ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi Column: ಹೊಸ ಭಾರತದ ಮೇಲೆ ಸೂರ್ಯ ಪ್ರಕಾಶಿಸುತ್ತಿದ್ದಾನೆ...!

ನಾವು ಕೇವಲ ನಮ್ಮ ಇಂಧನ ಅಗತ್ಯಗಳನ್ನು ಪೂರೈಸುವುದಲ್ಲದೆ, ಇಂಧನ ಪರಿವರ್ತನೆಯ ಕುರಿತಾದ ಜಾಗತಿಕ ಚರ್ಚೆಯನ್ನು ಸಕ್ರಿಯವಾಗಿ ರೂಪಿಸುತ್ತಿದ್ದೇವೆ. ಈ ಪ್ರಗತಿಯು ಕೇವಲ ಕಾಕತಾಳೀಯವಲ್ಲ, ಬದಲಾಗಿ ಕಳೆದ 11 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸ್ಥಿರ ವಾಗಿ ಅನುಸರಿಸಲಾದ ದಿಟ್ಟ ಸುಧಾರಣೆಗಳು, ಸಮಯೋಚಿತ ನಿರ್ಧಾರಗಳು ಮತ್ತು ಸ್ಪಷ್ಟವಾದ ದೂರ ದೃಷ್ಟಿಯ ಫಲಿತಾಂಶವಾಗಿದೆ.

ಹೊಸ ಭಾರತದ ಮೇಲೆ ಸೂರ್ಯ ಪ್ರಕಾಶಿಸುತ್ತಿದ್ದಾನೆ...!

Profile Ashok Nayak Jun 10, 2025 9:27 AM

ಪ್ರಲ್ಹಾದ್‌ ಜೋಶಿ

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ನವೀಕರಿಸ ಬಹುದಾದ ಇಂಧನ ವಲಯದಲ್ಲಿ ಕೇವಲ ಮಹತ್ವಾಕಾಂಕ್ಷೆಯ ಗುರಿಗಳನ್ನು ಮಾತ್ರ ಇರಿಸಿಲ್ಲ, ಬದಲಿಗೆ ದೃಢ ಸಂಕಲ್ಪ, ನಾವೀನ್ಯತೆ ಮತ್ತು ಅಪ್ರತಿಮ ಪ್ರಮಾಣದೊಂದಿಗೆ ಅವುಗಳನ್ನು ಸಾಧಿಸಿ ದ್ದೇವೆ. ಇಂದು ಭಾರತವು ವಿಶ್ವದ ಮುಂಚೂಣಿ ಸ್ವಚ್ಛ ಇಂಧನ ನಾಯಕರಲ್ಲಿ ಒಂದು.

ಸೌರಶಕ್ತಿಯಲ್ಲಿ ಮೂರನೇ, ಪವನ ವಿದ್ಯುತ್ ನಲ್ಲಿ ನಾಲ್ಕನೇ ಮತ್ತು ಒಟ್ಟಾರೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ. 232 ಗಿಗಾವ್ಯಾಟ್ ಗಿಂತಲೂ ಅಧಿಕ ನವೀಕರಿಸಬಹುದಾದ ಸಾಮರ್ಥ್ಯವನ್ನು ಸ್ಥಾಪಿಸಿದ್ದು, ಮತ್ತೊಂದು 176 ಗಿಗಾವ್ಯಾಟ್ ನಿರ್ಮಾಣ ಹಂತದಲ್ಲಿದೆ.

ನಾವು ಕೇವಲ ನಮ್ಮ ಇಂಧನ ಅಗತ್ಯಗಳನ್ನು ಪೂರೈಸುವುದಲ್ಲದೆ, ಇಂಧನ ಪರಿವರ್ತನೆಯ ಕುರಿತಾದ ಜಾಗತಿಕ ಚರ್ಚೆಯನ್ನು ಸಕ್ರಿಯವಾಗಿ ರೂಪಿಸುತ್ತಿದ್ದೇವೆ. ಈ ಪ್ರಗತಿಯು ಕೇವಲ ಕಾಕತಾ ಳೀಯವಲ್ಲ, ಬದಲಾಗಿ ಕಳೆದ 11 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸ್ಥಿರವಾಗಿ ಅನುಸರಿಸಲಾದ ದಿಟ್ಟ ಸುಧಾರಣೆಗಳು, ಸಮಯೋಚಿತ ನಿರ್ಧಾರಗಳು ಮತ್ತು ಸ್ಪಷ್ಟವಾದ ದೂರದೃಷ್ಟಿಯ ಫಲಿತಾಂಶವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಬಲಿಷ್ಠ ನವೀಕರಿಸಬಹುದಾದ ಇಂಧನ ಪರಿಸರ ವ್ಯವಸ್ಥೆ ಯನ್ನು ನಿರ್ಮಿಸುವ ಕುರಿತು ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದ್ದರು. ಗುಜರಾತ್ ನ ಮುಖ್ಯ ಮಂತ್ರಿಯಾಗಿದ್ದಾಗ, ಸ್ವಚ್ಛ ಇಂಧನವು ಜಾಗತಿಕ ಆದ್ಯತೆಯಾಗುವ ಮೊದಲೇ ಅವರು ದೊಡ್ಡ ಪ್ರಮಾಣದ ಸೌರ ಯೋಜನೆಗಳಿಗೆ ಮುಂದಾಳತ್ವ ವಹಿಸಿದ್ದರು.

