Chikkaballapur News: ಜುಲೈ 18ರಂದು ಶ್ರೀ ಶರಭಯೋಗೇಂದ್ರ ಸ್ವಾಮಿಯವರ 307ನೇ ಆರಾಧನಾ ಮತ್ತು ರಥೋತ್ಸವ
ಶ್ರೀ ದಕ್ಷಿಣಕಾಶಿ ಪಂಚನಂದಿ ಮಹಾ ಪುಣ್ಯ ಕ್ಷೇತ್ರ ಪಾಪಾಗ್ನಿ ಮಠ ಆಶ್ರಯದಲ್ಲಿ ನಡೆಯಲಿರುವ 307ನೇ ಆರಾಧನಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ಆರಂಭ ಜುಲೈ 17 ಗುರುವಾರ ದಿಂದ ಆರಂಭ ವಾಗಲಿದ್ದು ಅಂದು ಬೆಳಿಗ್ಗೆ 6ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಗಣಪತಿ ಪೂಜೆ, ಪುಣ್ಯಾಹ ವಾಚನ, ತೀರ್ಥಗ್ರಹಣ, ದಶಶಾಂತಿ ಜೊತೆಗೆ ಸಂಜೆ ಕಾಶಿವಿಶ್ವನಾಥ ದೇವರಿಗೆ ರುದ್ರಾಭಿ ಷೇಕ, ಅಷ್ಟಧಿಕ್ಪಾಲ ಕಾರಾಧನೆ, ನೈವೇದ್ಯ, ಪ್ರಧಾನ ಕಳಶಾರಾಧನೆ, ಮಹಾನ್ಯಾಸ ಪೂರ್ವಕ ಅಭಿಷೇಕ, ಅಗ್ನಿ ಪ್ರತಿಷ್ಠಾಪನೆ,ಶರಭಯೋಗೇಂದ್ರಸ್ವಾಮಿ ಮಹಾಮಂತ್ರ ಹೋಮ ಮಂಗಳಾರತಿ ನಡೆಯಲಿದೆ

ಜುಲೈ18 ಶುಕ್ರವಾರದಂದು ಶ್ರೀ ಶ್ರೀ ಶ್ರೀ ಶರಭಯೋಗೇಂದ್ರ ಸ್ವಾಮಿಯವರ 307ನೇ ಆರಾಧನಾ ಮತ್ತು ರಥೋತ್ಸವ ಪಂಚನAದಿ ಮಹಾಪುಣ್ಯ ಕ್ಷೇತ್ರ ಪಾಪಾಗ್ನಿ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಾಪಾಗ್ನಿ ಮಠ ಟ್ರಸ್ಟ್ ಅಧ್ಯಕ್ಷರಾದ ಎನ್ ಹೆಂಜಾರಾಚಾರಿ ತಿಳಿಸಿದರು.

ಚಿಕ್ಕಬಳ್ಳಾಪುರ : ಶ್ರೀ ದಕ್ಷಿಣಕಾಶಿ ಪಂಚನಂದಿ ಮಹಾ ಪುಣ್ಯ ಕ್ಷೇತ್ರ ಪಾಪಾಗ್ನಿ ಮಠ ಚಾರಿಟೇಬಲ್ ಟ್ರಸ್ಟ್ ಕಳವಾರ ಗ್ರಾಮ ಹಾಗು ಶ್ರೀ ವಿಶ್ವಕರ್ಮ ಸಂಘ ಚಿಕ್ಕಬಳ್ಳಾಪುರ ವತಿಯಿಂದ ಜುಲೈ ತಿಂಗಳ 18 ಶುಕ್ರವಾರದಂದು ಶ್ರೀ ಶ್ರೀ ಶ್ರೀ ಶರಭಯೋಗೇಂದ್ರ ಸ್ವಾಮಿಯವರ 307ನೇ ಆರಾಧನಾ ಮತ್ತು ರಥೋತ್ಸವ ಪಂಚನAದಿ ಮಹಾಪುಣ್ಯ ಕ್ಷೇತ್ರ ಪಾಪಾಗ್ನಿ ಮಠದಲ್ಲಿ ಹಮ್ಮಿ ಕೊಳ್ಳಲಾಗಿದೆ ಎಂದು ಪಾಪಾಗ್ನಿ ಮಠ ಟ್ರಸ್ಟ್ ಅಧ್ಯಕ್ಷರಾದ ಎನ್ ಹೆಂಜಾರಾಚಾರಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಆರಾಧನಾ ಹಾಗೂ ರಥೋತ್ಸವದ ಅಂಗವಾಗಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶ್ರೀ ದಕ್ಷಿಣಕಾಶಿ ಪಂಚನಂದಿ ಮಹಾ ಪುಣ್ಯ ಕ್ಷೇತ್ರ ಪಾಪಾಗ್ನಿ ಮಠ ಆಶ್ರಯದಲ್ಲಿ ನಡೆಯಲಿರುವ 307ನೇ ಆರಾಧನಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ಆರಂಭ ಜುಲೈ 17 ಗುರುವಾರ ದಿಂದ ಆರಂಭವಾಗಲಿದ್ದು ಅಂದು ಬೆಳಿಗ್ಗೆ 6ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಗಣಪತಿ ಪೂಜೆ, ಪುಣ್ಯಾಹ ವಾಚನ, ತೀರ್ಥಗ್ರಹಣ, ದಶಶಾಂತಿ ಜೊತೆಗೆ ಸಂಜೆ ಕಾಶಿವಿಶ್ವನಾಥ ದೇವರಿಗೆ ರುದ್ರಾಭಿ ಷೇಕ, ಅಷ್ಟಧಿಕ್ಪಾಲಕಾರಾಧನೆ, ನೈವೇದ್ಯ, ಪ್ರಧಾನ ಕಳಶಾರಾಧನೆ, ಮಹಾನ್ಯಾಸ ಪೂರ್ವಕ ಅಭಿಷೇಕ, ಅಗ್ನಿ ಪ್ರತಿಷ್ಠಾಪನೆ,ಶರಭಯೋಗೇಂದ್ರಸ್ವಾಮಿ ಮಹಾಮಂತ್ರ ಹೋಮ ಮಂಗಳಾರತಿ ನಡೆಯಲಿದೆ.
