ನಾಗರೀಕ ವಿಮಾನಯಾನ ದುರಂತ ಸರಪಣಿ
2020ರ ಆಗಸ್ಟ್ 7ರಂದು ಕೇರಳದ ಕೋಯಿಕ್ಕೋಡ್ನಲ್ಲಿ ಏರ್ ಇಂಡಿಯ ಎಕ್ಸ್ಪ್ರೆಸ್ 9-1344 ವಿಮಾನ ಅವಘಡಕ್ಕೀಡಾಗಿದ್ದರಿಂದ 21 ಜನರು ಸಾವಿಗೀಡಾದರು, 100 ಮಂದಿ ಗಾಯಗೊಂಡರು. ವಂದೇಭಾರತ್ ಮಿಷನ್ನಡಿ ದುಬೈಗೆ ತೆರಳಿ ಬಳಿಕ ವಾಪಸಾಗುತ್ತಿದ್ದ ಎಐ ಎಕ್ಸ್ ಪ್ರೆಸ್ ವಿಮಾನ ದಲ್ಲಿ ಪ್ರಯಾಣಿಕರು-ಸಿಬ್ಬಂದಿ ಸೇರಿದಂತೆ ಒಟ್ಟು 190 ಜನರಿದ್ದರು.


ಅಹಮದಾಬಾದ್: ಗುಜರಾತ್ ರಾಜ್ಯದ ಅಹಮದಾ ಬಾದ್ ನಗರದ ಸರದಾರ್ ವಲ್ಲಭಬಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ನತ್ತ ಗುರುವಾರ ಹಾರಾಟ ಆರಂಭಿ ಸಿದ ಏರ್ ಇಂಡಿಯ ಬೋಯಿಂಗ್ 787 ವಿಮಾನ, ಟೇಕಾಫ್ ಆದ ನಂತರದ 5 ನಿಮಿಷ ಗಳಲ್ಲಿಯೇ (ಮಧ್ಯಾಹ್ನ 1.38) ನಗರದಲ್ಲಿನ ಹಾಸ್ಟೆಲ್ ಕಟ್ಟಡವೊಂದರ ಮೇಲೆ ಪತನಗೊಂಡು ಸ್ಫೋಟಿಸಿದ ಘಟನೆ ದೇಶದಲ್ಲಿ ಈ ಹಿಂದೆ ಆಗಿ ಹೋದ ಹತ್ತಾರು ವಿಮಾನ ದುರಂತಗಳು-ಅವಘಡಗಳನ್ನು ನೆನಪಿಗೆ ತರುತ್ತಿದೆ.
2020: ಏರ್ ಇಂಡಿಯ ಏಕ್ಸ್ ಪ್ರೆಸ್ ವಿಮಾನ 9-1344 ಅವಘಡ
2020ರ ಆಗಸ್ಟ್ 7ರಂದು ಕೇರಳದ ಕೋಯಿಕ್ಕೋಡ್ನಲ್ಲಿ ಏರ್ ಇಂಡಿಯ ಎಕ್ಸ್ಪ್ರೆಸ್ 9-1344 ವಿಮಾನ ಅವಘಡಕ್ಕೀಡಾಗಿದ್ದರಿಂದ 21 ಜನರು ಸಾವಿಗೀಡಾದರು, 100 ಮಂದಿ ಗಾಯಗೊಂಡರು. ವಂದೇಭಾರತ್ ಮಿಷನ್ನಡಿ ದುಬೈಗೆ ತೆರಳಿ ಬಳಿಕ ವಾಪಸಾಗುತ್ತಿದ್ದ ಎಐ ಎಕ್ಸ್ ಪ್ರೆಸ್ ವಿಮಾನ ದಲ್ಲಿ ಪ್ರಯಾಣಿಕರು-ಸಿಬ್ಬಂದಿ ಸೇರಿದಂತೆ ಒಟ್ಟು 190 ಜನರಿದ್ದರು.