ಇದನ್ನೂ ಓದಿ:Pralhad Joshi: ಕೇಂದ್ರದ ಪುರಸ್ಕಾರಗಳು ನೈಜ ಸಾಧಕರಿಗೆ ಸಲ್ಲುತ್ತಿವೆ: ಪ್ರಲ್ಹಾದ್‌ ಜೋಶಿ

2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಅವರು ಆ ದೃಷ್ಟಿಕೋನವನ್ನು ರಾಷ್ಟ್ರವ್ಯಾಪಿ ವಿಸ್ತರಿಸಿದರು. ಇದರ ಪರಿಣಾಮವಾಗಿ, ಇಂದು ಭಾರತವು ಸೌರ, ಪವನ ಮತ್ತು ಸ್ವಚ್ಛ ಇಂಧನ ನಾವೀನ್ಯತೆಯಲ್ಲಿ ಜಾಗತಿಕ ನಾಯಕನಾಗಿ ಗುರುತಿಸಿಕೊಂಡಿದೆ. ಕಳೆದ ಒಂದು ವರ್ಷ ದಲ್ಲಿಯೇ, ನಾವು ರಾಷ್ಟ್ರೀಯ ಗ್ರಿಡ್‌ಗೆ ದಾಖಲೆಯ 29 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಸೇರಿಸಿದ್ದೇವೆ.

2014ರಲ್ಲಿ ಕೇವಲ 2.63 ಗಿಗಾವ್ಯಾಟ್ ಇದ್ದ ಸೌರ ಸಾಮರ್ಥ್ಯವು 2025ರಲ್ಲಿ ಬೃಹತ್ ಪ್ರಮಾಣದಲ್ಲಿ 41 ಪಟ್ಟು ಹೆಚ್ಚಾಗಿ 108 ಗಿಗಾವ್ಯಾಟ್ ಗಿಂತಲೂ ಹೆಚ್ಚಾಗಿದೆ. ಪವನ ಶಕ್ತಿಯ ಸಾಮರ್ಥ್ಯವು ಸಹ 51 ಗಿಗಾವ್ಯಾಟ್‌ಗಳನ್ನು ಮೀರಿದೆ. ದೇಶದಾದ್ಯಂತ ಹರಡಿರುವ ಈ ಯೋಜನೆ ಗಳನ್ನು ಈಗ ಏಕೀಕೃತ ಪ್ರಸರಣ ವ್ಯವಸ್ಥೆಯ ಮೂಲಕ ಜೋಡಿಸಲಾಗುತ್ತಿದೆ, ಇದರಿಂದಾಗಿ ಒಂದು ರಾಷ್ಟ್ರ ಒಂದು ಗ್ರಿಡ್ ಎಂಬ ಕನಸು ನನಸಾಗುತ್ತಿದೆ. ಇದರ ಮೂಲಕ ಭೌಗೋಳಿಕ ತಡೆಗಳಿಲ್ಲದೆ ಪ್ರತಿಯೊಬ್ಬ ಭಾರತೀಯನು ವಿಶ್ವಾಸಾರ್ಹ ವಿದ್ಯುತ್ ಅನ್ನು ಪಡೆಯಬಹುದು.

ಆದರೆ ಈ ಪರಿವರ್ತನೆಯ ಪ್ರಮಾಣವನ್ನು ಅರಿಯಲು, ನಾವು ಎಲ್ಲಿಂದ ಪ್ರಾರಂಭಿಸಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. 2014ರಲ್ಲಿ, ಭಾರತದ ವಿದ್ಯುತ್ ವಲಯವು ತೀವ್ರ ಬಿಕ್ಕಟ್ಟಿ ನಲ್ಲಿತ್ತು. ವಿದ್ಯುತ್ ಕೊರತೆ ದೀರ್ಘಕಾಲೀನ ಸಮಸ್ಯೆಯಾಗಿತ್ತು. 2012ರಲ್ಲಿ ಎರಡು ಬಾರಿ ಗ್ರಿಡ್ ವೈಫಲ್ಯವುಂಟಾಗಿತ್ತು.

