ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಬಾಗೇಪಲ್ಲಿ: ಶಾಸಕರಿಂದ ಬಿತ್ತನೆ ಬೀಜ ವಿತರಣೆ

ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ ಯಿಂದ ಸರಕಾರಿ ಸಹಾಯಧನದಡಿ ರೈತರಿಗೆ ನೀಡುವ ಬೀಜ ವಿತರಣೆ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಈ ವರ್ಷ ಮುಂಗಾರು ಮಳೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗಿದ್ದು ಒಳ್ಳೆಯ ಮಳೆಯಾಗುತ್ತಿದೆ.

ಬಾಗೇಪಲ್ಲಿ: ಶಾಸಕರಿಂದ ಬಿತ್ತನೆ ಬೀಜ ವಿತರಣೆ

Profile Ashok Nayak Jun 5, 2025 11:47 AM

ಬಾಗೇಪಲ್ಲಿ: ರೈತರು ಕೃಷಿ ಇಲಾಖೆಯಿಂದ ವಿತರಿಸುವ ಗುಣಮಟ್ಟದ ಬಿತ್ತನೆ ಬೀಜಗಳನ್ನು ಸಹಾಯಧನದಡಿ ಪಡೆದು ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಂತೆ ಬಿತ್ತನೆ ಮಾಡಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.

ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯಿಂದ ಸರಕಾರಿ ಸಹಾಯಧನದಡಿ ರೈತರಿಗೆ ನೀಡುವ ಬೀಜ ವಿತರಣೆ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಈ ವರ್ಷ ಮುಂಗಾರು ಮಳೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗಿದ್ದು ಒಳ್ಳೆಯ ಮಳೆಯಾಗುತ್ತಿದೆ. ಆದ್ದರಿಂದ ರೈತರು ಕೃಷಿ ಇಲಾಖೆ ಯಿಂದ ವಿತರಿಸುವ ಗುಣಮಟ್ಟದ ಬಿತ್ತನೆ ಬೀಜಗಳನ್ನು ಸಹಾಯಧನದಡಿ ಪಡೆದು ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಂತೆ ಬಿತ್ತನೆ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು.

ಇದನ್ನೂ ಓದಿ: Chikkaballapur Crime: ಸೈಜುಕಲ್ಲು ಮುಖದ ಮೇಲೆ ಎತ್ತಿಹಾಕಿ ವ್ಯಕ್ತಿಯ ಬರ್ಬರ ಕೊಲೆ

ಕೃಷಿ ಇಲಾಖೆಯಿಂದ ತಾಲೂಕಿನ ಎಲ್ಲ ರೈತರಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ವಿವಿಧ ಬೆಳೆಗಳ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜದ ಕೊರತೆ ಇಲ್ಲ, ಎಲ್ಲ ರೈತರು ಕೃಷಿ ಇಲಾಖೆಯಿಂದ ವಿತರಿಸುವ ಬೀಜಗಳನ್ನು ಪಡೆದು ಉತ್ತಮ ಬೆಳೆಗಳನ್ನು ಬೆಳೆಯುವಂತೆ ತಿಳಿಸಿದರು.

ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಲಕ್ಷ್ಮಿ  ಮಾತನಾಡಿ, ಬಾಗೇಪಲ್ಲಿ ತಾಲೂಕಿನಲ್ಲಿ  5 ಹೋಬಳಿ ಕೇಂದ್ರಗಳಾದ ಗೂಳೂರು,ಮಿಟ್ಟೇಮರಿ,ಪಾತಪಾಳ್ಯ, ಚೇಳೂರು,ಹಾಗೂ ಚಾಕವೇಲು   ರೈತರ ಸಂಪರ್ಕ  ಕೇಂದ್ರಗಳ ಮೂಲಕ ವಿವಿಧ ಬೆಳೆಗಳ ರಾಗಿ, ಜೋಳ, ಮೆಕ್ಕೆಜೋಳ, ತೊಗರಿ, ಶೇಂಗಾ,ಅಲಸಂದಿ ಇತ್ಯಾದಿಗಳನ್ನು ಸಹಾಯಧನದಡಿ ರೈತರಿಗೆ ವಿತರಿಸಲು ದಾಸ್ತಾನು ಮಾಡಿ ಕೊಳ್ಳಲಾಗಿದೆ. ರೈತರಿಗೆ ಕ್ಯೂಆರ್ ಕೋಡ್ ಸ್ಕಾನಿಂಗ್ ಮೂಲಕ ಗುಣಮಟ್ಟದ ಬೀಜಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಸದ್ಯಕ್ಕೆ ಯಾವುದೇ ಬೀಜದ ಕೊರತೆ ಇಲ್ಲ. ರೈತರು ಮಳೆ ಕಡಿಮೆಯಾದ ಮೇಲೆ ಭೂಮಿ ತೇವಾಂಶ ನೊಡಿಕೊಂಡು ಬಿತ್ತನೆ ಮಾಡಬೇಕು. ರೈತರಿಗೆ ಅವಶ್ಯವಿರುವ ರಾಗಿ, ತೊಗರಿ, ಅಲಸಂದೆ, ಮುಸು ಕಿನ ಜೋಳ ಬಿತ್ತನೆ ಬೀಜಗಳು ಕೇಂದ್ರದಲ್ಲಿ ಈಗಾಗಲೇ ವಿತರಿಸಲಾಗುತ್ತಿದೆ ರೈತರು ತಮ್ಮ ಜಮೀ ನಿನ ಪಹಣಿ ಮತ್ತು ತಮ್ಮ ಆಧಾರ್‌ ಪ್ರತಿಯನ್ನು ಸಲ್ಲಿಸುವ ಮೂಲಕ ಸಹಾಯಧನದಲ್ಲಿ ಬಿತ್ತನೆ ಬೀಜಗಳನ್ನು ಪಡೆಯಬಹುದು ಎಂದು ಹೇಳಿದರು.

ಶಾಸಕರಿಂದ ಬೀಜ ದಾಸ್ತಾನು ಕೊಠಡಿ ಪರಿಶೀಲನೆ: ಈ ಸಂಧರ್ಭದಲ್ಲಿ ಶಾಸಕ ಬೀಜ ದಾಸ್ತಾನು ಕೊಠಡಿ ಪರಿಶೀಲನೆ ಮಾಡಿ ಬೀಜ ಹಾಗೂ ರಸಗೊಬ್ಬರ ಮೂಟೆಗಳನ್ನು ಗುಣಮಟ್ಟವನ್ನು ಪರಿಶೀಲಿಸಿ ಬೀಜಗಳು ಕಳಪೆ ಗುಣಮಟ್ಟದ ಬೀಜಗಳು ವಿತರಣೆ ಮಾಡಿದರೆ ಕೃಷಿ ಅಧಿಕಾರಿಗಳೇ ನೇರ ಹೊಣೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಕೃಷಿ ಸಹಾಯಕ ಅಧಿಕಾರಿ ನಾರಾಯಣ ರೆಡ್ಡಿ, ಹರೀಶ್ ವನಜ, ಶಾರದ ರೈತ ಮುಖಂಡರಾದ ಗೋವಿಂದ ರೆಡ್ಡಿ ಈಶ್ವರ ರೆಡ್ಡಿ, ಶಿವಾರೆಡ್ಡಿ,ಶಂಕರ ರೆಡ್ಡಿ, ರಾಮರೆಡ್ಡಿ ಹಾಗೂ ಇತರೆ ರೈತ ಮುಖಂಡರು ಹಾಜರಿದ್ದರು.