ಮಿತ್ರ ಪಕ್ಷಗಳದ್ದು ಮಹಿಳೆಯರ ವಿಚಾರ ದಲ್ಲಿ ಕೇವಲ ಮೊಸಳೆಕಣ್ಣೀರು ಮಾತ್ರ. ಅಭಿವೃದ್ಧಿಶೀಲ ರಾಷ್ಟ್ರದ ಪ್ರಯತ್ನದಲ್ಲಿ ಮಹಿಳಾ ಪಾಲ್ಗೊಳ್ಳುವಿಕೆ ಯ ಚಿಂತನೆಗೆ ಧಕ್ಕೆ ತಂದಿದ್ದಾರೆ

Mysuru News: ಮೈಸೂರಿನಲ್ಲಿ ಚಿರತೆಯಿಂದ ಅತ್ತೆಯ ರಕ್ಷಿಸಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

ಚಿರತೆಯಿಂದ ಅತ್ತೆಯ ರಕ್ಷಿಸಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

Leopard enters house at Mysuru: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸಿದ್ದಾರ್ಥ ಬಡಾವಣೆಯ ಸುರೇಶ್ ಎಂಬುವವರ ನಿವಾಸಕ್ಕೆ ಚಿರತೆಯೊಂದು ಶುಕ್ರವಾರ ನುಗ್ಗಿ, ವೃದ್ಧೆ ಮಲಗಿದ್ದ ಮಂಚದ ಕೆಳಗೇ ಮಲಗಿತ್ತು. ಈ ವೇಳೆ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಅತ್ತೆ ಶೈಲಜಾ (90) ಅವರನ್ನು ಸೊಸೆ ಸುಜಾತ ರಕ್ಷಣೆ ಮಾಡಿದ್ದರು. ಸುದ್ದಿ ತಿಳಿದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿದಿದ್ದರು. ಹೀಗಾಗಿ ಸಾವಿನ ದವಡೆಯಿಂದ ಅತ್ತೆಯನ್ನು ರಕ್ಷಿಸಿದ್ದ ಸೊಸೆ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭೆ ಕಾರ್ಯದರ್ಶಿಯಾಗಿ ಕನ್ನಡಿಗ ಡಾ. ಸೋಮಶೇಖರ್‌ ಆಯ್ಕೆ

ರಾಜ್ಯಸಭೆ ಕಾರ್ಯದರ್ಶಿಯಾಗಿ ಕನ್ನಡಿಗ ಡಾ. ಸೋಮಶೇಖರ್‌ ಆಯ್ಕೆ

Dr. K.S. Somashekhar: ರಾಜ್ಯಸಭೆಯ ಕಾರ್ಯದರ್ಶಿಯಾಗಿ ಕನ್ನಡಿಗ ಡಾ. ಕೆ.ಎಸ್‌. ಸೋಮಶೇಖರ್‌ ಅವರನ್ನು ನೇಮಿಸಿ ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಆದೇಶ ಹೊರಡಿಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ಸೋಮಶೇಖರ್‌ ರಾಜ್ಯಸಭೆಯ ಇಂಟರ್‌ಪ್ರಿಟರ್‌ ಆಗಿ 1993ರಲ್ಲಿ ಸೇವೆ ಆರಂಭಿಸಿದ್ದರು.

Loading...