ಮೊದಲು ಉತ್ತರ ಪ್ರದೇಶದಲ್ಲಿ 36000 ಮೆಗಾವ್ಯಾಟ್ ಲೋಡ್ ನಷ್ಟವನ್ನು ಉಂಟುಮಾಡಿತು. ನಂತರ ಉತ್ತರ, ಪೂರ್ವ ಮತ್ತು ಈಶಾನ್ಯ ಗ್ರಿಡ್‌ಗಳ ಕುಸಿತಕ್ಕೆ ಕಾರಣವಾಗಿ 48000 ಮೆಗಾವ್ಯಾಟ್ ಗಳ ಮೇಲೆ ಪರಿಣಾಮ ಬೀರಿತು, ಅದು ಇನ್ನೂ ನಮ್ಮ ನೆನಪಿನಲ್ಲಿದೆ. ಅಲ್ಲಿವರೆಗೂ ನವೀಕರಿಸಬಹು ದಾದ ಶಕ್ತಿಯನ್ನು ದುಬಾರಿ ಮತ್ತು ವಿಶ್ವಾಸಾರ್ಹವಲ್ಲ ಎಂದು ಪರಿಗಣಿಸಲಾಗಿತ್ತು. ಜಾಗತಿಕ ಸಮುದಾಯವು ಭಾರತವನ್ನು ಗಂಭೀರವಾದ ಶುದ್ಧ ಇಂಧನ ಆಟಗಾರನಾಗಿ ನೋಡಲಿಲ್ಲ.

ದೇಶದೊಳಗೆ, ಸಾರ್ವಜನಿಕರ ನಿರೀಕ್ಷೆಗಳು ಅತ್ಯಲ್ಪವಾಗಿದ್ದವು. ನೀತಿ ನಿಶ್ಚಯವಿಲ್ಲದಿರುವುದು ಕೂಡ ಭಾರತವನ್ನು ’ದುರ್ಬಲ ಐದು’ ಆರ್ಥಿಕತೆಗಳಲ್ಲಿ ಒಂದಾಗಿ ಲೇಬಲ್ ಮಾಡಲು ಕಾರಣ ವಾಗಿತ್ತು. ಇಂದು ಆ ಸನ್ನಿವೇಶವು ನಿರ್ಣಾಯಕವಾಗಿ ಬದಲಾಗಿದೆ. ಭಾರತವು ಇಂಧನ ಕೊರತೆ ಯಿಂದ ಇಂಧನ ಆತ್ಮನಿರ್ಭರತೆಯತ್ತ ಸಾಗಿದೆ.

ಹಿಂದೆ ಬಿದ್ದಿದ್ದ ನಾವು ಈಗ ಇತರರಿಗೆ ಮಾದರಿಯಾಗಿದ್ದೇವೆ. ಮೋದಿ ಸರ್ಕಾರದ ಅಡಿಯಲ್ಲಿ ಕಳೆದ 11 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿನ 11 ಪರಿವರ್ತನಾತ್ಮಕ ಸುಧಾರಣೆ ಗಳನ್ನು ನಾನು ಎತ್ತಿ ತೋರಿಸುತ್ತೇನೆ. ಪ್ರತಿಯೊಂದು ಸುಧಾರಣೆಯೂ ನಮ್ಮ ಆತ್ಮನಿರ್ಭರತೆ, ಒಳಗೊಳ್ಳುವ ಬೆಳವಣಿಗೆ ಮತ್ತು ಸುಸ್ಥಿರತೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಮೊದಲನೆಯದಾಗಿ, ಫೀಡ್-ಇನ್ ಸುಂಕಗಳಿಂದ ಪಾರದರ್ಶಕ, ಮಾರುಕಟ್ಟೆ-ಚಾಲಿತ ಬಿಡ್ಡಿಂಗ್ ಪ್ರಕ್ರಿಯೆಗೆ ಬದಲಾವಣೆ ಒಂದು ಮಹತ್ವದ ತಿರುವು. ಸ್ಪರ್ಧಾತ್ಮಕ ಬಿಡ್ಡಿಂಗ್ ಮತ್ತು ಸುಂಕದ ತರ್ಕಬದ್ಧಗೊಳಿಸುವಿಕೆಯಿಂದಾಗಿ ಸೌರ ಶಕ್ತಿಯ ಶುಲ್ಕವು 2010 ರಲ್ಲಿ ಪ್ರತಿ ಯುನಿಟ್ ಗೆ ?10.95 ರಿಂದ 2021ರ ವೇಳೆಗೆ ಬೆರಗುಗೊಳಿಸುವ ?1.99 ಕ್ಕೆ ಇಳಿಯಿತು, ಇದು ಭಾರತವನ್ನು ಸೌರ ಶಕ್ತಿಯಲ್ಲಿ ಜಾಗತಿಕ ಬೆಲೆ ನಾಯಕನಾಗಿ ಸ್ಥಾನಾಂತರಿಸಿತು.

