ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಶಿಕ್ಷಕರು ಮೌಲ್ಯಗಳ ಪ್ರತಿರೂಪವಾಗಬೇಕು: ಪ್ರೊಫೆಸರ್ ಶ್ರೀಕಂಠ ಮೂರ್ತಿ

ನೈತಿಕ ಮೌಲ್ಯಗಳನ್ನು ‌ಒಳಗೊಂಡ ಶಿಕ್ಷಣವನ್ನು ನಿಯೋಜಿತ ಅಭ್ಯಾಸಗಳಲ್ಲಿ ಹೇಗೆ ವ್ಯವಸ್ಥಿತ ವಾಗಿ ಸಂಯೋಜಿಸಬಹುದು ಎಂಬ ಕುರಿತಂತೆ ಚರ್ಚಿಸಲು ಸಂಪೂರ್ಣ ದಿನವನ್ನು ಮೀಸಲಿಡ ಲಾಗಿತ್ತು. ಸಮಾರೋಪ ಸಮಾರಂಭವು ಹಿಂದಿನ ದಿನದ ಕಾರ್ಯಗಾರದಲ್ಲಿ ಮೂಡಿ ಬಂದ ವಿಷಯದ ಸಂಪೂರ್ಣ ಸಾರ ಸಂಗ್ರಹದ ‌ವರದಿಯ ಪ್ರಸ್ತುತಿಯೊಂದಿಗೆ ಪ್ರಾರಂಭವಾಯಿತು.

ಶಿಕ್ಷಕರು ಮೌಲ್ಯಗಳ ಪ್ರತಿರೂಪವಾಗಬೇಕು: ಪ್ರೊಫೆಸರ್ ಶ್ರೀಕಂಠ ಮೂರ್ತಿ

Profile Ashok Nayak Jun 15, 2025 10:06 PM

ಚಿಕ್ಕಬಳ್ಳಾಪುರ : ಮುಂದುವರಿದ ವಿಜ್ಞಾನ ಯುಗದಲ್ಲಿ ಮೌಲ್ಯಗಳು ಮರೆಯಾಗುತ್ತಿದ್ದು ಯಾಂತ್ರಿಕ ಬದುಕೇ ಪ್ರಾಧಾನ್ಯತೆ ಪಡೆಯುತ್ತಿದೆ. ಮನುಕುಲದ ಮೌಲ್ಯವನ್ನು ಎತ್ತಿ ಹಿಡಿದು ‌ ಮುಂದಿನ ಜನಾಂಗಕ್ಕೆ ಬಳುವಳಿಯಾಗಿ ಕೊಡಬೇಕಾದುದು ಶಿಕ್ಷಣದ ಕರ್ತವ್ಯವಾಗಿದೆ,‌ ಎಂದು ಕಲಬುರ್ಗಿಯ‌ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ‌ ವಿಶ್ವವಿದ್ಯಾಲಯದ ‌ಉಪಕುಲಪತಿ ಪ್ರೊಫೆಸರ್ ಶ್ರೀಕಂಠ ಮೂರ್ತಿಯವರು ‌ಅಭಿಪ್ರಾಯ ಪಟ್ಟರು. 

ತಾಲೂಕಿನ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಮತ್ತು ವಾರಣಾಸಿಯ ‌ ಹಿಂದೂ ವಿಶ್ವವಿದ್ಯಾಲಯದ ‌ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ‌ಶಿಕ್ಷಣ ಕಾರ್ಯಗಾರದ ‌ಸಮಾರೋಪ ಸಮಾರಂಭದಲ್ಲಿ ‌ಸಮಾರೋಪ ಉಪನ್ಯಾಸ ‌ಮಾಡುತ್ತಾ ‌ತಿಳಿಸಿದರು. 

ಇದನ್ನೂ ಓದಿ: Chikkaballapur News: ಕರ್ನಾಟಕ ರೈತ ಜನಸೇನಾ ಸಂಘಟನೆ ವತಿಯಿಂದ ಕಾರ್ಯಕ್ರಮ ಆಯೋಜನೆ

ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಶಿಕ್ಷಕರ ಶಿಕ್ಷಣ ಕೇಂದ್ರ ವಾರಣಾಸಿ ಇದರ ಸಂಯುಕ್ತ ಆಶ್ರಯದಲ್ಲಿ ಅಂತರ್ ವಿಶ್ವವಿದ್ಯಾಲಯ ‌ ಸಾಪ್ತಾಹಿಕ ಕಾರ್ಯಾಗಾರವನ್ನು ‌ಇದೇ ತಿಂಗಳ ದಿನಾಂಕ 6 ರಿಂದ ಸತ್ಯಸಾಯಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು. 