ಇದನ್ನೂ ಓದಿ: Chikkaballapur News: ತಾತ್ಕಾಲಿಕ ಹಾರಾಟ ನಿಷೇಧ ವಲಯ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ
ಇನ್ನು 18 ತಾರೀಖು ಶುಕ್ರವಾರದಂದು ಸುಪ್ರಭಾತ ದ್ವಾರ ಪೊಜೆ,ಗಣಪತಿ ಪೂಜೆ,ಕಲಶೋತ್ಸವ ಕಲಶಪ್ರತಿಷ್ಟಾಪಣೆ, ಶರಭಯೋಗೇಂದ್ರಸ್ವಾಮಿ ರುದ್ರ ಲಿಂಗಕ್ಕೆ,ಕಾಶಿವಿಶ್ವನಾಥ ದೇವರಿಗೆ ಪಂಚಾ ಮೃತ ಅಭಿಷೇಕ,ದುರ್ಗಾ ಹೋಮ ಹಾಗು ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗ, ರಾತ್ರಿ 8 ಕ್ಕೆ ಭಗವದ್ಭಕ್ತರಿಂದ ತತ್ವಾತೀತ ಭಜನೆ ನಡೆಯಲಿದೆ ಎರಡು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದರು.
ಉಸ್ತವ ಸಮಿತಿ ಅಧ್ಯಕ್ಷರಾದ ನವೀನ್ ಕುಮಾರ್ ಮಾತನಾಡಿ, ಶ್ರೀ ಕ್ಷೇತ್ರ ಪಾಪಾಗ್ನಿ ಮಠ ಪ್ರಾಚೀನ ಕ್ಷೇತ್ರವಾಗಿದ್ದು ಇಲ್ಲಿ ಕಾಶಿ ವಿಶ್ವನಾಥಸ್ವಾಮಿ ಹಾಗು ಅನ್ನಪೂರ್ಣದೇವಿ ವಿಶೇಷ ರೂಪದಲ್ಲಿದ್ದು ಶ್ರೀ ಕ್ಷೇತ್ರ ಗುರು ಪರಂಪರೆ ಹಾಗೂ ಭಕ್ತರ ಆರಾಧ್ಯ ದೈವವಾಗಿದೆ. ಆಷಾಢ ಬಹುಳ ಅಷ್ಠಮಿ ದಿನದಂದು ಶರಭಯೋಗೇಂದ್ರಸ್ವಾಮಿ ಸಜೀವ ಸಮಾಧಿಯಾದ ದಿನವಾಗಿದ್ದು ವಿಶ್ವಕರ್ಮ ಕುಲಭಾಂದವರು ಪ್ರತಿ ವರ್ಷ ಸ್ವಾಮಿ ಅವರ ಆರಾಧನೆಯನ್ನು ವಿಜ್ರಂಭಣೆಯಿಂದ ಆಚರಿಸುತ್ತಾ ಬಂದಿದ್ದು ಪ್ರಸ್ತುತ ವರ್ಷವೂ ಗುರುವಂದನ ಆರಾಧನಾ ಹಾಗು ರಥೋತ್ಸವ ನಡೆಯಲಿದೆ ಚಿಕ್ಕಬಳ್ಳಾಪುರ ಜಿಲ್ಲೆ ಸಮೇತ ಸುತ್ತ ಮುತ್ತಲಿನ ಜಿಲ್ಲೆಯ ಸಹಸ್ರಾರು ಭಕ್ತರು ಈ ಧಾರ್ಮಿಕ ಕಾರ್ಯ ಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ನಾರಾಯಣಸ್ವಾಮಿ,ಶ್ರೀ ಪರದೇಶಿ ಸ್ವಾಮಿ,ಪಾಪಾಗ್ನಿ ಮಠ ಟ್ರಸ್ಟ್ನ ಉಪಾಧ್ಯಕ್ಷ ಮಂಜುನಾಥಚಾರಿ,ಗೌರವಾಧ್ಯಕ್ಷ ಬಾಲಕೃಷ್ಣ ಚಾರಿ,ಸಂಚಾಲಕರಾದ ಸುಬ್ರಹ್ಮಣ್ಯ ಚಾರಿ ಎನ್ ಇತರರು ಹಾಜರಿದ್ದರು.