ಈ ಸುಧಾರಣೆಯು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದೆ. ಪಳೆಯುಳಿಕೆ ಇಂಧನಗಳೊಂದಿಗೆ ಬೆಲೆ ಸಮಾನತೆಯನ್ನು ಸ್ಥಾಪಿಸಿದೆ. ಎರಡನೆಯದಾಗಿ, ಮತ್ತೊಂದು ಪ್ರಮುಖ ಸೌಲಭ್ಯವೆಂದರೆ ಅಂತರ-ರಾಜ್ಯ ಪ್ರಸರಣ ವ್ಯವಸ್ಥೆಯ ಶುಲ್ಕಗಳ ರದ್ದತಿ. ಈ ಶುಲ್ಕಗಳನ್ನು ತೆಗೆದು ಹಾಕುವ ಮೂಲಕ, ಸರಕಾರವು ಯೋಜನಾಸಕ್ತರಿಗೆ ಇದ್ದ ಒಂದು ಪ್ರಮುಖ ಅಡಚಣೆಯನ್ನು ನಿವಾರಿಸಿದೆ. ಕಡಲಾಚೆಯ ಪವನ ವಿದ್ಯುತ್ ಗೆ 2032 ರವರೆಗೆ ಮತ್ತು ಹಸಿರು ಜಲಜನಕಕ್ಕೆ 2030 ರವರೆಗೆ ವಿಸ್ತರಿಸಲಾದ ಈ ನೀತಿಯು ನವೀಕರಿಸಬಹುದಾದ ಇಂಧನ ನಿಯೋಜನೆಯನ್ನು ಭೌಗೋಳಿಕ ಮಿತಿಗಳಿಂದ ಪರಿಣಾಮಕಾರಿಯಾಗಿ ಮುಕ್ತಗೊಳಿಸಿದೆ.

ಅಖಿಲ ಭಾರತ ಮಟ್ಟದಲ್ಲಿ ಇಂಧನ ಶಕ್ತಿಯ ಹರಿವಿಗೆ ಪ್ರೋತ್ಸಾಹ ನೀಡಿದೆ. ಮೂರನೆಯದಾಗಿ, ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು, ಸರಕಾರವು ಸೌರ ಉತ್ಪಾದನೆಗಾಗಿ ರೂ.24000 ಕೋಟಿ ಪ್ರೋತ್ಸಾಹಧನಗಳೊಂದಿಗೆ ಉತ್ಪಾದನೆ-ಸಂಬಂಧಿತ ಪ್ರೋತ್ಸಾಹ ( Production Linked Incentive -PLI) ಯೋಜನೆಯನ್ನು ಪರಿಚಯಿಸಿದೆ.

ಇದು ದೇಶೀಯ ಉತ್ಪಾದನಾ ಹೆಚ್ಚಳಕ್ಕೆ ಕಾರಣವಾಗಿದೆ, 2014ರಲ್ಲಿ 2.3 ಗಿಗಾ ವ್ಯಾಟ್ ಇದ್ದ ಮಾಡ್ಯೂಲ್ ಸಾಮರ್ಥ್ಯವು 2025ರ ವೇಳೆಗೆ 88 ಗಿಗಾ ವ್ಯಾಟ್‌ಗೆ ಹೆಚ್ಚಿದೆ. ಸೆಲ್ ಸಾಮರ್ಥ್ಯ ಸೊನ್ನೆ ಯಿಂದ 25 ಗಿಗಾ ವ್ಯಾಟ್‌ಗೆ ಬೆಳೆದಿದೆ. ಭಾರತವು ಕೇವಲ ಸೌರಶಕ್ತಿಯನ್ನು ನಿಯೋಜಿಸುವು ದಷ್ಟೇ ಅಲ್ಲ, ಅದನ್ನು ಉತ್ಪಾದಿಸುತ್ತಲೂ ಇದೆ. ಇದು ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ ಮತ್ತು ಇಂಧನ ಭದ್ರತೆಯನ್ನು ಹೆಚ್ಚಿಸುತ್ತದೆ.

ನಾಲ್ಕನೆಯದಾಗಿ, ಸ್ವಾವಲಂಬನೆಯನ್ನು ಉತ್ತೇಜಿಸಲು ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು, ಸರಕಾರವು ಮಾದರಿಗಳು ಮತ್ತು ತಯಾರಕರ ಅನುಮೋದಿತ ಪಟ್ಟಿ, ಘಟಕಗಳು ಮತ್ತು ತಯಾರಕರ ಅನುಮೋದಿತ ಪಟ್ಟಿ ಹಾಗೂ ದೇಶೀಯ ಅಂಶ ಅಗತ್ಯಗಳನ್ನು ಜಾರಿ ಗೊಳಿಸಿದೆ. ಇದು ಗುಣಮಟ್ಟದ ಭರವಸೆ, ಪೂರೈಕೆ ಸರಪಳಿಯ ಸಮಗ್ರತೆ ಮತ್ತು ಆಮದು ಮಾಡಿಕೊಳ್ಳುವ ಸೌರ ಘಟಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ.