ಮಳೆಯಾಗಿದ್ದ ಕಾರಣ ಕೋಯಿಕ್ಕೋಡ್ ವಿಮಾನ ನಿಲ್ದಾಣದ ರನ್ವೇ ಪೂರ್ಣ ತೇವಗೊಂಡಿತ್ತು. ಲ್ಯಾಂಡ್ ಆದ ಏರ್ ಇಂಡಿಯ ಎಕ್ಸ್ಪ್ರೆಸ್ 9-1344 ವಿಮಾನದ ಚಕ್ರಗಳು ರನ್ವೇನಲ್ಲಿ ಜಾರಿದ್ದ ರಿಂದ ವಿಮಾನ ತಕ್ಷಣ ನಿಲುಗಡೆಯಾಗಲಿಲ್ಲ. ಬದಲಾಗಿ ರನ್ ವೇಗಿಂತಲೂ ಮುಂದೆ ಸಾಗಿ 30 ಅಡಿಗಳಷ್ಟು ಆಳದ ಕೊರಕಲಿಗೆ ಬಿದ್ದು ಎರಡು ತುಂಡಾಯಿತು.
1990: ಇಂಡಿಯನ್ ಏರ್ಲೈನ್ಸ್ ವಿಮಾನ-605
ಬೆಂಗಳೂರಿನಲ್ಲಿ 1990ರ ಫೆಬ್ರವರಿ 14ರಂದು (ಅಂತಾರಾಷ್ಟ್ರೀಯ ಪ್ರೇಮಿಗಳ ದಿನ) ಪೈಲಟ್ ಪ್ರಮಾದದ ಕಾರಣದಿಂದಾಗಿ ಇಂಡಿಯನ್ ಏರ್ಲೈನ್ಸ್ ವಿಮಾನ-605 ರನ್ ವೇಯಲ್ಲಿ ನಿಗದಿತ ಸ್ಥಳಕ್ಕಿಂತಲೂ ಮುಂದೆ ಲ್ಯಾಂಡ್ ಆಗಿ ಅವಘಡಕ್ಕೀಡಾಯಿತು. ಏರ್ಬಸ್ ಎ320 ವಿಮಾನದಲ್ಲಿ ಸಿಬ್ಬಂದಿ-ಪ್ರಯಾಣಿಕರು ಸೇರಿ 146 ಜನರಿದ್ದರು. ಅವರಲ್ಲಿ 90 ಜನರು ಸಾವಿಗೀಡಾದರು. ಈ ಅಪಘಾತ ಪ್ರಸಂಗವು ಏರ್ ಬಸ್ 320ರ ಕಾಕ್ಪಿಟ್ ವಿನ್ಯಾಸ ಮತ್ತು ಪೈಲಟ್ ಗಳ ಜಾಗೃತ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳನ್ನೆತ್ತಿತು.
ಆ ಬಳಿಕ ಈ ಎರಡೂ ವಿಚಾರಗಳಲ್ಲಿ ಸುಧಾರಣೆ ಅಗತ್ಯ ಎಂಬ ಸಲಹೆಗಳೂ ಕೇಳಿಬಂದವು.
1982: ಏರ್ ಇಂಡಿಯ ವಿಮಾನ-403
ಅದು ಮುಂಗಾರು ಮಳೆಗಾಲದ ಸಮಯ. ೧೯೮೨ರ ಜೂನ್ ೨೧ರಂದು ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಪೈಲಟ್ಗಳಿಗೆ ಮುಂದಿನ ಪ್ರದೇಶವೇ ಸುಲಭವಾಗಿ ಗೋಚರಿಸದಂತಹ ಸನ್ನಿವೇಶ. ಅಸ್ಪಷ್ಟ ಗೋಚರತೆ ಕಾರಣದಿಂದಾಗಿ ಏರ್ ಇಂಡಿಯ ವಿಮಾನ-೪೦೩ ಮಹಾರಾಷ್ಟ್ರದ ಮುಂಬೈ ಬಳಿ ಅಪಘಾತಕ್ಕೀಡಾಯಿತು. ವಿಮಾನ ನಿಲ್ದಾಣವನ್ನು ತಲುಪುವುದಕ್ಕೂ ಮುನ್ನವೇ ವಿಮಾನ ನಾಗರಿಕ ವಸತಿ ಪ್ರದೇಶದ ಮೇಲೆಯೇ ಇಳಿಯಿತು. ವಿಮಾನದಲ್ಲಿ ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿ ೧೧೧ ಜನರಿದ್ದರು. ಈ ವಿಮಾನ ಅಪಘಾತ ೧೭ ಜನರ ಜೀವಕ್ಕೆ ಕುತ್ತು ತಂದಿತು.
