ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರೇಮ ವಿವಾಹ, ಅಪಹರಣ: ತಮಿಳುನಾಡಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಬಂಧನ

ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ್ದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸಿದ್ದು, ಮದ್ರಾಸ್ ಹೈಕೋರ್ಟ್ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಅಷ್ಟಕ್ಕೂ ಆ ಅಧಿಕಾರಿ ಮಾಡಿದ್ದರು ಏನು? ಅವರ ಬಂಧನಕ್ಕೆ ಕಾರಣವೇನು? ಎಂಬ ಮಾಹಿತಿ ಇಲ್ಲಿದೆ.

ಅಪಹರಣ: ತಮಿಳುನಾಡಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಬಂಧನ

Profile Sushmitha Jain Jun 17, 2025 9:55 PM

ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಪ್ರೇಮ ವಿವಾಹಕ್ಕೆ (Love Marriage) ಸಂಬಂಧಿಸಿದ ಕುಟುಂಬ ಕಲಹದಿಂದ ಉದ್ಭವಿಸಿದ ಅಪಹರಣ (Kidnapping) ಪ್ರಕರಣಕ್ಕೆ ಸಂಬಂಧಿಸಿ, ಮದ್ರಾಸ್ ಹೈಕೋರ್ಟ್ (Madras High Court) ಆದೇಶದಂತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಚ್‌.ಎಂ.ಜಯರಾಂ ಅವರನ್ನು ಬಂಧಿಸಲಾಗಿದೆ. ಜತೆಗೆ ಪುರಟ್ಚಿ ಭಾರತಂ ಪಕ್ಷದ ಮುಖ್ಯಸ್ಥ ಮತ್ತು ಶಾಸಕ ಪೂವೈ ಜಗನ್ ಮೂರ್ತಿ ಅವರನ್ನು ತನಿಖೆಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ.

ಶಾಸಕರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು, “ಪೊಲೀಸ್ ತನಿಖೆಗೆ ಏಕೆ ಭಯಪಡುತ್ತೀರಿ? ಶಾಸಕರು ಮಾದರಿಯಾಗಿರಬೇಕು” ಎಂದು ಹೇಳಿದೆ. ಜಗನ್ ಮೂರ್ತಿ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಬರದೇ, ತನಿಖೆಗೆ ಹಾಜರಾಗಬೇಕು ಎಂದು ಎಚ್ಚರಿಸಿದ ನ್ಯಾಯಾಲಯ, ರಾಜಕೀಯ ಸ್ಥಾನದಲ್ಲಿರುವವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಪ್ರಭಾವ ಬಳಸಬಾರದು ಎಂದಿತು.

ಈ ಸುದ್ದಿಯನ್ನೂ ಓದಿ: ಜೈಲಿನಿಂದ ಹೊರಬಂದ ಎರಡನೇ ದಿನ 80 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ ಪಾಪಿ; ಛೀ...ಥೂ...ಎಂದ ಜನ

ತಿರುವಳ್ಳೂರು ಜಿಲ್ಲೆಯಲ್ಲಿ ವಾರಾಂತ್ಯದಲ್ಲಿ ಶಾಸಕರ ಬೆಂಬಲಿಗರು ಅವರನ್ನು ಬಂಧಿಸದಂತೆ ಪೊಲೀಸರಿಗೆ ಅಡ್ಡಿಪಡಿಸಿದ್ದರು ಎಂದು ಪೊಲೀಸರು ಕೋರ್ಟ್‌ಗೆ ತಿಳಿಸಿದರು. ಜಗನ್ ಮೂರ್ತಿಯ ನಿರೀಕ್ಷಣಾ ಜಾಮೀನು ಅರ್ಜಿಯು ಇನ್ನೂ ಬಾಕಿಯಿದ್ದು, ತನಿಖೆಯಲ್ಲಿ ಅವರ ಸಹಕಾರವನ್ನು ಆಧರಿಸಿ ನಿರ್ಧಾರ ಕೈಗೊಳ್ಳುವುದಾಗಿ ಕೋರ್ಟ್ ಸೂಚಿಸಿದೆ.

ಪೊಲೀಸರ ಪ್ರಕಾರ, 22 ವರ್ಷದ ಯುವಕ ಮತ್ತು ಯುವತಿಯ ಪ್ರೀತಿಯ ವಿವಾಹವನ್ನು ಯುವತಿಯ ತಂದೆ ವನರಾಜ ವಿರೋಧಿಸಿದ್ದರು. ವಿವಾಹವನ್ನು ಮುರಿಯಲು ವನರಾಜ, ಸೇವೆಯಿಂದ ವಜಾಗೊಂಡ ಮಾಜಿ ಪೊಲೀಸ್ ಕಾನ್‌ಸ್ಟೇಬಲ್ ಮಹೇಶ್ವರಿಯ ಸಹಾಯ ಪಡೆದಿದ್ದರು. ಮಹೇಶ್ವರಿ, ಎಡಿಜಿಪಿ ಜಯರಾಂ ಅವರನ್ನು ಸಂಪರ್ಕಿಸಿದ್ದು, ಅವರು ಶಾಸಕ ಜಗನ್ ಮೂರ್ತಿಯ ಸಹಕಾರ ಕೋರಿದ್ದರು. ವರನನ್ನು ಪತ್ತೆ ಹಚ್ಚಲಾಗದಿದ್ದಾಗ, ಶಾಸಕರ ಕಡೆಯವರು ವರನ 16 ವರ್ಷದ ತಮ್ಮನನ್ನು ಅಪಹರಿಸಿದ್ದರು. ಆತನ ತಾಯಿ ಪೊಲೀಸರನ್ನು ಸಂಪರ್ಕಿಸಿದಾಗ, ಬಾಲಕನನ್ನು ಬಿಡುಗಡೆ ಮಾಡಲಾಯಿತು. ಅಚ್ಚರಿ ಎಂಬಂತೆ, ಆತನನ್ನು ಎಡಿಜಿಪಿ ಜಯರಾಂ ಅವರ ಕಾರಿನಲ್ಲಿ ಬಿಡಲಾಗಿತ್ತು. ಇದರಲ್ಲಿ ಮಹೇಶ್ವರಿ, ವನರಾಜ ಮತ್ತು ಒಬ್ಬ ಕಾನ್‌ಸ್ಟೇಬಲ್ ಇದ್ದರು.

ತನಿಖಾಧಿಕಾರಿಗಳ ಪ್ರಕಾರ, ಅಪಹರಣಕ್ಕೆ ಸಂಬಂಧಿಸಿದಂತೆ ದೊಡ್ಡ ಮೊತ್ತದ ಹಣಕಾಸಿನ ವಹಿವಾಟು ನಡೆದಿದೆ. 2021ರ ತಮಿಳುನಾಡು ಚುನಾವಣೆಯಲ್ಲಿ AIADMK ಚಿಹ್ನೆಯಡಿ ಕಿಲ್ವೈತಿನಕುಪ್ಪಂ ಕ್ಷೇತ್ರದಿಂದ ಗೆದ್ದಿದ್ದ ಜಗನ್ ಮೂರ್ತಿ ಈ ಆರೋಪಗಳನ್ನು ನಿರಾಕರಿಸಿದ್ದಾರೆ.