ಈ ಕ್ರಮಗಳು ಭಾರತೀಯ ತಯಾರಕರಿಗೆ ಸಮಾನ ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿಸಿದ್ದು, ಸ್ಥಿತಿಸ್ಥಾಪಕ ಮತ್ತು ಸ್ಪರ್ಧಾತ್ಮಕ ಸೌರ ಪರಿಸರ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿವೆ. ಐದನೆಯದಾಗಿ, ಪ್ರಧಾನಮಂತ್ರಿಯವರ ‘ಪಿಎಂ-ಸೂರ್ಯ ಘರ್: ಮುಫತ್ ಬಿಜ್ಲಿ’ ಯೋಜನೆ ಒಂದು ಕ್ರಾಂತಿಕಾರಿ ಉಪಕ್ರಮವಾಗಿ ಮಾರ್ಪಟ್ಟಿದೆ.

ಇದು ಒಂದು ಕೋಟಿ ಮನೆಗಳಲ್ಲಿ ಮೇಲ್ಛಾವಣಿ ಸೌರ ಸ್ಥಾಪನೆಯನ್ನು ಗುರಿಯಾಗಿಸಿಕೊಂಡು 30 ಗಿಗಾವ್ಯಾಟ್ ವಿಕೇಂದ್ರೀಕೃತ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ. ಈಗಾಗಲೇ ಸುಮಾರು 13.75 ಲಕ್ಷ ಮನೆಗಳನ್ನು ಇದರೊಂದಿಗೆ ಜೋಡಿಸಲಾಗಿದೆ. ಇದು ತಳಮಟ್ಟದಲ್ಲಿ ಶುದ್ಧ ಶಕ್ತಿಗೆ ಲಭ್ಯತೆಯನ್ನು ಹೆಚ್ಚಿಸುತ್ತಿದೆ.

ಆರನೆಯದಾಗಿ, ಪಿಎಂ-ಕುಸುಮ್ ಯೋಜನೆಯು ರೈತರು ವಿಕೇಂದ್ರೀಕೃತ ಸೌರ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಕೃಷಿ ಕ್ಷೇತ್ರ ಸೌರ ವಿದ್ಯುತ್ತಿಗೆ ಬದಲಾ ಗುತ್ತಿದೆ. ಈಗಾಗಲೇ 11 ಲಕ್ಷಕ್ಕೂ ಹೆಚ್ಚು ಪಂಪ್ ಗಳನ್ನು ಸೌರೀಕರಣಗೊಳಿಸಲಾಗಿದೆ, ಇದು ಭಾರತದ ಅತ್ಯಂತ ಹೆಚ್ಚು ಇಂಧನ-ತೀವ್ರ ವಲಯವನ್ನು ಹವಾಮಾನ ಸ್ನೇಹಿಯನ್ನಾಗಿ ಪರಿವರ್ತಿಸುತ್ತಿದೆ.

ಏಳನೆಯದಾಗಿ, ಭಾರತವು ಈಗ ಸ್ವಚ್ಛ ಇಂಧನದಲ್ಲಿ ಇಡೀ ವಿಶ್ವವನ್ನು ಹಿಂಬಾಲಿಸುತ್ತಿಲ್ಲ, ಬದಲಿಗೆ ಮುನ್ನಡೆಸುತ್ತಿದೆ. ಏಪ್ರಿಲ್ 2020 ರಿಂದ ಸೆಪ್ಟೆಂಬರ್ 2024ರ ಅವಧಿಯಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ 19.98 ಬಿಲಿಯನ್ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಿದೆ. ಹಸಿರು ಇಂಧನ ಭಾರತದಲ್ಲಿ ಅತಿ ಹೆಚ್ಚು ಎಫ್‌ ಡಿಐ ಆಕರ್ಷಿಸುವ ಕ್ಷೇತ್ರಗಳಲ್ಲಿ ಒಂದಾಗಿ ಹೊರ ಹೊಮ್ಮಿದೆ.

ಇದು ಜಾಗತಿಕವಾಗಿ ಭಾರತದ ಸ್ಥಾನಮಾನ ಮತ್ತು ಆರ್ಥಿಕ ಸಾಮರ್ಥ್ಯದ ಏರಿಕೆಯನ್ನು ಪ್ರತಿ ಬಿಂಬಿಸುತ್ತದೆ. ಈ ಪಯಣದಲ್ಲಿ ಮತ್ತೊಂದು ಪ್ರಮುಖ ವೇಗವರ್ಧಕವೆಂದರೆ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್. ಇದಕ್ಕೆ ?20000 ಕೋಟಿ ಹೂಡಿಕೆ ಬೆಂಬಲವಿದೆ. ಇದು ಭಾರತ ವನ್ನು ಸ್ವಚ್ಛ ಇಂಧನಗಳ ಜಾಗತಿಕ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.

