ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಪೋಷಕರ ಶ್ರಮವನ್ನು ಮರೆಯದಿರಿ: ನಾಗಾರ್ಜುನ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಗೋಪಾಲಕೃಷ್ಣ

ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಎನ್ನದೆ ಸರ್ವಸ್ವವನ್ನು ತ್ಯಾಗ ಮಾಡುತ್ತಾರೆ. ಮಕ್ಕಳ ಭವಿಷ್ಯವೇ ತಮ್ಮ ಜೀವನದ ಪರಮ ಗುರಿ ಎಂದು ನಿಮಗಾಗಿ ಹಗಲಿರುಳು ಕಾಳಜಿ ವಹಿಸುತ್ತಾರೆ. ನೀವು ಉದ್ಯೋಗ ಪಡೆದ ಮೇಲೆ ಹೆತ್ತವರ ಕಣ್ಣಲ್ಲಿ ಸಂತೋಷ ತರಬೇಕೆ ವಿನಃ ಕಣ್ಣೀರು ತರಿಸಬಾರದು ಎಂದರು.

ಪೋಷಕರ ಶ್ರಮವನ್ನು ಮರೆಯದಿರಿ

ನಾಗಾರ್ಜುನ ಕಾಲೇಜಿನಲ್ಲಿ ನಡೆದ ಪದವಿ ಪ್ರಧಾನ ಸಮಾರಂಭದಲ್ಲಿ ೪೦೦ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.

Profile Ashok Nayak Jun 5, 2025 11:16 AM

ಚಿಕ್ಕಬಳ್ಳಾಪುರ : ಪದವಿ ಪೂರೈಸಿ ಉದ್ಯೋಗದತ್ತ ಮುಖ ಮಾಡಿರುವ ವಿದ್ಯಾರ್ಥಿಗಳು ಎಂದಿಗೂ ಕೂಡ ಪೋಷಕರ ಶ್ರಮವನ್ನು ಮರೆಯದಿರಿ ಎಂದು ನಾಗಾರ್ಜುನ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಗೋಪಾಲಕೃಷ್ಣ ಕರೆ ನೀಡಿದರು.

ನಗರ ಹೊರವಲಯ ನಾಗಾರ್ಜುನ ಕಾಲೇಜು ಕ್ಯಾಂಪಸ್ ಸಭಾಂಗಣದಲ್ಲಿ ಮ್ಯಾನೇಜ್‌ಮೆಂಟ್ ವಿಭಾಗದಿಂದ ಏರ್ಪಡಿಸಿದ್ದ ಪದವಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಎನ್ನದೆ ಸರ್ವಸ್ವವನ್ನು ತ್ಯಾಗ ಮಾಡುತ್ತಾರೆ. ಮಕ್ಕಳ ಭವಿಷ್ಯವೇ ತಮ್ಮ ಜೀವನದ ಪರಮ ಗುರಿ ಎಂದು ನಿಮಗಾಗಿ ಹಗಲಿರುಳು ಕಾಳಜಿ ವಹಿಸುತ್ತಾರೆ. ನೀವು ಉದ್ಯೋಗ ಪಡೆದ ಮೇಲೆ ಹೆತ್ತವರ ಕಣ್ಣಲ್ಲಿ ಸಂತೋಷ ತರಬೇಕೆ ವಿನಃ ಕಣ್ಣೀರು ತರಿಸಬಾರದು ಎಂದರು.

ಪೋಷಕರು ಕೂಡ ಮಕ್ಕಳನ್ನು ಅವರಿವ ಜತೆ ಹೋಲಿಸದೆ, ಅಂಕಗಳಿಕೆಯಿಂದ ಅಳೆಯದೆ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗುವು ದಲ್ಲದೆ ಏನಾದರೂ ಸಾಧನೆ ಮಾಡಲು ಮುಂದಾಗುತ್ತಾರೆ ಎಂದರು.

