Book Release: ಡಾ.ಎಸ್.ಕೆ. ಮೂರ್ತಿ ರಚನೆಯ ʼಬ್ರೆತ್ʼ ಕೃತಿ ಲೋಕಾರ್ಪಣೆ
Book Release: ಡಾ.ಎಸ್.ಕೆ. ಮೂರ್ತಿ ಅವರು ರಚಿಸಿದ ʼಬ್ರೆತ್ – ದೇಹ ಮತ್ತು ಚೇತನದ ನಡುವೆ ಸೇತುಬಂಧʼ ಎಂಬ ಕೃತಿ ಬಿಡುಗಡೆ ಕಾರ್ಯಕ್ರಮ ಬೆಂಗಳೂರು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಜರುಗಿತು. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಡಾ.ಎಸ್.ಕೆ. ಮೂರ್ತಿ ಅವರು ರಚಿಸಿದ ʼಬ್ರೆತ್ – ದೇಹ ಮತ್ತು ಚೇತನದ ನಡುವೆ ಸೇತುಬಂಧʼ ಎಂಬ ಕೃತಿಯ ಬಿಡುಗಡೆ ಕಾರ್ಯಕ್ರಮ (Book Release) ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಜರುಗಿತು. ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಖ್ಯಾತ ಶ್ವಾಸಕೋಶ ತಜ್ಞ ಡಾ. ಗುರುಪ್ರಸಾದ್ ಭಟ್, ಅಷ್ಟಾಂಗ ಯೋಗ ಗುರು ಅಜಿತ್ ಕುಮಾರ್ ಶೆಣೈ ಮತ್ತು ವೈದ್ಯ ಡಾ. ಶಿವಶಂಕರ್ ಶಾಸ್ತ್ರೀ ಅವರು ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಇಂದಿನ ಹತಾಶ ಮತ್ತು ಆತಂಕಪೂರ್ಣ ಜೀವನದಲ್ಲಿ ಉಸಿರಾಟವು ಅನಾಯಾಸವಾಗಿ ನಡೆಯುವ, ಆದರೆ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದ್ದು, ಅದನ್ನು ಜಾಗೃತವಾಗಿ ಮಾಡುವುದರಿಂದ ದೇಹ ಮತ್ತು ಮನಸ್ಸಿನ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ | SSC Recruitment 2025: ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಗುಡ್ನ್ಯೂಸ್; ಸ್ಟಾಫ್ ಸೆಲೆಕ್ಷನ್ ಕಮಿಷನ್ನಿಂದ 2,423 ಹುದ್ದೆಗಳ ಭರ್ತಿ
ʼಬ್ರೆತ್ – ದೇಹ ಮತ್ತು ಚೇತನದ ನಡುವೆ ಸೇತುಬಂಧʼ ಎಂಬ ಕೃತಿಯ ಕುರಿತು ತಜ್ಞರು ಮಾತನಾಡಿ, ʼಬ್ರೆತ್ʼ ಪುಸ್ತಕವು ಉಸಿರಾಟದ ಮಹತ್ವವನ್ನು ವೈಜ್ಞಾನಿಕ ದೃಷ್ಟಿಕೋನದಿಂದ, ನಿದರ್ಶನಗಳು ಮತ್ತು ಪುರಾವೆಗಳೊಂದಿಗೆ ವಿವರಿಸಿದ್ದು, ಸಂಶಯಾತ್ಮಕ ಮನಸ್ಸು ಹೊಂದಿರುವವರಿಗೆಲ್ಲರಿಗೂ ಮನನೀಯವಾಗುವ ರೀತಿಯಲ್ಲಿ ನಿರೂಪಿತವಾಗಿದೆ. ಈ ಕೃತಿ, ಓದುವವರನ್ನು ಆತ್ಮಪರಿಶೀಲನೆಗೆ ದಾರಿ ತೋರಿಸಬಲ್ಲ ಶಕ್ತಿಯಾಗಿದೆ ಎಂದು ಶ್ಲಾಘಿಸಿದರು.