Vishwavani Special: ಅನಿಷ್ಟಕ್ಕೆಲ್ಲ ಕಾರಣ ಗೋವಿಂದ; ದಯಾನಂದ..!?
ದಯಾನಂದ ಅವರು ಮುಖ್ಯಮಂತ್ರಿಯವರ ಮುಂದೆ ವಾಸ್ತವ ಚಿತ್ರಣ ಇಡುವ ಪ್ರಯತ್ನ ಮಾಡ ಬೇಕಿತ್ತು. ಆದರೆ ಗೋವಿಂದ ರಾಜ್ ಜತೆಗಿನ ಸಖ್ಯ, ಸಾಮೀಪ್ಯ ಮತ್ತು ಗೆಳೆತನದ ಅತಿಯಾದ ನಂಬಿಕೆ ಯಿಂದ ದಯಾನಂದ ಹಾಗೆ ಮಾಡಲೇ ಇಲ್ಲ. ಗೋವಿಂದ ರಾಜ್ಗೆ ಸಕಲವನ್ನೂ ತಿಳಿಸಿ ತಮ್ಮ ಕರ್ತವ್ಯ ಮುಗಿಯಿತು ಎಂದು ನಿರಾಳರಾಗಿ ಸುಮ್ಮನಾಗಿಬಿಟ್ಟರು.


ಬೆಂಗಳೂರು: ಆರ್ಸಿಬಿ ತಂಡದ ವಿಜಯೋತ್ಸವದಂದು ನಡೆದ ಕಾಲ್ತುಳಿತ ದುರಂತದಲ್ಲಿ ಸರಕಾರ ತನ್ನ ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು ಬೆಂಗಳೂರಿನ ಪೊಲೀಸ್ ಕಮಿಷನರ್ ಆಗಿದ್ದ ದಕ್ಷ ಅಧಿಕಾರಿ ದಯಾನಂದ ಅವರನ್ನು ಅಮಾನತುಗೊಳಿಸಿದ್ದು ಸರಿಯಲ್ಲ, ನಿಷ್ಠಾವಂತ ಅಧಿಕಾರಿಗೆ ಸರಕಾರ ನೀಡಿದ ‘ಬಹುಮಾನ’ ಇದೇನಾ, ಇದರಿಂದ ಇಡೀ ಪೊಲೀಸ್ ವ್ಯವಸ್ಥೆ ಸ್ಥೈರ್ಯ ಗೆಡು ವಂತಾಯಿತು. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರನ್ನು ಅಮಾನತು ಗೊಳಿಸುವುದೆಂದರೆ ಸಾಮಾನ್ಯವಾ, ಇಂಥ ಘಟನೆ ಹಿಂದೆಂದೂ ಆಗಿರಲಿಲ್ಲ, ಸರಕಾರ ದಯಾನಂದ ಅವರನ್ನು ಬಲಿಕೊಡಬಾರದಿತ್ತು... ಮುಂತಾದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕ ಚರ್ಚೆಗಳಲ್ಲಿ ಘಟನೆ ನಡೆದಂದಿನಿಂದ ಕೇಳಿ ಬರುತ್ತಲೇ ಇದೆ. ಈ ವಾದ ಮೇಲ್ನೋ ಟಕ್ಕೆ ನಿಜ ಎಂಬಂತೆ ತೋರುತ್ತಿದೆ. ದಯಾನಂದ ಅವರು ದಕ್ಷ, ಪ್ರಾಮಾಣಿಕ ಅಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ.
ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಪ್ತರೂ ಸಹ. ದಯಾನಂದ ಅವರನ್ನು ಮೈಸೂರು ನಗರ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಿಸಿದವರು ಸಿದ್ದರಾಮಯ್ಯ ನವರೇ. ಈ ಮಧ್ಯೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗುಪ್ತಚರ ದಳದ ಮುಖ್ಯಸ್ಥ ರಾಗಿಯೂ ಕೆಲಸ ಮಾಡಿದವರು. ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ದಯಾನಂದ ಅವರ ಮೇಲೆ ಸಿದ್ದರಾಮಯ್ಯನವರಿಗೆ ಒಲವು ಇದ್ದಿದ್ದು ಸಹ ನಿಜವೇ. ಅವರನ್ನು ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಯಿಂದ ಬದಲಿಸಬೇಕು ಎಂಬ ಒತ್ತಡ ಬಂದಾಗಲೂ ಮುಖ್ಯಮಂತ್ರಿಯವರು ಸೊಪ್ಪು ಹಾಕಿದವರಲ್ಲ. ಇದಕ್ಕೆಲ್ಲ ದಯಾನಂದ ಅವರ ದಕ್ಷತೆ, ಪ್ರಾಮಾಣಿಕತೆ ಮತ್ತು ಸಾಮರ್ಥ್ಯ ವೇ ಮುಖ್ಯ ಕಾರಣವಾಗಿತ್ತು.
ಇಷ್ಟಾಗಿಯೂ ಮುಖ್ಯಮಂತ್ರಿಯವರು ತಮ್ಮ ’ಗುಡ್ ಬುಕ್ಸ್ ’ನಲ್ಲಿದ್ದ ದಯಾನಂದ ಅವರನ್ನು ಅಮಾನತುಗೊಳಿಸುವ ಕಠಿಣ ಮತ್ತು ತೀವ್ರ ನಿರ್ಧಾರವನ್ನು ತೆಗೆದುಕೊಂಡಿದ್ದೇಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುವುದು ಸಹಜ. ಕಾಲ್ತುಳಿತ ಸಂಭವಿಸಿದ ದಿನ ದಯಾನಂದ ಅವರ ದಕ್ಷತೆಯಾಗಲಿ, ಸಾಮರ್ಥ್ಯವಾಗಲಿ ಪ್ರಯೋಜನಕ್ಕೆ ಬರಲಿಲ್ಲ ಹಾಗೂ ಅದೇ ಅವರ ಅಮಾನತಿಗೆ ಕಾರಣವಾಗಿದ್ದು ಮಾತ್ರ ವಿಪರ್ಯಾಸ. ಆರ್ಸಿಬಿ ತಂಡವನ್ನು ಸನ್ಮಾನ ಮಾಡಿದ ದಿನ, ಪೊಲೀಸ್ ಕಮಿಷನರ್ ಅವರು ಮುಖ್ಯಮಂತ್ರಿಯವರನ್ನು ಖುದ್ದಾಗಿ ಭೇಟಿಯಾಗಿ, ಕಾರ್ಯಕ್ರಮ ನಡೆಸಲು ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂಬ ವಾಸ್ತವವನ್ನು ಮನವರಿಕೆ ಮಾಡಿಕೊಡಬೇಕಿತ್ತು.
ಕನಿಷ್ಠ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಪರಿಸ್ಥಿತಿಯ ತೀವ್ರತೆಯನ್ನು ಹೇಳಬೇಕಿತ್ತು. ಆದರೆ ದಯಾನಂದ ಎಡವಿದ್ದು ಇಲ್ಲೇ. ಈ ಎರಡೂ ಕೆಲಸಗಳನ್ನು ಅವರು ಮಾಡಲೇ ಇಲ್ಲ. ಒಂದು ವೇಳೆ ಗಂಭೀರತೆಯನ್ನು ದಯಾನಂದ ವಿವರಿಸಿದ್ದರೆ, ಅವರು ಪರಿಸ್ಥಿತಿಯ ಮುಖ್ಯಮಂತ್ರಿ ಯವರು ಪೊಲೀಸ್ ಕಮೀಷನರ್ ಮಾತನ್ನು ತಳ್ಳಿ ಹಾಕುತ್ತಿರಲಿಲ್ಲ.