"ಉನ್ನತ ಶಿಕ್ಷಣದಲ್ಲಿ ಮೌಲ್ಯಗಳ ಒಳಗೊಳ್ಳುವಿಕೆ"‌ ಎಂಬ ವಿಷಯವು ಕಾರ್ಯಾಗಾರದ ದಿಕ್ಸೂಚಿ ಆಗಿತ್ತು. ಕಾರ್ಯಕ್ರಮದ ಅಂತಿಮ ದಿನದಂದು (ಜೂ.14) ಉನ್ನತ ಶಿಕ್ಷಣದಲ್ಲಿ ಮೌಲ್ಯಗಳ ಅಳವಡಿಕೆ ಕುರಿತು ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ “ಮೌಲ್ಯ ಶಿಕ್ಷಣದ ಸಾಂಸ್ಥಿಕ ಅನುಷ್ಠಾನ” ಎಂಬ ವಿಷಯದೊಂದಿಗೆ ಕಾರ್ಯಕ್ರಮವು ‌ ಅಂತಿಮ ಘಟ್ಟವನ್ನು ಪ್ರವೇಶಿಸಿತು.

ನೈತಿಕ ಮೌಲ್ಯಗಳನ್ನು ‌ಒಳಗೊಂಡ ಶಿಕ್ಷಣವನ್ನು ನಿಯೋಜಿತ ಅಭ್ಯಾಸಗಳಲ್ಲಿ ಹೇಗೆ ವ್ಯವಸ್ಥಿತ ವಾಗಿ ಸಂಯೋಜಿಸಬಹುದು ಎಂಬ ಕುರಿತಂತೆ ಚರ್ಚಿಸಲು ಸಂಪೂರ್ಣ ದಿನವನ್ನು ಮೀಸಲಿಡ ಲಾಗಿತ್ತು. ಸಮಾರೋಪ ಸಮಾರಂಭವು ಹಿಂದಿನ ದಿನದ ಕಾರ್ಯಗಾರದಲ್ಲಿ ಮೂಡಿ ಬಂದ ವಿಷಯದ ಸಂಪೂರ್ಣ ಸಾರ ಸಂಗ್ರಹದ ‌ವರದಿಯ ಪ್ರಸ್ತುತಿಯೊಂದಿಗೆ ಪ್ರಾರಂಭವಾಯಿತು. ಪ್ರೊ. ಮೀನಾಕ್ಷಿ ಬಿಸ್ವಾಲ್ ಮತ್ತು ಅವರ ತಂಡವು ಈ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿತು. 

ನಂತರ ಶೈಕ್ಷಣಿಕ ಮೌಲ್ಯಗಳ ‌ ಅಭಿವೃದ್ಧಿ ಕಾರ್ಯಕ್ರಮದ ಸಂಚಾಲಕ ಪ್ರೊ. ಅಜಯ್ ಕುಮಾರ್ ಸಿಂಗ್ ಅವರು ಇಡೀ ಕಾರ್ಯಕ್ರಮವು ನಡೆದು ಬಂದ ಹಾದಿಯ ‌ಕುರಿತು ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದ ಶಿಕ್ಷಕ ಶಿಕ್ಷಕಿಯರಿಗೆ ತಮ್ಮ ಪ್ರತಿಕ್ರಿಯೆ ಗಳನ್ನು ಅಭಿವ್ಯಕ್ತಗೊಳಿಸಿ, ಅಭಿಪ್ರಾಯಗಳನ್ನು ತಿಳಿಸುವ ಅವಕಾಶವನ್ನು ನೀಡಲಾಗಿತ್ತು.

ಸಮಾರೋಪ ಸಮಾರಂಭದ ಅಧ್ಯಕ್ಷೀಯ ಉಪನ್ಯಾಸವನ್ನು ಬಿಹಾರದ ಜೈ ಪ್ರಕಾಶ್ ವಿಶ್ವವಿದ್ಯಾ ಲಯದ ಮಾಜಿ ಉಪಕುಲಪತಿ ಪ್ರೊ. ಹರಿಕೇಶ್ ಸಿಂಗ್ ಅವರು ನೀಡಿದರು.

ಈ ವೇಳೆ ಅವರು ರಚನಾತ್ಮಕ ಮತ್ತು ತರಗತಿ ಹಂತಗಳಲ್ಲಿ ಮೌಲ್ಯ ಶಿಕ್ಷಣವನ್ನು ಅಳವಡಿಸುವ ಅಗತ್ಯವು ಇದೀಗ ಅನಿವಾರ್ಯವಾಗಿದೆ. ಅದನ್ನು ಪರಿಣಾಮಕಾರಿಯಾಗಿ ಕಾರ್ಯ ರೂಪಕ್ಕೆ ತರಬೇಕಾದ ಅವಶ್ಯಕತೆಯನ್ನು ‌ಒತ್ತಿ ಹೇಳಿದರು.