ಎಂಟನೆಯದಾಗಿ, ಪ್ರಸರಣ ಮೂಲಸೌಕರ್ಯವು ಪರಿವರ್ತನೆಯ ಬೆನ್ನೆಲುಬಾಗಿ ಉಳಿದಿದೆ. ಭಾರತವು ಹಸಿರು ಇಂಧನ ಕಾರಿಡಾರ್‌ಗಳು ಮತ್ತು 2030ರ ಪ್ರಸರಣ ಮಾರ್ಗಸೂಚಿಯಲ್ಲಿನ ಹೂಡಿಕೆಯು ನವೀಕರಿಸಬಹುದಾದ ಇಂಧನ ಯೋಜನೆಗಳು ಗ್ರಿಡ್ ಗೆ ಸಮರ್ಥವಾಗಿ ಮತ್ತು ವಿಶ್ವಾಸಾರ್ಹವಾಗಿ ಸಂಪರ್ಕಗೊಳ್ಳಲು ಸಾಧ್ಯವಾಗಿಸುತ್ತದೆ.

ಈ ಬೆನ್ನೆಲುಬು ಇಂಧನ ಕಡಿತದ ಅಪಾಯಗಳನ್ನು ಕಡಿಮೆ ಮಾಡುತ್ತದೆ ಮತ್ತು ಗ್ರಿಡ್‌ನ ಸ್ಥಿರತೆಯನ್ನು ಹೆಚ್ಚಿಸುತ್ತದೆ. ಒಂಬತ್ತನೆಯದಾಗಿ, ಭಾರತದ ಕರಾವಳಿ ಪ್ರದೇಶಗಳ ಅಪಾರ ಸಾಮರ್ಥ್ಯವನ್ನೂ ಸರ್ಕಾರ ಬಳಸಿಕೊಳ್ಳುತ್ತಿದೆ. ಕಡಲಾಚೆಯ ಗಾಳಿ ವಿದ್ಯುತ್ ( Offshore wind) ಯೋಜನೆಗಳು, 2030ರ ವೇಳೆಗೆ 37 ಗಿಗಾ ವ್ಯಾಟ್ ಟೆಂಡರ್ ಗಳನ್ನು ಯೋಜಿಸಿದ್ದು, ಕಾರ್ಯ ಸಾಧ್ಯತಾ ಅಂತರ ನಿಧಿ ( viability gap funding) ಮತ್ತು ಸದೃಢ ಸ್ಥಳ ಸಮೀಕ್ಷೆಗಳಿಂದ ಬೆಂಬಲಿತ ವಾಗಿವೆ.

ಗುಜರಾತ್ ಮತ್ತು ತಮಿಳುನಾಡಿನಲ್ಲಿನ ಪ್ರಾಯೋಗಿಕ ಯೋಜನೆಗಳು ಈಗಾಗಲೇ ಭಾರತದ ಮುಂದಿನ ನವೀಕರಿಸಬಹುದಾದ ಇಂಧನ ಗಡಿಯುದ್ದಕ್ಕೂ ಅಡಿಪಾಯವನ್ನು ಹಾಕುತ್ತಿವೆ. ಹತ್ತನೆಯದಾಗಿ, ಮಧ್ಯಂತರ ವಿದ್ಯುತ್ ಪೂರೈಕೆಯ ಸವಾಲನ್ನು ಅರಿತುಕೊಂಡು, ಭಾರತವು ಹೈಬ್ರಿಡ್ ಮತ್ತು ದಿನದ 24 ಗಂಟೆಯೂ ವಿದ್ಯುತ್ ಪೂರೈಸುವ ನೀತಿಯೊಂದಿಗೆ ನಿರ್ಣಾಯಕ ಹೆಜ್ಜೆ ಇಟ್ಟಿದೆ.

ಗಾಳಿ-ಸೌರ ಹೈಬ್ರಿಡ್ ಗಳನ್ನು ಮತ್ತು ದೃಢ ಹಾಗೂ ವಿತರಿಸಬಹುದಾದ ನವೀಕರಿಸಬಹುದಾದ ಇಂಧನವನ್ನು ಉತ್ತೇಜಿಸುವ ಮೂಲಕ, ಭಾರತವು 24/7 ಸ್ವಚ್ಛ ಇಂಧನ ಪರಿಹಾರಗಳನ್ನು ನಿರ್ಮಿಸುತ್ತಿದೆ. 65 ಗಿಗಾ ವ್ಯಾಟ್‌ಗೂ ಹೆಚ್ಚು ಯೋಜನೆಗಳು ಸಿದ್ಧವಾಗುತ್ತಿದ್ದು, ಇದು ಗ್ರಿಡ್ ವಿಶ್ವಾಸಾರ್ಹತೆಗೆ ಮತ್ತು ಪಳೆಯುಳಿಕೆ-ಆಧಾರಿತ ಬೇಸ್ ಲೋಡ್ ವಿದ್ಯುತ್ ಅನ್ನು ಬದಲಿಸಲು ಅತ್ಯಗತ್ಯವಾಗಿದೆ.