ದಯಾನಂದ ಅವರು ತಮಗೆ ಆಪ್ತರಾದ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಮೂಲಕ ಈ ಎಲ್ಲ ಸಂಗತಿಗಳನ್ನೂ ಸಿದ್ದರಾಮಯ್ಯ ನವರಿಗೆ ತಲುಪಿಸುವ ಬದಲು, ನೇರವಾಗಿ ತಾವೇ ಸಿಎಂಗೆ ಹೇಳಬೇಕಿತ್ತು. ಆದರೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವ ಹುನ್ನಾರದಲ್ಲಿದ್ದ ಗೋವಿಂದ ರಾಜ, ದಯಾನಂದ ಅವರ ಇಂಗಿತವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲೇ ಇಲ್ಲ.
ಇಷ್ಟಾಗಿಯೂ ಪರಿಸ್ಥಿತಿಯ ತೀವ್ರತೆಯನ್ನು ಅರ್ಥ ಮಾಡಿಕೊಂಡು ಬೇರೊಂದು ಮಾರ್ಗದದರೂ ದಯಾನಂದ ಅವರು, ಮುಖ್ಯಮಂತ್ರಿಯವರ ಮುಂದೆ ವಾಸ್ತವ ಚಿತ್ರಣವನ್ನು ಇಡುವ ಪ್ರಯತ್ನ ವನ್ನು ಮಾಡಬೇಕಿತ್ತು. ಆದರೆ ಗೋವಿಂದ ರಾಜ್ ಜತೆಗಿನ ಸಖ್ಯ, ಸಾಮೀಪ್ಯ ಮತ್ತು ಗೆಳೆತನದ ಅತಿಯಾದ ನಂಬಿಕೆಯಿಂದ ದಯಾನಂದ ಹಾಗೆ ಮಾಡಲೇ ಇಲ್ಲ. ಗೋವಿಂದ ರಾಜ್ಗೆ ಸಕಲ ವನ್ನೂ ತಿಳಿಸಿ ತಮ್ಮ ಕರ್ತವ್ಯ ಮುಗಿಯಿತು ಎಂದು ನಿರಾಳರಾಗಿ ಸುಮ್ಮನಾಗಿಬಿಟ್ಟರು. ತಮ್ಮ ಆತಂಕ ಮತ್ತು ಅಸಹಾಯಕತೆ ಮುಖ್ಯಮಂತ್ರಿಗಳ ಗಮನಕ್ಕೆ ಬಂತಾ, ಇಲ್ಲವಾ ಎಂಬುದನ್ನು ದಯಾನಂದ ಖಾತ್ರಿಪಡಿಸಿಕೊಳ್ಳಲೇ ಇಲ್ಲ. ಇತ್ತ ಗೋವಿಂದ ರಾಜ, ಇಡೀ ಸಂಭ್ರಮವನ್ನು ತಾನೇ ಸಂಘಟಿಸಿದ್ದು ಎಂದು ಮುಖ್ಯಮಂತ್ರಿಯವರಿಂದ ಶಹಬ್ಬಾಶ್ ಪಡೆಯುವ ಹುಕಿಯಲ್ಲಿದ್ದರು.
ಮುಖ್ಯಮಂತ್ರಿಯವರಿಗೆ ಏನನ್ನೂ ಹೇಳದೇ ’ಸೂಪರ್ ಸಿಎಂ’ ಎಂಬ ರೀತಿಯಲ್ಲಿ ವರ್ತಿಸಿಬಿಟ್ಟರು. ಅದು ವೇದಿಕೆಯಲ್ಲಿ ಅವರ ಓಡಾಟದಿಂದಲೇ ಜಗಜ್ಜಾಹೀರಾಯಿತು. ರಾಜಕೀಯ ಕಾರ್ಯದರ್ಶಿ ಯಾಗಿ ಮುಖ್ಯಮಂತ್ರಿಗಳು ತಮಗೆ ನೀಡಿದ ಸಲುಗೆ, ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡ ಗೋವಿಂದ ರಾಜ್, ಸಿಎಂ ಅವರನ್ನು ಸಂಪೂರ್ಣ ಹಾದಿ ತಪ್ಪಿಸಿಬಿಟ್ಟರು.