ಕಾರ್ಯಗಾರವನ್ನು ಅರ್ಥಪೂರ್ಣವಾದ ಶೈಕ್ಷಣಿಕ ಪ್ರಯತ್ನವನ್ನಾಗಿ ಮಾಡುವಲ್ಲಿ ಭಾಗಿಯಾದ ಪ್ರತಿಯೊಬ್ಬರ ಕೊಡುಗೆಗಳನ್ನು‌ ಈ ಸಂದರ್ಭದಲ್ಲಿ ವಿಶೇಷವಾಗಿ ಉಲ್ಲೇಖಿಸಿ ಉಪಕಾರ ಸ್ಮರಣೆ ಮಾಡಲಾಯಿತು. 

ಕಾರ್ಯಕ್ರಮದ ಉದ್ದಕ್ಕೂ ಪ್ರತಿದಿನ ಅನೇಕ ಮಂದಿ ಶಿಕ್ಷಣ ತಜ್ಞರು ತಮ್ಮ ಅಭಿಪ್ರಾಯಗಳನ್ನು ‌ಮಂಡಿಸಿ ಯಶಸ್ವಿಯಾಗಿ ನಡೆದು ಬರಲು ಸಹಕರಿಸಿದ್ದರು. 

ಕಾರ್ಯಕಲಾಪಗಳ ನಿರ್ವಹಣೆಯನ್ನು ಡಾ.ರಾಜೇಶ್ವರಿ ಉಳ್ಳಾಗಡ್ಡಿ ಅವರು ಸಮರ್ಥವಾಗಿ ನಿರ್ವಹಿಸಿದರು. ಕೆ. ಆನಂದನ್ ಕಾರ್ಯಕ್ರಮಕ್ಕೆ ಸರ್ವರನ್ನೂ ಸ್ವಾಗತಿಸಿದರು.

ಇದರಲ್ಲಿ ದೇಶವ್ಯಾಪಿ ವಿವಿಧ ಶಿಕ್ಷಣ ಸಂಸ್ಥೆಗಳ 150 ಕ್ಕೂ ಅಧಿಕ ಸಂಖ್ಯೆಯ ಅಧ್ಯಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇಡೀ ಕಾರ್ಯಗಾರ ಕೆಳಗಿನ ಪ್ರಮುಖ ‌ ಅಂಶಗಳನ್ನು ಶಿಕ್ಷಣದಲ್ಲಿ ಅಳವಡಿಸುವ ಒಕ್ಕೊರಳಿನ ನಿರ್ಧಾರವನ್ನು ಕೈಗೊಂಡಿತು:

  1. ಉನ್ನತ ಶಿಕ್ಷಣದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಅಗತ್ಯದ ಬಗೆಗೆ ಆಳವಾದ ತಿಳುವಳಿಕೆ.
  2. ವಿವಿಧ ವಿಭಾಗಗಳಲ್ಲಿ ಮಾನವೀಯ ಮೌಲ್ಯಗಳನ್ನು ಅನುಷ್ಠಾನಗೊಳಿಸುವ ಪ್ರಾಯೋಗಿಕ ಚೌಕಟ್ಟುಗಳು.
  3. ರಾಷ್ಟ್ರೀಯ ಮಟ್ಟದ ಚಿಂತಕರ ಶಿಕ್ಷಣ ವಿಧಾನಗಳಿಗೆ ಸಮೃದ್ಧವಾದ ಮಾನ್ಯತೆಯನ್ನು ನೀಡುವುದು
  4. ಸ್ವಯಂ ಅವಲೋಕನ ಮಾಡಿ ಅನುಭವ ಜನ್ಯ ಕಲಿಕೆ ಮತ್ತು ಸಮುದಾಯ ಸೇವೆಗಳಿಗೆ ಪ್ರಾಮುಖ್ಯತೆ
  5. ಭಾರತೀಯ ವಿವೇಕವನ್ನು ಸಮಕಾಲೀನ ಶಿಕ್ಷಣ ವ್ಯವಸ್ಥೆಯೊಂದಿಗೆ ಸಂಯೋಜಿಸುವ ತಂತ್ರಗಳ ಅಳವಡಿಕೆ ಮುಂತಾದವುಗಳು ಪ್ರಮುಖ ನಿರ್ಧಾರಗಳಾಗಿವೆ.