Chikkaballapur News: ಅಲಕಾಪುರ ಗ್ರಾಮದ ಸಪಲಮ್ಮ ದೇವಿಗೆ ಗ್ರಾಮಸ್ಥ =ರಿಂದ ಶ್ರದ್ದಾಭಕ್ತಿಯಿಂದ ದೀಪೋತ್ಸವ
ತಾಲೂಕಿನ ಅಲಕಾಪುರ ಗ್ರಾಮದಲ್ಲಿ ನೆಲೆಸಿರುವ ಸಪಲಮ್ಮ ದೇವಿಗೆ ಗ್ರಾಮಸ್ಥ ರಿಂದ ಶ್ರದ್ದಾಭಕ್ತಿಯಿಂದ ದೀಪೋತ್ಸವ ನೆರವೇರಿತು. ಲೋಕ ಕಲ್ಯಾಣಾರ್ಥವಾಗಿ ಹಾಗೂ ಗ್ರಾಮಕ್ಕೆ ಒಳಿತಾಗಲಿ ಎಂದು ಗ್ರಾಮದ ಶಕ್ತಿದೇವತೆ ಸಪಲಮ್ಮ ದೇವಿಗೆ ದೀಪೋತ್ಸವವನ್ನು ಹಮ್ಮಿ ಕೊಂಡಿರುವುದಾಗಿ ಗ್ರಾಮಸ್ಥರು ತಿಳಿಸಿದರು.


ಗೌರಿಬಿದನೂರು: ತಾಲೂಕಿನ ಅಲಕಾಪುರ ಗ್ರಾಮದಲ್ಲಿ ನೆಲೆಸಿರುವ ಸಪಲಮ್ಮ ದೇವಿಗೆ ಗ್ರಾಮಸ್ಥ ರಿಂದ ಶ್ರದ್ದಾಭಕ್ತಿಯಿಂದ ದೀಪೋತ್ಸವ ನೆರವೇರಿತು. ಲೋಕ ಕಲ್ಯಾಣಾರ್ಥವಾಗಿ ಹಾಗೂ ಗ್ರಾಮಕ್ಕೆ ಒಳಿತಾಗಲಿ ಎಂದು ಗ್ರಾಮದ ಶಕ್ತಿದೇವತೆ ಸಪಲಮ್ಮ ದೇವಿಗೆ ದೀಪೋತ್ಸವವನ್ನು ಹಮ್ಮಿ ಕೊಂಡಿರುವುದಾಗಿ ಗ್ರಾಮಸ್ಥರು ತಿಳಿಸಿದರು.
ಇದನ್ನೂ ಓದಿ: Chikkaballapur News: ಶಿಕ್ಷಕರು ಮೌಲ್ಯಗಳ ಪ್ರತಿರೂಪವಾಗಬೇಕು: ಪ್ರೊಫೆಸರ್ ಶ್ರೀಕಂಠ ಮೂರ್ತಿ
ಶಕ್ತಿದೇವತೆ ಸಪ್ಪಲಮ್ಮ ದೀಪೋತ್ಸವದಲ್ಲಿ ಗ್ರಾಮದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಹಸಿ ತಂಬಿಟ್ಟಿನ ದೀಪಗಳನ್ನು ಹೊತ್ತುಕೊಂಡು ಮಂಗಳ ವಾದ್ಯಗಳೊಂದಿಗೆ ಸಪ್ಪಲಮ್ಮ ದೇವಸ್ಥಾನದ ಆವರಣಕ್ಕೆ ಆಗಮಿಸಿ ಎಲ್ಲರೂ ಸಾಮೂಹಿಕವಾಗಿ ದೇವಿಗೆ ದೀಪವನ್ನು ಬೆಳಗಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅಶ್ವತ್ಥನಾರಾಯಣ ಗೌಡ,ಮಿಲಿಟರಿ ಕಿಟ್ಟಿ, ಪ್ರಭಾಕರ್, ಶಿವಪ್ಪ, ಶ್ರೀನಾಥ್, ಗೋವಿಂದಪ್ಪ, ಜಗದೀಶ್, ಚಲಪತಿ, ನಾಗರಾಜು, ಆನಂದ್,ಗೋಪಿ, ನಂಜೇಗೌಡ, ರವಿಕುಮಾರ್, ವೆಂಕಟೇಶ, ಗಂಗರಾಜು, ಅಶೋಕ್, ನಾರಾಯಣಪ್ಪ, ರಾಮಸ್ವಾಮಿ, ಸೂರಪ್ಪ ಹಾಗೂ ಇನ್ನಿತರರು ಭಾಗವಹಿಸಿದ್ದರು.