ಅತ್ತ ರಾಜ್ಯಪಾಲರನ್ನು ತಾವೇ ಖುದ್ದಾಗಿ ಸಮಾರಂಭಕ್ಕೆ ಆಮಂತ್ರಿಸಿದ ಗೋವಿಂದರಾಜ, ಇತ್ತ ಮುಖ್ಯಮಂತ್ರಿಯವರಿಗೆ, ವಿಧಾನಸೌಧದ ಮುಂದೆ ನಡೆಯುವ ಸನ್ಮಾನ ಕಾರ್ಯಕ್ರಮಕ್ಕೆ ರಾಜ್ಯಪಾಲರೂ ಬರುವ ಆಸೆ ವ್ಯಕ್ತಪಡಿಸಿದ್ದಾರೆ’ ಎಂದು ಕಥೆ ಕಟ್ಟಿಬಿಟ್ಟರು. ಈ ಯಾವ ಸಂಗತಿಗಳೂ ದಯಾನಂದ ಅವರಿಗೆ ಗೊತ್ತೇ ಆಗಲಿಲ್ಲ. ಇಂಥ ಅತಿ ಮಹತ್ವದ ಸಂದರ್ಭದಲ್ಲಿ ಪೊಲೀಸ್ ಕಮಿಷನರ್ ಅವರು ಮುಖ್ಯಮಂತ್ರಿಯವರನ್ನು ಖುದ್ದಾಗಿ ಭೇಟಿಯಾಗಿ ವಾಸ್ತವ ವಿಷಯ ವನ್ನು ವಿವರಿಸಲೇಬೇಕು ಎಂಬ ವಿವೇಚನೆ ಅಂದು ದಯಾನಂದಗೆ ಹೊಳೆಯಲೇ ಇಲ್ಲ. ಸ್ನೇಹಿತ ಗೋವಿಂದ ರಾಜ್ ಹೆಗಲಿಗೆ ಜವಾಬ್ದಾರಿಯನ್ನು ಹಾಕಿ ಸುಮ್ಮನಾಗಿಬಿಟ್ಟರು. ಇವರಿಬ್ಬರೂ ಒಂದು ರೀತಿಯಲ್ಲಿ ಮುಖ್ಯಮಂತ್ರಿಯವರನ್ನು ಕತ್ತಲಲ್ಲಿ ಇಟ್ಟುಬಿಟ್ಟರು.
ಇಡೀ ಘಟನೆಯ ತೀವ್ರತೆಯನ್ನು ಸಿದ್ದರಾಮಯ್ಯನವರ ಗಮನಕ್ಕೆ ತರದೇ ಹೋದುದು ದಯಾನಂದ ಮತ್ತು ಗೋವಿಂದ ರಾಜ್ ಮಾಡಿದ ಬಹು ದೊಡ್ಡ ಪ್ರಮಾದ. ಇದೇ ಕಾರಣಕ್ಕೆ ಮುಖ್ಯಮಂತ್ರಿಯವರು ಇಬ್ಬರನ್ನೂ ಪದಚ್ಯುತಗೊಳಿಸಿದ್ದು. ಮುಖ್ಯಮಂತ್ರಿಯವರು ವಿಧಾನಸೌಧ ಮುಂಭಾಗದಲ್ಲಿ ನಡೆದ ಸಮಾರಂಭಕ್ಕೆ ಬರುವ ಹೊತ್ತಿಗೆ ಪರಿಸ್ಥಿತಿ ನಿಯಂತ್ರಣ ತಪ್ಪಿದ ವಿಷಯ ಅವರಿಗೆ ಗೊತ್ತೇ ಆಗಿರಲಿಲ್ಲ.