ಇದನ್ನೂ ಓದಿ: Chikkaballapur News: ಅಪಘಾತದಲ್ಲಿ ಗ್ರಾಮ ಆಡಳಿತ ಅಧಿಕಾರಿ ರಮೇಶ್ ನಿಧನ

ಕಾಲೇಜಿನ ಪ್ರಾಂಶುಪಾಲೆ ಡಾ.ಆನಂದಮ್ಮ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಬಯಕೆ, ಸಮರ್ಪಣೆ,ಶಿಸ್ತು, ಮತ್ತು ಅಭಿವೃದ್ಧಿಯನ್ನು ಮನದಲ್ಲಿಟ್ಟುಕೊಂಡು ಮುನ್ನಡೆಯಬೇಕು. ಎಐ ತಂತ್ರಜ್ಞಾನವೇ ಭವಿಷ್ಯದ ನಿರ್ಧಾರಕ ಅಂಶವಾಗಿದೆ ಎಂಬುದನ್ನು ತಜ್ಞರು ಒತ್ತಿ ಹೇಳುತ್ತಿದ್ದರೂ ಕೂಡ ಅವರವರ ಕ್ಷೇತ್ರಕ್ಕೆ ಬೇಕಾದ ಪರಿಣತಿ ಸಂಪಾಧನೆ ಮಾಡಿಕೊಂಡರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು ಎಂಬುದನ್ನು ನಾಗಾರ್ಜುನ ಬಿಕಾಂ,ಬಿಬಿಎ,ಬಿಸಿಎ, ಬಿಎಸ್ಸಿ ವಿದ್ಯಾರ್ಥಿಗಳು ಮಾಡಿ ತೋರಿಸಿದ್ದಾರೆ. ಪದವಿ ಮುಗಿಯುತ್ತಿರುವ ಹೊತ್ತಿನಲ್ಲಿಯೇ ಉದ್ಯೋಗದ ಅವಕಾಶಗಳು ಬಂದಿರುವುದು ಸಂತೋಷ ತಂದಿದೆ ಎಂದರು.

ಎನ್‌ಇಎಸ್ ನಿರ್ದೇಶಕ ಮನೋಹರ್ ನಾರಜ್ಜಿ ಮಾತನಾಡಿ ಪದವಿ ಪ್ರಧಾನಕ್ಕೆ ಭಾಜನರಾಗಿರುವ ವಿದ್ಯಾರ್ಥಿಗಳೇ ನಿಮ್ಮ ಮುಂದೆ ಸುಂದರ ಭವಿಷ್ಯವಿದೆ.ಆದರೆ ಅದನ್ನು ಪಡೆಯಲು ಸತತ ಪರಿಶ್ರಮ, ಶ್ರದ್ಧೆ,ತಾಳ್ಮೆ, ಏನಾದರೂ ಸರಿಯೇ ಸಾಧಿಸುತ್ತೇನೆ ಎಂಬ ಛಲ ಇರಬೇಕು.ಇದಕ್ಕೆ ಉತ್ತಮ ನಿದರ್ಶನವೇ ಆರ್‌ಸಿಬಿ ತಂಡದ ಗೆಲುವಾಗಿದೆ.ಸೋತು ಸೋತು ಕೊನೆಗೆ ೧೮ ವರ್ಷಗಳ ನಂತರ ಕಪ್ ಗೆದ್ದಿದೆ.ಇದೇ ಕ್ರೀಡಾಸ್ಪೂರ್ತಿಗೆ ಸಾಕ್ಷಿ ಎಂದರು.

ನೀವೂ ಕೂಡ ನಿರ್ಧಿಷ್ಟ ಗುರಿಯೊಂದಿಗೆ ಸಾಗಿದ್ದೇ ಆದಲ್ಲಿ ಮನಸ್ಸಿದ್ದಲ್ಲಿ ಮಾರ್ಗವನ್ನು ಕಂಡು ಕೊಳ್ಳಬಹುದು.ಮನುಷ್ಯನಿಗೆ ಅಸಾಧ್ಯವಾದ್ದದು ಈ ಜಗತ್ತಿನಲ್ಲಿ ಬೇರೆಯಿಲ್ಲ ಎಂದರು.

ಕಾರ್ಯಕ್ರಮದಲ್ಲಿ ೪೦೦ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.ಈ ವೇಳೆ ಸಂಸ್ಥೆಯ ನಿರ್ದೇಶಕರು,ಸಿಇಒ,ವಿಭಾಗ ಮುಖ್ಯಸ್ಥರು,ಅಧ್ಯಾಪಕರು,ಪದವೀಧರ ವಿದ್ಯಾರ್ಥಿಗಳು, ಪೋಷಕರು ಇದ್ದರು.