ಹನ್ನೊಂದನೆಯದಾಗಿ, ಬುಡಕಟ್ಟು ಮತ್ತು ದೂರದ ಪ್ರದೇಶಗಳಲ್ಲಿ, ಈ ತನಕ ವಿದ್ಯುತ್ ಇರದಿದ್ದ ಮನೆಗಳಿಗೆ ನಾವು ವಿದ್ಯುತ್ ತಲುಪಿಸುತ್ತಿದ್ದೇವೆ. ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಿ ಗಾಗಿ ವಿಶೇಷ ಸೌರ ಕಾರ್ಯಕ್ರಮಗಳ ಮೂಲಕ ಮತ್ತು ಪಿಎಂ ಜನಮನ್ ಮಿಷನ್ ಹಾಗೂ ಸಿ ಪಿ ಎಸ್ ಯು ಯೋಜನೆ ಹಂತ-ಐಐ ( CPSU Scheme Phase-II) ಅಡಿಯಲ್ಲಿ, ಸಾವಿರಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇವು ಕೇವಲ ಇಂಧನ ಕಾರ್ಯಕ್ರಮಗಳಲ್ಲ, ಬದಲಿಗೆ ಸಬಲೀಕರಣ ಮತ್ತು ಅಂತರ್ಗತ ಬೆಳವಣಿಗೆಯ ಸಾಧನಗಳಾಗಿವೆ.

ಜಾಗತಿಕ ಮನ್ನಣೆ ಮತ್ತು ದೇಶೀಯ ಸಂಕಲ್ಪ ಭಾರತ ಕೇವಲ ದೇಶದಲ್ಲಿ ಮಾತ್ರ ಪ್ರಗತಿ ಸಾಧಿಸುತ್ತಿಲ್ಲ. ನಾವು ಜಾಗತಿಕವಾಗಿ ಮುನ್ನಡೆಸುತ್ತಿದ್ದೇವೆ. ಪ್ರಧಾನಿ ಮೋದಿಯವರು ಪ್ರಾರಂಭಿಸಿದ ಅಂತಾರಾಷ್ಟ್ರೀಯ ಸೌರ ಒಕ್ಕೂಟವು 100ಕ್ಕೂ ಹೆಚ್ಚು ದೇಶಗಳನ್ನು ಒಟ್ಟುಗೂಡಿಸಿದೆ. ‘ಒಂದು ಸೂರ್ಯ ಒಂದು ಜಗತ್ತು ಒಂದು ಗ್ರಿಡ್’ ಎಂಬ ದೂರದೃಷ್ಟಿಯು ಸೌರ ಶಕ್ತಿಯು ರಾಷ್ಟ್ರಗಳನ್ನು ಹೇಗೆ ಒಂದುಗೂಡಿಸಬಹುದು ಎಂದು ಜಗತ್ತಿಗೆ ತೋರಿಸುತ್ತಿದೆ.

ಇದು ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮೊದಲ ಅಂತರರಾಷ್ಟ್ರೀಯ ಮತ್ತು ಅಂತರ-ಸರಕಾರಗಳ ಸಂಸ್ಥೆಯಾಗಿದೆ. ಜಗತ್ತು ಭಾರತವನ್ನು ಗಮನಿಸುತ್ತಿದೆ. ಮತ್ತು ಜಗತ್ತು ಭಾರತದಿಂದ ಕಲಿಯುತ್ತಿದೆ. ವಿಶ್ವದೆಲ್ಲೆಡೆಯ ಹೂಡಿಕೆದಾರರು ಭಾರತದ ಶುದ್ಧ ಇಂಧನ ವಿಷ್ಯಕ್ಕಾಗಿ 2030ರ ವೇಳೆಗೆ 32.45 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಬದ್ಧರಾಗಿದ್ದಾರೆ.

ವಲಯದಲ್ಲಿ ಹಣಕಾಸಿನ ಬೆಂಬಲವನ್ನು ಬಲಪಡಿಸಲು ಮತ್ತು ಹೂಡಿಕೆಯನ್ನು ವೇಗಗೊಳಿಸಲು ಎ ಪ್ರಮುಖ ಬ್ಯಾಂಕ್‌ಗಳ ಉನ್ನತ ಅಧಿಕಾರಿಗಳೊಂದಿಗೆ ನವೀಕರಿಸಬಹುದಾದ ಇಂಧನಕ್ಕಾಗಿ ಹಣಕಾಸು ಕ್ರೋಢೀಕರಣದ ಕುರಿತು ರಾಷ್ಟ್ರೀಯ ಕಾರ್ಯಾಗಾರವನ್ನು ಸಹ ಆಯೋಜಿಸಲಾಗಿತ್ತು. ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ತ್ವರಿತಗೊಳಿಸಲು ಮತ್ತು ಕಾರ್ಯನಿರ್ವಹಿಸಲು ಹಾಗೂ ನಾವೀನ್ಯತೆಗಳನ್ನು ಪ್ರೋತ್ಸಾಹಿಸಲು ರಾಜ್ಯಗಳ ನಡುವೆ ಸ್ಪರ್ಧಾತ್ಮಕ ವಾತಾವರಣವನ್ನು ಬೆಳೆಸಲು ಪ್ರಧಾನ ಮಂತ್ರಿಯವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿಗಳೊಂದಿಗೆ ನಿಯಮಿತ ಸಭೆಗಳನ್ನು ಸಹ ನಡೆಸಲಾಗುತ್ತಿದೆ.