ಎಲ್ಲವೂ ಮೇಲ್ನೋಟಕ್ಕೆ ಸರಿಯಾಗಿದೆ ಎಂದೇ ಅವರು ಭಾವಿಸಿದ್ದರು. ಅಷ್ಟರೊಳಗೆ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಕಾಲ್ತುಳಿತ ಶುರುವಾಗಿಬಿಟ್ಟಿತ್ತು. ಆರ್ಸಿಬಿ ಆಟಗಾರರಿಗೆ ಸನ್ಮಾನ ಮಾಡುವು ದೆಂದು ಸರಕಾರ ತೀರ್ಮಾನಿಸಿದ ಬಳಿಕ, ಕಾರ್ಯಕ್ರಮ ಆರಂಭವಾಗುವುದಕ್ಕೆ ಕನಿಷ್ಠ ಆರು ತಾಸು ಸಮಯವಿತ್ತು. ಸುಮಾರು ಹದಿನಾರು ಸಾವಿರ ಪೊಲೀಸ್ ಸಿಬ್ಬಂದಿ ಇರುವ ಬೆಂಗಳೂರಿ ನಲ್ಲಿ ಒಂದೆರಡು ಗಂಟೆಗಳಲ್ಲಿ ಕನಿಷ್ಠ ಏಳೆಂಟು ಸಾವಿರ ಪೊಲೀಸರನ್ನು ಸೇರಿಸುವುದು (ಮೊಬಿಲೈಸ್) ಅಸಾಧ್ಯವೇನೂ ಆಗಿರಲಿಲ್ಲ.
ಪುನೀತ್ ರಾಜಕುಮಾರ ನಿಧನರಾದಾಗ ಮತ್ತು ಮುಂದಿನ ಮೂರು ದಿನ 25 ಲಕ್ಷ ಜನ ಅಂತಿಮ ನಮನ ಸಲ್ಲಿಸಿದ್ದರೂ ಯಾವ ಅಹಿತಕರ ಘಟನೆ ರಾಜಧಾನಿಯಲ್ಲಿ ನಡೆದಿರಲಿಲ್ಲ. ಬೆಂಗಳೂರು ಪೊಲೀಸರು ಇಂಥ ಜನಜಂಗುಳಿ (ಮಾಬ) ಯನ್ನು ನಿಯಂತ್ರಿಸುವುದರಲ್ಲಿ ಪಳಗಿದ ವರೇ. ಹೀಗಿರುವಾಗ ಮೊನ್ನೆ ಸೇರಿದ್ದ ಎರಡು-ಮೂರು ಲಕ್ಷ ಜನರನ್ನು ನಿಯಂತ್ರಿಸುವುದು ಬೆಂಗಳೂರು ಪೊಲೀಸರಿಗೆ ಕಷ್ಟವೇನೂ ಆಗಿರಲಿಲ್ಲ. ಅಷ್ಟಕ್ಕೇ ಅವರು ಹರಸಾಹಸಪಡಬೇಕಾಗಿಯೂ ಇರಲಿಲ್ಲ.
ಆದರೆ ಆ ದಿನದ ಆರಂಭದಿಂದಲೇ ಪೊಲೀಸ್ ಕಮಿಷನರ್ ಸನ್ಮಾನ ಕಾರ್ಯಕ್ರಮ ನಡೆಸುವ ಬಗ್ಗೆ ಖಿನ್ನ ಮನಸ್ಕರಾಗಿಯೇ ಉಳಿದುಬಿಟ್ಟರು. ತಮ್ಮ ಸ್ನೇಹಿತನಿಗೆ ಹೇಳಿದ್ದರಿಂದ ಅವರು ಮುಖ್ಯ ಮಂತ್ರಿಯವರಿಗೆ ರದ್ದುಗೊಳಿಸಬಹುದು ಹೇಳಿ ಎಂಬ ಕಾರ್ಯಕ್ರಮವನ್ನು ಯೋಚನೆಯ ಉಳಿದು ಬಿಟ್ಟರು.