1998: ಅಲಯನ್ಸ್ ಏರ್ ವಿಮಾನ
ಅಲಯನ್ಸ್ ಏರ್ ವಿಮಾನ-೭೪೧೨ ಬಿಹಾರದ ಪಟನಾ ಬಳಿ ೧೯೯೮ರ ಜುಲೈ ೧೭ರಂದು ಅಪಘಾತಕ್ಕೀಡಾಗಿ ೬೦ ಜನರ ಸಾವಿಗೆ ಕಾರಣವಾಯಿತು. ನಿಲಾಣದಲ್ಲಿ ಜಾಗದ ಕೊರತೆ ಸೇರಿದಂತೆ ಕೆಲವು ಅನಿವಾರ್ಯ ಕಾರಣಗಳಿಂದಾಗಿ ಅಲಯನ್ಸ್ ಏರ್ ವಿಮಾನ ಪಟನಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವುದಕ್ಕೂ ಮುನ್ನ ಆಕಾಶದಲ್ಲಿ ಕೆಲಕಾಲ ಗಿರಕಿ ಹೊಡೆಯಬೇಕಾಗಿ ಬಂದಿತ್ತು. ಆ ಸಂದರ್ಭದಲ್ಲೆ ನಿಯಂತ್ರಣ ಕಳೆದುಕೊಂಡ ವಿಮಾನ ನಾಗರಿಕ ವಸತಿ ಪ್ರದೇಶದಲ್ಲಿ ಪತನವಾಯಿತು. ಪರಿಣಾಮ ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರು ಎಲ್ಲರೂ(55 ಮಂದಿ) ಹಾಗೂ ವಿಮಾನ ಅಪ್ಪಳಿಸಿದ ಕಟ್ಟಡದಲ್ಲಿದ್ದ ಐವರು ನಾಗರಿಕರು ಸೇರಿದಂತೆ 60 ಜನರು ಜೀವ ಕಳೆದುಕೊಂಡರು.
ಅಹಮದಾಬಾದ್ ದುರಂತ ಇದೇ ಮೊದಲಲ್ಲ

ಗುಜರಾತ್ನ ಅಹಮದಾಬಾದ್ನಲ್ಲಿ ನಾಗರಿಕ ವಿಮಾನ ಅಪಘಾತಕ್ಕೀಡಾಗಿರುವುದು ಇದೇ ಮೊದ ಲೇನಲ್ಲ. 1988ರಲ್ಲಿಯೂ ದೊಡ್ಡ ದುರಂತವಾಗಿತ್ತು. ಇಂಡಿಯನ್ ಏರ್ಲೈನ್ಸ್ನ ವಿಮಾನ ಐಸಿ-113 ಅಮಹದಾಬಾದ್ ವಿಮಾನ ನಿಲ್ದಾಣದ ರನ್ವೇನಲ್ಲಿ ಇಳಿಯುವುದಕ್ಕೂ ಸ್ವಲ್ಪವೇ ಮೊದಲು ಅಪಘಾತಕೀಡಾಯಿತು. ಪರಿಣಾಮ, ವಿಮಾನದಲ್ಲಿದ್ದ 130 ಜನರು ಮೃತಪಟ್ಟರು.
1978 ಅರಬ್ಬಿ ಸಮುದ್ರಕ್ಕೆ ಎಐ ವಿಮಾನ

1978 ಹೊಸ ವರ್ಷದ ಮೊದಲ ದಿನವೇ ಏರ್ ಇಂಡಿಯ ವಿಮಾನ ದುರಂತ ದಾಖಲಾಯಿತು. ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 1978ರ ಜನವರಿ 1ರಂದು ಆಗಷ್ಟೇ ಪ್ರಯಾಣ ಆರಂಭಿಸಿದ್ದ ಏರ್ ಇಂಡಿಯ ವಿಮಾನ-855 ನಂತರದ ಕೆಲವು ನಿಮಿಷಗಳಲ್ಲಿಯೇ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಅರಬ್ಬಿ ಸಮುದ್ರದಲ್ಲಿ ಪತನ ವಾಯಿತು.
ಪರಿಣಾಮ ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿದಂತೆ ವಿಮಾನದಲ್ಲಿದ್ದ 213 ಜನರೂ ಜಲ ಸಮಾಧಿಯಾದರು. ದುರಂತದಿಂದ ಎಚ್ಚೆತ್ತ ವಿಮಾನಯಾನ ಸಂಸ್ಥೆಗಳು ಪೈಲಟ್ಗಳಿಗೆ ಹೊಸ ಬಗೆಯ ತರಬೇತಿ ನೀಡುವುದನ್ನು ಆರಂಭಿಸಿದವು. ಜತೆಗೆ ವಿಮಾನದ ಕಾಕ್ಪಿಟ್ನಲ್ಲಿನ ಯಂತ್ರ ಗಳು, ನಿಯಂತ್ರ ಘಟಕಗಳು ಸೇರಿದಂತೆ ಎಲ್ಲಾ ಪರಿಕರಗಳನ್ನೂ ವಿಮಾನ ಹಾರಾಟಕ್ಕೂ ಮುನ್ನ ಮತ್ತೆ ಮತ್ತೆ ಪರಿಶೀಲನೆ ಮಾಡುವುದನ್ನು ಕಡ್ಡಾಯಗೊಳಿಸಿದವು.