ಇತ್ತೀಚೆಗೆ ಮೇ24 ರಂದು ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ ಸಭೆಯಲ್ಲಿ, ಪ್ರಧಾನಿ ಮೋದಿ ಯವರು ಶುದ್ಧ ಇಂಧನ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕುರಿತು ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ವಿವರವಾದ ಚರ್ಚೆ ನಡೆಸಿದರು. ಭವಿಷ್ಯದ ಸಿದ್ಧ ಹಸಿರು ಕಾರ್ಯಪಡೆ ಯನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿರುವ ಪ್ರಮುಖ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಾಗಿ ಸೂರ್ಯಮಿತ್ರ, ವಾಯುಮಿತ್ರ ಮತ್ತು ಜಲ್ ಊರ್ಜಾಮಿತ್ರದಂತಹ ಉಪಕ್ರಮಗಳನ್ನು ಎತ್ತಿ ತೋರಿಸಲಾಯಿತು.

ಮುಂದಿರುವ ದಾರಿ

ಪ್ರಧಾನಿ ಮೋದಿಯವರು 2030 ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆ ರಹಿತ ವಿದ್ಯುತ್ ಸಾಮರ್ಥ್ಯವನ್ನು ಗುರಿಯಾಗಿಟ್ಟುಕೊಂಡಿದ್ದಾರೆ. ನಾವು ಈಗಾಗಲೇ 228 ಗಿಗಾವ್ಯಾಟ್ ಗಳನ್ನು ಹೊಂದಿದ್ದೇವೆ. ಇನ್ನು 176 ಗಿಗಾವ್ಯಾಟ್ ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. 72 ಗಿಗಾವ್ಯಾಟ್ ಗಳ ಟೆಂಡರ್ ಪ್ರಕ್ರಿಯೆಯಲ್ಲಿದೆ. ನಾವು ಕೇವಲ ಗುರಿ ಮುಟ್ಟುವುದಲ್ಲ, ನಿರೀಕ್ಷೆಗಿಂತಲೂ ಮುಂದಿ ದ್ದೇವೆ.

ಇದು ನಮ್ಮ ಹೆಚ್ಚುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸಲು ಮಾತ್ರವಲ್ಲದೆ, 2032ರ ವೇಳೆಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿರುವ ನಮ್ಮ ವಿದ್ಯುತ್ ಬೇಡಿಕೆಯನ್ನು ಸಹ ಬೆಂಬಲಿಸುತ್ತದೆ. ಅದೇ ಸಮಯದಲ್ಲಿ, ನಾವು 2047ರ ವೇಳೆಗೆ 1800 ಗಿಗಾವ್ಯಾಟ್ ಪಳೆಯುಳಿಕೆ ರಹಿತ ( non fossil ) ಇಂಧನ ಸಾಮರ್ಥ್ಯವನ್ನು ಸಾಧಿಸುವ ನಮ್ಮ ದೀರ್ಘಾವಧಿಯ ಗುರಿಯತ್ತ ಸ್ಥಿರವಾಗಿ ಕಾರ್ಯ ನಿರ್ವಹಿಸು ತ್ತಿದ್ದೇವೆ.

ಒಟ್ಟಾಗಿ, ಈ ಮೈಲಿಗಲ್ಲುಗಳು ಸ್ವಚ್ಛ ಮತ್ತು ಅಂತರ್ಗತ ಬೆಳವಣಿಗೆಯಿಂದ ಸಶಕ್ತವಾದ ’ವಿಕಸಿತ ಭಾರತ’ ನಿರ್ಮಿಸುವ ನಮ್ಮ ಬದ್ಧತೆಗೆ ಬೆನ್ನೆಲುಬಾಗಿವೆ. ಹೊಸ ಭಾರತದ ಮೇಲೆ ಸೂರ್ಯ ಪ್ರಕಾಶಿಸುತ್ತಿದ್ದಾನೆ. ಮತ್ತು ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ, ನಾವು ವಿಶ್ವವನ್ನು ಮುನ್ನಡೆಸಲು ಸಿದ್ಧರಾಗಿದ್ದೇವೆ.