ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ದುರಹಂಕಾರ ತೋರದೆ ಮೊದಲು ಕ್ಷಮೆ ಕೇಳಲಿ: ಕರವೇ ಜಿಲ್ಲಾ ಅಧ್ಯಕ್ಷ ಸುರೇಶಬಾಬು

ಕನ್ನಡಕ್ಕೆ ತನ್ನದೇ ಅದ ಇತಿಹಾಸ ಪರಂಪರೆ ಇದೆ ನಮ್ಮ ಭಾಷೆಗೆ ಎರಡು ಸಾವಿರ ಐದು ನೂರು ವರ್ಷ ಗಳ ಭವ್ಯ ಪರಂಪರೆ ಇರುವ ಭಾಷೆ ನಮ್ಮದು ಇಂತಹ ಭಾಷೆಗೆ ಅರಿವು ಇಲ್ಲದೆ ತಮಿಳು ಭಾಷೆಯಿಂದ ಕನ್ನಡ ಬಂದಿರುವುದು ಎಂದು ಅವೈಜ್ಞಾನಿಕ ಹೇಳಿಕೆ ನಿಜಕ್ಕೂ ಖಂಡನೀಯ

ದುರಹಂಕಾರ ತೋರದೆ ಮೊದಲು ಕ್ಷಮೆ ಕೇಳಲಿ

ತಮಿಳು ನಟ ಕಮಲಹಾಸನ್ ಒಬ್ಬ ದುರಂಕಾರಿ, ಕನ್ನಡಿಗರ ಭಾವನೆ ಭಾಷೆಗಳಿಗೆ ಧಕ್ಕೆ ತರುವ ಮತ್ತು ಇತಿಹಾಸ ಪರಂಪರೆ ಇರುವ ಕನ್ನಡಭಾಷೆಗೆ ಅರಿವು ಇಲ್ಲದೆ ಮಾತನಾಡಿರುವುದು ಖಂಡನೀಯ ಎಂದು ಡಾ,ಸುರೇಶ್ ಬಾಬು ಅಕ್ರೋಶ ವ್ಯಕ್ತಪಡಿಸಿದರು.

Profile Ashok Nayak Jun 5, 2025 11:37 AM

ಗೌರಿಬಿದನೂರು : ತಮಿಳು ನಟ ಕಮಲಹಾಸನ್ ಒಬ್ಬ ದುರಂಕಾರಿ, ಕನ್ನಡಿಗರ ಭಾವನೆ ಭಾಷೆ ಗಳಿಗೆ ಧಕ್ಕೆ ತರುವ ಮತ್ತು ಇತಿಹಾಸ ಪರಂಪರೆ ಇರುವ ಕನ್ನಡ ಭಾಷೆಗೆ ಅರಿವು ಇಲ್ಲದೆ ಮಾತನಾಡಿ ರುವುದು ಖಂಡನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ(ಸಂಘಟನೆಗಳ ಒಕ್ಕೂಟ) ಚಳುವಳಿ ಚಲಪತಿ ಬಣದ ಜಿಲ್ಲಾ ಅಧ್ಯಕ್ಷ ಡಾ,ಸುರೇಶ್ ಬಾಬು ಅಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕನ್ನಡ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳು ನಟ ಕಮಲ್‌ಹಾಸನ್ ರಾಜ್ಯ ವ್ಯಾಪ್ತಿ ವಿರೋಧ ವ್ಯಕ್ತಪಡಿಸುತ್ತಿವೆ.ಕ್ಷೇಮೆ ಕೇಳುವವರಿಗೂ ಅವರ ಚಿತ್ರ ಯಾವುದೇ ಕಾರಣಕ್ಕೂ ಬಿಡುಗಡೆ ಅಸ್ಪದ ನೀಡುವುದಿಲ್ಲ, ಮುಂಬರುವ ದಿನಗಳಲ್ಲಿ ನಾಡು-ನುಡಿ ವಿಚಾರವಾಗಿ ಗೊಂದಲ ಹೇಳಿಕೆ ನಿಡುವುದನ್ನು ಕಡಿವಾಣ ಹಾಕಬೇಕು ಇದಕ್ಕೆ ಕಠಿಣ ಕಾನೂನು ತರಬೇಕು ಎಂದು ಅವರು ಒತ್ತಾಯ ಮಾಡಿದರು.

ಇದನ್ನೂ ಓದಿ: Chikkaballapur News: ಅಪಘಾತದಲ್ಲಿ ಗ್ರಾಮ ಆಡಳಿತ ಅಧಿಕಾರಿ ರಮೇಶ್ ನಿಧನ

ಸಂಘಟನೆ ತಾಲೂಕು ಅಧ್ಯಕ್ಷ ಡಾ ಅದಿಮೂರ್ತಿರೆಡ್ಡಿ ಮಾತನಾಡಿ ಕನ್ನಡಕ್ಕೆ ತನ್ನದೇ ಅದ ಇತಿಹಾಸ ಪರಂಪರೆ ಇದೆ ನಮ್ಮ ಭಾಷೆಗೆ ಎರಡು ಸಾವಿರ ಐದು ನೂರು ವರ್ಷಗಳ ಭವ್ಯ ಪರಂಪರೆ ಇರುವ ಭಾಷೆ ನಮ್ಮದು ಇಂತಹ ಭಾಷೆಗೆ ಅರಿವು ಇಲ್ಲದೆ ತಮಿಳು ಭಾಷೆಯಿಂದ ಕನ್ನಡ ಬಂದಿರು ವುದು ಎಂದು ಅವೈಜ್ಞಾನಿಕ ಹೇಳಿಕೆ ನಿಜಕ್ಕೂ ಖಂಡನೀಯ ಎಂದು ಕಿಡಿ ಕಾರಿದರು. ಮನವಿ ಪತ್ರ ವನ್ನು ತಹಸೀಲ್ದಾರ್ ಮಹೇಶ್ ಪತ್ರಿ ಅವರಿಗೆ ನೀಡಿದರು.

ಇದೇ ವೇಳೆಯಲ್ಲಿ ಸಂಘಟನೆ ಪಧಾದಿಕಾರಿಗಳಾದ ಮಹಿಳಾ ಜಿಲ್ಲಾ ಆಧ್ಯಕ್ಷೆ ಸುಪ್ರಿಯಾ ರಮಾಮಣ , ಸಂದೀಪ್, ವಿನಯ್ಯದ್ರ ಮದು ವೆಂಕಟರೆಡ್ಡಿ, ನರಸಿಂಹಮೂರ್ತಿ, ಬಾಬಣ್ಣ ಮುಂತಾದವರು ಹಾಜರಿದ್ದರು.