ಹೀಗಾಗಿ ಅವರು ತಮ್ಮ ಪೊಲೀಸ್ ಬಲವನ್ನು ಚುರುಕುಗೊಳಿಸಲೇ ಇಲ್ಲ. ವಿಧಾನಸೌಧದಂಥ ಸೂಕ್ಷ್ಮ ಮತ್ತು ಆಯಕಟ್ಟಿನ ಸ್ಥಳದಲ್ಲಿ ಲಕ್ಷಾಂತರ ಜನ ಸೇರಿದ ಕಾರ್ಯಕ್ರಮದ ಬಂದೋಬಸ್ತಿಗೆ ಕನಿಷ್ಠ ಒಂದು ಸಾವಿರ ಪೊಲೀಸರನ್ನು ನಿಯೋಜಿಸಲೂ ಅವರಿಗೆ ಸಾಧ್ಯವಾಗಲೇ ಇಲ್ಲ. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಲು ಕಮಿಷನರ್ ಅವರೇ ಹರಸಾಹಸ ಪಡಬೇಕಾ ಯಿತು. ಒಂದು ಹಂತದಲ್ಲಿ ಡಿಜಿಪಿ ಸಲೀಂ ಅವರು ಗ್ರೌಂಡಿಗೆ ಇಳಿದು ಬಂದೋಬಸ್ತಿಗೆ ನಿಲ್ಲಬೇಕಾ ಯಿತು. ಅಷ್ಟರೊಳಗೆ ಪರಿಸ್ಥಿತಿ ಕೈ ಮೀರಿಬಿಟ್ಟಿತ್ತು.
ವಿಧಾನ ಸೌಧದ ಮುಂಭಾಗ ಕಾರ್ಯಕ್ರಮ ಮುಗಿಯುವ ಹೊತ್ತಿಗೆ, ಅತ್ತ ಚಿನ್ನಸ್ವಾಮಿ ಕ್ರೀಡಾಂಗಣ ದ ಸನಿಹ ವಿಪರೀತ ಜನ ಸೇರಿದ್ದರಿಂದ ಕಾಲ್ತುಳಿತ ಆರಂಭವಾಗಿಬಿಟ್ಟಿತ್ತು. ಅಷ್ಟರೊಳಗೆ ಒಂದಿಬ್ಬರು ಸತ್ತಿದ್ದರು. ಮುಖ್ಯಮಂತ್ರಿಯವರು ವಿಧಾನಸೌಧದ ಮುಂದೆ ನಡೆದ ನಿರ್ಗಮಿಸಿದ್ದರು. ಕಾರ್ಯಕ್ರಮ ಅವರು ಮುಗಿಸಿ ಚಿನ್ನಸ್ವಾಮಿ ಅಲ್ಲಿಂದ ಸ್ಟೇಡಿಯಂಗೆ ಹೋಗಲಿಲ್ಲ.
ಅದಾಗಿ ಮುಂದಿನ ಎರಡು ಗಂಟೆಯಲ್ಲಿ ಏನಾಯಿತು ಎಂಬುದು ಗೊತ್ತೇ ಇದೆ. ಈ ಮಧ್ಯೆ ಮುಖ್ಯ ಮಂತ್ರಿಯವರು ತಮಗೆ ಸಿಕ್ಕಿದ ಮಾಹಿತಿಯಿಂದ ಕಳವಳಕ್ಕೊಳಗಾಗಿ, ದಯಾನಂದ ಅವರನ್ನು ಸಂಪರ್ಕಿಸಿದರು. ಆಗ ದಯಾನಂದ ಮುಖ್ಯಮಂತ್ರಿಯವರಿಗೆ, ’ಕಾಲ್ತುಳಿತದಲ್ಲಿ ಒಬ್ಬ ಮಾತ್ರ ಮೃತಪಟ್ಟಿದ್ದಾನೆ’ ಎಂದು ಹೇಳಿದರು. ಆಗ ಸಮಯ ಐದೂ ಮುಕ್ಕಾಲಾಗಿತ್ತು. ಆ ಸಮಯದಲ್ಲಿ ಸಾವಿನ ಸಂಖ್ಯೆ ಹತ್ತನ್ನು ದಾಟಿತ್ತು. ಆಗಲೂ ಕಮಿಷನರ್, ಮುಖ್ಯಮಂತ್ರಿಯವರಿಗೆ ಖಚಿತ ಮಾಹಿತಿ ಕೊಡಲೇ ಇಲ್ಲ. ಈ ಘಟನಾವಳಿಗಳೇ ಮುಖ್ಯಮಂತ್ರಿಯವರ ಪಿತ್ತ ನೆತ್ತಿಗೇರಲು ಕಾರಣವಾಯಿತು.