ಕನಿಷ್ಕ ವಿಮಾನಕ್ಕೆ ಬಾಂಬ್

ಭಾರತದ ವಿಮಾನಯಾನ ಕ್ಷೇತ್ರವನ್ನು ದುಃ ಸ್ವಪ್ನದಂತೆ ಕಾಡುವ ದುರಂತಗಳಲ್ಲಿ 1985ರ ಜೂನ್ 23ರಂದು ನಡೆದ ಕನಿಷ್ಕ ವಿಮಾನ ದುರಂತವೂ ಒಂದು. ಕೆನಡಾದಿಂದ ಹಾರಿಬರುತ್ತಿದ್ದ ಏರ್ ಇಂಡಿಯ ವಿಮಾನ-182ರಲ್ಲಿ ಸಿಬ್ಬಂದಿ-ಪ್ರಯಾಣಿಕರು ಸೇರಿದಂತೆ 329 ಮಂದಿ ಪ್ರಯಾಣಿಸು ತ್ತಿದ್ದರು. ಮಾರ್ಗಮಧ್ಯೆ ಐರ್ಲೆಂಡ್ ಬಳಿ ಸಂಚರಿಸುತ್ತಿದ್ದಾಗ ಖಲಿಸ್ತಾನ್ ಉಗ್ರರು ವಿಮಾನದಲ್ಲಿ ಇರಿಸಿದ್ದ ಬಾಂಬ್ ಸ್ಫೋಟಗೊಂಡಿತು. ಪರಿಣಾಮ ವಿಮಾನದಲ್ಲಿದ್ದ 329 ಜನರೂ ದುರ್ಮರಣಕ್ಕೀಡಾದರು.
2010: ಮಂಗಳೂರು ಏರ್ ಇಂಡಿಯ ದುರಂತ

ಪ್ರೆಸ್ನ 812ನೇ ಸಂಖ್ಯೆಯ ವಿಮಾನ ಮಂಗಳೂರು ನಗರದ ಹೊರವಲಯದಲ್ಲಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರ ನಸುಕಿನಲ್ಲಿ ಅಪಘಾತಕ್ಕೀಡಾಗಿ ಭಸ್ಮವಾಯಿತು. ಬೋಯಿಂಗ್ 737-800 ವಿಮಾನದ ಪೈಲಟ್ ಮುಂಜಾನೆಯ ನಿದ್ರೆಯ ಮಂಪರಿ ನಲ್ಲಿ ವಿಮಾನ ನಿಲ್ದಾಣದಲ್ಲಿನ ಕಿರಿದಾದ ‘ಟೇಬಲ್ ಟಾಪ್’ ರನ್ವೇ ಮೇಲೆ ನಿಗದಿ ಪಡಿಸಿದ್ದ ಕ್ಕಿಂತಲೂ ತುಸು ದೂರದಲ್ಲಿ ವಿಮಾನದ ಲ್ಯಾಂಡಿಂಗ್ಗೆ ಪ್ರಯತ್ನಿಸಿದ್ದೇ ದುರಂತಕ್ಕೆ ಕಾರಣ ವಾಯಿತು. ರನ್ವೇ ಕೊನೆಗೊಂಡರೂ ವಿಮಾನ ನಿಲುಗಡೆಯಾಗದೇ ಮುಂದೆ ಸಾಗಿದ್ದರಿಂದ ಪ್ರಪಾತಕ್ಕೆ ಉರುಳಿ ಬಿದ್ದು ಹೊತ್ತಿ ಉರಿದು ಭಸ್ಮವಾಯಿತು.