ಸಾಮಾನ್ಯವಾಗಿ ಸಿದ್ದರಾಮಯ್ಯನವರು ಯಾವ ನಿರ್ಧಾರವನ್ನೂ ಆತುರದಲ್ಲಿ ತೆಗೆದು ಕೊಳ್ಳು ವವರಲ್ಲ ಎಂಬುದು ರಾಜಕೀಯ ವಲಯದಲ್ಲಿ ಗೊತ್ತಿರುವಂಥದ್ದೇ. ಅವರದ್ದು Think and Act ಮನೋಭಾವ. Act and Think ಅಲ್ಲ. ದಯಾನಂದ ಅವರಿಂದ ಅವರು ಇದನ್ನು ನಿರೀಕ್ಷಿಸಿರಲಿಲ್ಲ. ದಯಾನಂದ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ, ಮುಖ್ಯಮಂತ್ರಿಯವರು ಸಹಿಸಿಕೊಳ್ಳುತ್ತಿರ ಲಿಲ್ಲ.
ದಯಾನಂದ ದಕ್ಷರು, ಪ್ರಾಮಾಣಿಕರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ತಮ್ಮ ನಾಯಕತ್ವ ಮತ್ತು ಕರ್ತವ್ಯ ಪರತೆಯನ್ನು ಅಂದು ಪ್ರದರ್ಶಿಸಲೇ ಇಲ್ಲ ಎಂಬುವುದು ಕಟು ವಾಸ್ತವ. ಮುಖ್ಯಮಂತ್ರಿ ಯವರು ತಮ್ಮನ್ನು ಬಚಾವ್ ಮಾಡಿಕೊಳ್ಳಲು ಬೇರೆಯವರನ್ನು ಬಲಿ ಕೊಟ್ಟಿಲ್ಲ. ಆದರೆ ಅಂದು ಕರ್ತವ್ಯಲೋಪ ಎಸಗಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿದ್ದಾರೆ. ಆ ಕ್ರಮ ಜರುಗಿಸದೇ ತಮಗೆ ಆಪ್ತರಾದ ದಯಾನಂದ ಮತ್ತು ಗೋವಿಂದ ರಾಜ್ ಅವರನ್ನು ಬಚಾವ್ ಮಾಡಬಹುದಿತ್ತು.
ಅಮಾನತಾದ ಇತರ ಅಧಿಕಾರಿಗಳ ಪೈಕಿ ಮುಖ್ಯಮಂತ್ರಿ ಯವರ ಕೋಮಿಗೆ ಸೇರಿದ ಅಧಿಕಾರಿಯೂ ಇದ್ದಾರೆ. ಅದನ್ನೂ ಲೆಕ್ಕಿಸದೇ ಸಿದ್ದರಾಮಯ್ಯ ನವರು ’ಲಾಠಿ’ ಬೀಸಿದ್ದಾರೆ! ಬೇರೆ ಯಾವ ಮುಖ್ಯ ಮಂತ್ರಿ ಇದ್ದಿದ್ದರೂ ಇಂಥ ಕ್ರಮಕ್ಕೆ ಮುಂದಾಗುತ್ತಿರಲಿಲ್ಲವೇನೋ !