ಪ್ರಯಾಣಿಕರು, ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ 166 ಜನರಲ್ಲಿ 158 ಮಂದಿ ಮೃತಪಟ್ಟರು. ಉಳಿದವರು ಸುಟ್ಟಗಾಯಗಳಿಗೆ ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡರು. ಲ್ಯಾಂಡಿಂಗ್ ಸಂದರ್ಭ ದಲ್ಲಿನ ವಿಮಾನ ಅವಘಡಗಳಲ್ಲಿ ಮಂಗಳೂರು ವಿಮಾನ ದುರಂತ ಭೀಕರ ನೆನಪುಗಳನ್ನು ಉಳಿಸಿ ಬಿಟ್ಟಿದೆ.
1996: ಹರಿಯಾಣ ಛರ್ಕಿ ದಾದ್ರಿ ಬಳಿ ದುರಂತ

ಹರಿಯಾಣ ರಾಜ್ಯದ ಛರ್ಕಿ ದಾದ್ರಿ ಬಳಿ ಎರಡು ವಿಮಾನಗಳು ಗಗನದಲ್ಲೇ ಡಿಕ್ಕಿಯಾಗಿದ್ದ ಘಟನೆ 1996ರ ನವೆಂಬರ್ 12ರಂದು ನಡೆದಿತ್ತು. ಸೌದಿ ಆರೇಬಿಯ ಏರ್ಲೈನ್ಸ್ನ ಬೋಯಿಂಗ್ 747 ವಿಮಾನ ಮತ್ತು ಕಝಕಸ್ಥಾನ ಏರ್ಲೈನ್ಸ್ನ ಇಲ್ಯೂಷಿನ್ ಐಎಲ್-76 ವಿಮಾನ ಆಕಾಶದಲ್ಲಿ ಸಂಚರಿಸುತ್ತಿರುವಾಗಲೇ ಒಂದೇ ಮಾರ್ಗದಲ್ಲಿ ಎದುರುಬದರಾಗಿದ್ದರಿಂದ ಅಪಘಾತಕ್ಕೀಡಾದವು.
ಪರಿಣಾಮ ಎರಡೂ ವಿಮಾನ ಹೊತ್ತಿ ಉರಿದು ಭಸ್ಮವಾಗಿದ್ದು, ಎರಡೂ ವಿಮಾನಗಳಲ್ಲಿದ್ದ ಪ್ರಯಾಣಿಕರು, ಪೈಲಟ್ಗಳು, ವಿಮಾನದ ಪರಿಚಾರಕ ವರ್ಗದವರೂ ಸೇರಿದಂತೆ ಒಟ್ಟು 349 ಜನರು ಸಜೀವ ದಹನವಾಗಿದ್ದರು. ಇದು ವಿಶ್ವದಲ್ಲೇ ಅತ್ಯಂತ ಘೋರ ‘ಮಿಡ್ ಏರ್ ಕೊಲ್ಯೂಷನ್ ’(ಆಕಾಶದಲ್ಲೇ ವಿಮಾನ ಅಪಘಾತ) ಎನಿಸಿಕೊಂಡಿದೆ. ಭಾರತದ ನಾಗರಿಕ ವಿಮಾನಯಾನ ಇತಿಹಾಸದಲ್ಲೂ ಭೀಕರ ದುರಂತವಾಗಿ ದಾಖಲಾಗಿದೆ. ಸಂಪರ್ಕ ಸಂವಹನ-ಸೂಚನೆಗಳ ರವಾನೆ ಪ್ರಕ್ರಿಯೆಯಲ್ಲಿನ ದೋಷವೇ ವಿಮಾನ ಅವಘಡಕ್ಕೆ ಕಾರಣ ಎಂದು ಗುರುತಿಸಲಾಗಿದೆ.
ಖಝಕ್ ಏರ್ಲೈನ್ಸ್ ವಿಮಾನ ತಪ್ಪು ಸಂದೇಶದ ಕಾರಣದಿಂದಾಗಿ ತನಗೆ ನಿಗದಿಯಾಗಿದ್ದ ವಾಯು ಮಾರ್ಗಕ್ಕಿಂತ ಕಡಿಮೆ ಎತ್ತರದಲ್ಲಿ ಸಾಗಲು ಮುಂದಾಗಿದ್ದರಿಂದ ಅದೇ ಮಾರ್ಗದಲ್ಲಿ ಬಂದ ಸೌದಿ ಏರ್ಲೈನ್ಸ್ ವಿಮಾನಕ್ಕೆ ಡಿಕ್ಕಿಯಾಗಲು ಕಾರಣವಾಯಿತು ಎಂಬುದು ತನಿಖೆಯಿಂದ ದೃಢಪಟ್ಟಿದೆ.